ಸಂಖ್ಯಾಶಾಸ್ತ್ರ ವಾರ ಭವಿಷ್ಯ: 08 - 14 ಮೇ 2022

Author: S Raja | Updated Fri, 06 May 2022 05:35 PM IST

ನಿಮ್ಮ ಮೂಲ ಸಂಖ್ಯೆಯನ್ನು ತಿಳಿಯುವುದು ಹೇಗೆ?

ಸಂಖ್ಯಾಶಾಸ್ತ್ರವು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ತಿಂಗಳಲ್ಲಿ ನೀವು ಜನಿಸಿದ ದಿನಾಂಕ ಮತ್ತು ಅದನ್ನು ಒಂದು ಬಿಡಿ ಸಂಖ್ಯೆಗೆ ಪರಿವರ್ತಿಸಿದಾಗ ಸಿಗುವ ಸಂಖ್ಯೆ ನಿಮ್ಮ ಮೂಲ ಸಂಖ್ಯೆಯಾಗಿರುತ್ತದೆ. ಮೂಲ ಸಂಖ್ಯೆಯು 1 ರಿಂದ 9 ರವರೆಗೆ ಯಾವುದಾದರೂ ಆಗಿರಬಹುದು, ಉದಾಹರಣೆಗೆ - ನೀವು ತಿಂಗಳ 10 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 1 + 0 ಆಗಿರುತ್ತದೆ ಅಂದರೆ 1. ಈ ರೀತಿಯಲ್ಲಿ, ನಿಮ್ಮ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ಸಂಖ್ಯಾಶಾಸ್ತ್ರದ ವಾರ ಭವಿಷ್ಯವನ್ನು ನೀವು ತಿಳಿದುಕೊಳ್ಳಬಹುದು.


ನಿಮ್ಮ ಜನ್ಮ ದಿನಾಂಕದಿಂದ ನಿಮ್ಮ ವಾರ ಭವಿಷ್ಯವನ್ನು ತಿಳಿಯಿರಿ ( 08 - 14 ಮೇ 2022 )

ಸಂಖ್ಯಾಶಾಸ್ತ್ರವು ನಮ್ಮ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಏಕೆಂದರೆ ಸಂಖ್ಯೆಗಳು ನಮ್ಮ ಜನ್ಮ ದಿನಾಂಕಗಳೊಂದಿಗೆ ಎಲ್ಲವನ್ನೂ ಹೊಂದಿವೆ. ನಾವು ಈಗಾಗಲೇ ಮೇಲೆ ಉಲ್ಲೇಖಿಸಿರುವಂತೆ, ವ್ಯಕ್ತಿಯ ಮೂಲ ಸಂಖ್ಯೆಯು ಅವನ ಅಥವಾ ಅವಳ ಜನ್ಮ ದಿನಾಂಕವನ್ನು ಕೂಡಿಸುತ್ತದೆ ಮತ್ತು ಅದು ವಿವಿಧ ಗ್ರಹಗಳ ಆಡಳಿತದ ಅಡಿಯಲ್ಲಿ ಬರುತ್ತದೆ.

ಸಂಖ್ಯೆ 1 ನ್ನು ಸೂರ್ಯ, 2 ನ್ನು ಚಂದ್ರ, 3 ನ್ನು ಗುರು, 4 ನ್ನು ರಾಹು, 5 ನ್ನು ಬುಧ, 6 ನ್ನು ಶುಕ್ರ, 7 ನ್ನು ಕೇತು ಮತ್ತು 8 ನ್ನು ಶನಿ ಮತ್ತು 9 ನೇ ಸ್ಥಾನವನ್ನು ಮಂಗಳ ಆಳುತ್ತಾನೆ. ಈ ಗ್ರಹಗಳ ಚಲನೆಯಿಂದಾಗಿ ಒಬ್ಬರ ಜೀವನದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ ಮತ್ತು ಅವುಗಳು ನಿರ್ವಹಿಸುವ ಸಂಖ್ಯೆಗಳು ಪ್ರಮುಖ ಪಾತ್ರವನ್ನು ಹೊಂದಿವೆ.

ನಮ್ಮ ಹೆಸರಾಂತ ಸಂಖ್ಯಾಶಾಸ್ತ್ರಜ್ಞರಿಗೆ ಕರೆ ಮಾಡಿ, ಮಾತನಾಡಿ ಮತ್ತು ನಿಮ್ಮ ಹಿತಾಸಕ್ತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಿ.

ಮೂಲ ಸಂಖ್ಯೆ 1

(ನೀವು ಯಾವುದೇ ತಿಂಗಳ 1, 10, 19, 28 ರಂದು ಜನಿಸಿದ್ದರೆ)

ಈ ಸಮಯದಲ್ಲಿ, ನಿಮ್ಮ ಕೆಲಸಗಳಿಗೆ ಹಿನ್ನೆಡೆ ಉಂಟಾಗಬಹುದು. ಈ ಕಾರಣದಿಂದಾಗಿ, ನಿಮ್ಮ ಕೆಲಸಗಳಿಂದ ಬೇಸರಿಸಿಕೊಳ್ಳಬಹುದು. ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯ ಕೊರತೆಯುಂಟಾಗಬಹುದು, ಇದು ಹೆಚ್ಚಿನ ಸಾಧನೆಗಳನ್ನು ಸಾಧಿಸಲು ನಿಮ್ಮ ದಕ್ಷತೆಯನ್ನು ತಡೆಯಬಹುದು.

