ಕೇತು ಸಂಚಾರ ೨೦೨೦

ವೈದಿಕ ಜ್ಯೋತಿಷ್ಯದಲ್ಲಿ ಕೇತು ಒಂದು ನಿಗೂಢವಾದ ಮತ್ತು ಸಿಕದ ಗ್ರಹ. ಇದು ಕೊಡಲು ಬಂದಾಗ ಅದು ಎಲ್ಲದನ್ನು ತುಂಬುತ್ತದೆ ಮತ್ತು ತೆಗೆದುಕೊಳ್ಳಲು ಬಂದಾಗ ಅದು ತುಂಬಿದ ಎಲ್ಲದನ್ನು ಸಹ ಖಾಲಿ ಮಾಡುತ್ತದೆ ಎಂದು ಕೇತುವಿನ ಬಗ್ಗೆ ಹೇಳಲಾಗುತ್ತದೆ. ಕೇತು ತನ್ನ ಸ್ಥಿತಿಯಲ್ಲಿ ಎಷ್ಟು ವೇಗವಾಗಿ ಹಣ ಮತ್ತು ಪ್ರತಿಷ್ಠೆಯನ್ನು ತರುತ್ತಾನೋ ಅಷ್ಟೇ ವೇಗವಾಗಿ ತನ್ನೊಂದಿಗೆ ತೆಗೆದುಕೊಂಡು ಸಹ ಹೋಗುತ್ತಾನೆ. ಈ ತಪ್ಪಿಸಿಕೊಳ್ಳಲಾಗದ ಗ್ರಹವು ಎಲ್ಲವನ್ನೂ ಅಸ್ಪಷ್ಟವಾಗಿ ನೀಡುತ್ತದೆ. ಒಬ್ಬ ವ್ಯಕ್ತಿಯು ತನ್ನ ಮುಂದೆ ಯಾರನ್ನು ಏನು ಅರ್ಥಮಾಡಿಕೊಳ್ಳಲ್ಲ, ಕೇತು ಅಂತಹ ಭ್ರಮೆಯನ್ನು ಮನಸ್ಸಿನ ಮೇಲೆ ಇಡುತ್ತಾನೆ. ಕೇತು ಶುಭವಾಗಿದ್ದರೆ, ತುಂಬಾ ಒಲೆಯ ಕಲ್ಪನೆಯ ಶಕ್ತಿ ಮತ್ತು ಮುಂದಿನ ಸಮಯಕ್ಕೆ ಅಂತಃಪ್ರಜ್ಞೆಯ ಶಕ್ತಿಯನ್ನು ನೀಡುತ್ತದೆ.

ಈ ವರ್ಷ 2020 ರ ಆರಂಭದಲ್ಲಿ ಕೇತುವಿನ ಸಾಗಣೆ ಧನು ರಾಶಿಚಕ್ರದಲ್ಲಿ ಇರುತ್ತದೆ. ಸೆಪ್ಟೆಂಬರ್ 23, 2020 ಗೆ ಬೆಳಿಗ್ಗೆ 08: 20 ರಲ್ಲಿ ಕೇತುವಿನ ಸಾಗಣೆ ಧನು ರಾಶಿಚಕ್ರದಿಂದ ವೃಶ್ಚಿಕ ರಾಶಿಚಕ್ರದಲ್ಲಿ ಆಗುತ್ತದೆ ಮತ್ತು ವರ್ಷದ ಕೊನೆಯ ವರೆಗೂ ಇದೆ ರಾಶಿಯಲ್ಲಿ ಇರುತ್ತಾನೆ. ಕೇತು ಎಂದಿಗೂ ರಾಹುವಿನ ತರಹ ವಕ್ರತೆ ಚಲನೆಯಲ್ಲಿ ನಡೆಯುತ್ತಾನೆ.ಬನ್ನಿ ಈ ಸಾಗಣೆಯ ಸಮಯದಲ್ಲಿ ನಮ್ಮೆಲ್ಲರ ರಾಶಿಚಕ್ರ ಚಿಹ್ನೆಗಳ ಮೇಲೆ ಕೇತು ಎಂಬ ಅಸ್ಪಷ್ಟ ಗ್ರಹವು ಯಾವ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಯೋಣ.

ಮೇಷ ರಾಶಿ / Aries

ವರ್ಷದ ಆರಂಭದಲ್ಲಿ ಕೇತು ನಿಮ್ಮ ರಾಶಿಚಕ್ರದಿಂದ ಒಂಬತ್ತನೇ ಮನೆಗೆ ಸಾಗಾಣಿಸುತ್ತಾನೆ . ಒಂಬತ್ತನೇ ಮನೆ ನಮ್ಮ್ ಜಾತಕದ ಅದೃಷ್ಟ ಮತ್ತು ಧರ್ಮದ ಮನೆ. ಕೇತು ಇಲ್ಲಿ ಸಾಗಾಣಿಸುವುದರಿಂದ ಈ ವರ್ಷ ಧಾರ್ಮಿಕ ಪ್ರವಾಸಗಳ ಯೋಗ ಕೂಡಿದೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಈ ವರ್ಷ ಕೆಲವು ಅನಗತ್ಯ ಪ್ರಯಾಣಗಳಿಂದ ಮಾನಸಿಕ ಒತ್ತಡವು ಉಳಿಯುತ್ತದೆ. ತಂದೆಯೊಂದಿಗೆ ಯಾವುದಾದರು ವಿವಾದವಿದ್ದರೆ, ಅದರಿಂದಲೂ ನೀವು ಜಾಗರೂಕರಾಗಿರಬೇಕು. ಏಕೆಂದರೆ ಈ ವಿವಾದದ ಕಾರಣದಿಂದಾಗಿ ಪೂರ್ವಜರ ಆಸ್ತಿಯಲ್ಲಿ ಹಾನಿ ಆಗಬಹುದು. ಈಗ ಭೂ ಹೂಡಿಕೆಯ ಕಲ್ಪನೆಯನ್ನು ಬಿಡುವುದು ಉತ್ತಮ. ಸೆಪ್ಟೆಂಬರ್ ಇದ ಈ ಕೇತು ಎಂಟನೇ ಮನೆಯಿಂದ ಒಂಬತ್ತನೇ ಮನೆಗೆ ಸಾಗಾಣಿಸುತ್ತಾನೆ. ಇದರ ಮೂಲಕ ನೀವು ಕೆಲವು ಆಳವಾದ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುತ್ತೀರಿ ಮತ್ತು ನೀವು ಸಂಶೋಧನೆಗೆ ಮುಂದುವರಿಯಬಹುದು. ವಿದೇಶಕ್ಕೆಹೋಗಲು ಬಯಸುತ್ತಿದ್ದರೆ ಈ ಸಾಗಣೆ ನಿಮಗೆ ಸಹಾಯ ಮಾಡಬಹುದು. ನೀವು ಹೊಸ ಕೆಲಸವನ್ನು ಸಹ ಪ್ರಾರಂಭಿಸಬಹುದು. ಹೆಚ್ಚಿನ ವೆಚ್ಚಳಗಳಿಂದ ಮಾನಸಿಕ ಒತ್ತಡ ಉಂಟಾಗಬಹುದು.

