ಮಂಗಳ ಸಂಚಾರ ಮೀನಾ ರಾಶಿಯಲ್ಲಿ - Retrograde Mars Transit in Pisces in Kannada

ಮಂಗಳ ಗ್ರಹವು 4 ಅಕ್ಟೋಬರ್ 2020 ರಂದು 10:06 ಗಂಟೆಗೆ ವಕ್ರತೆಯೊಂದಿಗೆ ಸ್ವರಾಶಿ ಮೇಷದಿಂದ ಮೀನದಲ್ಲಿ ಪ್ರವೇಶಿಸುತ್ತದೆ ಮತ್ತು ಅದರ ನಂತರ 14 ನವೆಂಬರ್ ಬೆಳಿಗ್ಗೆ 6:06 ಗಂಟೆಗೆ ಮಾರ್ಗಿಯಾಗುತ್ತದೆ. ಇದರ ನಂತರ 24 ಡಿಸೆಂಬರ್ 2020 ರಂದು ಮಂಗಳ ಮತ್ತೊಂದು ಬಾರಿ ಸ್ವರಾಶಿ ಮೇಷದಲ್ಲಿ ಹೋಗುತ್ತದೆ ಅಂದರೆ ಮಂಗಳ ಗ್ರಹವು ಸಂಪೂರ್ಣ 81 ದಿನಗಳ ವರೆಗೆ ಇದೆ ರಾಶಿಯಲ್ಲಿರುತ್ತದೆ ಇದ್ರ ನೇರವಾದ ಪರಿಣಾಮವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಬೀರುತ್ತದೆ. ನಡೆಯಿರಿ ಈಗ ವಕ್ರ ಮಂಗಳನ ಪರಿಣಾಮವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ತನ್ನ ವಕ್ರ ಸ್ಥಿತಿಯಲ್ಲಿ ಮಂಗಳ ಗ್ರಹವು ಮೇಷ ರಾಶಿ ಅಂದರೆ ನಿಮ್ಮ ಲಗ್ನದ ಮನೆಯಿಂದ ಹೊರಬಂದು ನಿಮ್ಮ ಹನ್ನೆರಡನೇ ಮನೆಯಲ್ಲಿ ವಕ್ರವಾಗಿ ಪ್ರವೇಶಿಸುತ್ತದೆ. ಇದನ್ನು ವಿದೇಶ ಪ್ರಯಾಣ ಮತ್ತು ನಷ್ಟದ ಮನೆಯೆಂದು ಸಹ ಕರೆಯಲಾಗುತ್ತದೆ. ಮಂಗಳ ಗ್ರಹ ಸ್ವರಾಶಿ ಮತ್ತು ಈ ಸ್ಥಿತಿಯಲ್ಲಿ ಮಂಗಳವು ಬಲವಾದ ಸ್ಥಿತಿಯಲ್ಲಿತ್ತು.

ಈ ಸಂಚಾರದ ಪರಿಣಾಮದಿಂದಾಗಿ ಮೇಷ ರಾಶಿಚಕ್ರದ ಸ್ಥಳೀಯರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಇದರಿಂದಾಗಿ ನಿಮ್ಮ ಆರ್ಥಿಕ ವೆಚ್ಚಗಳು ಹೆಚ್ಚಾಗಬಹುದು. ಇದು ನಿಮ್ಮ ಒತ್ತಡ ಮತ್ತು ಮಾನಸಿಕ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ.

ಜಾತಕದಲ್ಲಿ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ ಅಸ್ಟ್ರಾಸೆಜ್ ಬೃಹತ್ ಕುಂಡಲಿ

ವ್ಯಾಪಾರದ ಕೆಲವು ಯೋಜನೆಗಳನ್ನು ಮತ್ತು ನೀತಿಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ, ಈ ಕಾರಣದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ನೀವು ಧೈರ್ಯವನ್ನು ಹೊಂದಿರಬೇಕು. ಈ ಸಮಯದಲ್ಲಿ ನೀವು ನಿಮ್ಮ ತಪ್ಪುಗಳಿಂದ ಹೊಸದನ್ನು ಕಲಿಯಲು ಅವಕಾಶವನ್ನು ಪಡೆಯುತ್ತೀರಿ. ಅದರ ಪ್ರಕಾರ ನೀವು ಯೋಜಸಿದರೆ, ಈ ಸಂಚಾರವು ನಿಯಂಗೆ ಅನುಕೂಲಕರವಾಗಬಹುದು.

ಪರಿಹಾರ - ಹನುಮಾನ್ ಚಾಲೀಸವನ್ನು ಪಠಿಸಿ, ಇದು ನಿಮಗೆ ಶುಭವಾಗಿರುತ್ತದೆ.

