Personalized
Horoscope
  • Talk To Astrologers
  • Talk To Astrologers

ವಿಶೇಷ ಜ್ಯೋತಿಷ ಪರಿಹಾರ ಕ್ರಮ

ವಿಶೇಷ ಜ್ಯೋತಿಷ ಪರಿಹಾರ ಕ್ರಮ ವೈದಿಕ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿವಿಧ ಪರಿಹಾರಗಳು ಮತ್ತು ಪರಿಣಾಮಕಾರಿ ತಂತ್ರಗಳನ್ನು ಓದಿ. ಇದರೊಂದಿಗೆ ನವಗ್ರಹ ಶಾಂತಿ ಕರ್ಮಾಗಳು, ಸರ್ಕಾರಿ ಉದ್ಯೋಗ, ಬಡ್ತಿ, ಹೆರಿಗೆ ಮತ್ತು ವಿವಾಹ ಸೇರಿದಂತೆ ಅನೇಕ ಕಾರ್ಯಗಳಿಗಾಗಿ ಅದ್ಭುತವಾದ ತಂತ್ರಗಳನ್ನು ತಿಳಿಯಿರಿ!

ಮಾನವ ಜೀವನ ಮತ್ತು ಜ್ಯೋತಿಷ್ಯ ಪರಿಹಾರ

ಮಾನವ ಜೀವನದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಪರಿಣಾಮದಿಂದ ಸಂತೋಷ ಮತ್ತು ದುಃಖದ ಚಕ್ರವು ಯಾವಾಗಲೂ ನಡೆಯುತ್ತಿರುತ್ತದೆ. ಸಂತೋಷದಲ್ಲಿ ನಮಗೆ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ದುಃಖವು ಮನುಷ್ಯನನ್ನು ಒಡೆಯುತ್ತದೆ. ನಮ್ಮೆಲ್ಲರ ಜೀವನದಲ್ಲಿ ನಾವು ನಿರಂತರವಾಗಿ ಹೋರಾಡಬೇಕಾಗುವಂತಹ ಅನೇಕ ಅವಕಾಶಗಳು ಬರುತ್ತವೆ. ಆದರೆ ಯಶಸ್ಸು ಮತ್ತು ಸಂತೋಷವು ಇನ್ನೂ ನಮ್ಮ ವ್ಯಾಪ್ತಿಯಿಂದ ದೂರವಾಗಿವೆ. ದುಃಖವನ್ನು ಕೊನೆಗೊಳಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡುತ್ತೇವೆ. ಈ ಪ್ರಯತ್ನಗಳಲ್ಲಿ ಜ್ಯೋತಿಷ್ಯ ಪರಿಹಾರ, ತಂತ್ರ- ಮಂತ್ರ, ಜಪ, ಯಜ್ಞ ಮತ್ತು ಸಾಧನಾ ಇತ್ಯಾದಿಗಳು ಪ್ರಮುಖವಾಗಿವೆ. ವಾಸ್ತವವಾಗಿ, ವೈದಿಕ ಜ್ಯೋತಿಷ್ಯದಲ್ಲಿ, ಒಬ್ಬ ಮನುಷ್ಯ ತಮ್ಮ ದುಃಖಗಳನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸುವಂತಹ ಅನೇಕ ಪರಿಹಾರ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಗ್ರಹಗಳ ಶಾಂತಿ ಪರಿಹಾರ ಕ್ರಮಗಳು, ಉದ್ಯೋಗ, ವ್ಯಾಪಾರ, ಮಕ್ಕಳ ಸಾಧನೆ, ಯಶಸ್ಸು, ಪಿತೃದೋಷ, ಬೇಗನೆ ಮದುವೆಯನ್ನು ಸರಿಸಿ ಅನೇಕ ಸಮಸ್ಯೆಗಳ ಪರಿಹಾರ ಮತ್ತು ತಂತ್ರಗಳು ಪ್ರಮುಖವಾಗಿವೆ.