ಕೇತು ಸಂಚಾರದ ಪರಿಹಾರ: ಮಂಗಳವಾರದಂದು ಯಾವುದೇ ದೇವಸ್ಥಾನದಲ್ಲಿ ಕೆಂಪು ಬಣ್ಣದ ಧ್ವಜವನ್ನು ಹಾಕಿ ಮತ್ತು ನಾಯಿಗಳಿಗೆ ರೊಟ್ಟಿಯನ್ನು ತಿನ್ನಿಸಿ.

ವೃಷಭ ರಾಶಿ / Taurus

ವರ್ಷದ ಆರಂಭದಲ್ಲಿ ಕೇತು ನಿಮ್ಮ ರಾಶಿಚಕ್ರದಿಂದ ಎಂಟನೇ ಮನೆಗೆ ಸಗಣಿಸುತ್ತಾನೆ. ಈ ಸಮಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳೊಂದಿಗೆ ಯಾವುದೇ ಆಳವಾದ ವಿಷಯದಲ್ಲಿ ಸಂಶೋಧನೆಗಾಗಿ ಸಮಯವಾಗಿರುತ್ತದೆ. ನೀವು ಮೊದಲಿನಿಂದಲೇ ಯಾವುದಾದರು ಸಂಶೋಧನಾ ಸಂಬಂಧಿತ ಅಧ್ಯಯನಗಳನ್ನು ಮಾಡುತ್ತಿದ್ದರೆ, ಈ ವರ್ಷ ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಕೇತುವಿನ ಈ ಸಾಗಣೆ ಕೌಟುಂಬಿಕ ಸಂತೋಷಕ್ಕಾಗಿ ಉತ್ತಮವಾಗಿಲ್ಲ. ಯಾವುದೇ ವಿಷಯವಿಲ್ಲದಿದ್ದರೂ ಪರಸ್ಪರ ಉದ್ವೇಗ ಉಂಟಾಗಬಹುದು. ಅನಗತ್ಯ ಖರ್ಚಿನಿಂದಾಗಿ ಈ ವರ್ಷ ನೀವು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೀರಿ. ಕಾಲುಗಳು ಮತ್ತು ಕರುಗಳ ಹಠಾತ್ ನೋವು ನಿಮ್ಮ ಕೆಲಸಕ್ಕೂ ಅಡ್ಡಿಯಾಗುತ್ತದೆ. ಸೆಪ್ಟೆಂಬರ್ ನಲ್ಲಿ ಕೇತುವಿನ ಸಾಗಣೆ ಏಳನೇ ಮನೆಯಲ್ಲಿ ಇರುತ್ತದೆ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದ ಬಗ್ಗೆ ಜಾಗರೂಕರಾಗಿರಿ ಮತ್ತು ಯಾವುದೇ ರೀತಿಯ ಪ್ರಮುಖ ನಿರ್ಧಾರವನ್ನು ತಪ್ಪಿಸಿ ಏಕೆಂದರೆ ಏಕೆಂದರೆ ಕೆಲವು ರೀತಿಯ ತೊಡಕುಗಳಲ್ಲಿ ಸಿಲುಕಿಕೊಂಡಿದ್ದರಿಂದ ನೀವು ಒತ್ತಡವನ್ನು ಅನುಭವಿಸುವಿರಿ. ಈ ಸಮಯದಲ್ಲಿ ಸಾಲ ವಹಿವಾಟಿನ ಬಗ್ಗೆ ಎಚ್ಚರದಿಂದಿರಿ ಮತ್ತು ಯಾರೊಬ್ಬರ ಭಾವನೆಗಳಿಗೆ ಸಿಲುಕುವ ಮೂಲಕ ಹಣವನ್ನು ನೀಡುವ ಭರವಸೆ ನೀಡಬೇಡಿ.

ಕೇತು ಸಂಚಾರದ ಪರಿಹಾರ: ನೀವು ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಬೇಕು ಮತ್ತು ಬಡವರಿಗೆ ಅನೇಕ ಬಣ್ಣದ ಕಂಬಳಿಯ ದಾನ ಮಾಡಬೇಕು.