  1. ವೃಷಭ ರಾಶಿ

ಮಂಗಳ ಸಂಚಾರವು ನಿಮ್ಮ ಹನ್ನೊಂದನೇ ಮನೆಯಲ್ಲಿ ಸಂಭವಿಸಲಿದೆ. ಯಶಸ್ಸು ಮತ್ತು ಲಾಭವನ್ನು ಪಡೆಯುವ ದೃಷ್ಟಿಯಿಂದ ಈ ಸ್ಥಿತಿಯು ನಿಮಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಕ್ರಮೇಣ ಪ್ರಯೋಜನದಲ್ಲಿ ಬದಲುತ್ತವೆ. ಸಂಬಂಧದಲ್ಲಿ ಹೊಸ ಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಜೀವನವು ನಿಧಾನವಾಗಿ ಶಾಂತಿಯತ್ತ ಮುಂದುವರಿಯುತ್ತದೆ. ಸಂಚಾರದ ಈ ಸಮಯದಲ್ಲಿ ನಿಮ್ಮ ವೃತ್ತಿಪರ ಕೆಲಸ ಮತ್ತು ಪ್ರಯತ್ನಗಳಲ್ಲಿ ಸ್ಥಿರತೆ ಬರುತ್ತದೆ. ಈ ಸಮಯದಲ್ಲಿ ನಿಮ್ಮ ಮೂಲಕ ಮಾಡ್ಲಗುವ ಪ್ರಯತ್ನಗಳಿಗೆ ಉತ್ತಮ ಪ್ರಶಂಸೆ ಸಿಗುತ್ತದೆ.

ಆದಾಗ್ಯೂ ಈ ಸಮಯದಲ್ಲಿ ಕೆಲವೊಮ್ಮೆ ನೀವು ನಿಮ್ಮನ್ನು ತುಂಬಾ ಶಕ್ತಿಯುತವಾಗಿ ಅನುಭವಿಸಬಹುದು. ಇದರ ಪರಿಣಾಮದಿಂದಾಗಿ ನೀವು ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಲು ಪ್ರಯತ್ನಿಸುವಿರಿ. ಈ ಕಾರಣದಿಂದ್ಗಿ ನೀವು ಒತ್ತಡದ ಸ್ಥಿತಿಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾತ್ರ ಕೈಗೆ ತೆಗೆದುಕೊಳ್ಳಿ ಮತ್ತು ಅದನ್ನು ಸಂಪೂರ್ಣ ನಿಷ್ಠೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ.

ಶಿಕ್ಷಣ ಮತ್ತು ವೃತ್ತಿ ಕ್ಷೇತ್ರದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ, ಬಳಸಿಕೊಳ್ಳಿ ಕೋಗ್ನಿ ಆಸ್ಟ್ರೋ ರಿಪೋರ್ಟ್

ಈ ಸಂಚಾರದ ಸಮಯದಲ್ಲಿ ನೀವು ಸ್ವಲ್ಪ ಹಠಮಾರಿಯಾಗಬಹುದು. ಈ ಸಮಯದಲ್ಲಿ ನಿಮ್ಮ ವೈಫಲ್ಯದ ಕಾರಣಗಳನ್ನು ನಿಮ್ಮ ಸ್ನೇಹಿತರು ಮತ್ತು ಸಹಪಾಠಿಗಳ ತಲೆಯ ಮೇಲೆ ಹಾಕಲು ಪ್ರಯತ್ನಿಸಬಹುದು. ಆದರೆ ಇಲ್ಲಿ ನೀವು ಯಾವುದೇ ಕೆಲಸವನ್ನು ತಂಡದೊಂದಿಗೆ ಮಾತ್ರ ಪೂರ್ಣಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ನಿಮ್ಮ ತಂಡವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ನೀವು ನಿಮ್ಮ ಉತ್ತಮ ದಕ್ಷತೆ ಮತ್ತು ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು.

ಪರಿಹಾರ - ಮಂಗಳವಾರದಂದು ಕಾರ್ತಿಕೇಯ ದೇವರನ್ನು ಆರಾಧಿಸಿ.

  1. ಮಿಥುನ ರಾಶಿ

ಮಂಗಳನ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ಹತ್ತನೇ ಮನೆಯನ್ನು ವೃತ್ತಿಪರ ಮತ್ತು ಉದ್ಯೋಗದ ಮನೆಯೆಂದು ಪರಿಗಣಿಸಲಗಿದೆ.

ಈ ಸಂಚಾರದ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಸ್ಥಿರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮುಖ್ಯ ಗಮನವು ನಿಮ್ಮ ಆಸೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಪಡೆಯುವ ಬದಲು ಸಾಧ್ಯವಾದಷ್ಟು ಹೆಚ್ಚು ಉತ್ತಮ ರೀತಿಯಿಂದ ಕೆಲಸ ಮಾಡುವುದರ ಮೇಲೆ ಇರುತ್ತದೆ. ಈ ಸಮಯದಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮ್ಮನ್ನು ಕೆಳಗೆ ಇಳಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಇದು ನಿಮ್ಮ ಅಭದ್ರತೆಯ ಭಾವನೆ ಮತ್ತು ಕಳೆದುಕೊಳ್ಳುವ ಭಯವನ್ನು ಹೆಚ್ಚಿಸಬಹುದು.

ಈ ಕಾರಣದಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ನೀವು ಅಕ್ರಮಣಕಾರಿ ವರ್ತನೆಯನ್ನು ಅಳವಡಿಸಿಕೊಳ್ಳಬಹುದು. ಆದಾಗ್ಯೂ ಹಾಗೆ ಮಾಡುವುದು ತಪ್ಪು. ಏಕೆಂದರೆ ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡರಲ್ಲೂ ನಕಾರಾತ್ಮಕ ಫಲಿತಾಂಶಗಳನ್ನು ಹೆಚ್ಚಿಸುತ್ತದೆ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನೀವು ಯಾವುದೇ ವಿವಾದ ಅಥವಾ ಜಗಳದಿಂದ ದೂರವಿರಲು ಪ್ರಯತ್ನಿಸಿ. ಬದಲಾಗಿ ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ನಿಮ್ಮ ಶಕ್ತಿಯನ್ನು ಬಳಸಿ.

