2022ರ ಮಾಗಿ ಹುಣ್ಣಿಮೆ ವ್ರತ: ಮುಹೂರ್ತ ಮತ್ತು ಪೂಜಾ ವಿಧಾನ

Author: Sudha Bangera | Updated Tue, 15 Feb 2022 12:40 PM IST

ಮಾಗಿ ಹುಣ್ಣಿಮೆಗೆ ಇನ್ನೇನು ಕೆಲವೇ ದಿನಗಳಿವೆ. ಪೂರ್ಣಿಮೆ ಅಥವಾ ಹುಣ್ಣಿಮೆ ಎಂದರೆ ಭೂಮಿಯು ಮಂಗಳಕರ ಶಕ್ತಿಯಿಂದ ತುಂಬಿರುತ್ತದೆ ಎಂದು ಅರ್ಥ. ಹುಣ್ಣಿಮೆ ವ್ರತ, ಅಥವಾ ಹುಣ್ಣಿಮೆಯ ದಿನದಂದು ಉಪವಾಸ ಮಾಡುವುದು ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅನೇಕ ಭಕ್ತರು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಮತ್ತು ತಮ್ಮ ಜೀವನದಲ್ಲಿ ಸಂತೋಷ ಮತ್ತು ಯಶಸ್ಸನ್ನು ಸಾಧಿಸಲು ಈ ಉಪವಾಸವನ್ನು ಆಚರಿಸುತ್ತಾರೆ. ಹುಣ್ಣಿಮೆಯು ಪ್ರತಿ ಹಿಂದೂ ತಿಂಗಳ ಅಂತ್ಯವನ್ನು ಸೂಚಿಸುತ್ತದೆ ಮತ್ತು ಈ ದಿನದಂದು ಪ್ರಮುಖ ಹಬ್ಬ, ಆಚರಣೆ ಅಥವಾ ಮಂಗಳಕರ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ.


ಹುಣ್ಣಿಮೆಯನ್ನು ವಿವಿಧ ಧಾರ್ಮಿಕ ಮತ್ತು ಇತರ ಮಹತ್ವದ ಆಚರಣೆಗಳನ್ನು ಮಾಡಲು ಮತ್ತು ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲಕರ ಸಮಯವೆಂದು ಪರಿಗಣಿಸಲಾಗಿದೆ. ಇದು ಪ್ರಕಾಶಮಾನ ದಿನವಾಗಿದೆ, ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳು ನಮ್ಮ ಸುತ್ತಲಿನ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕುತ್ತದೆ.

2022ರ ಮಾಗಿ ಹುಣ್ಣಿಮೆ ವ್ರತ ನಿಮ್ಮ ಜೀವನಕ್ಕೆ ಹೇಗೆ ಆನಂದವನ್ನು ತರುತ್ತದೆ?

ವಿಶ್ವದ ಅತ್ಯುತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ, ಮಾತನಾಡಿ ಮತ್ತು ನಿಮ್ಮ ಜೀವನದ ಮೇಲೆ ಮಾಗಿ ಹುಣ್ಣಿಮೆಯ ಪರಿಣಾಮವನ್ನು ತಿಳಿಯಿರಿ

2022 ರ ಮಾಗಿ ಹುಣ್ಣಿಮೆಯೆಡೆ ಒಂದು ನೋಟ

ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಗಿಯು ವರ್ಷದ 11 ನೇ ತಿಂಗಳಲ್ಲಿ ಬರುತ್ತದೆ. ಪ್ರತಿ ತಿಂಗಳು ಹುಣ್ಣಿಮೆ ಇರುವುದರಿಂದ ವರ್ಷದಲ್ಲಿ ಒಟ್ಟು 12 ಹುಣ್ಣಿಮೆಗಳು ಬರುತ್ತವೆ. ಆದರೆ, ಸನಾತನ ಧರ್ಮದಲ್ಲಿ ಮಾಘ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವ ನೀಡಲಾಗಿದೆ. ಮಾಘ ಮಾಸದಲ್ಲಿ ಬರುವುದರಿಂದ ಇದನ್ನು ಮಾಘಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಎಲ್ಲಾ ಹುಣ್ಣಿಮೆಗಳಲ್ಲಿ ಮಾಡುವಂತೆ ಮಾಗಿ ಪೂರ್ಣಿಮಾದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಪೂಜೆ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.