ಮಿಥುನ ರಾಶಿ / Gemini

ವರ್ಷದ ಆರಂಭದಲ್ಲಿ ಕೇತುವು ನಿಮ್ಮ ರಾಶಿಚಕ್ರದಿಂದ ಏಳನೇ ಮನೆಗೆ ಸಾಗಾಣಿಸುತ್ತಾನೆ. ಈ ಸಾಗಣೆಯಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ವಿಷಯದಿಂದ ತಪ್ಪು ಕಲ್ಪನೆಗಳಿಂದ ವಿವಾದ ಉಂಟಾಗಬಹುದು.ನೀವು ಅವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯನ್ನು ಇಷ್ಟಪಡಲು ಇದು ಉತ್ತಮ ಸಮಯವಲ್ಲ, ಏಕೆಂದರೆ ಕಾಣಿಸುವುದೇ ಒಂದು ಮತ್ತು ವಾಸ್ತವವಾಗಿ ಇರುವುದೇ ಒಂದಾಗಿರುತ್ತದೆ. ಈ ಸಾಗಣೆಯು ಯಾವುದೇ ರೀತಿಯ ಮೋಸದಿಂದ ಎಚ್ಚರದಿಂದಿರಲು ನಿಮ್ಮನ್ನು ಹೇಳುತ್ತದೆ. ಹೊಸ ವ್ಯವಹಾರಕ್ಕಾಗಿ ಈ ಸಮಯವು ಬಹಳ ಚಿಂತನಶೀಲವಾಗಿ ಕೆಲಸದಲ್ಲಿ ಗಮನ ಹರಿಸುವ ಸಮಯವಾಗಿದೆ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ , ನಿಮ್ಮ ಕಣ್ಣುಗಳನ್ನು ಮುಚ್ಚಿ ಅವರನ್ನು ನಂಬಬೇಡಿ. ಯಾರೋ ಆಗಮನದಿಂದ ಈ ವರ್ಷ ನಿಮ್ಮ ಒಂಟಿತನವು ದೂರವಾಗುತ್ತದೆ. ಸೆಪ್ಟೆಂಬರ್ ನಲ್ಲಿ ರಾಹುವಿನ ಈ ಸಾಗಣೆಯು ನಿಮ್ಮ ರಾಶಿಚಕ್ರದಿಂದ ಆರನೇ ಮನೆಯಲ್ಲಿ ಇರುತ್ತದೆ. ಈ ಸಮಯ ಸ್ಪರ್ಧೆಯಲ್ಲಿ ಹೆಚ್ಚು ಗಮನ ಹರಿಸುವ ಸಮಯ ಮತ್ತು ನಿಮ್ಮ ಕೆಲಸದ ಪ್ರದೇಶದಲ್ಲೂ, ಕೆಲಸದ ಮೇಲೆ ಗಮನ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ವರ್ಗಾವಣೆಯಾಗಬಹುದು.

ಕೇತು ಸಂಚಾರದ ಪರಿಹಾರ: ನೀವು ಅಶ್ವಗಂಧದ ಮೂಲವನ್ನು ಧರಿಸಬೇಕು ಮತ್ತು ಪ್ರತಿದಿನ ಶ್ರೀ ಗಣೇಶನನ್ನು ಆರಾಧಿಸಬೇಕು.

ಕರ್ಕ ರಾಶಿ / Cancer

ವರ್ಷದ ಆರಂಭದಲ್ಲಿ ಕೇತು ನಿಮ್ಮ ರಾಶಿಚಕ್ರದಿಂದ ಆರನೇ ಮನೆಗೆ ಸಾಗಾಣಿಸುತ್ತಾನೆ. ಈ ಸಮಯದಲ್ಲಿ ನೀವು ಕೆಲವು ಸಂಘರ್ಷಗಳು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪೂರ್ಣಗೊಳಿಸುವ ಕೆಲಸದಲ್ಲಿ ಅಡಚಣೆಗಳಿರಬಹುದು. ನಿಮ್ಮ ಎದುರಾಳಿ ನಿಮ್ಮ ಮುಂದೆ ತಲೆ ಎತ್ತಬಹುದು. ಶಿಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರೆ, ಅವರು ವಿಶೇಷವಾಗಿ ಅಧ್ಯಯನಗಳಲ್ಲಿ ಗಮನ ಹರಿಸಬೇಕು, ಆಗ ಮಾತ್ರ ಮನಸ್ಸಿಗೆ ಮೆಚ್ಚಿದ ಫಲಿತಾಂಶಗಳನ್ನು ಪಡೆಯಬಹುದು. ಯಾವುದೇ ರೀತಿಯ ಗೊಂದಲ ಮತ್ತು ದಿಗ್ಭ್ರಮೆಗೊಳಗಾಗಬೇಡಿ. ವೈವಾಹಿಕ ಜೀವನ ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಹಳೆಯ ವಿವಾದ ಮುಗಿದ ನಂತರ ನೀವು ಮುಂದುವರಿಯುತ್ತೀರಿ. ಮಕ್ಕಳ ಬದಿಯಿಂದ ಸೆಪ್ಟೆಂಬರ್ ನಂತರ ವ್ಯತ್ಯಾಸಗಳು ಉಂಟಾಗಬಹುದು ಮತ್ತು ಅಧ್ಯಯನಗಳಲ್ಲಿ ಅವರ ಮನಸ್ಸು ಬೇರೆಡೆಗೆ ತಿರುಗಬಹುದು. ನೀವು ಪ್ರೀತಿಸುವ ಹಳೆಯ ಸಂಗಾತಿ ಸಹ ವರ್ಷದ ಕೊನೆಯಲ್ಲಿ ನಿಮ್ಮ ಜೀವನಕ್ಕೆ ಮರಳಬಹುದು. ಈ ಸಮಯದಲ್ಲಿ ನಿಮ್ಮ ಹೊಟ್ಟೆಯನ್ನು ನೋಡಿಕೊಳ್ಳಿ, ಯಾವುದೇ ರೀತಿಯ ಅಸಡ್ಡೆ ಮಾಡಬೇಡಿ.

ಕೇತು ಸಂಚಾರದ ಪರಿಹಾರ: ನೀವು ಒಂಬತ್ತು ಮುಖ ರುದ್ರಾಕ್ಷವನ್ನು ಧರಿಸಬೇಕು ಮತ್ತು ಈ ರುದ್ರಾಕ್ಷವನ್ನು ಧರಿಸಿದ ನಂತರ ಓಂ ಹ್ರೀಂ ಹೂಂ ನಮಃ ಮಂತ್ರವನ್ನು ಜಪಿಸಬೇಕು. ಇದಲ್ಲದೆ ನೀವು ಪ್ರತಿದಿನ ಶವರ್ ನಲ್ಲಿ ಸ್ನಾನ ಮಾಡಬೇಕು ಮತ್ತು ಅವಕಾಶ ಸಿಕ್ಕಿದರೆ ಯಾವುದಾದರು ಜಲಪಾತದಲ್ಲಿ ಸ್ನಾನ ಮಾಡಬೇಕು.