ವೈದಿಕ ಜ್ಯೋತಿಷ್ಯದಲ್ಲಿ ಪರಿಹಾರ

ಹಿಂದೂ ವೈದಿಕ ಜ್ಯೋತಿಷ್ಯದಲ್ಲಿ ಜನರಿಗೆ ಆಳವಾದ ಭಕ್ತಿ ಮತ್ತು ನಂಬಿಕೆಯಿದೆ. ಹಿಂದೂ ಕುಟುಂಬಗಳಲ್ಲಿ ಮಗುವಿನ ಜನನದ ತಕ್ಷಣವೇ ಅವರ ಜನ್ಮ ಜಾತಕವನ್ನು ತಯಾರಿಸಲು ಇದು ಕಾರಣವಾಗಿದೆ. ಅವನು ತನ್ನ ಜೀವಿತಾವಧಿಯಲ್ಲಿ ಹೇಗೆ ಪ್ರಗತಿ ಹೊಂದುತ್ತಾನೆ, ಅವನ ಹಾದಿಯಲ್ಲಿ ಯಾವ ಅಡೆತಡೆಗಳು ಬರುತ್ತವೆ ಮತ್ತು ಹೇಗೆ ಆ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂಬುದನ್ನು ಇದರ ಮೂಲಕ ಕಂಡುಹಿಡಿಯಬಹುದು. ಜೀವನದ ಪ್ರತಿಯೊಂದು ತಿರುವಿನಲ್ಲಿ, ಸಮಸ್ಯೆಗಳು ನಮ್ಮನ್ನು ಸುತ್ತುವರಿದಾಗ, ವೈದಿಕ ಜ್ಯೋತಿಷ್ಯದ ವಿವಿಧ ಪರಿಹಾರಗಳ ಮೂಲಕ ಅವುಗಳ ನಿವಾರಣೆಯನ್ನು ಪಡೆಯಬಹುದು.

ರತ್ನಕ್ಕೆ ಸಂಬಂಧಿಸಿದ ಪರಿಹಾರ

ವೈದಿಕ ಜ್ಯೋತಿಷ್ಯ ಮತ್ತು ಮಾನವ ಜೀವನದಲ್ಲಿ ರತ್ನ ಕಲ್ಲುಗಳು ಯಾವಾಗಲೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ರತ್ನಗಳು ಯಾವಾಗಲೂ ಆಭರಣದ ರೂಪದಲ್ಲಿ ನಮ್ಮನ್ನು ಆಕರ್ಷಿಸುತ್ತವೆ. ಜ್ಯೋತಿಷ್ಯ ಜಗತ್ತಿನಲ್ಲಿ ರತ್ನದ ಕಲ್ಲುಗಳನ್ನು ಸಕಾರಾತ್ಮಕ ಶಕ್ತಿಯ ಕೇಂದ್ರಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಪ್ರತಿಯೊಂದು ರತ್ನವು ಒಂದು ಸ್ವಾಮಿ ಗ್ರಹವನ್ನು ಹೊಂದಿದ್ದು, ಆ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇವುಗಳಲ್ಲಿ ನೀಲಮಣಿ, ನೀಲಂ, ಮುತ್ತು, ಮಾಣಿಕ್ಯ, ಪಚ್ಚೆ ಇತ್ಯಾದಿ ರತ್ನಗಳು ಮತ್ತು ಉಪರತ್ನಗಳಿವೆ. ಇವುಗಳನ್ನು ನಿಮ್ಮ ರಾಶಿಗೆ ಅನುಗುಣವಾಗಿ ಧರಿಸುವುದರಿಂದ ಜೀವನದಲ್ಲಿ ಬರುತ್ತಿದ್ದ ಎಲ್ಲಾ ಕಷ್ಟಗಳ ಅಂತ್ಯವಾಗುತ್ತದೆ ಮತ್ತು ಸಂತೋಷವನ್ನು ಪಡೆಯಲಾಗುತ್ತದೆ.