ನಿಮ್ಮ ಜಾತಕದಲ್ಲಿ ರಾಜ ಯೋಗವಿದೆಯೇ ? ರಾಜ ಯೋಗ

ಈ ಸಮಯದಲ್ಲಿ ನಿಮ್ಮ ವೃತ್ತಿಪರದ ಮೇಲೆ ನಿಮ್ಮ ಪ್ರಮುಖ ಗಮನವಿರುತ್ತದೆ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳನ್ನು ನೀವು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮ್ಮ ಜೀವನ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತನಾಡಿ. ಎಲ್ಲಾ ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳಿ. ಇದು ಯಾವುದೇ ರೀತಿಯ ತಪ್ಪುಗ್ರಹಿಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಮತ್ತೊಂದೆಡೆ ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ನಿಮ್ಮ ಶಕ್ತಿಗೆ ಸಕಾರಾತ್ಮಕ ದಿಕ್ಕು ಸಿಗುತ್ತದೆ. ಇದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಒತ್ತಡವು ಕಡಿಮೆಯಾಗಬಹುದು.

ಪರಿಹಾರ - ಮಂಗಳವಾರದ ದಿನದಂದು ಉಪವಾಸವನ್ನು ಅನುಸರಿಸಿದರೆ, ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

  1. ಕರ್ಕ ರಾಶಿ

ಮಂಗಳ ತನ್ನ ವಕ್ರ ಸ್ಥಿತಿಯಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಸಾಗುತ್ತದೆ. ಇದು ಉನ್ನತ ಶಿಕ್ಷಣ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ನೀವು ಧೈರ್ಯವನ್ನು ಹೊಂದಿರಬೇಕು. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಈ ಸಮಯವೂ ಉತ್ತಮವಾಗಿರುತ್ತದೆ. ಇದಲ್ಲದೆ ನಿಮ್ಮ ಭವಿಷ್ಯಕ್ಕೆ ಸರಿಯಾದ ಅಡಿಪಾಯ ಹಾಕಲು ಈ ಸಮಯವೂ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.

ಹಿರಿಯ ಅಧಿಕಾರಿಗಳು ಅಥವಾ ನಿಮ್ಮ ಉನ್ನತ ನಿರ್ವಹಣೆಯಿಂದ ಸಲಹೆಯನ್ನು ಪಡೆದುಕೊಳ್ಳುವುದು ಈ ಸಮಯದಲ್ಲಿ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಆದಾಗ್ಯೂ, ಕರ್ಕ ರಾಶಿಚಕ್ರದ ಸ್ಥಳೀಯರಾಗಿರುವ ಕಾರಣದಿಂದಾಗಿ ನಿಮ್ಮನ್ನು ನೀವು ಹೆಮ್ಮೆ ಪಡುವ ಭಾವನೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಅಹಂಕಾರವನ್ನು ತ್ಯಜಿಸಬೇಕು ಮತ್ತು .

ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ಇದು ನಿಮ್ಮ ವೆಚ್ಚಗಳನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಹಾನಿಯಾಗಬಹುದು. ಈ ಸಮಯದಲ್ಲಿ ಸರ್ಕಾರವನ್ನು ಉಲ್ಲಂಘಿಸುವ ಯಾವುದೇ ಕೆಲಸವನ್ನು ನೀವು ಮಾಡಬಾರದು. ವಿಶೇಷವಾಗಿ ನಿಮ್ಮ ತೆರಿಗೆಯನ್ನು ಪ್ರಾಮಾಣಿಕವಾಗಿ ಭರ್ತಿ ಮಾಡಿ. ಇಲ್ಲದಿದ್ದರೆ, ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳು ಉದ್ಭವಿಸಬಹುದು ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಪಾಲುದಾರರೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ವಿಫಲರಾಗುವಿರಿ. ಅಂತಹ ಸಂದರ್ಭದಲ್ಲಿ, ನಿಮ್ಮ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಇದರಿಂದ ನಿಮ್ಮ ಸಂಬಂಧವು ಸುಧಾರಿಸುತ್ತದೆ.

ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಸ್ವಲ್ಪ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಆಗ ಮಾತ್ರ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಯಾವುದೇ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಆದರೆ ನೀವು ರಕ್ತದೊತ್ತಡಕ್ಕೆ ಸಂಬಂಧ್ಸಿದ ಸಮಸ್ಯೆಯನ್ನು ಮೊದಲಿನಿಂದಲೇ ಹೊಂದಿದ್ದರೆ, ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕೆಂದು ಸಲಹೆ ನೀಡಲಾಗಿದೆ.

ಪರಿಹಾರ - ಮಂಗಳವಾರದಂದು ನಿಮ್ಮ ಬಲಗೈಯ ಉಂಗುರದ ಬೆರಳಿನಲ್ಲಿ ಚಿನ್ನದ ಹವಳವನ್ನು ಧರಿಸಿ.

  1. ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ವಕ್ರವಾಗಿ ನಿಮ್ಮ ಅದೃಷ್ಟ ಮನೆಯಿಂದ ಬದಲಾವಣೆ ಮತ್ತು ಅನಿಶ್ಚಿತತೆಯ ಮನೆಗೆ ಪ್ರವೇಶಿಸಲಿದೆ.