ಸಿಂಹ ರಾಶಿ / Leo

ವರ್ಷದ ಆರಂಭದಲ್ಲಿ ಕೇತು ನಿಮ್ಮ ರಾಶಿಚಕ್ರದಿಂದ ಐದನೇ ಮನೆಗೆ ಸಾಗಾಣಿಸುತ್ತಾನೆ. ಕೇತುವು ಈ ಮನೆಯಲ್ಲಿ ಸಾಗಾಣಿಸುವುದರಿಂದ ಮಾನಸಿಕ ಒತ್ತಡವು ಉಳಿಯುತ್ತದೆ ಮತ್ತು ನೀವು ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಿರುವುದಿಲ್ಲ. ನೀವು ಒಂದು ರೀತಿಯ ಗೊಂದಲದಲ್ಲಿ ನಿಮ್ಮನ್ನು ಅನುಭವಿಸುತ್ತೀರಿ ಮತ್ತು ಉಸಿರುಗಟ್ಟಿಸುವಿರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರೊಂದಿಗೆ ವಿವಾದವಾಗಬಹುದು. ಮಾತು ಏನು ಇರಲ್ಲ, ಆದರೆ ತಪ್ಪು ತಿಳುವಳಿಕೆ ಮಾತ್ರ ಪ್ರತ್ಯೇಕತೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕೆಷೇತ್ರದಲ್ಲಿ ವಿಶೇಷ ಜಾಗರೂಕರಾಗಿರುವ ಅಗತ್ಯವಿದೆ ಅಮ್ತ್ತು ಯಾವುದೇ ರೀತಿಯ ನಿಮ್ಮನ್ನು ದಿಗ್ಭ್ರಮೆಗೊಳಿಸುವುದರಿಂದ ದೂರವಿಡುವುದು ಉತ್ತಮ.ಈ ಸಮಯದಲ್ಲಿ ಯಾವುದೇ ನಿರ್ದಿಷ್ಟ ವಿಷಯದ ಬದಲಾವಣೆಯ ಬಗ್ಗೆ ಯೋಚಿಸಬೇಡಿ. ವೈವಾಹಿಕ ಜೀವನದಲ್ಲಿ, ನಿಮ್ಮ ಸಂಗಾತಿಗೆ ಬೇರೆ ಕೆಲವು ಆದಾಯವಿರುತ್ತದೆ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಮತ್ತು ಹಣದ ಕಾರಣದಿಂದಾಗಿ, ನಿಲ್ಲಿಸಿದ ಕೆಲಸವು ಸರಾಗವಾಗಿ ನಡೆಯಲು ಪ್ರಾರಂಭಿಸುತ್ತದೆ. ನಿಮ್ಮ ಧ್ವನಿಯನ್ನು ತುಂಬಾ ಚಿಂತನಶೀಲವಾಗಿ ಬಳಸಿ. ಸೆಪ್ಟೆಂಬರ್ ತಿಂಗಳಿಂದ ಕೇತು ನಾಲ್ಕನೇ ಮನೆಗೆ ಸಗಣಿಸುತ್ತಾನೆ. ಈ ಸಮಯದಲ್ಲಿ ಭೂಮಿಗೆ ಸಂಬಂಧಿಸಿದ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ ಮತ್ತು ಮನೆಯ ಅಲಂಕಾರದ ವಸ್ತುಗಳ ಮೇಲೆ ಸಹ ಹಣವನ್ನು ಖರ್ಚು ಮಾಡಬೇಡಿ.

ಕೇತು ಸಂಚಾರದ ಪರಿಹಾರ: ನೀವು ಮಂಗಳವಾರದಂದು ನಾಲ್ಕು ಬಾಳೆಹಣ್ಣನ್ನು ಹನುಮಂತನಿಗೆ ಅರ್ಪಿಸಬೇಕು. ಮಂಗಳವಾರದಂದು ಉಪವಾಸ ಮಾಡುವುದು ನಿಮಗಾಗಿ ತುಂಬಾ ಅನುಕೂಲಕರ ಎಂದು ಸಾಬೀತುಪಡಿಸುತ್ತದೆ.