ಯಂತ್ರಕ್ಕೆ ಸಂಬಂಧಿಸಿದ ಪರಿಹಾರ

ಯಂತ್ರಗಳಿಗೆ ಅಪಾರ ಶಕ್ತಿ ಇದೆ ಎಂದು ನಂಬಲಾಗಿದೆ ಮತ್ತು ಇದರ ಪರಿಣಾಮದಿಂದಾಗಿ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ತೊಡೆದುಹಾಕಲಾಗುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಯಂತ್ರವನ್ನು ಸ್ಥಾಪಿಸುವುದರ ಬಗ್ಗೆ ಹೆಚ್ಚು ಒತ್ತಾಯಿಸಲಾಗುತ್ತದೆ. ಮನೆ, ಕಚೇರಿ ಮತ್ತು ಕಾರ್ಖಾನೆಯಲ್ಲಿ ಸಂತೋಷ ಸಮೃದ್ಧಿ ಉಳಿದಿರುತ್ತದೆ.ಇದಕ್ಕಾಗಿ ಯಂತ್ರವನ್ನು ಸ್ಥಾಪಿಸಲಾಗುವೆ. ಇವುಗಳಲ್ಲಿ ವ್ಯಾಪರ ಬೆಳವಣಿಗೆ ಯಂತ್ರ, ಕುಬೇರ ಯಂತ್ರ, ವಾಸ್ತು ಯಂತ್ರ, ಹಣಕಾಸಿನ ಯಂತ್ರ ಮತ್ತು ಕಾಳಸರ್ಪ ದೋಷ ನಿವಾರಣೆ ಯಂತ್ರ ವನ್ನು ಸೇರಿಸಿ ಅನೇಕ ಯಂತ್ರಗಳಿವೆ.

ಪರಿಣಾಮಕಾರಿ ತಂತ್ರಗಳು

ತಂತ್ರಗಳು ಅಲ್ಪಾವಧಿಯಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಲಾಲ್ ಕಿತಾಬ್ ನಲ್ಲಿ ಇಂತಹ ಅನೇಕ ತಂತ್ರಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಮೂಲಕ ಮನುಷ್ಯರ ಕಷ್ಟಗಳನ್ನು ಒಂದು ಕ್ಷಣದಲ್ಲಿ ನಿವಾರಿಸಲಾಗುತ್ತದೆ. ಋಷಿ - ಮುನಿಗಳು ಮಾನವ ಕಲ್ಯಾಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಸರಳ, ಸುಲಭ ಮತ್ತು ಪರಿಣಾಮಕಾರಿ ತಂತ್ರಗಳನ್ನು ನೀಡಿದ್ದಾರೆ. ಅವುಗಳನ್ನು ಬಳಸುವುದರಿಂದ ನಾವು ನಮ್ಮ ಸಮಸ್ಯೆಗಳನ್ನು ನಾಶಪಡಿಸಬಹುದು. ವೈದಿಕ ಜ್ಯೋತಿಷ್ಯದಲ್ಲಿ ನೀಡಲಾಗಿರುವ ತಂತ್ರಗಳನ್ನು ಮೂಢನಂಬಿಕೆ ಎಂದು ಹೇಳಲಾಗುವುದಿಲ್ಲ. ಆದಾಗ್ಯೂ, ಯಾವುದೇ ತಂತ್ರವನ್ನು ಪರಿಣಿತ ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ ಮಾತ್ರ ಮಾಡಬೇಕು.

ತಂತ್ರ-ಮಂತ್ರದ ಧ್ಯಾನ

ತಂತ್ರ-ಮಂತ್ರದ ಅಭ್ಯಾಸವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಕಠಿಣ ಆದರೆ ಪರಿಣಾಮಕಾರಿ ಎಂದು ವಿವರಿಸಲಾಗಿದೆ. ಜಪ - ತಪಸ್ಸು ಮತ್ತು ಮಂತ್ರದ ಬಲದ ಮೇಲೆ ಅನೇಕ ಮಾನವರು ಅಸಾಧ್ಯವಾದ ಕಾರ್ಯಗಳನ್ನು ಸಾಧ್ಯವಾಗಿಸಿದ್ದಾರೆ. ಆದಾಗ್ಯೂ, ಇಂದಿನ ಆಧುನಿಕ ಯುಗದಲ್ಲಿ ತಂತ್ರ - ಮಂತ್ರವನ್ನು ಅಭ್ಯಾಸ ಮಾಡುವುದು ಅಷ್ಟು ಸುಲಭವಲ್ಲ. ವ್ಯಕ್ತಿಯು ತನ್ನ ಬೆಸ ಸಂದರ್ಭದಲ್ಲಿ ಈ ಮಂತ್ರಗಳನ್ನು ಆಶ್ರಯಿಸಿದರೆ, ಅವನ ಪ್ರತಿಯೊಂದು ಮಾರ್ಗವು ಸುಲಭವಾಗುತ್ತದೆ.