ಈ ದಿನ ಭಕ್ತರು ಚಂದ್ರ ದೇವರನ್ನು ಪೂಜಿಸುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಾಘ ಮಾಸವು ದಾನ ಮತ್ತು ಇತರ ದಾನ-ಪುಣ್ಯ ಚಟುವಟಿಕೆಗಳನ್ನು ನಿರ್ವಹಿಸಲು ಅತ್ಯಂತ ಮಂಗಳಕರ, ಅದೃಷ್ಟ ಮತ್ತು ಮಹತ್ವದ ತಿಂಗಳು. ಮಾಗಿ ಪೂರ್ಣಿಮೆಯ ಸಂದರ್ಭದಲ್ಲಿ ಭಕ್ತರು ಉಪವಾಸ ಮಾಡುತ್ತಾರೆ ಮತ್ತು ಭಗವಾನ್ ವಿಷ್ಣುವಿಗೆ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ಅನೇಕ ಸ್ಥಳಗಳಲ್ಲಿ, ಮಾಗಿ ಮಾಸದಲ್ಲಿ ಕುಂಭಮೇಳ ನಡೆಯುತ್ತದೆ, ಇದು ಒಂದು ತಿಂಗಳ ಕಾಲ ನಡೆಯುತ್ತದೆ. ಹುಣ್ಣಿಮೆಯಂದು ಇಲ್ಲಿ ಭಕ್ತರ ದಂಡೇ ನೆರೆದಿರುತ್ತದೆ.

ದೇವತೆಗಳು ಮಾಗಿ ಮಾಸದ ಹುಣ್ಣಿಮೆಯಂದು ಭೂಮಿಗೆ ಇಳಿಯುತ್ತಾರೆ ಮತ್ತು ಪವಿತ್ರವಾದ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ ಎಂದು ನಂಬಲಾಗಿದೆ. ಪರಿಣಾಮವಾಗಿ, ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಯಾಗರಾಜ್‌ನಲ್ಲಿ ಸೇರುತ್ತಾರೆ. ಈ ದಿನ ನದಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.

ಮಾಗಿ ಹುಣ್ಣಿಮೆಯ ಶುಭ ಮುಹೂರ್ತ

ಹಿಂದೂ ಕ್ಯಾಲೆಂಡರ್ ಮತ್ತು ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಮಾಗಿ ಮಾಸವು ಫೆಬ್ರವರಿ 15, 2022 ರಂದು ಪ್ರಾರಂಭವಾಗುತ್ತದೆ. ಹುಣ್ಣಿಮೆಯ ತಿಥಿಯ ಅಂತ್ಯದೊಂದಿಗೆ ಪುಷ್ಯ ಮಾಸವು ಕೊನೆಗೊಳ್ಳುತ್ತದೆ. ಮಾಗಿ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಇತರ ಚಟುವಟಿಕೆಗಳನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

250+ ಪುಟಗಳ ವೈಯಕ್ತಿಕಗೊಳಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕ: ನಿಮ್ಮ ಜೀವನದ ವಿವರವಾದ ಜ್ಯೋತಿಷ್ಯ -ವಿಶ್ಲೇಷಣೆ ಪಡೆಯಿರಿ

ಮಾಗಿ ಹುಣ್ಣಿಮೆ 2022: ದಿನಾಂಕ ಮತ್ತು ಶುಭ ಮುಹೂರ್ತ

ದಿನಾಂಕ: ಫೆಬ್ರವರಿ 16, 2022 (ಬುಧವಾರ)