ಪ್ರಣಯ ಸಂಬಂಧ- ನೀವು ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕೆಲವು ಹೊಂದಾಣಿಕೆ ಪ್ರಕ್ರಿಯೆಯನ್ನು ಆಶ್ರಯಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಂವಹನ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದರೆ ಇದನ್ನು ಸುಲಭವಾಗಿ ತೆರವುಗೊಳಿಸಬಹುದು ಮತ್ತು ಪ್ರತಿಕೂಲವಾದ ಏನೂ ಸಂಭವಿಸುವುದಿಲ್ಲ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಂವಹನ ಸಮಸ್ಯೆಗಳನ್ನು ಹೊಂದುವ ಬದಲು, ನಿಮ್ಮ ಸಂಗಾತಿಯೊಂದಿಗೆ ನೀವು ನಗುವಿನಿಂದ ಇದ್ದರೆ ಮತ್ತು ವಿಷಯಗಳನ್ನು ಸುಗಮಗೊಳಿಸಿದರೆ ಅದು ಉತ್ತಮವಾಗಿರುತ್ತದೆ.

ಶಿಕ್ಷಣ-ನೀವು ಎಂಜಿನಿಯರಿಂಗ್ ಅಥವಾ ಮ್ಯಾನೇಜ್‌ಮೆಂಟ್ ವಿಭಾಗಗಳಂತಹ ವೃತ್ತಿಪರ ಅಧ್ಯಯನಗಳನ್ನು ಮಾಡುತ್ತಿದ್ದರೆ, ನಿಮ್ಮ ಭವಿಷ್ಯವನ್ನು ಸುಧಾರಿಸುವುದಕ್ಕಾಗಿ ನೀವು ಹೆಚ್ಚು ಗಮನಹರಿಸುವುದು ಅತ್ಯಗತ್ಯ. ನಿಮ್ಮ ಸಹಪಾಠಿಗಳ ಸ್ಪರ್ಧೆಗಿಳಿಯಲು ಇದು ಅಗತ್ಯವಾಗಬಹುದು.

ವೃತ್ತಿ- ಈ ಸಮಯದಲ್ಲಿ ಹೆಚ್ಚಿನ ಕೆಲಸದ ಒತ್ತಡವು ಸಾಧ್ಯ ಮತ್ತು ಈ ಕಾರಣದಿಂದಾಗಿ, ನೀವು ಸ್ವಲ್ಪ ತಾಳ್ಮೆ ಕಳೆದುಕೊಳ್ಳಬಹುದು ಮತ್ತು ಕೆಲಸದಲ್ಲಿ ತಪ್ಪುಗಳನ್ನು ಮಾಡಬಹುದು. ಹಾಗಾಗಿ ನಿಮ್ಮ ಕೆಲಸವನ್ನು ಉತ್ತಮ ನಿಖರತೆಯೊಂದಿಗೆ ನಿರ್ವಹಿಸುವಲ್ಲಿ ಹೆಚ್ಚು ಪ್ರಬುದ್ಧರಾಗಿರುವುದು ಅತ್ಯಗತ್ಯ. ನೀವು ವ್ಯಾಪಾರ ಮಾಡುತ್ತಿದ್ದರೆ, ಹೆಚ್ಚಿನ ಲಾಭ ಸುಲಭವಾಗಿ ಸಾಧ್ಯವಾಗುವುದಿಲ್ಲ ಮತ್ತು ನೀವು ಸ್ಪರ್ಧೆಯನ್ನು ಎದುರಿಸಬೇಕಾಗಬಹುದು.

ಆರೋಗ್ಯ- ಒತ್ತಡದಿಂದಾಗಿ ಕಾಲುಗಳಲ್ಲಿ ನೋವು ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೆ, ಅನಗತ್ಯ ಚಿಂತೆಗಳು ನಿಮ್ಮನ್ನು ಆಕ್ರಮಿಸಬಹುದು, ಇದು ನಿದ್ರೆಯಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಆರೋಗ್ಯವನ್ನು ಸದೃಢವಾಗಿಡಲು ನೀವು ಕೆಲವು ಧ್ಯಾನ/ಯೋಗವನ್ನು ಮಾಡುವುದು ಅತ್ಯಗತ್ಯವಾಗಿರುತ್ತದೆ.

ಪರಿಹಾರ- ಭಾನುವಾರದಂದು ಸೂರ್ಯ ದೇವರಿಗೆ ಹವನ ಮಾಡಿ.

ಮೂಲ ಸಂಖ್ಯೆ 2

(ನೀವು ಯಾವುದೇ ತಿಂಗಳ 2, 11, 20, 29 ರಂದು ಜನಿಸಿದ್ದರೆ)

ಈ ವಾರ, ನೀವು ಮನಸ್ಸಿನಲ್ಲಿ ಗೊಂದಲವನ್ನು ಎದುರಿಸುತ್ತಿರಬಹುದು, ಇದು ನೀವು ನಿರೀಕ್ಷಿಸುತ್ತಿರುವ ಮೈಲಿಗಲ್ಲುಗಳನ್ನು ಸಾಧಿಸುವುದನ್ನು ತಡೆಯಬಹುದು. ನೀವು ಕೆಲವೊಮ್ಮೆ ಭಾವನಾತ್ಮಕ ಅಸಮತೋಲನವನ್ನು ಹೊಂದಿರಬಹುದು ಮತ್ತು ಇದು ನೀವು ಕೆಲಸ ಮಾಡಬೇಕಾದ ನಿಮ್ಮ ದಕ್ಷತೆಯನ್ನು ನಿಗ್ರಹಿಸಬಹುದು.