ಕನ್ಯಾ ರಾಶಿ / Virgo

ವರ್ಷದ ಆರಂಭದಲ್ಲಿ ಕೇತುವಿನ ಸಾಗಣೆ ನಿಮ್ಮ ರಾಶಿಚಕ್ರದಿಂದ ನಾಲ್ಕನೇ ಮನೆಯಲ್ಲಿ ಇರುತ್ತದೆ. ಈ ಸಾಗಣೆ ತಾಯಿ ಮತ್ತು ಮಾನಸಿಕ ಸಂತೋಷಕ್ಕಾಗಿ ಉತ್ತಮವಾಗಿಲ್ಲ. ಯಾವುದಾದರು ಒಂದು ವಿಷಯದಿಂದ ಒತ್ತಡ ಉಳಿದಿರುತ್ತದೆ ಮತ್ತು ವಿಶ್ರಾಂತಿ ಪಡೆಯುವುದಿಲ್ಲ. ಇದರಿಂದ ಕುಟುಂಬದಲ್ಲಿ ಅಶಾಂತಿಯ ವಾತಾವರಣವಿರುತ್ತದೆ. ವಾಹನದ ಬಗ್ಗೆ ಜಾಗರೂಕರಾಗಿರಿ. ಹಠಾತ್ ಅಪಘಾತದ ಯೋಗವಿದೆ. ಭೂಮಿ ಅಥವಾ ಮನೆಗೆ ಸಂಬಂಧಿತ ಯಾವುದೇ ಕಾರ್ಯದಲ್ಲಿ ಯಾರನ್ನು ನಂಬಬೇಡಿ ಮೋಸಗೊಳಿಸಬಹುದು. ವ್ಯವಹಾರ ಕ್ಷೇತ್ರದಲ್ಲಿಯೂ ಕೆಲವು ಕಾರಣಗಳಿಂದಾಗಿ ಉದ್ವಿಗ್ನತೆ ಉಂಟಾಗುತ್ತದೆ. ಯಾವುದೇ ಅಗತ್ಯ ನಿರ್ಧಾರ ತೆಗೆತುಕೊಳ್ಳುವ ಮೊದಲು, ಹಿರಿಯರ ಸಲಹೆ ಅಗತ್ಯವಾಗಿ ತೆಗೆದುಕೊಳ್ಳಿ.. ಉದ್ಯೋಗವನ್ನು ಬದಲಾಯಿಸುವುದ್ದಕ್ಕಾಗಿಆತುರ ಪಡಬೇಡಿ. ಸೆಪ್ಟೆಂಬರ್ ರಿಂದ ಕೇತುವಿನ ಸಾಗಣೆ ನಾಲ್ಕನೇ ಮನೆಯಿಂದ ಮೂರನೇ ಮನೆಯಲ್ಲಿ ಇರುತ್ತದೆ. ಈ ಸಮಯದಲ್ಲಿ ನೀವು ಸಣ್ಣ ಪುಟ್ಟ ಪ್ರವಾಸಗಳನ್ನು ಹೊಂದಿರುತ್ತೀರಿ ಮತ್ತು ಯಾವುದೇ ನಿಮ್ಮ ಹೊಸ ಕೆಲಸದ ಬಗ್ಗೆ ನೀವು ಉತ್ಸುಕರಾಗುತ್ತೀರಿ. ನಿಮ್ಮ ಕಿರಿಯ ಸಹೋದರ ಸಹೋದರಿಯರೊಂದಿಗೆ ಮಾತನಾಡುತ್ತಿರಿ.

ಕೇತು ಸಂಚಾರದ ಪರಿಹಾರ: ನೀವು ಭಗವಂತ ವಿಷ್ಣುವಿನ ಮತ್ಸ್ಯ ರೂಪವನ್ನು ಪೂಜಿಸಬೇಕು ಮತ್ತು ಮೀನುಗಳಿಗೆ ಧಾನ್ಯವನ್ನು ಹಾಕಬೇಕು.

ತುಲಾ ರಾಶಿ / Libra

ವರ್ಷದ ಆರಂಭದಲ್ಲಿಕೇತುವಿನ ಸಾಗಣೆ ನಿಮ್ಮ ರಾಶಿಚಕ್ರದಿಂದ ಮೂರನೇ ಮನೆಯಲ್ಲಿ ಇರುತ್ತದೆ.ಈ ಸಾಗಣೆ ಅನಗತ್ಯ ಪ್ರವಾಸಗಳಿಗೆ ತೊಂದರೆ ನೀಡುತ್ತದೆ. ಕಿರಿಯ ಸಹೋದರ ಸಹೋದರಿಯರೊಂದಿಗೆ ತಪ್ಪು ತಿಳುವಳಿಕೆ ಉಂಟಾಗುವುದರಿಂದಾಗಿ ಒತ್ತಡವಿರುತ್ತದೆ. ಕುಟುಂಬದಲ್ಲಿನ ಒಬ್ಬ ಸದಸ್ಯರ ಆರೋಗ್ಯದ ಮೇಲೆ ಹಣ ಖರ್ಚಾಗಬಹುದು. ವ್ಯಾಪಾರದಲ್ಲಿ ಏರಿಳಿತಗಳು ಉಳಿದಿರುತ್ತವೆ, ಇದರಿಂದಾಗಿ ಕಾರ್ಯನಿರತತೆ ಉಳಿಯುತ್ತದೆ. ಆದಾಯಕ್ಕೆ ಸಂಬಂಧಿಸಿದಂತೆ ಕೆಲವು ರೀತಿಯ ಸಮಸ್ಯೆಗಳಿರಬಹುದು. ವೈವಾಹಿಕ ಜೀವನ ಸಂಗಾತಿಗೆ ಕೆಲಸದ ಹೊಸ ಸಾಧನೆ ಸಿಗುವುದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿ.ಸಿ. ನಿಮ್ಮ ಕಾರ್ಯನಿರತತೆಯಿಂದ ಸಮಯವನ್ನು ತೆಗೆದು ಸಂಗಾತಿಗೂ ಸಮಯ ನೀಡಿ. ನೀವು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೆ, ಈ ಸಮಯದಲ್ಲಿ ನಿಮಗೆ ಉತ್ತಮ ಮಟ್ಟದಲ್ಲಿ ಆಡಲು ಅವಕಾಶ ಸಿಗುತ್ತದೆ. ಆಧ್ಯಾತ್ಮಿಕ ಕಾರ್ಯಗಳೊಂದಿಗೆ ಧಾರ್ಮಿಕ ಪ್ರಾಸಗಳಲ್ಲಿ ಆಸಕ್ತಿ ಇರುತ್ತದೆ. ಯಾರೋ ಸ್ನೇಹಿತರಿಂದ ಮೋಸ ಆಗಬಹುದು. ಎಲ್ಲರನ್ನು ಅನಗತ್ಯವಾಗಿ ನಂಬಬೇಡಿ.

ಕೇತು ಸಂಚಾರದ ಪರಿಹಾರ: ನೀವು ಗಣಪರಿ ಅಥರ್ವಶೀರ್ಷವನ್ನು ಪಠಿಸಬೇಕು ಮತ್ತು ಗಣೇಶ ದೇವರಿಗೆ ಬುಧವಾರದಂದು ದುರ್ವವನ್ನು ಅರ್ಪಿಸಬೇಕು.