ಶುಭ ಮುಹೂರ್ತ:

ಮಾಗಿ ಹುಣ್ಣಿಮೆ ಫೆಬ್ರವರಿ 15, 2022 ರಂದು 21:45:34 ರಿಂದ ಪ್ರಾರಂಭವಾಗುತ್ತದೆ

ಮತ್ತು ಫೆಬ್ರವರಿ 16, 2022 ರಂದು 22:28:46 ಕ್ಕೆ ಕೊನೆಗೊಳ್ಳುತ್ತದೆ

ಮಾಗಿ ಹುಣ್ಣಿಮೆ, ಹಿಂದೂ ಪುರಾಣಗಳ ಪ್ರಕಾರ, ವಿವಿಧ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳು ಮತ್ತು ವಿಧಿಗಳನ್ನು ನಿರ್ವಹಿಸಲು ಪವಿತ್ರ ದಿನವಾಗಿದೆ. ಈ ಸಮಯದಲ್ಲಿ, ಜನಪ್ರಿಯ 'ಮಾಗಿ ಮೇಳ' ಮತ್ತು 'ಕುಂಭಮೇಳ' ನಡೆಯುತ್ತದೆ, ಇದು ದೇಶದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಮಾಗಿ ಹುಣ್ಣಿಮೆಯ ದಿನದಂದು ತಮಿಳುನಾಡಿನ ಹಲವಾರು ಭಾಗಗಳಲ್ಲಿ ತೇಲುವ ಹಬ್ಬವನ್ನು ಸಹ ನಡೆಸಲಾಗುತ್ತದೆ.

ಈ ವರ್ಷದ ಮಾಗಿ ಹುಣ್ಣಿಮೆ ನಿಮ್ಮ ಜೀವನದಲ್ಲಿ ಹೇಗೆ ಬೆಳಕು ತರುತ್ತದೆ ಎಂದು ತಿಳಿಯೋಣ

ಮಾಗಿ ಹುಣ್ಣಿಮೆ 2022 ರ ವಿಶೇಷ ಸಂಯೋಗಗಳು

ಮಾಘ ಮಾಸವನ್ನು ಕೊನೆಗೊಳಿಸುವ, ಮಾಗಿ ಹುಣ್ಣಿಮೆ ಈ ವರ್ಷದ ಫೆಬ್ರವರಿ 16 ರಂದು ಸಂಭವಿಸುತ್ತದೆ. ಇದಲ್ಲದೆ, ಈ ವರ್ಷದ ಮಾಗಿ ಹುಣ್ಣಿಮೆಯು ಅನೇಕ ರೀತಿಯಲ್ಲಿ ಮಂಗಳಕರವಾಗಿರುತ್ತದೆ ಏಕೆಂದರೆ ವ್ಯಾಪಾರ ವಿಸ್ತರಣೆಯ ಯೋಗ ಮತ್ತು ಜನರ ಹೃದಯದಿಂದ ಭಯವನ್ನು ಹೋಗಲಾಡಿಸುವ ಯೋಗವು ಈ ಸಮಯದಲ್ಲಿ ಪ್ರಬಲವಾಗಿ ರೂಪುಗೊಳ್ಳುತ್ತದೆ. ಮಾಗಿ ಹುಣ್ಣಿಮೆಯಂದು ಚಂದ್ರನು ಸಿಂಹ ಮತ್ತು ಮಾಗಿ ನಕ್ಷತ್ರದಲ್ಲಿ ಇರುತ್ತಾನೆ. ಈ ತಿಂಗಳು ಮದುವೆಗೆ ವಿಶೇಷವಾಗಿ ಅನುಕೂಲಕರವಾಗಿದೆ ಎಂದು ಭಾವಿಸಲಾಗಿದೆ.