ಅವಶ್ಯಕವಾಗಿ ಓದಿ: ಲಾಲ್ ಕಿತಾಬ್ ನ ಪರಿಣಾಮಕಾರಿ ಮತ್ತು ಖಚಿತವಾದ ಪರಿಹಾರ

ಕ್ರಮಗಳನ್ನು ಮಾಡುವಾಗ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

  • ಯಾವುದೇ ಪರಿಹಾರ ಮತ್ತು ತಂತ್ರಗಳನ್ನು ಮಾಡುವಾಗ, , ನಾನು ಮಾಡುತ್ತಿರುವ ಈ ಕಾರ್ಯ ದೇವರ ಅನುಗ್ರಹದಿಂದ ನನಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂಬುವ ನಂಬಿಕೆಯನ್ನು ಮನಸ್ಸಿನಲ್ಲಿರಿಸಿ.
  • ಪರಿಹಾರ ಮತ್ತು ತಂತ್ರಗಳ ಗೌಪತ್ಯೆಯನ್ನು ಕಾಪಾಡಿಕೊಳ್ಳಿ. ಅಂದರೆ ಇದರ ಬಗ್ಗೆ ಯಾರಿಗೂ ಹೇಳಬೇಡಿ ಎಂದರ್ಥ
  • ಎಲ್ಲಾ ಕ್ರಮಗಳನ್ನು ನೀತಿಯೊಂದಿಗೆ ಸಂಪೂರ್ಣವಾಗಿ ಮಾಡಬೇಕು.
  • ಭಕ್ತಿ ಮತ್ತು ನಂಬಿಕೆಯಿಂದ ಮಾಡಲಾಗುವ ಈ ಕಾರ್ಯ ಯಶಸ್ವಿಯಾಗುತ್ತದೆ ಎಂಬುವ ಆಲೋಚನೆಯನ್ನು ಮನಸ್ಸಿನಲ್ಲಿ ಯೋಚಿಸಿ.
  • ಹಣಕಾಸಿಗೆ ಸಂಬಂಧಿಸಿದ ಪರಿಹಾರವನ್ನು ಶುಕ್ಲ ಪಕ್ಷದಲ್ಲಿ ಮಾಡುವುದು ಹೆಚ್ಚು ಪ್ರಯೋಜನಕಾರಿ.
  • ಧರ್ಮಾಗ್ರಂಥಗಳಲ್ಲಿ ಚತುರ್ಥಿ, ನವಮಿ ಮತ್ತು ಚತುರ್ದಶಿಯನ್ನು ರಿಕ್ತ ಮತ್ತು ಖಾಲಿ ತಿಥಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ದಿನದಂದು ವಿದ್ವಾಂಸ ಜ್ಯೋತಿಷಿ ಮತ್ತು ಪುರೋಹಿತರನ್ನು ಸಮಾಲೋಚಿಸಿದ ನಂತರವೇ ಯಾವುದೇ ಪರಿಹಾರ ಅಥವಾ ತಂತ್ರವನ್ನು ಮಾಡಲು ಪ್ರಯತ್ನಿಸಬೇಕು.

ಜ್ಯೋತಿಷ್ಯ ಕ್ರಮಗಳ ಮಹತ್ವ

ಜ್ಯೋತಿಷ್ಯ ಶಾಸ್ತ್ರದಲ್ಲಿ ಜನರು ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಜ್ಯೋತಿಷ್ಯ ಪರಿಹಾರ ಕ್ರಮ ಮತ್ತು ತಂತ್ರಗಳನ್ನು ತುಂಬಾ ಪರಿಗಣಿಸಲಾಗಿದೆ. ಈ ಪರಿಹಾರಗಳನ್ನು ಸರಿಯಾದ ರೀತಿಯಲ್ಲಿ ಮತ್ತು ವಿಧಾನದಲ್ಲಿ ಮಾಡುವುದರಿಂದ ಖಂಡಿತವಾಗಿಯೂ ಕಾರ್ಯ ಸಿದ್ಧವಾಗುತ್ತದೆ ಎಂದು ಜನರ ಅನುಭವಗಳಿಂದ ತಿಳಿಯುತ್ತದೆ. ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಎಲ್ಲಾ ಸೌಕರ್ಯಗಳು ಮತ್ತು ಹಣವನ್ನು ಹೊಂದಬೇಕೆಂಬ ಬಯಕೆಯನ್ನು ಹೊಂದಿರುತ್ತಾನೆ, ಆದರೆ ಅದು ಎಲ್ಲರೊಂದಿಗೂ ಸಂಭವಿಸಬೇಕೆಂದು ಅಗತ್ಯವಲ್ಲ. ಒಂದೆಡೆ ಒಬ್ಬ ವ್ಯಕ್ತಿ ಅಪಾರ ವಾದ ಸಂಪತ್ತನ್ನು ಹೊಂದಿದ್ದರೆ, ಮತ್ತೊಂದೆಡೆ ಇನ್ನೊಬ್ಬ ವ್ಯಕ್ತಿ ಅಗತ್ಯ ಸೌಲಭ್ಯಗಳಿಗಾಗಿ ಹಂಬಲಿಸುತ್ತಾರೆ. ಆದ್ದರಿಂದ ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುತ್ತಾರೆ ಮತ್ತು ಈ ಸಮಸ್ಯೆಗಳನ್ನು ನಿವಾರಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರಗಳು, ತಂತ್ರಗಳು ಮತ್ತು ಮಂತ್ರಗಳನ್ನು ತಿಳಿಸಲಾಗಿದೆ. ಇವುಗಳ ಮೂಲಕ ಒಬ್ಬ ವ್ಯಕ್ತಿಯು ತಮ್ಮ ತೊಂದರೆಗಳನ್ನು ಬಹಳ ಮಟ್ಟಿಗೆ ನಿವಾರಿಸಿ ಸಂತೋಷದ ಜೀವನವನ್ನು ಕಳೆಯಬಹುದು.

ಈ ಲೇಖನದಲ್ಲಿ ನಾವು ಹಣಕಾಸಿನ ಸಾಧನೆ, ಮಕ್ಕಳು, ಪುತ್ರ-ಪುತ್ರಿ ಪಡೆಯುವುದು ಮತ್ತು ಬಡ್ತಿ ಸೇರಿದಂತೆ ಅನೇಕ ಇತರ ಪರಿಹಾರ ಕ್ರಮಗಳ ಬಗ್ಗೆ ತಿಳಿಸಲು ಪ್ರಯತ್ನಿಸಲಾಗಿದೆ. ಈ ಜ್ಯೋತಿಷ್ಯ ಪರಿಹಾರ ಕ್ರಮಗಳಿಂದ ದೇವರ ಅನುಗ್ರಹವನ್ನು ಪಡೆಯಲಾಗುತ್ತದೆ ಮತ್ತು ಮನುಷ್ಯನ ಕಾರ್ಯಗಳಲ್ಲಿ ಬರುತ್ತಿರುವ ಅಡೆತಡೆಗಳನ್ನು ತಡೆಯಲಾಗುತ್ತದೆ, ಹಣಕಾಸು ಮತ್ತು ಎಲ್ಲಾ ಲೌಕಿಕ ಸಂತೋಷಗಳನ್ನು ಪಡೆಯಲಾಗುತ್ತದೆ. ಈ ಎಲ್ಲಾ ಜ್ಯೋತಿಷ್ಯ ಪರಿಹಾರಗಳು ಮತ್ತು ತಂತ್ರಗಳ ಮೂಲಕ ವ್ಯಕ್ತಿಯು ತನ್ನ ಜೀವನದಲ್ಲಿ ನಡೆಯುತ್ತಿರುವ ಅಡೆತಡೆಗಳನ್ನು ನಿವಾರಿಸಿ, ಯಶಸ್ಸು ಮತ್ತು ಸಮೃದ್ಧ ಜೀವನವನ್ನು ಬಯಸಬಹುದು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports

Live Astrologers