ವಾಣಿಜ್ಯಿಕವಾಗಿ ನಿಮ್ಮ ಪ್ರಯತ್ನಗಳು ಈ ಸಮಯದಲ್ಲಿ ಯಾವುದೇ ಮಹತ್ವದ ಫಲಿತಾಂಶಗಳನ್ನು ತೋರಿಸುವುದಿಲ್ಲ. ಇದು ನಿಮ್ಮ ಆತ್ಮ ವಿಶ್ವಾಸವನ್ನು ಸ್ವಲ್ಪ ಮಟ್ಟಿಗೆ ದಿಗ್ಭ್ರಮೆಗೊಳಿಸುತ್ತದೆ. ಜೀವನದಲ್ಲಿ ಕೆಲವೊಮ್ಮೆ ನಿಲ್ಲುವುದು ಮತ್ತು ನಿಮ್ಮ ಪ್ರಯಾಣವನ್ನು ನೀವು ಎಲ್ಲಿಂದ ಆರಂಭಿಸಿದಿರಿ ಮತ್ತು ಈಗ ಎಲ್ಲಿದ್ದೀರಿ ಎಂಬುದನ್ನು ಈ ಸಂಚಾರವು ತಿಳಿಸುತ್ತದೆ. ಆದ್ದರಿಂದ ಈ ಸಮಯವು ನಿಮ್ಮ ಹಳೆಯ ತಪ್ಪುಗಳಿದ್ನ ಪಾಠ ಕಲಿಯುವುದು ಮತ್ತು ನಿಮ್ಮ ಭವಿಷ್ಯದಲ್ಲಿ ಆ ತಪ್ಪುಗಳನ್ನು ಪುನರಾವರ್ತಿ ಸದಿರಲು ಉತ್ತಮವೆಂದು ಸಾಬೀತುಪಡಿಸಬಹುದು.

ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸಾಮರ್ಥ್ಯ ಮತ್ತು ಸಕಾರಾತ್ಮಕ ವರ್ತನೆಯಲ್ಲಿ ನಂಬಿಕೆ ಇಡುವುದು ಅಗತ್ಯವಾಗಿದೆ. ಈ ಸಮಯದಲ್ಲಿ ಸಾಲ ಅಥವಾ ಇತರ ಜನರ ಸಂಪನ್ಮೂಲಗಳನ್ನು ಅವಲಂಬಿಸಬೇಡಿ. ಏಕೆಂದರೆ ಕೊನೆಯಲ್ಲಿ ನೀವು ಹತಾಶರಾಗಿರಬಹುದು. ಬದಲಾಗಿ ನೀವು ನಿಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಬಹುದು ಇದು ನೀವು ಮುಂದುವರಿಯಲು ನಿಮಗೆ ಸಹಾಯ ಮಾಡಬಹುದು.

ಕುಟುಂಬ ದೃಷ್ಟಿಕೋನದಿಂದ, ತಂದೆ ತಾಯಿಯ ಆರೋಗ್ಯವು ನಿಮಗೆ ಕೆಲವು ಸಮಸ್ಯೆಗಳನ್ನು ನೀಡಬಹುದು. ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ, ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಇದು ಉತ್ತಮ ಸಮಯ. ಆದ್ದರಿಂದ ಅವರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ ಮತ್ತು ಅವರಿಗೆ ಇಷ್ಟವಾದ ಸ್ಥಳಗಳಿಗೆ ಅವರೊಂದಿಗೆ ಹೋಗಿ.

ಜೀವನದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಪ್ರಶ್ನೆ ಕೇಳಿ

ಆರೋಗ್ಯದ ದೃಷ್ಟಿಯಿಂದ ಈ ಸಂಚಾರವು ನಿಮಗೆ ಸ್ವಲ್ಪ ಸೂಕ್ಷ್ಮವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನೀವು ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆಯಂತಹ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಆಹಾರದ ಅಭ್ಯಾಸ ಮತ್ತು ದಿನಚರಿಯ ಬಗ್ಗೆ ಗಮನ ಹರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ದಿನಚರಿಯಲ್ಲಿ ಯೋಗ, ಧ್ಯಾನ ಮತ್ತು ಉತ್ತಮ ನಿದ್ರೆಯನ್ನು ಸೇರಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ.

ಪರಿಹಾರ - ಮಂಗಳವಾರದಂದು ಹನುಮಂತ ದೇವರಿಗೆ ಕೇಸರಿ ಕುಂಕುಮವನ್ನು ಅರ್ಪಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ಕನ್ಯಾ ರಾಶಿ

ಮಂಗಳ ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಏಕೆಂದರೆ ಸಂಚಾರದ ಈ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಏಳನೇ ಮನೆಗೆ ಸಾಗಲಿದೆ. ಏಳನೇ ಮನೆಯನ್ನು ವ್ಯಾಪಾರ ಪಾಲುದಾರಿಕೆ ಮತ್ತು ಜೀವನ ಸಂಗಾತಿಯ ಮನೆಯೆಂದು ಪರಿಗಣಿಸಲಾಗಿದೆ.

ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ಸಂಚಾರದ ಸಮಯದಲ್ಲಿ ನೀವುಯಾವುದೇ ನಿರ್ಧಾರವನ್ನು ತುರಾತುರಿಯಲ್ಲಿ ತೆಗೆದುಕೊಳ್ಳಬಹುದು. ಈ ಸಾಗಣೆಯು ನಿಮ್ಮ ವೃತ್ತಿಜೀವನದಲ್ಲಿ ನಿಮ್ಮನ್ನು ಮುನ್ನಡೆಸುವಂತಹ ವಿಷಯಗಳನ್ನು ಬಿಟ್ಟುಕೊಡಲು ನಿಮ್ಮನ್ನು ಒತ್ತಾಯಿಸುತ್ತದೆ. ಆದ್ದರಿಂದ ನೀವು ಧೈರ್ಯದಿಂದಿರಿ ಮತ್ತು ಮುಂದುವರಿಯುವ ಮೊದಲು ಪ್ರತಿಯೊಂದು ಪರಿಸ್ಥಿತಿಯನ್ನು ವಿಶ್ಲೇಷಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ಪಾಲುದಾರರೊಂದಿಗೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ದುರ್ಬಲವಾಗಿರುವ ಸಾಧ್ಯತೆ ಇದೆ ಆದ್ದರಿಂದ ಈ ಸಮಯದಲ್ಲಿ ಹಣ ಮತ್ತು ಸಂಪನ್ಮೂಲಗಳ ಸರಿಯಾದ ನಿರ್ವಹಣೆ ಬಹಳ ಅಗತ್ಯವಾಗಿದೆ.

ವೈಯಕ್ತಿಕವಾಗಿ ನಿಮ್ಮ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡಕ್ಕೊಳಗಾಗಬಹುದು. ಈ ಕಾರಣದಿಂದಾಗಿ ನಿಮ್ಮ ನಿಮ್ಮ ಸಂಗಾತಿಯನ್ನು ನಿಯಂತ್ರಿಸಲು ಮತ್ತು ಅವರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಇದು ನಿಮ್ಮಿಬ್ಬರ ನಡುವಿನ ಪ್ರತ್ಯೇಕತೆಗೆ ಕಾರಣವಾಗಬಹುದು. ಆದ್ದರಿಂದ ಸಂಗಾತಿಗೆ ಸ್ವಾತಂತ್ರ್ಯ ನೀಡಿ.

ಪರಿಹಾರ - ಮಂಗಳವಾರದಂದು ತಾಮ್ರದ ದಾನ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುವಿರಿ.

  1. ತುಲಾ ರಾಶಿ

ಮಂಗಳ ಗ್ರಹವು ತುಲಾ ರಾಶಿಚಕ್ರದ ಸ್ಥಳೀಯರ ಆರನೇ ಮನೆಗೆ ಸಾಗಲಿದೆ. ಇದು ಸ್ಪರ್ಧೆ ಮತ್ತು ಅಡೆತಡೆಗಳ ಮನೆಯಾಗಿದೆ. ಮಂಗಳ ಗ್ರಹದ ಈ ಸಂಚಾರವು ನಿಮಗೆ ಹೆಚ್ಚು ಸ್ಪರ್ಧಾತ್ಮಕ ಶಕ್ತಿಯನ್ನು ಒದಗಿಸುತ್ತದೆ ಎಂದು ಸಾಬೀತುಪಡಿಸುತ್ತದೆ.

ಈ ಶಕ್ತಿಯು ಕೆಲಸದ ಸ್ಥಳದಲ್ಲಿ ಬರುವ ಅಡೆತಡೆಗಳು ಮತ್ತು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಸ್ಪರ್ಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಕೆಲವೊಮ್ಮೆ ನೀವು ವ್ಯಾಪ್ತಿಯಿಂದ ದೂರವಿರುವ ಕೆಲವು ಕೆಲಸಗಳನ್ನು ಮಾಡಲು ಅಥವಾ ಬದಲಾಯಿಸಲು ಪ್ರಯತ್ನಿಸಬಹುದು. ಇದರ ಪರಿಣಾಮವಾಗಿ ನಿಮ್ಮ ಶಕ್ತಿಯು ವ್ಯರ್ಥವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಸಂವೇದನಾಶೀಲರಾಗಿರಲು ಮತ್ತು ನಿಮ್ಮ ಶಕ್ತಿಯನ್ನು ನಿಮ್ಮ ವೃತ್ತಿಪರ ಜೀವನದತ್ತ ಕೊಂಡೊಯ್ಯುವಂತಹ ಕಾರ್ಯಗಳಿಗೆ ಮಾತ್ರ ವಿನಿಯೋಗಿಸಲು ನಿಮಗೆ ಸಲಹೆ ನೀಡಲಾಗಿದೆ.

ಇದಲ್ಲದೆ, ನೀವು ನಿಮ್ಮ ಸಾಲ ಅಥವಾ ಬಾಕಿಯನ್ನು ಪಾವತಿಸಲು ಯೋಜಿಸುತ್ತಿದ್ದರೆ, ಈ ಸಮಯ ಉತ್ತಮವಾಗಿದೆ. ಆದಯೂ ಈ ಸಮಯದಲ್ಲಿ ಹಣವನ್ನು ಸಾಲವಾಗಿ ನೀಡುವುದನ್ನು ತಪ್ಪಿಸಿ. ಏಕೆಂದರೆ ಇದನ್ನು ನೀವು ಮತ್ತೆ ಪಡೆಯುವ ಸಾಧ್ಯತೆ ಇಲ್ಲ.