ಪ್ರಣಯ ಸಂಬಂಧ- ನಿಮ್ಮ ಆತ್ಮೀಯರೊಂದಿಗೆ ನೀವು ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ ಸಂಬಂಧದಲ್ಲಿ ಹೊಂದಾಣಿಕೆ ಕಾಪಾಡಿಕೊಳ್ಳಲು ಸೌಮ್ಯವಾಗಿರುವುದು ಅತ್ಯಗತ್ಯ. ನಿಮ್ಮ ಮನಸ್ಥಿತಿಗಳು ಸ್ವಿಂಗ್ ಆಗಿರಬಹುದು ಮತ್ತು ಈ ಕಾರಣದಿಂದಾಗಿ, ನಿಮ್ಮ ಜೀವನ ಸಂಗಾತಿಯೊಂದಿಗೆ ಸಂತೋಷವಾಗಿರಲು ನಿಮಗೆ ಸಾಧ್ಯವಾಗದಿರಬಹುದು. ಆದರೆ ನಿಮ್ಮ ಸಕಾರಾತ್ಮಕ ವಿಧಾನದಿಂದ ಇದನ್ನು ನಿವಾರಿಸಬಹುದು.

ಶಿಕ್ಷಣ- ನಿಮ್ಮನ್ನು ಸರಿಯಾದ ದಾರಿಯಲ್ಲಿ ಇರಿಸಿಕೊಳ್ಳಲು ಮತ್ತು ನಿಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ಧ್ಯಾನದತ್ತ ಗಮನ ಹರಿಸುವುದು ಉತ್ತಮ. ಏಕೆಂದರೆ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಆದರೆ ದೊಡ್ಡ ಸಮಸ್ಯೆ ಆಗುವುದಿಲ್ಲ. ನೀವು ರಸಾಯನಶಾಸ್ತ್ರದಂತಹ ಅಧ್ಯಯನಗಳನ್ನು ಮಾಡುತ್ತಿದ್ದರೆ, ಹೆಚ್ಚಿನ ಅಂಕಗಳನ್ನು ಗಳಿಸುವ ಸಾಧ್ಯತೆಗಳು ಕಡಿಮೆಯಿರಬಹುದು.

ವೃತ್ತಿ- ನೀವು ಕೆಲಸ ಮಾಡುತ್ತಿದ್ದರೆ ಮತ್ತು ಬಡ್ತಿಯನ್ನು ನಿರೀಕ್ಷಿಸುತ್ತಿದ್ದರೆ ಅದನ್ನು ಪಡೆಯುವಲ್ಲಿ ವಿಳಂಬವಾಗಬಹುದು ಮತ್ತು ಇದು ನಿಮಗೆ ಕಿರಿಕಿರಿ ಉಂಟುಮಾಡಬಹುದು. ನಿಮ್ಮ ಮೇಲಧಿಕಾರಿಗಳಿಂದ ನೀವು ತೊಂದರೆಯನ್ನು ಸಹ ಎದುರಿಸಬಹುದು. ನೀವು ವ್ಯಾಪಾರ ಮಾಡುತ್ತಿದ್ದರೆ, ನೀವು ನಿರೀಕ್ಷಿಸುತ್ತಿರುವ ಲಾಭದಲ್ಲಿ ಗಳಿಸದೇ ಇರಬಹುದು. ಆದ್ದರಿಂದ ನಿಮ್ಮ ವ್ಯವಹಾರದ ಮಾರ್ಗವನ್ನು ನೀವು ಸರಿಯಾಗಿ ಯೋಜನೆ ಮಾಡಬೇಕು.

ಆರೋಗ್ಯ- ನಿಮ್ಮ ಕಣ್ಣುಗಳನ್ನು ಪರೀಕ್ಷಿಸುವುದು ಅತ್ಯಗತ್ಯ ಏಕೆಂದರೆ ಸೋಂಕಿನ ಸಾಧ್ಯತೆಗಳಿವೆ.

ಪರಿಹಾರ- ಪ್ರತಿದಿನ 11 ಬಾರಿ 'ಓಂ ಸೋಮಾಯ ನಮಃ' ಜಪಿಸಿ.

ಮೂಲ ಸಂಖ್ಯೆ 3

(ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದ್ದರೆ)

ಈ ಸಮಯದಲ್ಲಿ, ನೀವು ಕೈಗೊಳ್ಳುತ್ತಿರುವ ಪ್ರಯತ್ನಗಳಲ್ಲಿ ನೀವು ಉತ್ತಮ ಅಭಿವೃದ್ಧಿಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ, ಅದು ನಿಮ್ಮ ವೃತ್ತಿ ಅಥವಾ ಹಣಕಾಸುಗಳಿಗೆ ಸಂಬಂಧಿಸಿದೆ, ಪ್ರಮುಖ ಹೂಡಿಕೆಗಳನ್ನು ಮಾಡುವುದು ಇದರಲ್ಲಿ ಸೇರಿದೆ.