ವೃಶ್ಚಿಕ ರಾಶಿ / Scorpio

ವರ್ಷದ ಆರಂಭದಲ್ಲಿ ಕುಟುವಿನ ಸಾಗಣೆ ನಿಮ್ಮ ರಾಶಿಚಕ್ರದಿಂದ ಎರಡನೇ ಮನೆಯಲ್ಲಿ ಇರುತ್ತದೆ. ಈ ಸಾಗಣೆಯ ಸಮಯದಲ್ಲಿ ನೀವು ನಿಮ್ಮ ಧ್ವನಿಯ ಮೇಲೆ ನಿಯಂತ್ರಣ ಇರಿಸಿ. ಯೋಚಿಸದೆ ಯಾರಿಗೂ ಯಾವುದೇ ಭರವಸೆಗಳನ್ನು ನೀಡಬೇಡಿ. ಮಾತಿನಲ್ಲಿನ ಕಹಿ ಕಾರಣದಿಂದಾಗಿ ನಿಮ್ಮ ಸ್ವಂತ ಸಂಬಂಧವು ನಿಮ್ಮಿಂದ ದೂರವಾಗಬಹುದು. ಮಾರ್ಚ್ ಆದ ಮೇಲೆ ನಿಮಗೆ ಸರ್ಕಾರಿ ಅಥವಾ ಯಾವುದೇ ಉನ್ನತ ಸ್ಥಾನದಿಂದ ಗೌರವ ಸಿಗಬಹುದು. ನೀವು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೆ, ಈ ವರ್ಷ ನೀವು ಉತ್ತಮ ಮಟ್ಟದಲ್ಲಿ ಆಡುವ ಕನಸು ಈಡೇರುತ್ತದೆ. ನೀವು ಯಾವುದಾದರು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಯಾರಾದರೂ ಹಿರಿಯರ ಸಲಹೆಯನ್ನು ಅಗತ್ಯವಾಗಿ ತೆಗೆದುಕೊಳ್ಳಿ.. ಹಠಾತ್ ಯಾವುದೇ ಗೊಂದಲದ ಪರಿಸ್ಥಿತಿಯಲ್ಲಿ ಬಂದು ಯಾವುದೇ ಹೂಡಿಕೆಯನ್ನು ಮಾಡಬೇಡಿ. ಇದರಿಂದ ನಿಮ್ಮದೇ ನಷ್ಟವಾಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿಕೇತುವಿನ ಸಾಗಣೆ ನಿಮ್ಮ ರಾಶಿಚಕ್ರದಲ್ಲೇ ಇರುವುದರಿಂದ ದಿಗ್ಭ್ರಮೆಯ ಪರಿಸ್ಥಿತಿ ಉಂಟಾಗಬಹುದು. ಯಾವುದೇ ಭಯ ಅಥವಾ ಆತಂಕಕ್ಕೆ ಸಿಲುಕಬೇಡಿ ಮತ್ತು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ.

ಕೇತು ಸಂಚಾರದ ಪರಿಹಾರ: ಪ್ರತಿದಿನ ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಸಿ ಮತ್ತು ಕೇತು ಗ್ರಹದ ಮಂತ್ರ ಓಂ ಕೇಂ ಕೇತವೇ ನಮಃ ಜಪಿಸಿ.

ಧನು ರಾಶಿ / Sagittarius

ವರ್ಷದ ಆರಂಭದಲ್ಲಿ ಕೇತುವಿನ ಸಾಗಣೆನಿಮ್ಮ ರಾಶಿಚಕ್ರದಲ್ಲೇ ಇರುತ್ತದೆ, ಇದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ಭಯ ಮತ್ತು ಅಂತಕ ಆಗಬಹುದು. ಇಂತಹ ಯಾವುದೇ ಮಾತಾದರೆ ನೀವು ಹಲವು ಸಮಯಕ್ಕಾಗಿ ಧ್ಯಾನ ಮತ್ತು ಧಾರ್ಮಿಕ ಸ್ಥಾನದ ಪ್ರವಾಸಕ್ಕಾಗಿ ಹೋಗಬೇಕು.ಈ ಕೇತು ನಿಮಗೆ ಮುನ್ಸೂಚನೆಯ ಉತ್ತಮ ಶಕ್ತಿಯನ್ನು ನೀಡುತ್ತದೆ ಮತ್ತು ಕಾಲ್ಪನಿಕ ಶಕ್ತಿ ಹೆಚ್ಚಿಸುತ್ತದೆ. ಈ ಸಮಯದಲ್ಲಿ ತಂದೆಯೊಂದಿಗೆ ಯಾವುದೇ ರೀತಿಯ ವಿವಾದ ಮಾಡಬೇಡಿ, ಇಲ್ಲದಿದ್ದರೆ ಪೂರ್ವಜರ ಆಸ್ತಿಯನ್ನು ಪಡೆಯುವಲ್ಲಿ ತೊಂದರೆ ಇರುತ್ತದೆ. ವ್ಯವಹಾರದ ಬಗ್ಗ್ಗೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳ ಬೇಡಿ ಮತ್ತು ಪಾಲುದಾರರೊಂದಿಗೆ ಯಾವುದೇ ರೀತಿಯ ತಪ್ಪು ತಿಳುವಳಿಕೆ ಇದ್ದರೆ ಸಮಯಕ್ಕೆ ಮೊದಲೇ ಅದನ್ನು ಮುಗಿಸಿ. ವೈವಾಹಿಕ ಜೀವನದಲ್ಲಿ ವ್ಯತ್ಯಾಸಗಳ ಯೋಗ ಉಳಿದಿದೆ, ಇದರಿಂದ ಸಂಗಾತಿಯೊಂದಿಗೆ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಉದ್ಯೋಗದಲ್ಲಿ ಹೊಸ ಸ್ಥಾನಕ್ಕಾಗಿ ನಿಮಗೆ ಅವಕಾಶ ಸಿಗುತ್ತದೆ, ಮುಂದುವರಿಯಿರಿ ಮತ್ತು ಈ ಅವಕಾಶದ ಲಾಭವನ್ನು ಪಡೆದುಕೊಳ್ಳಿ.. ವರ್ಷದ ಕೊನೆಯಲ್ಲಿ ವಿದೇಶ ಪ್ರವಾಸದ ಯೋಗವು ಉಳಿದಿದೆ, ಆದರೆ ಹೆಚ್ಚಿನ ಲಾಭವನ್ನು ಪಡೆಯುವ ಬದಲು, ಅದು ವೆಚ್ಚವಾಗುತ್ತದೆ.