ವೈಯಕ್ತಿಕವಾಗಿ ಮಂಗಳ ಏಳನೇ ಮನೆಯಿಂದ ಆರನೇ ಮನೆಯಲ್ಲಿ ರೋಗಗಳ ಕಡೆಗೆ ಮುಂದುವರಿಸುತ್ತಿದ್ದಾರೆ. ಇದರಿಂದ ಈ ಸಮಯದಲ್ಲಿ ನಿಮ್ಮ ಸಂಗಾತಿಯ ಆರೋಗ್ಯವು ನಿಮ್ಮನ್ನು ಸ್ವಲ್ಪ ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಪ್ರಯತ್ನಿಸಿ. ಆದರೆ ನೀವು ದೀರ್ಘಕಾಲದಿಂದ ಯಾವುದೇ ರೋಗದಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ಆ ರೋಗದಿಂದ ನೀವು ಮುಕ್ತರಾಗಬಹುದು.

ಪರಿಹಾರ - ಮಂಗಳವಾರದಂದು ನರಸಿಂಹ ದೇವರನ್ನು ಪೂಜಿಸುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ವೃಶ್ಚಿಕ ರಾಶಿ

ಈ ಸಂಚಾರದ ಸಮಯದಲ್ಲಿ ಮಂಗಳ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಐದನೇ ಮನೆಗೆ ಪ್ರವೇಶಿಸುತ್ತದೆ.

ವಾಣಿಜ್ಯಿಕವಾಗಿ, ಮಂಗಳ ಸಂಚಾರದ ಈ ಸಮಯದಲ್ಲಿ ನೀವು ಫಲಿತಾಂಶಗಳನ್ನು ನಿರೀಕ್ಷಿಸದೆ ಪ್ರಯತ್ನಿಸುತ್ತಿರಬೇಕು.

ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಇದು ಯಾವುದೇ ರೀತಿಯ ಹೂಡಿಕೆಗೆ ಸೂಕ್ತವಾದ ಸಮಯವಲ್ಲ. ಅಂತಹ ಸಂದರ್ಭದಲ್ಲಿ, ದೀರ್ಘಾವಧಿಯಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರುವಂತಹ ಸಣ್ಣ ಉದ್ಯಮವನ್ನು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಲು ನಿಮಗೆ ಸೂಚಿಸಲಾಗಿದೆ.

ವೈಯಕ್ತಿಕವಾಗಿ ಈ ಸಮಯದಲ್ಲಿ ನೀವು ಸ್ವಲ್ಪ ತೊಂದರೆ ಮತ್ತು ಕಿರಿಕಿರಿಯ ಸ್ವಭಾವವನ್ನು ಹೊಂದಿರಬಹದು ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಆದ್ದರಿಂದ ನಿಮ್ಮ ಸ್ವಭಾವದ ಬಗ್ಗೆ ಗಮನ ಹರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಮಕ್ಕಳ ನಡವಳಿಕೆ ನಿಮ್ಮ ಸಮಸ್ಯೆಯ ಕಾರಣವಾಗಬಹುದು. ಈ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಮಕ್ಕಳ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದಾಗ್ಯೂ, ಯಾವುದೇ ಕೆಲಸವನ್ನು ಮಾಡಲು ಅವರನ್ನು ಒತ್ತಾಯಿಸುವ ಬದಲು, ವಿಷಯಗಳನ್ನು ಹೇಗೆ ಉತ್ತಮವಾಗಿ ಮಾಡಬಹುದು ಎಂಬುದಕ್ಕೆ ನೀವು ಅವರಿಗೆ ಉದಾಹರಣೆ ನೀಡಬಹುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮೇವು ಅನುಕೂಲಕರವಾಗಿರಲಿದೆ.

ಆರೋಗ್ಯದ ದೃಷ್ಟಿಯಿಂದ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಗಮನ ಹರಿಸಿ ಎಂದು ನಿಮಗೆ ಸೂಚಿಸಲಾಗಿದೆ.

ಪರಿಹಾರ - ನಿಮ್ಮ ಬಲಗೈಯ ಉಂಗುರದ ಬೆರಳಿನಲ್ಲಿ ಕೆಂಪು ಹವಳವನ್ನು ಧರಿಸಿ.

  1. ಧನು ರಾಶಿ

ಸಂಚಾರದ ಈ ಸಮಯದಲ್ಲಿ ಮಂಗಳ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಗೆ ಸಾಗಲಿದೆ. ಈ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಹೊಂದುವಿರಿ. ಈ ಸಮಯದಲ್ಲಿ ನೀವು ಸ್ವಲ್ಪ ಹತಾಶೆಯನ್ನು ಅನುಭವಿಸಬಹುದು ಮತ್ತು ಎಲ್ಲಾ ರೀತಿಯ ಬದ್ಧತೆಗಳಿಂದ ದೂರವಿರಲು ಬಯಸುವಿರಿ. ಈ ಸಮಯದಲ್ಲಿ ನೀವು ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು. ಇದರ ಪರಿಣಾಮದಿಂದಾಗಿ ಭವಿಷ್ಯದಲ್ಲಿ ನೀವು ನಷ್ಟವನ್ನು ಹೊಂದಬಹುದು, ಆದ್ದರಿಂದ ಧೈರ್ಯದಿಂದಿರಿ ಮತ್ತು ಪ್ರತಿ ಸನ್ನಿವೇಶದ ವೃತ್ತಿಪರ ಅಂಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ನಂತರ ಮಾತ್ರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ.