ಪ್ರಣಯ ಸಂಬಂಧ- ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಆಹ್ಲಾದಕರ ಸಮಯ ಮತ್ತು ಪ್ರೀತಿಯ ಕ್ಷಣಗಳನ್ನು ನೋಡಲು ಸಾಧ್ಯವಾಗುತ್ತದೆ. ಕೆಲವು ಶುಭ ಸಂದರ್ಭಗಳಿಂದ ಇದು ಸಾಧ್ಯವಾಗಬಹುದು. ಇಂತಹ ಒಳ್ಳೆಯ ಸಂಗತಿಗಳು ನಡೆಯುವುದರಿಂದ, ನೀವು ಉತ್ತಮ ಮೌಲ್ಯಗಳನ್ನು ಸ್ಥಾಪಿಸಲು ಮತ್ತು ಉತ್ತಮ ಸಂಬಂಧಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಶಿಕ್ಷಣ - ನಿಮ್ಮ ಅಧ್ಯಯನದಲ್ಲಿ ನೀವು ಮಾಡುವ ಪ್ರಯತ್ನಗಳಿಗೆ ನೀವು ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ನೀವು ಹಾಕುತ್ತಿರುವ ಪ್ರಯತ್ನಗಳಿಂದ ನೀವು ಇದು ಸಾಧ್ಯವಾಗುತ್ತದೆ. ಈ ಸಮಯದಲ್ಲಿ, ನಿಮ್ಮ ಅಧ್ಯಯನದಲ್ಲಿ ನೀವು ಮಾಡುತ್ತಿರುವ ವಿಧಾನದಿಂದ ನೀವು ವೃತ್ತಿಪರತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ವೃತ್ತಿ- ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ನೀವು ನಿರೀಕ್ಷಿಸುತ್ತಿರುವ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿಮ್ಮ ದಕ್ಷತೆಗೆ ಸೀಮಿತ ಮಾನದಂಡಗಳನ್ನು ಸಹ ನೀವು ಹೊಂದಿಸುತ್ತೀರಿ. ನೀವು ವ್ಯಾಪಾರ ಮಾಡುತ್ತಿದ್ದರೆ, ಈ ಸಮಯದಲ್ಲಿ ನೀವು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವ್ಯಾಪಾರದಲ್ಲಿ ತೊಡಗಬಹುದು ಮತ್ತು ಹೆಚ್ಚಿನ ಲಾಭವನ್ನು ಗಳಿಸಬಹುದು.

ಆರೋಗ್ಯ- ನೀವು ಮನಸ್ಸಿನಲ್ಲಿ ಉತ್ತಮ ಮಟ್ಟದ ಉತ್ಸಾಹವನ್ನು ಹೊಂದಿರುತ್ತೀರಿ ಮತ್ತು ಇದರಿಂದಾಗಿ ನೀವು ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳುವ ಸ್ಥಿತಿಯಲ್ಲಿರುತ್ತೀರಿ

ಪರಿಹಾರ- ಪ್ರತಿದಿನ 108 ಬಾರಿ 'ಓಂ ನಮಃ ಶಿವಾಯ' ಜಪಿಸಿ.

250+ ಪುಟಗಳು ವೈಯಕ್ತೀಕರಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕವು ಮುಂಬರುವ ಎಲ್ಲಾ ಘಟನೆಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ

ಮೂಲ ಸಂಖ್ಯೆ 4

(ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದ್ದರೆ)

ನೀವು ಈ ಸಂಖ್ಯೆಯಲ್ಲಿ ಜನಿಸಿದರೆ ಈ ಸಮಯದಲ್ಲಿ ನೀವು ಸರಾಸರಿ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಎದುರಿಸುತ್ತಿರುವ ಕೆಲವು ಆತ್ಮವಿಶ್ವಾಸದ ಕೊರತೆಯು ನೀವು ಉನ್ನತ ಗುಣಮಟ್ಟವನ್ನು ಸಾಧಿಸುವುದನ್ನು ತಡೆಯುತ್ತದೆ. ಈ ಸಮಯದಲ್ಲಿ ನೀವು ಹೆಚ್ಚಿನ ಆಸೆಗಳಿಗೆ ಒಳಗಾಗಬಹುದು, ಅದನ್ನು ನೀವು ತಪ್ಪಿಸಲು ಮಿತಿಗಳನ್ನು ಹಾಕಿಕೊಳ್ಳಿ.

ಪ್ರಣಯ ಸಂಬಂಧ- ತಿಳುವಳಿಕೆಯ ಕೊರತೆಯಿಂದಾಗಿ ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಅಹಂಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು, ಇಂತಹ ಸಮಸ್ಯೆಗಳು ನಿಮ್ಮ ಸಂತೋಷವನ್ನು ಕುಗ್ಗಿಸಬಹುದು. ಆದ್ದರಿಂದ ನೀವು ಅದನ್ನು ಸರಿಹೊಂದಿಸುವುದು ಮತ್ತು ನಿರ್ವಹಿಸುವುದು ಅತ್ಯಗತ್ಯ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಪ್ರೀತಿಯಿಂದ ಇರುವುದರ ಮೂಲಕ ನೀವು ಕುಟುಂಬಕ್ಕಾಗಿ ದೊರೆಯುವ ಈ ಕಡಿಮೆ ಕ್ಷಣಗಳನ್ನು ಫಲಪ್ರದವಾಗಿ ಪರಿವರ್ತಿಸಬಹುದು.

ಶಿಕ್ಷಣ- ನಿಮಗೆ ಏಕಾಗ್ರತೆಯ ಕೊರತೆಯ ಸಾಧ್ಯತೆಗಳಿರಬಹುದು ಮತ್ತು ಈ ಕಾರಣದಿಂದಾಗಿ, ನೀವು ಹೆಚ್ಚಿನ ಅಂಕಗಳನ್ನು ಗಳಿಸುವ ಸ್ಥಿತಿಯಲ್ಲಿಲ್ಲದಿರಬಹುದು. ನೀವು ಕಂಪ್ಯೂಟರ್ ಎಂಜಿನಿಯರಿಂಗ್‌ನಂತಹ ವೃತ್ತಿಪರ ಅಧ್ಯಯನವನ್ನು ಮಾಡುತ್ತಿದ್ದರೆ, ಉನ್ನತ ಸಾಧನೆಗಳನ್ನು ಸಾಧಿಸಲು ನೀವು ಹೆಚ್ಚಿನ ಪ್ರಯತ್ನ ಮಾಡಬೇಕಾಗಬಹುದು.

ವೃತ್ತಿ - ತಪ್ಪುಗಳನ್ನು ತಪ್ಪಿಸಲು ನೀವು ಮಾಡುತ್ತಿರುವ ಕೆಲಸದೊಂದಿಗೆ ಗುಣಮಟ್ಟವನ್ನು ಸಾಧಿಸಲು ನಿಮ್ಮ ಕಡೆಯಿಂದ ಅತ್ಯಂತ ಏಕಾಗ್ರತೆ ಅತ್ಯಗತ್ಯ. ನೀವು ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಸ್ಪರ್ಧೆಯನ್ನು ಎದುರಿಸುತ್ತಿರಬಹುದು ಮತ್ತು ಈ ಕಾರಣದಿಂದಾಗಿ, ನೀವು ಸ್ವಲ್ಪ ಲಾಭವನ್ನು ಕಳೆದುಕೊಳ್ಳಬಹುದು.

ಆರೋಗ್ಯ- ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ನೀವು ಹೊಂದಿರುವ ಚರ್ಮದ ಕಿರಿಕಿರಿಗಳಿಗೆ ಹೆಚ್ಚಾಗಬಹುದು ಮತ್ತು ಇದು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಆದ್ದರಿಂದ ನೀವು ಆರೋಗ್ಯವಾಗಿರಲು ಸಮತೋಲಿತ ಆಹಾರ ಸೇವಿಸಿ.

ಪರಿಹಾರ- ಶನಿವಾರದಂದು ಬಡವರಿಗೆ ಬಾರ್ಲಿಯನ್ನು ದಾನ ಮಾಡಿ.

ನಮ್ಮ ಗೌರವಾನ್ವಿತ ಜ್ಯೋತಿಷಿಗಳ ಬಳಿ ಮುಂದೆ ಏನಾಗಬಹುದು ಎಂಬುದರ ಕುರಿತು ಸುಳಿವುಗಳು ಲಭ್ಯವಿವೆ

ಮೂಲ ಸಂಖ್ಯೆ 5

(ನೀವು ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದ್ದರೆ)

ಈ ಸಮಯವು ನಿಮ್ಮ ಅಭಿವೃದ್ಧಿಗೆ ಹೆಚ್ಚು ಒಳ್ಳೆಯದು ಮತ್ತು ನೀವು ಹಾಕುತ್ತಿರುವ ಪ್ರಯತ್ನದಲ್ಲಿನ ಸ್ಥಿರತೆಯಿಂದಾಗಿ ಹೆಚ್ಚಿನ ತೃಪ್ತಿಯು ಬರಬಹುದು. ನಿಮ್ಮ ಬುದ್ಧಿವಂತಿಕೆಯನ್ನು ಹೊರಗಿನ ಪ್ರಪಂಚಕ್ಕೆ ಬಹಿರಂಗಪಡಿಸಲು ಮತ್ತು ಆ ಮೂಲಕ ನಿಮ್ಮ ಯಶಸ್ಸಿಗೆ ಹೊಸ ಮಾನದಂಡಗಳನ್ನು ಹೊಂದಿಸಲು ನಿಮಗೆ ಸಾಧ್ಯವಾಗುತ್ತದೆ.

ಪ್ರಣಯ ಸಂಬಂಧ- ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚು ಪ್ರೀತಿಯನ್ನು ಕಾಪಾಡಿಕೊಳ್ಳುವಿರಿ. ಈ ಕಾರಣದಿಂದಾಗಿ, ನಿಮ್ಮ ಸಂಗಾತಿಯ ಮುಂದೆ ನಿಮ್ಮ ಗೌರವವನ್ನು ಹೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ.

ಶಿಕ್ಷಣ- ಈ ಸಮಯದಲ್ಲಿ, ನಿಮ್ಮ ಅಧ್ಯಯನದಲ್ಲಿ ನೀವು ಹೆಚ್ಚಿನ ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ ಮತ್ತು ಇದು ನಿಮ್ಮಲ್ಲಿರುವ ಹೆಚ್ಚುವರಿ ಸಾಮರ್ಥ್ಯದ ಪರಿಣಾಮವಾಗಿ ಬರುತ್ತದೆ. ನೀವು ಫೈನಾನ್ಶಿಯಲ್ ಅಕೌಂಟಿಂಗ್, ಲಾಜಿಸ್ಟಿಕ್ಸ್ ಇತ್ಯಾದಿಗಳಂತಹ ಅಧ್ಯಯನಗಳನ್ನು ಮಾಡುತ್ತಿದ್ದರೆ, ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ.

ವೃತ್ತಿ- ನಿಮ್ಮ ಕೆಲಸದಲ್ಲಿ ನೀವು ಗುಣಮಟ್ಟವನ್ನು ಸಾಧಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಸಹೋದ್ಯೋಗಿಗಳ ಮೇಲೆ ಉತ್ಕೃಷ್ಟತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ, ನೀವು ನಿಯೋಜನೆ ಆಧಾರದ ಮೇಲೆ ಅನಿರೀಕ್ಷಿತವಾಗಿ ವಿದೇಶಕ್ಕೆ ಹೋಗುತ್ತೀರಿ. ನೀವು ವ್ಯಾಪಾರ ಮಾಡುತ್ತಿದ್ದರೆ, ಹೆಚ್ಚಿನ ಲಾಭವನ್ನು ಪಡೆಯುತ್ತೀರಿ.

ಆರೋಗ್ಯ- ನೀವು ತುಂಬಾ ಸಂತೋಷದಿಂದ ಇರುತ್ತೀರಿ ಮತ್ತು ಇದರಿಂದಾಗಿ ನೀವು ಉತ್ತಮ ಆರೋಗ್ಯವನ್ನು ಹೊಂದುತ್ತೀರಿ.

ಪರಿಹಾರ- ಪ್ರತಿದಿನ 23 ಬಾರಿ 'ಓಂ ನಮೋ ನಾರಾಯಣ' ಎಂದು ಜಪಿಸಿ.

ಮೂಲ ಸಂಖ್ಯೆ 6

(ನೀವು ಯಾವುದೇ ತಿಂಗಳ 6, 15, 24 ರಂದು ಜನಿಸಿದ್ದರೆ)

ನಿಮ್ಮ ಸೃಜನಾತ್ಮಕ ಅನ್ವೇಷಣೆಗಳನ್ನು ವರ್ಧಿಸುವ ಮತ್ತು ಅದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುವ ಸ್ಥಿತಿಯಲ್ಲಿ ನೀವು ಇರುತ್ತೀರಿ. ಈ ಸಮಯದಲ್ಲಿ ನೀವು ಚಿತ್ರಕಲೆಯಲ್ಲಿ ಉತ್ಸಾಹವನ್ನು ಬೆಳೆಸಿಕೊಳ್ಳುತ್ತೀರಿ. ಜೀವನದ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಇದು ಉತ್ತಮ ಸಮಯ. ಈ ಸಮಯದಲ್ಲಿ ಅದೃಷ್ಟವು ನಿಮ್ಮ ಕಡೆಗಿರುತ್ತದೆ.

ಪ್ರಣಯ ಸಂಬಂಧ- ನಿಮ್ಮ ಜೀವನ ಸಂಗಾತಿಯೆಡೆಗೆ ಹೆಚ್ಚಿನ ಪ್ರೀತಿಯ ಭಾವನೆಗಳು ನಿಮ್ಮಲ್ಲಿ ಇರುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಜೀವನವು ಈ ಸಮಯದಲ್ಲಿ ಅನನ್ಯವಾಗಿರುತ್ತದೆ ಮತ್ತು ಇದು ಯಶಸ್ವಿ ಸಂತೋಷದ ಜೀವನಕ್ಕೆ ದಾರಿ ಮಾಡಿಕೊಡಬಹುದು.

ಶಿಕ್ಷಣ - ಈ ಸಮಯದಲ್ಲಿ ನೀವು ಮಾಡುತ್ತಿರುವ ಯಾವುದೇ ಅಧ್ಯಯನದಲ್ಲಿ ನೀವು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನೀವು ಗ್ರಾಫಿಕ್ಸ್ ಇಂಜಿನಿಯರಿಂಗ್ ಮತ್ತು ವಿಷುಯಲ್ ಕಮ್ಯುನಿಕೇಶನ್‌ನಂತಹ ಅಧ್ಯಯನಗಳನ್ನು ಮಾಡುತ್ತಿದ್ದರೆ, ನಿಮ್ಮ ಸಾಮರ್ಥ್ಯವನ್ನು ತೋರಿಸಲು ಇದು ನಿಮಗೆ ಅಂತಿಮ ಸಮಯವಾಗಿದೆ.

ವೃತ್ತಿ- ಹೆಚ್ಚು ಹೊಸ ಉದ್ಯೋಗಾವಕಾಶಗಳು ನಿಮಗೆ ಸಾಧ್ಯವಾಗಬಹುದು, ಅದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ಆ ಮೂಲಕ ನಿಮಗೆ ಪ್ರತಿಫಲ ಸಿಗುತ್ತದೆ. ವ್ಯವಹಾರದಲ್ಲಿಯೂ ಸಹ, ನೀವು ಅದೇ ರೀತಿ ಮಾಡುತ್ತಿದ್ದರೆ, ನೀವು ಮುಂದಿನ ಹಂತಕ್ಕೆ ಮತ್ತು ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂದಕ್ಕೆ ಹೋಗಬಹುದು.

ಆರೋಗ್ಯ - ಈ ಸಮಯದಲ್ಲಿ ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ಏಕೆಂದರೆ ನಿಮ್ಮಲ್ಲಿ ಶಕ್ತಿಯ ಕೊರತೆ ಇರುವುದಿಲ್ಲ. ಹಾಗಾಗಿ ಸಮಸ್ಯೆ ಆಗುವುದಿಲ್ಲ.

ಪರಿಹಾರ- ಪ್ರತಿದಿನ 33 ಬಾರಿ 'ಓಂ ಶುಕ್ರಾಯ ನಮಃ' ಜಪಿಸಿ.

ನಮ್ಮ ಹೆಸರಾಂತ ಜ್ಯೋತಿಷಿ ಹರಿಹರನ್ ಅವರೊಂದಿಗೆ ಮಾತನಾಡಿ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ

ಮೂಲ ಸಂಖ್ಯೆ 7

(ನೀವು ಯಾವುದೇ ತಿಂಗಳ 7, 16, 25 ರಂದು ಜನಿಸಿದ್ದರೆ)

ಈ ಸಮಯದಲ್ಲಿ, ನಿಮ್ಮ ಆಸಕ್ತಿಗಳನ್ನು ಉತ್ತೇಜಿಸದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಜಾಗರೂಕರಾಗಿರಬೇಕು. ನೀವು ಕೆಲವು ಧ್ಯಾನ/ಯೋಗವನ್ನು ಅನುಸರಿಸುವುದು ಉತ್ತಮವಾಗಿದೆ.

ಪ್ರಣಯ ಸಂಬಂಧ- ಸಂಬಂಧಗಳ ವಿಷಯಕ್ಕೆ ಬಂದಾಗ, ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಅಡಚಣೆಗಳನ್ನು ಎದುರಿಸುತ್ತಿರಬಹುದು ಮತ್ತು ನೀವು ಪ್ರೀತಿಸುತ್ತಿದ್ದರೆ, ಫಲಿತಾಂಶಗಳು ಸಂತೋಷದ ವಿಷಯದಲ್ಲಿ ಉತ್ತಮವಾಗಿರುವುದಿಲ್ಲ.

ಶಿಕ್ಷಣ- ಈ ಬಾರಿ ನೀವು ಹೆಚ್ಚು ಏಕಾಗ್ರತೆಯನ್ನು ಇರಿಸಲು ಸಾಧ್ಯವಾಗದ ಕಾರಣ ಉತ್ತಮ ಅಂಕಗಳನ್ನು ಗಳಿಸಲು ನಿಮ್ಮ ಅಧ್ಯಯನವನ್ನು ಯೋಜಿಸಿ ಮತ್ತು ಮಾಡಬೇಕಾಗಿದೆ. ಕೆಲವು ಸಂವೇದನಾಶೀಲ ಯೋಜನೆಗೆ ನಿಮ್ಮನ್ನು ಸೀಮಿತಗೊಳಿಸುವುದು ನಿಮಗೆ ಉತ್ತಮವಾಗಿರುತ್ತದೆ.

ವೃತ್ತಿ - ಈ ಸಮಯದಲ್ಲಿ ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ, ಕೆಲವು ಕಠಿಣ ವೇಳಾಪಟ್ಟಿಗಳು ಇರುತ್ತವೆ. ನೀವು ಮಾಡುತ್ತಿರುವ ಕಠಿಣ ಕೆಲಸಕ್ಕೆ, ನೀವು ಸರಿಯಾದ ಮೆಚ್ಚುಗೆಯನ್ನು ಪಡೆಯದಿರಬಹುದು ಮತ್ತು ಇದು ನಿಮಗೆ ಚಿಂತೆಯನ್ನು ಉಂಟುಮಾಡಬಹುದು.

ಆರೋಗ್ಯ- ನೀವು ಕೆಲವು ಚರ್ಮದ ಅಲರ್ಜಿಗಳನ್ನು ಎದುರಿಸುತ್ತಿರಬಹುದು, ಅದು ನೀವು ಸೇವಿಸುವ ಹೆಚ್ಚು ಎಣ್ಣೆಯುಕ್ತ ಪದಾರ್ಥಗಳ ಕಾರಣದಿಂದಾಗಿರಬಹುದು. ಆದ್ದರಿಂದ ನಿಮ್ಮ ಆಹಾರದ ಮೇಲೆ ನಿಯಂತ್ರಣವನ್ನು ಹೊಂದಿರುವುದು ಅತ್ಯಗತ್ಯ.

ಪರಿಹಾರ- ಪ್ರತಿದಿನ 21 ಬಾರಿ ‘ಓಂ ಕೇಂ ಕೇತವೇ ನಮಃ’ ಎಂದು ಜಪಿಸಿ.

ಮೂಲ ಸಂಖ್ಯೆ 8

(ನೀವು ಯಾವುದೇ ತಿಂಗಳ 8, 17, 26 ರಂದು ಜನಿಸಿದ್ದರೆ)

ಈ ವಾರವು ಉತ್ತಮ ಅವಕಾಶಗಳೊಂದಿಗೆ ಉತ್ತೇಜಕವಾಗಿರಬಹುದು, ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿಮಗೆ ಸೂಕ್ತ ಸಮಯ. ನಿಮ್ಮ ವಿಧಾನದಲ್ಲಿ ನೀವು ಹೆಚ್ಚು ವೃತ್ತಿಪರರಾಗಿರಬಹುದು ಮತ್ತು ಇದು ನಿಮ್ಮ ಉದ್ಯಮಗಳಲ್ಲಿ ಯಶಸ್ವಿಯಾಗಲು ನಿಮಗೆ ಅನುವು ಮಾಡಿಕೊಡುತ್ತದೆ.

ಪ್ರಣಯ ಸಂಬಂಧ- ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸ್ನೇಹಪರ ರೀತಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸೌಹಾರ್ದ ಮನೋಭಾವವು ಬಾಂಧವ್ಯವನ್ನು ಹೆಚ್ಚಿಸಬಹುದು ಮತ್ತು ಪರಸ್ಪರ ಬಾಂಧವ್ಯವನ್ನು ನಿರ್ಮಿಸಬಹುದು.

ಶಿಕ್ಷಣ- ನಿಮ್ಮ ಅಧ್ಯಯನದಲ್ಲಿ ನೀವು ಉತ್ತಮ ಸಾಧನೆ ಮಾಡಬಹುದು. ಎಂಜಿನಿಯರಿಂಗ್‌ನಂತಹ ಅಧ್ಯಯನಗಳು ನಿಮಗೆ ಯಶಸ್ಸನ್ನು ನೀಡಬಹುದು ಮತ್ತು ನೀವು ಉತ್ತಮ ಶ್ರೇಣಿಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ವೃತ್ತಿ - ನಿಮ್ಮ ವೃತ್ತಿಜೀವನದಲ್ಲಿ, ನೀವು ಬಾಹ್ಯ ಫಲಿತಾಂಶಗಳು ಮತ್ತು ಲಾಭಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಮೇಲಧಿಕಾರಿಗಳಿಂದ ಮನ್ನಣೆ ದೊರೆಯುವುದು ಸಾಧ್ಯ. ನೀವು ವ್ಯಾಪಾರದಲ್ಲಿದ್ದರೆ, ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಅದು ನಿಮ್ಮನ್ನು ಉತ್ತಮ ಸ್ಥಾನದಲ್ಲಿರಿಸಬಹುದು. ನೀವು ಸ್ನೇಹಪರ ರೀತಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆರೋಗ್ಯ - ಧೈರ್ಯದಿಂದ ಉತ್ತಮ ಶಕ್ತಿ ಇರುತ್ತದೆ ಅದು ನಿಮ್ಮ ಉತ್ತಮ ಆರೋಗ್ಯವನ್ನು ಸೇರಿಸಬಹುದು. ಈ ಕಾರಣದಿಂದಾಗಿ, ನಿಮಗೆ ಆರೋಗ್ಯ ಸಮಸ್ಯೆಗಳಿಲ್ಲದಿರಬಹುದು.

ಪರಿಹಾರ - ಹನುಮಾನ್ ಚಾಲೀಸಾವನ್ನು ಪ್ರತಿದಿನ ಪಠಿಸಿ.

ಮೂಲ ಸಂಖ್ಯೆ 9

(ನೀವು ಯಾವುದೇ ತಿಂಗಳ 9, 18, 27 ರಂದು ಜನಿಸಿದ್ದರೆ)

ಈ ಸಮಯದಲ್ಲಿ ನೀವು ಅನುಸರಿಸುತ್ತಿರುವ ಪ್ರಯತ್ನಗಳಲ್ಲಿ ದಕ್ಷತೆಯನ್ನು ನೋಡಲು ನೀವು ವ್ಯವಸ್ಥಿತ ಯೋಜನೆಗೆ ಅಂಟಿಕೊಳ್ಳಬೇಕಾಗಬಹುದು. ಈ ಸಮಯದಲ್ಲಿ ನಿಮಗೆ ಅತ್ಯಗತ್ಯವಾಗಿರುವ ನಿಮ್ಮ ಆತ್ಮವಿಶ್ವಾಸವನ್ನು ನೀವು ಹೆಚ್ಚಿಸಬೇಕಾಗಬಹುದು.

ಪ್ರಣಯ ಸಂಬಂಧ- ಕೆಲವು ಗೊಂದಲಗಳು ನಿಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ಪ್ರಕ್ರಿಯೆಗಳಿಗೆ ಅಡ್ಡಿಪಡಿಸಬಹುದು. ಈ ಕಾರಣದಿಂದಾಗಿ ಅಹಂಕಾರದ ಸಮಸ್ಯೆಗಳು ಉದ್ಭವಿಸಬಹುದು ಮತ್ತು ಈ ಕಾರಣದಿಂದಾಗಿ ಏಕತೆಯನ್ನು ಕಾಪಾಡಿಕೊಳ್ಳಲು ಉತ್ತಮ ಹೊಂದಾಣಿಕೆ ಅತ್ಯಗತ್ಯ.

ಶಿಕ್ಷಣ- ಅಧ್ಯಯನದ ಮೇಲೆ ಹೆಚ್ಚು ಗಮನಹರಿಸಲು ಮತ್ತು ಅದಕ್ಕೆ ಸಂಬಂಧಿಸಿದಂತೆ ಗುಣಮಟ್ಟವನ್ನು ನೀಡಲು ಏಕಾಗ್ರತೆ ಅತ್ಯಗತ್ಯ. ನಿಮ್ಮ ಸಹ ವಿದ್ಯಾರ್ಥಿಗಳು ನಿಮಗಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿರಬಹುದು. ಈ ಸಮಯದಲ್ಲಿ ನೀವು ನಿಮ್ಮ ಅಧ್ಯಯನಕ್ಕೆ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ವೃತ್ತಿ - ನೀವು ಕೆಲಸ ಮಾಡುತ್ತಿದ್ದರೆ, ಈ ಸಮಯದಲ್ಲಿ ನೀವು ಕೆಲಸದ ಒತ್ತಡ ಮತ್ತು ನಿಮ್ಮ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯವನ್ನು ಎದುರಿಸಬಹುದು. ನಿಮ್ಮ ಕೆಲಸದಲ್ಲಿ ನೀವು ಅನುಸರಿಸಲಿರುವ ವೃತ್ತಿಪರ ವಿಧಾನದಿಂದ ನೀವು ಇದನ್ನು ಜಯಿಸಲು ಸಾಧ್ಯವಾಗಬಹುದು ಮತ್ತು ಅದನ್ನು ಮಾಡಿದರೆ, ನೀವು ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗುತ್ತದೆ. ನೀವು ವ್ಯಾಪಾರದಲ್ಲಿದ್ದರೆ, ನೀವು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗದಿರಬಹುದು.

ಆರೋಗ್ಯ- ಧ್ಯಾನ/ಯೋಗ ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ.

ಪರಿಹಾರ- ಪ್ರತಿದಿನ 27 ಬಾರಿ 'ಓಂ ಭೌಮಾಯ ನಮಃ' ಜಪಿಸಿ.

ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮೊಂದಿಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!

Talk to Astrologer Chat with Astrologer