ಇದಲ್ಲದೆ, ಬ್ರಹ್ಮವೈವರ್ತ ಪುರಾಣದ ಪ್ರಕಾರ ವಿಷ್ಣುವು ಈ ಸಮಯದಲ್ಲಿ ಗಂಗಾಜಲದಲ್ಲಿ ನೆಲೆಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ಈ ವರ್ಷ ಮಾಗಿ ಹುಣ್ಣಿಮೆ ಬುಧವಾರ ಬರುತ್ತದೆ. ಈ ಸಂದರ್ಭದಲ್ಲಿ ಚಂದ್ರನು ಮಾಘ ನಕ್ಷತ್ರದಲ್ಲಿ ಮತ್ತು ಸೂರ್ಯನು ಧನಿಷ್ಠ ನಕ್ಷತ್ರದಲ್ಲಿ ಕುಂಭ ರಾಶಿಯಲ್ಲಿ ಇರುತ್ತಾನೆ. ಅದರ ಹೊರತಾಗಿ, ಚಂದ್ರನು ಸೂರ್ಯ ಮತ್ತು ಗುರುಗ್ರಹದ ಸಂಪೂರ್ಣ ನೋಟವನ್ನು ಹೊಂದುತ್ತಾನೆ. ಸೂರ್ಯನು ಧನಿಷ್ಠ ನಕ್ಷತ್ರದಲ್ಲಿ ಇರುತ್ತಾನೆ ಮತ್ತು ಚಂದ್ರನ ಮೇಲೆ ನಿಕಟವಾಗಿ ಕಣ್ಣಿಡುತ್ತಾನೆ, ಗ್ರಹಗಳ ಮತ್ತು ನಕ್ಷತ್ರಪುಂಜಗಳ ಸ್ಥಾನಗಳಿಂದಾಗಿ ಬಹಳ ಮಂಗಳಕರ ಸಂಯೋಜನೆಯನ್ನು ರಚಿಸುತ್ತಾನೆ.

ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!

ಮಾಗಿ ಹುಣ್ಣಿಮೆಯ ಮಹತ್ವವೇನು?

ಮಾಗಿ ಹುಣ್ಣಿಮೆ ಎಂಬ ಹೆಸರು ಮಾಘ ನಕ್ಷತ್ರದ ಹೆಸರಿನಿಂದ ಬಂದಿದೆ. ದೇವತೆಗಳು ಮಾಘ ಮಾಸದಲ್ಲಿ ಭೂಮಿಗೆ ಭೇಟಿ ನೀಡುತ್ತಾರೆ, ಮಾನವ ರೂಪವನ್ನು ಧರಿಸುತ್ತಾರೆ ಮತ್ತು ಪ್ರಯಾಗದಲ್ಲಿ ಸ್ನಾನ, ದಾನ ಮತ್ತು ಜಪ ಮಾಡುತ್ತಾರೆ. ಪರಿಣಾಮವಾಗಿ, ಈ ದಿನದಂದು ಪ್ರಯಾಗದಲ್ಲಿ ಗಂಗಾ ಸ್ನಾನವು ಎಲ್ಲಾ ಕೋರಿಕೆಗಳನ್ನು ಪೂರೈಸುತ್ತದೆ ಮತ್ತು ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಮಾಗಿ ಹುಣ್ಣಿಮೆಯ ದಿನದಂದು ಪುಷ್ಯ ನಕ್ಷತ್ರವಿದ್ದರೆ, ಶಾಸ್ತ್ರಗಳ ಪ್ರಕಾರ ಈ ಸಂದರ್ಭದ ಮಹತ್ವವು ಹೆಚ್ಚಾಗುತ್ತದೆ.