ಆರ್ಥಿಕವಾಗಿ ಈ ಸಮಯದಲ್ಲಿ ನೀವು ನಿಮ್ಮ ಮನೆ ಮತ್ತು ಸಂಪತ್ತನ್ನು ಪುನರ್ನಿರ್ಮಿಸುವ ಬಗ್ಗೆ ನೀವು ಯೋಚಿಸಬಹುದು. ಇದರ ಪರಿಣಾಮವಾಗಿ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣವನ್ನು ಬಳಸಬೇಕಾಗಬಹುದು. ಈ ಕಾರಣದಿಂದಾಗಿ ನೀವು ಅನಗತ್ಯ ಒತ್ತಡ ಮತ್ತು ಚಿಂತೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಹಣವನ್ನು ಸರಿಯಾಗಿ ನಿರ್ವಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಅದೇ ಸಮಯದಲ್ಲಿ ಮತ್ತೊಂದೆಡೆ ಮಂಗಳ ಸಂಚಾರದ ಪರಿಣಾಮವಾಗಿ ನಿಮ್ಮ ಸಂಬಂಧದಲ್ಲಿ ಕೆಲವು ಗೊಂದಲಗಳು ಉಂಟಾಗಬಹುದು. ಆದ್ದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ ಎಂದು ನಿಮಗೆ ಸೂಚಿಸಲಾಗಿದೆ. ಇದು ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ.

ಆರೋಗ್ಯದ ದೃಷ್ಟಿಯಿಂದ, ಈ ಸಮಯದ್ಲಲಿ ರಕ್ತದೊತ್ತಡದ ಸಮಸ್ಯೆ ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯದ ಅಭ್ಯಾಸಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪರಿಹಾರ - ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುವಿರಿ.

  1. ಮಕರ ರಾಶಿ

ವಕ್ರ ಮಂಗಳನ ಸಂಚಾರವು ಮಕರ ರಾಶಿಚಕ್ರದ ಮೂರನೇ ಮನೆಯಲ್ಲಿ ಸಂಭವಿಸಲಿದೆ.

ವಾಣಿಜ್ಯಿಕವಾಗಿ, ಮೊದಲು ಅಸಾಧ್ಯವೆಂದು ಅನಿಸುತ್ತಿದ್ದ ಕೆಲಸಗಳನ್ನು ಮಾಡುವ ಬಗ್ಗೆ ಈ ಸಮಯದಲ್ಲಿ ನೀವು ಯೋಚಿಸಬಹುದು. ಈ ಸಮಯದಲ್ಲಿ ನಿಮ್ಮ ಮನೋಬಲವು ಹೆಚ್ಚಾಗುತ್ತದೆ. ನಿಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುವಿರಿ.

ನೀವು ಕ್ರೀಡೆಯ ಕ್ಷೇತ್ರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನೀವು ನಿಮ್ಮ ಸಾಮರ್ಥ್ಯ ಮತ್ತು ಹೆಚ್ಚಿಸಲು ಅವಕಾಶಗಳನ್ನು ಪಡೆಯುವಿರಿ. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವ ಕ್ಷೀಣಿಸಬಹುದು ಮತ್ತು ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆಯೂ ಇದೆ.

ನೀವು ಮೊದಲಿನಿಂದಲೇ ಪ್ರಯತ್ನಿಸುತ್ತಿದ್ದಂತಹ ಉದ್ಯೋಗವನ್ನು ಪಡೆಯಲು ನೀವು ಅವಕಾಶವನ್ನು ಪಡೆಯಬಹುದು. ವೈಯಕ್ತಿಕ ಸಮಂಧಗಳಿಗಾಗಿ ಮಂಗಳನ ಈ ಸ್ಥಾನವು ನಿಮ್ಮ ಪ್ರಣಯ ಮತ್ತು ಇಂದ್ರಿಯ ರೂಪಗಳಲ್ಲಿ ನಿಮ್ಮನ್ನು ಉತ್ತಮಗೊಳಿಸುತ್ತದೆ ಮತ್ತು ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಗಾಗಿ ಏನನ್ನು ಮಾಡಲು ಸಹ ಸಿದ್ಧರರಾಗಿರುತ್ತೀರಿ.

ಪರಿಹಾರ - ಭಕ್ತಿಯಿಂದ ಅಂಗಾರಕ ಸ್ತ್ರೋತವನ್ನು ಪಠಿಸಿ.

  1. ಕುಂಭ ರಾಶಿ

ಮಂಗಳ ಗ್ರಹವು ಕುಂಭ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಪ್ರವೇಶಿಸುತ್ತದೆ. ಈ ಕಾರಣದಿಂದಾಗಿ, ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರದ ಬಗ್ಗೆ ಉತ್ತಮವಾಗಿ ಪರಿಶೀಲಿಸಿದ ನಂತರ ಮಾತ್ರ ಹೆಜ್ಜೆಯನ್ನು ಹಾಕಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಖರೀದಿಯನ್ನು ನೀವು ತಪ್ಪಿಸಬೇಕು. ಈ ಸಮಯದಲ್ಲಿ ನೀವು ನಿಮ್ಮ ಮತ್ತು ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಚೆನ್ನಾಗಿ ಯೋಚಿಸಿದ ಯೋಜನೆ ಅಥವಾ ಬಜೆಟ್ ಅಗತ್ಯ.