ಕೇತು ಸಂಚಾರದ ಪರಿಹಾರ: ನೀವು ಅಶ್ವಗಂಧ ಸಸ್ಯವನ್ನು ನೆಡಬೇಕು ಮತ್ತು ಪ್ರತಿದಿನ ನೀರಿನಿಂದ ನೀರಾವರಿ ಮಾಡಬೇಕು

ಮಕರ ರಾಶಿ / Capricorn

ವರ್ಷದ ಆರಂಭದಲ್ಲಿ ಕೇತುವಿನ ಈ ಸಾಗಣೆ ನಿಮ್ಮ ರಾಶಿಚಕ್ರದಿಂದ ಹನ್ನೆರಡನೇ ಮನೆಯಲ್ಲಿ ಇರುತ್ತದೆ.ಈ ಸಮಯದಲ್ಲಿ ವಿದೇಶ ಪ್ರವಾಸಗಳು ಹೆಚ್ಚಾಗಿರುತ್ತವೆ ಮತ್ತು ಇದರೊಂದಿಗೆ ಹೆಚ್ಚಿನ ವೆಚ್ಚಗಳು ಇರುತ್ತವೆ. ನೀವು ಎಂದಿಗೂ ಯೋಚಿಸದೆ ಇರುವಂತಹ ಖರ್ಚುಗಳು ಇರುತ್ತವೆ. ಸುದೀರ್ಘ ಧಾರ್ಮಿಕ ಪ್ರಯಾಣದ ಸಾಧ್ಯತೆಯೂ ಇದೆ, ಇದರೀನಾಗಿ ನಿಮಗೆ ಮಾನಸಿಕ ವಿಶ್ರಾಂತಿ ಸಿಗುತ್ತದೆ. ಈ ಸಾಗಣೆಯಿಂದ ನಿಮ್ಮ ಸ್ವಭಾವವು ಗಂಭೀರವಾಗಿರುತ್ತದೆ ಮತ್ತು ನಿಮ್ಮ ಹೃದಯದ ಮಾತು ಯಾರೊಂದಿಗೂ ಹೇಳುವುದಿಲ್ಲ. ಕೆಲಸಕ್ಕೆ ಸಂಬಂಧಿಸಿದ ಅವಕಾಶಗಳನ್ನು ಪಡೆಯುವುದರಿಂದ ಮುಂದುವರಿಯಲು ಹೊಸ ಅವಕಾಶ ಮತ್ತು ಹೊಸ ಯೋಜನೆಗಳು ದೊರೆಯುತ್ತವೆ. ಸೆಪ್ಟೆಂಬರ್ ತಿಂಗಳಿಂದ ಕೇತುವಿನ ಸಾಗಣೆ ಹನ್ನೊಂದನೇ ಮನೆಯಲ್ಲಿ ಇರುತ್ತದೆ. ಆದಾಯದ ಹೊಸ ಅವಕಾಶಗಳನ್ನು ಪಡೆಯುತ್ತೀರಿ ಆದರೆ ಮಾನಸಿಕವಾಗಿ ಕೆಲವು ಒತ್ತಡಗಳು ಇರುತ್ತವೆ. ಸಂತಾನದ ಕಡೆಯಿಂದ ಉದ್ವೇಗವಿರಬಹುದು ಮತ್ತು ಅವರ ಶಕ್ಷಣೆಯಲ್ಲಿ ದಿಗ್ಭ್ರಮೆ ಇರುವುದರಿಂದ ಅಧ್ಯಯನದಲ್ಲಿ ಅವರ ಮನಸ್ಸು ಇರುವುದಿಲ್ಲ. ಹೊಟ್ಟೆಯನ್ನು ನೋಡಿಕೊಳ್ಳಿ ಮತ್ತು ತಿನ್ನುವುದು ಮತ್ತು ಕುಡಿಯುವುದರಲ್ಲಿ ನಿರ್ಲಕ್ಷ್ಯ ವಹಿಸಬೇಡಿ.

ಕೇತು ಸಂಚಾರದ ಪರಿಹಾರ: ನೀವು ಪ್ರತಿದಿನ ನಿಯಮಿತವಾಗಿ ದುರ್ಗಾ ಚಾಲೀಸವನ್ನು ಪಠಿಸಬೇಕು ಮತ್ತು ತಾಯಿ ದುರ್ಗೆಯ ಮಂತ್ರ ಓಂ ದುಂ ದುರ್ಗಾಯೈ ನಮಃ ಜಪಿಸಿ.

ಕುಂಭ ರಾಶಿ / Aquarious

ವರ್ಷದ ಆರಂಭದಲ್ಲಿ ಕೇತುವಿನ ಸಾಗಣೆ ನಿಮ್ಮ ರಾಶಿಚಕ್ರದಿಂದ ಹನ್ನೊಂದನೇ ಮನೆಗೆ ಸಾಗಾಣಿಸುತ್ತದೆ. ವರ್ಷದ ಆರಂಭದಲ್ಲಿ ದುಬಾರಿ ವಾಹನದ ಮೇಲೆ, ನಿಮ್ಮ ಹಣ ಖರ್ಚಾಗಬಹುದು. ನಿಮ್ಮ ವ್ಯವಹಾರದಲ್ಲಿ ಹೊಸ ಅವಕಾಶಗಳ ಜೊತೆಗೆ, ನೀವು ಬಹಳಷ್ಟು ಹೊಸ ವಿಷಯಗಳನ್ನು ಕಲಿಯುವಿರಿ. ಸಮಾಜದಲ್ಲಿ ನಿಮ್ಮ ಹೊಸ ಗುರುತನ್ನು ರಚಿಸಲಾಗುತ್ತದೆ ಮತ್ತು ನೀವು ಸಾಮಾಜಿಕ ಸೇವೆಯಲ್ಲೂ ಆಸಕ್ತಿ ಹೊಂದಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಅಹಂಕಾರದ ಕಾರಣದಿಂದಾಗಿ ಪರಸ್ಪರ ಒತ್ತಡ ಉಂಟಾಗುತ್ತದೆ. ಭೂಮಿಯ ಮೇಲೆ ಯಾವುದೇ ರೀತಿಯ ಹೂಡಿಕೆಯ ಬಗ್ಗೆ ಯೋಚಿಸಬಹುದು ಮತ್ತು ಮನೆಯ ಅಲಂಕಾರದ ವಸ್ತುಗಳ ಮೇಲೆ ಕೂಡ ಹಣವನ್ನು ಖರ್ಚು ಮಾಡಬಹುದು. ಸೆಪ್ಟೆಂಬರ್ ತಿಂಗಳಿಂದ ಕೇತುವಿನ ಸಾಗಣೆ ರಾಶಿಚಕ್ರದಿಂದ ಹತ್ತನೇ ಮನೆಯಲ್ಲಿ ಇರುತ್ತದೆ. ಈ ಸಮಯದಲ್ಲಿ ಹೊಸ ವ್ಯಾಪಾರದ ಬಗ್ಗೆ ಯೋಚಿಸಬೇಡಿ ಮತ್ತು ವ್ಯವಹಾರದ ಮೇಲೆ ಹಣವನ್ನು ಹೂಡಿಕೆ ಮಾಡಬೇಡಿ. ಪಾಲುದಾರರೊಂದಿಗೆ ಯಾವುದೇ ರೀತಿಯ ವ್ಯತ್ಯಾಸಗಳನ್ನು ತಪ್ಪಿಸಿ. ತಾಯಿಯೊಂದಿಗೆ ಜಗಳವಾಗುವುದರಿಂದ ಮಾನಸಿಕ ಒತ್ತಡ ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣವಾಗಿ ಗಮನ ಹರಿಸಿ.

ಕೇತು ಸಂಚಾರದ ಪರಿಹಾರ: ನೀವು ಒಂಬತ್ತು ಮುಖ ರುದ್ರಾಕ್ಷವನ್ನು ಧರಿಸಬೇಕು ಮತ್ತು ತಾಯಿ ಮಹಾಲಕ್ಷ್ಮಿ ಮತ್ತು ಗಣಪತಿ ದೇವರನ್ನು ಒಟ್ಟಾಗಿ ಆರಾಧಿಸಬೇಕು.

ಮೀನಾ ರಾಶಿ / Pisces

ವರ್ಷದ ಆರಂಭದಲ್ಲಿ ಕೇತುವಿನ ಸಾಗಣೆ ನಿಮ್ಮ ರಾಶಿಚಕ್ರದಿಂದ ಹತ್ತನೇ ಮನೆಯಲ್ಲಿ ಇರುತ್ತದೆ . ಈ ಸಾಗಣೆಯಲ್ಲಿ ವ್ಯವಹಾರದ ಬಗ್ಗೆ ಸ್ವಲ್ಪ ಗೊಂದಲದ ಪರಿಸ್ಥಿತಿ ಇರುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ಕೆಲಸದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ ಮತ್ತು ಹೊಸ ವ್ಯಾಪಾರ ಅಥವಾ ವ್ಯವಹಾರದಲ್ಲಿ ಬದಲಾವಣೆಯ ಬಗ್ಗೆ ಯಾವುದೇ ಹೆಜ್ಜೆಯನ್ನು ಎತ್ತಬೇಡಿ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳ ಸಾಧ್ಯತೆ ಇದೆ. ಮಾರಾಟ ಮತ್ತು ಮಾರ್ಕೆಟಿಂಗ್ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ತಾಯಿಯೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ತಪ್ಪಿಸಿ. ಮಾನಸಿಕ ಒತ್ತಡದಿಂದಾಗಿ ಅವರೊಂದಿಗೆ ಧಾರ್ಮಿಕ ಪ್ರಯಾಣ ಮಾಡಿ. ವೈವಾಹಿಕ ಜೀವನದಲ್ಲಿ ಇದ್ದಕ್ಕಿದ್ದಂತೆ ಸಂತೋಷದ ವಾತಾವರಣ ಇರುತ್ತದೆ ಮತ್ತು ಹೊಸ ಅತಿಥಿಯ ಆಗಮನದಿಂದ ನಿಮ್ಮ ಕುಟುಂಬವು ಪೂರ್ಣಗೊಳ್ಳುತ್ತದೆ. ಸೆಪ್ಟೆಂಬರ್ ರಿಂದ ಕೇತುವಿನ ಸಾಗಣೆ ನಿಮ್ಮ ಅದೃಷ್ಟದ ಮನೆಯಲ್ಲಿ ಇರುವುದರಿಂದ ಧಾರ್ಮಿಕ ಪ್ರಾಯಗಳ ಸಾಧ್ಯತೆ ಇದೆ ಮತ್ತು ವಿದೇಶಕ್ಕೆ ಹೋಗುವ ಅವಕಾಶಗಳನ್ನು ಸಹ ಪಡೆಯುವಿರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಅವರೊಂದಿಗೆ ಯಾವುದೇ ರೀತಿಯ ವ್ಯತ್ಯಾಸಗಳನ್ನು ತಪ್ಪಿಸಿ

ಕೇತು ಸಂಚಾರದ ಪರಿಹಾರ: ನೀವು ಕೇತು ಗ್ರಹದ ಬೀಜ ಮಂತ್ರ ಓಂ ಸ್ರಾಂ ಸ್ರೀಂ ಸ್ರೌಂ ಸಃ ಕೇತವೇ ನಮಃ ಜಪಿಸಬೇಕು. ಕೇತುವಿನ ನಕ್ಷತ್ರ ಅಶ್ವಿನಿ, ಮಾಘ ಅಥವಾ ಮೂಲದಲ್ಲಿ ಕೇತುಗೆ ಸಮಬಾಧಿಸಿದ ವಸ್ತುಗಳ ದಾನ ಮಾಡಿ.ಉದಾಹರಣೆಗೆ - ಎಳ್ಳು, ಬಾಳೆಹಣ್ಣು ಅಥವಾ ಕಂಬಳಿ.

राशिफल और ज्योतिष 2020

Talk to Astrologer Chat with Astrologer