Personalized
Horoscope
  • Talk To Astrologers

ಬುಧ ಗ್ರಹ ಶಾಂತಿ ಮಂತ್ರ ಮತ್ತು ಪರಿಹಾರ

ಬುಧ ಗ್ರಹವನ್ನು ಬುದ್ಧಿವಂತಿಕೆ, ಸಂವಹನ ಮತ್ತು ಚರ್ಮದ ಅಂಶ ಎಂದು ಕರೆಯಲಾಗುತ್ತದೆ. ಬುಧ ಶುಭ ಗ್ರಹ, ಆದರೆ ಕ್ರೂರ ಗ್ರಹದ ಸಂಯೋಜನೆಯಿಂದಾಗಿ ಅದು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಬುಧ ಗ್ರಹದ ಶಾಂತಿಗಾಗಿ ಅನೇಕ ಪರಿಹಾರಗಳಿವೆ. ಅವುಗಳಲ್ಲಿ ಬುಧ ಯಂತ್ರದ ಸ್ಥಾಪನೆ, ಬುಧವಾರ ಉಪವಾಸ, ಬುಧವಾರ ವಿಷ್ಣು ದೇವರನ್ನು ಆರಾಧಿಸುವುದು ಮತ್ತು ಸಮುದ್ರಪಾಲ ಗಿಡಮೂಲಿಕೆಯನ್ನು ಧರಿಸುವುದು, ಇತ್ಯಾದಿಗಳು ಮುಖ್ಯವಾದ ಪರಿಹಾರಗಳಾಗಿವೆ. ಜಾತಕದಲ್ಲಿ ಬುಧದ ಕಳಪೆ ಸ್ಥಾನದಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು, ಶಿಕ್ಷಣದಲ್ಲಿ ಏಕಾಗ್ರತೆಯ ಕೊರತೆ, ಗಣಿತ ವಿಷಯದಲ್ಲಿ ದುರ್ಬಲತೆ ಮತ್ತು ಲೇಖನದ ಕಾರ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಮತ್ತೊಂದೆಡೆ, ಬುಧದ ಶುಭ ಪರಿಣಾಮದಿಂದಾಗಿ ಬುದ್ಧಿವಂತಿಕೆ, ಸಂವಹನ ಮತ್ತು ಶಿಕ್ಷಣದಲ್ಲಿ ಪ್ರಗತಿಯನ್ನು ಪಡೆಯಲಾಗುತ್ತದೆ. ನೀವು ಬುಧದ ದುಷ್ಪರಿಣಾಮಗಳಿಂದ ಬಳಲುತ್ತಿದ್ದರೆ, ಬುಧ ಗ್ರಹದ ಶಾಂತಿಗಾಗಿ ಈ ಪರಿಹಾರಗಳನ್ನು ತಕ್ಷಣ ಮಾಡಿ.ಈ ಕ್ರಿಯೆಗಳನ್ನು ಮಾಡುವುದರಿಂದ ಬುಧ ಗ್ರಹದಿಂದ ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ ಮತ್ತು ಅಶುಭ ಪರಿಣಾಮಗಳು ದೂರವಾಗುತ್ತವೆ

ವೇಷಭೂಷಣಗಳು ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಬುಧ ಗ್ರಹ ಶಾಂತಿ ಪರಿಹಾರ

ಹಸಿರು ಬಣ್ಣ ಅಥವಾ ಹಸಿರು ಬಣ್ಣದ ಎಲ್ಲಾ ಶೇಡ್ಸ್ಗಳ ಬಟ್ಟೆಗಳನ್ನು ಧರಿಸಬಹುದು.

ಸಹೋದರಿ, ಮಗಳು ಅಥವಾ ಚಿಕ್ಕ ಹುಡುಗಿಯರನ್ನು ಗೌರವಿಸಿ.

ಸಹೋದರಿಗೆ ಉಡುಗೊರೆ ನೀಡಿ.

ವ್ಯಾಪಾರದಲ್ಲಿ ಪ್ರಾಮಾಣಿಕರಾಗಿರಿ.

ವಿಶೇಷವಾಗಿ ಬೆಳಿಗ್ಗೆ ಮಾಡಲಾಗುವ ಬುಧ ಗ್ರಹದ ಪರಿಹಾರಗಳು

ವುಷ್ಣು ದೇವರನ್ನು ಆರಾಧಿಸಿ.

ಬುಧ ದೇವರನ್ನು ಆರಾಧಿಸಿ.

ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಜಪಿಸಿ.

ಬುಧನಿಗೆ ಉಪವಾಸ

ವ್ಯಾಪಾರದಲ್ಲಿ ಲಾಭ ಅಥವಾ ಮನೆ ಕ್ಲೇಶ ನಿವಾರಣೆಗಾಗಿ ಬುಧವಾರ ಉಪವಾಸವನ್ನು ಅನುಸರಿಸಬೇಕು.

ಬುಧ ಗ್ರಹದ ಶಾಂತಿಗಾಗಿ ದಾನ ಮಾಡಿ.

ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಬುಧವಾರ ಬೆಳಿಗ್ಗೆ ಬುಧ ಹೋರಾ ಮತ್ತು ಇದರ ನಕ್ಷತ್ರ ( ಅಶ್ವಿನಿ, ಜ್ಯೇಷ್ಠ, ರೇವತಿ) ದಲ್ಲಿ ಅಥವಾ ಸಂಜೆ ದಾನ ಮಾಡಬೇಕು

ದಾನ ಮಾಡಲಾಗುವ ವಸ್ತುಗಳು - ಹಸಿರು ಹುಲ್ಲು, ಸಂಪೂರ್ಣ ಹೆಸರು ಬೇಳೆ, ಪಾಲಕ, ಕಂಚಿನ ಪಾತ್ರೆಗಳು, ನೀಲಿ ಬಣ್ಣದ ಹೂವು, ಹಸಿರು ಅಥವಾ ನೀಲಿ ಬಣ್ಣದ ಬಟ್ಟೆಗಳು, ದಂತ ವಸ್ತುಗಳು ಇತ್ಯಾದಿ.

ಬುಧದ ರತ್ನ

ಜ್ಯೋತಿಷ್ಯದಲ್ಲಿ ಬುಧ ಗ್ರಹದ ಶಾಂತಿಗಾಗಿ ಪಚ್ಛೆ ರತ್ನವನ್ನು ಧರಿಸಲಾಗುತ್ತದೆ. ಪಚ್ಚೆಯನ್ನು ಧರಿಸುವುದರಿಂದ ವ್ಯಕ್ತಿಯು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾನೆ. ಬುಧ ಪ್ರಧಾನ ರಾಶಿಯಾದ ಮಿಥುನ ಮತ್ತು ಕನ್ಯಾ ರಾಶಿಯ ಸ್ಥಳೀಯರಿಗೆ ಪಚ್ಚೆ ರತ್ನವು ಶುಭವಾಗಿದೆ.

ಶ್ರೀ ಬುಧ ಯಂತ್ರ

ಬುಧದ ಮಹಾದಶೆ ನಡೆಯುತ್ತಿರುವವರು ಬುಧದ ಹೋರಾ ಮತ್ತು ಬುಧ ನಕ್ಷತ್ರದ ಸಮಯದಲ್ಲಿ ಬುಧ ಯಂತ್ರವನ್ನು ಧರಿಸಬೇಕು.

ಬುಧನಿಗಾಗಿ ಗಿಡಮೂಲಿಕೆ

ಬುಧ ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಸಮುದ್ರಪಾಲ ಗಿಡಮೂಲಿಕೆಯನ್ನು ಧರಿಸಿ. ಈ ಮೂಲವನ್ನು ಬುಧವಾರ ಬುಧ ಹೋರಾ ಅಥವಾ ಬುಧ ನಕ್ಷತ್ರದಲ್ಲಿ ಧರಿಸಿ.

ಬುಧ ಗ್ರಹಕ್ಕಾಗಿ ರುದ್ರಾಕ್ಷ

ಬುಧ ಗ್ರಹದ ಶುಭತೆಗಾಗಿ 4 ಮುಖಿ ರುದ್ರಾಕ್ಷ / 10 ಮುಖಿ ರುದ್ರಾಕ್ಷ ವನ್ನು ಧರಿಸುವುದು ಪ್ರಯೋಜನಕಾರಿ.

ಹತ್ತು ಮುಖಿ ರುದ್ರಾಕ್ಷವನ್ನು ಧರಿಸಲು ಮಂತ್ರ

ಓಂ ಹ್ರೀಂ ನಮಃ।

ಓಂ ಶ್ರೀಂ ಹ್ರೀಂ ಕ್ಲೀಂ ಗ್ರೀಂ।।

ಬುಧ ಮಂತ್ರ

ಬುಧ ಗ್ರಹದಿಂದ ಶುಭ ಫಲಿತಾಂಶಗಳನ್ನು ಪಡೆಯಲು ಬುಧ ಬೀಜ ಮಂತ್ರವನ್ನು ಜಪಿಸಿ. - ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ!

ಸಾಮಾನ್ಯವಾಗಿ ಬುಧ ಮಂತ್ರವನ್ನು 9000 ಬಾರಿ ಜಪಿಸಬೇಕು. ಆದಾಗ್ಯೂ ದೇಶ-ಕಾಲ-ಪಾತ್ರ ಸಿದ್ಧಾಂತದ ಪ್ರಕಾರ ಕಲಿಯುಗದಲ್ಲಿ ಈ ಯಂತ್ರವನ್ನು 36000 ಬಾರಿ ಜಪಿಸಲು ಹೇಳಲಾಗಿದೆ.

ಬುಧ ಗ್ರಹವನ್ನು ಮೆಚ್ಚಿಸಲು ನೀವು ಈ ಮಂತ್ರವನ್ನು ಸಹ ಜಪಿಸಬಹುದು. - ಓಂ ಬುಂ ಬುಧಾಯ ನಮಃ ಅಥವಾ ಓಂ ಐಂ ಶ್ರೀಂ ಶ್ರೀಂ ಬುಧಾಯ ನಮಃ!

ಬುಧ ಗ್ರಹ ಶಾಂತಿಯ ಪರಿಹಾರಗಳನ್ನು ಮಾಡುವುದರಿಂದ ಖಂಡಿತವಾಗಿಯೂ ನೀವು ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಬುದ್ಧಿವಂತಿಕೆ, ತಾರ್ಕಿಕ ಮತ್ತು ಲೆಕ್ಕಾಚಾರದ ಶಕ್ತಿ ಹೆಚ್ಚಾಗುತ್ತದೆ. ಇದರೊಂದಿಗೆ ನಿಮ್ಮ ಸಂವಹನ ಶೈಲಿ ಸುಧಾರಿಸತ್ತದೆ. ಈ ಲೇಖನದಲ್ಲಿ ನೀಡಲಾಗಿರುವ ಬಲವಾದ ಬುಧ ತಂತ್ರಗಳು ಸಂಪೂರ್ಣವಾಗಿ ವೈದಿಕ ಜ್ಯೋತಿಷ್ಯವನ್ನು ಆಧರಿಸಿವೆ. ನೀವು ನೋಡಿದಂತೆ, ಈ ಲೇಖನದಲ್ಲಿ ಬುಧ ದೋಷದ ಪರಿಹಾರಗಳೊಂದಿಗೆ ಅವುಗಳನ್ನು ಮಾಡಲಾಗುವ ವಿಧಾನವನ್ನು ಸಹ ತಿಳಿಸಲಾಗಿದೆ.ಈ ವಿಧಾನ ಮತ್ತು ನಿಯಮಗಳೊಂದಿಗೆ ನೀವು ಬುಧ ಗ್ರಹ ಶಾಂತಿ ಮಂತ್ರವನ್ನು ಜಪಿಸುವುದು, ರುದ್ರಾಕ್ಷ, ರತ್ನ ಮತ್ತು ಗಿಡಮೂಲಿಕೆಯನ್ನು ಧರಿಸಬೇಕು.

ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ತಟಸ್ಥ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ಇತರ ಗ್ರಹಗಳ ಹೊಂದಿನಿಕೆಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ. ವೈದಿಕ ಶಾಸ್ತ್ರದಲ್ಲಿ ಬುಧ ವಿಷ್ಣು ದೇವರೊಂದಿಗೆ ಸಂಬಂಧವನ್ನು ಹೊಂದಿದೆ. ಆದ್ದರಿಂದ ಬುಧ ಶಾಂತಿಯ ಪರಿಹಾರಗಳ ಮೂಲಕ ಭಗವಂತ ವಿಷ್ಣುವಿನ ಆಶೀರ್ವಾದವನ್ನು ಪಡೆಯಲಾಗುತ್ತದೆ. ಬುಧ ಗ್ರಹದ ಬಣ್ಣ ಹಸಿರು. ಆದ್ದರಿಂದ ಬುಧ ಗ್ರಹದ ಶಾಂತಿಗಾಗಿ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ದಾನ ಮಾಡಲಾಗುತ್ತದೆ. ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಆದ್ದರಿಂದ ಈ ರಾಶಿಚಕ್ರದ ಸ್ಥಳೀಯರು ಬುಧ ಗ್ರಹ ಶಾಂತಿಯ ಪರಿಹಾರಗಳನ್ನು ಖಂಡಿತವಾಗಿಯೂ ಮಾಡಬೇಕು.

ಬುಧ ಗ್ರಹ ಶಾಂತಿಗೆ ಸಂಬಂಧಿಸಿದ ಈ ಲೇಖನವು ನಿಮಗೆ ಪ್ರಯೋಜನಕಾರಿ ಮತ್ತು ಪ್ರಬುದ್ಧತೆಯನ್ನು ಸಾಬೀತುಪಡಿಸುತ್ತದೆ ಎಂದು ಭಾವಿಸುತ್ತೇವೆ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports

Live Astrologers