ಮಾಗಿ ಹುಣ್ಣಿಮೆಯ ಸಂದರ್ಭದಲ್ಲಿ, ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಈ ದಿನದಂದು, ದಾನ ಧರ್ಮಗಳನ್ನು ಮಾಡುವ ಮೂಲಕ ಮತ್ತು ದಾನಗಳನ್ನು ನೀಡುವ ಮೂಲಕ ಎಲ್ಲಾ ವರ್ತಮಾನ ಮತ್ತು ಹಿಂದಿನ ಪಾಪಗಳಿಂದ ಮುಕ್ತರಾಗುತ್ತಾರೆ. ಮಾಗಿ ಹುಣ್ಣಿಮೆಯ ದಿನದಂದು ವಿಷ್ಣು ಮತ್ತು ಹನುಮಂತ ದೇವರನ್ನು ಪೂಜಿಸಲಾಗುತ್ತದೆ. ಈ ದಿನ ಈ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿದರೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಮಾಗಿ ಹುಣ್ಣಿಮೆವನ್ನು 'ಮಹಾ ಮಾಘಿ' ಮತ್ತು 'ಮಾಘಿ ಪೂರ್ಣಿಮಾ' ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ದೇಶದಾದ್ಯಂತ ಆಚರಿಸಲಾಗುತ್ತದೆ.

ಮಾಗಿ ಹುಣ್ಣಿಮೆಯ ಪೂಜಾ ವಿಧಿ ವಿಧಾನ

  1. ಮಾಗಿ ಹುಣ್ಣಿಮೆ 2022 ಸಕಾರಾತ್ಮಕತೆಯನ್ನು ತರುವ ಮತ್ತು ಸಕಾರಾತ್ಮಕ ದೈವಿಕ ಶಕ್ತಿಯನ್ನು ತೆಗೆದುಕೊಳ್ಳುವ ದಿನವಾಗಿದೆ.
  2. ಈ ದಿನದಂದು ಪೂಜೆಯನ್ನು ಮಾಡುವುದು ದಿನವನ್ನು ಪ್ರಾರಂಭಿಸಲು ಉತ್ತಮ ಸೂಚನೆಯಾಗಿದೆ.
  3. ಈ ದಿನ ಬೇಗ ಎದ್ದು ನದಿಯಲ್ಲಿ ಸ್ನಾನ ಮಾಡಿ. (ದೇಶವನ್ನು ವ್ಯಾಪಿಸುತ್ತಿರುವ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ಈ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದನ್ನು ಶಿಫಾರಸು ಮಾಡುವುದಿಲ್ಲ. ಪರಿಣಾಮವಾಗಿ, ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಮನೆಯಲ್ಲಿ ಸ್ನಾನ ಮಾಡಿ )
  4. ನಂತರ, ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಲು 'ಓಂ ನಮೋ ನಾರಾಯಣ' ಮಂತ್ರವನ್ನು ಪುನರಾವರ್ತಿಸಿ. ಎಳ್ಳನ್ನು ನೀರಿಗೆ ಹಾಕಿ ಅದರ ಮುಂದೆ ನಿಂತು ಸೂರ್ಯನಿಗೆ ಬಡಿಸಿ.
  5. ಈ ದಿನದಂದು, ನಾರಾಯಣ ಸ್ವಾಮಿಗೆ ಚರಣಾಮೃತ, ಪಾನ, ಎಳ್ಳು, ಕುಂಕುಮ, ಹಣ್ಣುಗಳು, ಹೂವುಗಳು, ಪಂಚಗವ್ಯ, ವೀಳ್ಯದೆಲೆ, ದೂರ್ವಾ ಮತ್ತು ಇತರ ವಸ್ತುಗಳನ್ನು ಒಳಗೊಂಡಿರುವ ಪ್ರಸಾದದೊಂದಿಗೆ ಪೂಜಿಸಿ ಮತ್ತು ಆರತಿಯೊಂದಿಗೆ ಕೊನೆಗೊಳಿಸಿ .
  6. ಸಾಧ್ಯವಾದರೆ ಹುಣ್ಣಿಮೆಯ ದಿನದಂದು ಉಪವಾಸ ಮಾಡಿ ಅಥವಾ ಹಣ್ಣುಗಳನ್ನು ತಿನ್ನಿರಿ.
  7. ಪೂಜೆಯ ನಂತರ, ಅಗತ್ಯವಿರುವವರಿಗೆ ಮತ್ತು ಬ್ರಾಹ್ಮಣರಿಗೆ ದಾನ ಮತ್ತು ದಕ್ಷಿಣೆಯನ್ನು ನೀಡಿ.

ಮಾಗಿ ಹುಣ್ಣಿಮೆಯ ಆಚರಣೆಗಳು ಯಾವುವು?

ಮಾಘ ಮಾಸದಲ್ಲಿ ಕಲ್ಪಗಳ ಮಹತ್ವ

ಪ್ರತಿ ವರ್ಷ, ಕಲ್ಪ ಎಂದೂ ಕರೆಯಲ್ಪಡುವ ತೀರ್ಥರಾಜ ಪ್ರಯಾಗದಲ್ಲಿ (ಅಲಹಾಬಾದ್) ಮಾಘ ಮೇಳವನ್ನು ನಡೆಸಲಾಗುತ್ತದೆ. ಇದು ದೇಶಾದ್ಯಂತ ಮತ್ತು ಹೊರಗಿನಿಂದ ಭಕ್ತರನ್ನು ಆಕರ್ಷಿಸುತ್ತದೆ. ಸಹಸ್ರಾರು ವರ್ಷಗಳಿಂದ ಪ್ರಯಾಗದಲ್ಲಿ ಕಲ್ಪಗಳನ್ನು ಅಭ್ಯಾಸ ಮಾಡಲಾಗುತ್ತಿದೆ. ಮಾಗಿ ಹುಣ್ಣಿಮೆಯ ದಿನದಂದು ಕಲ್ಪಗಳು ಸ್ನಾನ ಮಾಡುವುದರೊಂದಿಗೆ ಸಮಾರೋಪಕ್ಕೆ ಬರುತ್ತಾರೆ. ಮಾಘ ಮಾಸದಲ್ಲಿ ಕಲ್ಪಗಳು ಪ್ರಖರವಾಗಿ ಬೆಳಗುತ್ತವೆ. ಪ್ರಯಾಗದ ಸಂಗಮದ ದಡದಲ್ಲಿ ವಾಸಿಸುವ ತೀರ್ಥರಾಜನನ್ನು ಈ ಮಾಸದಲ್ಲಿ ಕಲ್ಪ ಎಂದು ಕರೆಯಲಾಗುತ್ತದೆ. ಸಂಗಮದ ದಡದಲ್ಲಿ ಉಳಿದು ವೇದಗಳನ್ನು ಕಲಿಯುವುದು ಮತ್ತು ಧ್ಯಾನಿಸುವುದು ಕಲ್ಪವಸ್ ಎಂದು ಕರೆಯಲ್ಪಡುತ್ತದೆ. ಕಲ್ಪವೆಂಬುದು ತಾಳ್ಮೆ, ಅಹಿಂಸೆ ಮತ್ತು ಭಕ್ತಿಯ ನಿರ್ಣಯ.

ಮಾಘ ಮಾಸದಲ್ಲಿ ವಿಷ್ಣುವನ್ನು ಪೂಜಿಸುವುದು ವಿಶೇಷವಾಗಿ ಮಂಗಳಕರವಾಗಿದೆ. ಮಹಾಭಾರತದ ಸಂಘರ್ಷದ ಸಮಯದಲ್ಲಿ ವೀರಗತಿಯನ್ನು ಪಡೆದ ತನ್ನ ಕುಟುಂಬಕ್ಕೆ ಮೋಕ್ಷವನ್ನು ತರಲು ಯುಧಿಷ್ಠಿರನು ಮಾಘ ಮಾಸದಲ್ಲಿ ಕಲ್ಪವನ್ನು ಮಾಡಿದನು. ಮಾಘ ಮಾಸವು ಫೆಬ್ರವರಿ 16, 2022 ರಂದು ಕೊನೆಗೊಳ್ಳುತ್ತದೆ.

ಕಲ್ಪವಾಸದ ಸಮಯದಲ್ಲಿ ಅನುಸರಿಸಬೇಕಾದ ಕೆಲವು ಪ್ರಮುಖ ನಿಯಮಗಳು

ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ಮಾಗಿ ಹುಣ್ಣಿಮೆಯಂದು ಪರಿಹಾರಗಳನ್ನು ಅನುಸರಿಸುವ ಮೂಲಕ ಅದೃಷ್ಟ ಪಡೆಯಿರಿ

ಧನು : ಮಾಗಿ ಹುಣ್ಣಿಮೆಯಂದು, ಧನು ರಾಶಿಯಲ್ಲಿ ಜನಿಸಿದವರು ಶ್ರೀಮದ್ ಭಗವತ್ಗೀತೆಯ 11 ಅಥವಾ 21 ಪ್ರತಿಗಳನ್ನು ವಿತರಿಸಬೇಕು. ಇದಲ್ಲದೆ, ವಿಷ್ಣುವಿಗೆ ಹಳದಿ ಸಿಹಿತಿಂಡಿಗಳನ್ನು ಬಡಿಸಿ ಮತ್ತು ಹಳದಿ ಹೂವುಗಳಿಂದ ಅಲಂಕರಿಸಿ.

ಮಕರ : ಮಕರ ರಾಶಿಯವರು ಮಾಗಿ ಹುಣ್ಣಿಮೆಯ ದಿನದಂದು ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ನೀಡಿದರೆ ಅದು ನಿಮಗೆ ಸೂಕ್ತವಾಗಿದೆ. ಇದಲ್ಲದೆ, ಈ ದಿನದಂದು ದುರ್ಬಲರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಬೇಕು.

ಕುಂಭ : ಕುಂಭ ರಾಶಿಯವರು ಮಾಗಿ ಹುಣ್ಣಿಮೆಯಂದು ಆಂಜನೇಯನ ದೇವಸ್ಥಾನದ ಮೇಲ್ಭಾಗದಲ್ಲಿ ಕೆಂಪು ಬಟ್ಟೆಯ ಧ್ವಜವನ್ನು ಹಾಕಿದರೆ, ನೀವು ಎಲ್ಲಾ ರೀತಿಯಲ್ಲೂ ಜಯಗಳಿಸುವಿರಿ, ನಿಮ್ಮ ವಿರೋಧಿಗಳು ನಾಶವಾಗುತ್ತಾರೆ ಮತ್ತು ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ.

ಮೀನ: ಮಾಗಿ ಹುಣ್ಣಿಮೆಯಂದು ಮೀನ ರಾಶಿಯಲ್ಲಿ ಜನಿಸಿದವರು ಹಳದಿ ಹಣ್ಣುಗಳನ್ನು ಬಡವರಿಗೆ ಹಂಚಬೇಕು. ಅದನ್ನು ಬಿಟ್ಟು ಬಾಳೆಗಿಡವನ್ನು ಪೂಜಿಸುವುದರಿಂದ ನಿಮ್ಮ ಕಷ್ಟಗಳೆಲ್ಲವೂ ದೂರವಾಗುತ್ತದೆ.

ಈ ಲೇಖನ ನಿಮಗೆ ಮಾಗಿ ಹುಣ್ಣಿಮೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ ಎಂದು ನಾವು ಭಾವಿಸುತ್ತೇವೆ. ನಮ್ಮೊಂದಿಗೆ ಇರುವುದಕ್ಕೆ ಧನ್ಯವಾದಗಳು.

Talk to Astrologer Chat with Astrologer