ವೈವೈಕ್ತಿಕ ವಿಷ್ಯದಲ್ಲಿ ಮಂಗಳನ ಈ ಸಂಚಾರವು ನಿಮ್ಮ ಧ್ವನಿಯಲ್ಲಿ ಸ್ವಲ್ಪ ಕಠೋರತೆಯನ್ನು ತರುತ್ತದೆ. ಈ ಕಾರಣದಿಂದಾಗಿ ನಿಮ್ಮ ಆಪ್ತರು ಮತ್ತು ನಿಮ್ಮ ಸಂಬಂಧಿಕರ ನಡುವೆ ಕಹಿ ಉಂಟಾಗಬಹುದು. ಆದ್ದರಿಂದ ಯಾವುದೇ ವಿಷಯವನ್ನು ಹೇಳುವ ಮೊದಲು ಪದಗಳ ಬಗ್ಗೆ ಗಮನ ಹರಿಸಿದ ನಂತರ ಮಾತ್ರ ಮಾತನಾಡಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಆರೋಗ್ಯದ ದೃಷ್ಟಿಯಿಂದ, ಜೀರ್ಣಿಸಿಕೊಳ್ಳಲು ಕಷ್ಟವಾಗುವ ಆಹಾರ ಪದಾರ್ಥಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಹಲ್ಲು ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಕುಂಭ ರಾಶಿಚಕ್ರದ ಸ್ಥಳೀಯರು ಋಣ ಮೋಚಕ ಮಂಗಳ ಸ್ತ್ರೋತವನ್ನು ಪಠಿಸುವುದು ಅನುಕೂಲಕರವಾಗಿರುತ್ತದೆ.

  1. ಮೀನಾ ರಾಶಿ

ನಿಮ್ಮ ವ್ಯಕ್ತಿತ್ವದ ಮೊದಲನೇ ಮನೆಯಲ್ಲಿ ಮಂಗಳನ ಈ ಸಂಚಾರವು, ಮೀನಾ ರಾಶಿಚಕ್ರದ ಸ್ಥಳೀಯರಿಗೆ ಕೆಟ್ಟ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಸಂಪನ್ಮೂಲಗಳು ಮತ್ತು ಸಾಮರ್ಥ್ಯದ ಸಂಪೂರ್ಣ ಬಳಕೆಯ ನಂತರವೂ, ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ನೀವು ಪಡೆಯುವುದಿಲ್ಲ ಎಂದು ಇದು ಸೂಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಕಾರ್ಯಗಳು ಅನಗತ್ಯವಾಗಿ ವಿಳಂಬವಾಗಬಹುದು, ಈ ಸಮಯದಲ್ಲಿ ನಿಮ್ಮ ಎಲ್ಲ ಕೆಲಸಗಳು ಸ್ಥಿರವಾಗುತ್ತವೆ. ಇದರಿಂದ ನೀವು ಯಾವುದೇ ಫಲಿತಾಂಶವನ್ನು ಪಡೆಯುವುದಿಲ್ಲ.

ಕಠಿಣ ಪರಿಶ್ರಮದ ನಂತರವೂ ಉತ್ತಮ ಫಲಿತಾಂಶಗಳನ್ನು ಪಡೆಯದಿರುವ ಕಾರಣದಿಂದಾಗಿ ನೀವು ಸ್ವಲ್ಪ ಅಸಮಾಧಾನಗೊಳ್ಳಬಹುದು. ಇದು ನಿಮ್ಮ ಕೋಪವನ್ನು ಹೆಚ್ಚಿಸುತ್ತದೆ ಮತ್ತು ಈ ಕೋಪವನ್ನು ನೀವು ನಿಮ್ಮ ಮನೆಯ ಸದಸ್ಯರು ಮತ್ತು ಆಪ್ತರ ಮೇಲೆ ತೋರಿಸಬಹುದು. ಇದರಿಂದ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಂಚಾರದ ಸಮಯದಲ್ಲಿ ನೀವು ಶಾಂತವಾಗಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಮತ್ತೊಂದೆಡೆ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಚರ್ಮಕ್ಕೆ ಸಮಸ್ಯೆಯನ್ನು ಹೊಂದಬಹುದು. ಆದ್ದರಿಂದ ಸಾಧ್ಯವಾದಷ್ಟು ನೀರು ಕುಡಿಯಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನೀವು ಯೋಗ ಧ್ಯಾನ ಮತ್ತು ದೈಹಿಕ ವ್ಯಾಯಾಮವನ್ನು ಆಶ್ರಯಿಸಬೇಕು. ಇದರಿಂದ ನಿಮಗೆ ಶಕ್ತಿ ಸಿರುತ್ತದೆ ಮತ್ತು ಜೀವನಕ್ಕೆ ಸಕಾರಾತ್ಮಕ ದಿಕ್ಕು ಸಿಗಲು ಸಹಾಯವನ್ನು ಪಡೆಯುವಿರಿ. ಈ ಸಮಯದಲ್ಲಿ ಯಾವುದೇ ರೀತಿಯ ವಿವಾದವನ್ನು ತಪ್ಪಿಸಿ, ಏಕೆಂದರೆ ಇದರಿಂದ ನೀವು ದುಃಖವನ್ನು ಅನುಭವಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಾಹನವನ್ನು ಬಹಳ ಎಚ್ಚರದಿಂದ ಚಲಾಯಿಸಿ.

ಪರಿಹಾರ - ಪ್ರತಿದಿನ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಹಚ್ಚಿಸಿ.


ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer