ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರ (15th June 2021 )

ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರವು ಹೊಸ ಜನರನ್ನು ಭೇಟಿ ಮಾಡಲು, ಹೊಸ ಆಲೋಚನೆಗಳನ್ನು ಕಲಿಯಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಇದು ಒಂದು ಮೋಜಿನ ಸಾಮ್ಯವಾಗಿರುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮದ ಗ್ರಹವೆಂದು ಪರಿಗಣಿಸಲಾಗಿದೆ. ಇದು ಹೆಸರು ಮತ್ತು ಖ್ಯಾತಿಯ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಗಾಳಿಯ ಅಂಶ ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರವು ಅನೇಕ ಬದಲಾವಣೆಗಳನ್ನು ತರುತ್ತದೆ. ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರದ ಸಮಯದಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ವೈರಲ್ ಸೋಂಕು ವೇಗವಾಗಿ ಹರಡುತ್ತದೆ. ವಿಶ್ವ ಆರ್ಥಿಕತೆಯೂ ಏರಿಳಿತಗೊಳ್ಳುತ್ತದೆ.

ಆಸ್ಟ್ರೋಸೇಜ್ ವಾರ್ತಾ ಮೂಲಕ ವಿಶ್ವದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಕೆಲವು ಸಂದರ್ಭಗಳಲ್ಲಿ ಈ ಸಂಚಾರವು ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರವು ನೆಟ್ವರ್ಕ್ ಹೆಚ್ಚಿಸಲು, ಬರವಣಿಗೆಯನ್ನು ಉತ್ತಮಗೊಳಿಸಲು, ಅಲ್ಪ ದೂರದ ಪ್ರಯಾಣಗಳಿಗೆ ಹೋಗುವುದು, ಮಾಧ್ಯಮ ಮತ್ತು ಸಂವಹನಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರವು 15 ಜೂನ್ 2021 ರಂದು, ಬೆಳಿಗ್ಗೆ 5:49 ಗಂಟೆಗೆ ಮಿಥುನ ರಾಶಿಯಲ್ಲಿರುತ್ತದೆ. ಇದು 16 ಜೂಲೈ 2021 ರಂದು, ಸಂಜೆ 4:41 ಗಂಟೆಯ ವರೆಗೆ ಅದೇ ಸ್ಥಿತಿಯಲ್ಲೇ ಉಳಿದಿರುತ್ತದೆ. ಇದರ ನಂತರ ಇದು ಕರ್ಕ ರಾಶಿಗೆ ಪ್ರವೇಶಿಸುತ್ತದೆ.

ನಡೆಯಿರಿ ಎಲ್ಲಾ 12 ರಾಶಿಗಳ ಮೇಲೆ ಈ ಸಂಚಾರವು ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಮೇಷ ರಾಶಿ

ನಿಮ್ಮ ಐದನೇ ಮನೆಯ ಅಧಿಪತಿ ಸೂರ್ಯನ ಸಂಚಾರವು ನಿಮ್ಮ ಮೂರನೇ ಮನೆಯಲ್ಲಿರುತ್ತದೆ. ಈ ಮನೆಯನ್ನು ಅಲ್ಪ ದೂರ ಪ್ರಯಾಣ, ಕಿರಿಯ ಸಹೋದರ ಸಹೋದರಿಯರು ಮತ್ತು ಸಂವಹನದ ಅಂಶ ಮನೆಯೆಂದು ಪರಿಗಣಿಸಲಾಗಿದೆ. ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರವು ಸಂತತಿಯ ಬದಿಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಕೆಲವು ಸಂದೇಹಗಳಿಗೆ ಕಾರಣವಾಗಬಹುದು. ಆದಾಗ್ಯೂ, ವೈಯಕ್ತಿಕ ಜೀವನದಲ್ಲಿ ನೀವು ಸಂತೋಷವಾಗಿರುತ್ತಾರೆ. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಅಥವಾ ಸೇಲ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಅಲ್ಪ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಇದರಿಂದಾಗಿ ಅವರಿಗೆ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣದ ಬಗ್ಗೆ ನೀವು ಚಿಂತೆಗೆ ಒಳಗಾಗಬಹುದು. ಈ ಸಮಯದಲ್ಲಿ ನಿಮ್ಮ ಸೃಜನಶೀಲ ಭಾಗವನ್ನು ನೀವು ಕಂಡುಹಿಡಿಯಬಹುದು. ಮಾಧ್ಯಮ ಮಾರ್ಕೆಟಿಂಗ್ ಪ್ರತಿಕೋದ್ಯಮ ಇತ್ಯಾದಿ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುವ ಈ ರಾಶಿಚಕ್ರದ ಜನರು ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಆಡಳಿತ ಮತ್ತು ನಾಯಕತ್ವದ ಸಾಮರ್ಥ್ಯಗಳು ಸಹ ಸುಧಾರಿಸುತ್ತವೆ. ಕ್ರೀಡಾ ಕ್ಷೇತ್ರದೊಂದಿಗೆ ಸಂಬಂಧಸಿದ ಜನರು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗಬಹುದು. ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಪರಿಹಾರ:

  1. ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

  2. ಭಗವಂತ ಶಿವನನ್ನು ಪೂಜಿಸಿ.

ವೃಷಭ ರಾಶಿ

ನಿಮ್ಮ ನಾಲ್ಕನೇ ಮನೆಯ ಅಧಿಪತಿ ಸೂರ್ಯ ಗ್ರಹವು ನಿಮ್ಮ ಎರಡನೇ ಮನೆಗೆ ಗೋಚರಿಸಲಿದೆ. ಎರಡನೇ ಮನೆಯು ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಸಂಚಾರದ ಸಮಯದಲ್ಲಿ ಮನೆಯ ನವೀಕರಣದ ಮೇಲೆ ನಿಮ್ಮ ಹಣಕಾಸು ಖರ್ಚಾಗಬಹುದು. ಈ ಸಮಯದಲ್ಲಿ ಸಂಪತ್ತು ಅಥವಾ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ. ಆರ್ಥಿಕ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಸೂರ್ಯ ಸಂಚಾರದ ಸಮಯದಲ್ಲಿ ನಿಮ್ಮ ಪ್ರಿಯ ಜನರೊಂದಿಗೆ ಮತ್ತು ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ನೀವು ಇಷ್ಟಪಡುತ್ತೀರಿ. ಸೂರ್ಯ ಸಂಚಾರದ ಕಾರಣದಿಂದಾಗಿ ನಿಮ್ಮ ಧ್ವನಿಯಲ್ಲಿ ಕಠೋರತೆಯನ್ನು ಕಾಣಬಹುದು ಮತ್ತು ನಿಮ್ಮ ನಿರ್ಧಾರಗಳನ್ನು ಇತರರ ಮೇಲೆ ಬಲವಂತವಾಗಿ ಒತ್ತಾಯಿಸಬಹುದು. ಇದನ್ನು ಮಾಡದಂತೆ ನಿಮಗೆ ಸೂಚಿಸಲಾಗಿದೆ. ಉದ್ಯೋಗದಲ್ಲಿ ತೊಡಗಿರುವ ರಾಶಿಚಕ್ರದ ಜನರು ಮೇಲಧಿಕಾರಿಗಳಿಂದ ಗೌರವ ಪಡೆಯಬಹುದು. ವ್ಯಾಪಾರಸ್ಥರು ಒಪ್ಪಂದ ಅಥವಾ ಡೀಲ್ ಮೂಲಕ ಉತ್ತಮ ಪ್ರಯೋಜನವನ್ನು ಗಳಿಸಬಹುದು. ನಿಮ್ಮ ಆರೋಗ್ಯದ ಮೇಲೆ ದೃಷ್ಟಿ ಹಾಕಿದರೆ ಮುಖ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ದೂರವಿರಬೇಕು. ವೈರಲ್ ಸೋಂಕುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

ಪರಿಹಾರ

  1. ಸೂರ್ಯ ದೇವರನ್ನು ಪೂಜಿಸಿ.

  2. ಸೂರ್ಯ ದೇವರನ್ನು ಮೆಚ್ಚಿಸಲು ಆದಿತ್ಯ ರಿತೇಶ್ ಸ್ತೋತ್ರವನ್ನು ಮತ್ತು ಗಾಯತ್ರಿ ಮಂತ್ರವನ್ನು ಪಠಿಸಿ.

ಮಿಥುನ ರಾಶಿ

ಸೂರ್ಯ ದೇವ ನಿಮ್ಮ ಮೂರನೇ ಮನೆಯ ಅಧಿಪತಿ ಮತ್ತು ಪ್ರಸ್ತುತ ಸಮಯದಲ್ಲಿ ಇದು ನಿಮ್ಮ ರಾಶಿಚಕ್ರದಲ್ಲಿ ಅಂದರೆ ನಿಮ್ಮ ಲಗ್ನದ ಮನೆಗೆ ಗೋಚರಿಸುತ್ತದೆ. ಮೊದಲನೇ ಮನೆಯನ್ನು ಆತ್ಮ ಮತ್ತು ನಿಮ್ಮ ವ್ಯಕ್ತಿತ್ವದ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ಬುದ್ಧಿವಂತಿಕೆಯೊಂದಿಗೆ ನಿಮ್ಮ ಕೆಲಸವನ್ನು ಮುಂದುವರಿಸಲು ಪ್ರಯತ್ನಿಸುತ್ತೀರಿ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರು ಅಥವಾ ಪ್ರಯಾಣಗಳ ಮೇಲೆ ಹಣಕಾಸು ಖರ್ಚು ಮಾಡಬಹುದು. ನಿಮ್ಮ ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ ಈ ಸಮಯದಲ್ಲಿ ನೀವು ಬಹಳಷ್ಟು ಕೆಲಸವನ್ನು ನೋಡಬಹುದು ಮತ್ತು ಕೆಲಸದ ಸ್ಥಳದಲ್ಲಿ ಅವಶ್ಯಕ ಜವಾಬ್ದಾರಿಯನ್ನು ಸಹ ನಿಮಗೆ ನೀಡಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರಿಗೂ ಈ ಸಂಚಾರವು ಅನುಕೂಲಕರವಾಗಿರುತ್ತದೆ. ನಿಮ್ಮ ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ರೋಗ ನಿರೋಧಕ ಸಾಮರ್ಥ್ಯವು ಬಲಗೊಳ್ಳುತ್ತದೆ. ಆದಾಗ್ಯೂ ಇದರ ಹೊರತಾಗಿಯೂ, ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ನಿಮ್ಮ ಅಹಂ ಅನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ಇಲ್ಲದಿದ್ದರೆ ಅದರ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏರಿಳಿತಗಳು ಉಂಟಾಗಬಹುದು. ವಿಶೇಷವಾಗಿ ನಿಮ್ಮ ಸಂಬಂಧಗಳಲ್ಲಿ.

ಪರಿಹಾರ

  1. ರಾಮ ರಕ್ಷಾ ಸ್ತೋತ್ರವನ್ನು ಪ್ರತಿದಿನ ಜಪಿಸುವುದು ನಿಮಗೆ ಪ್ರಯೋಜನಕಾರಿ.

  2. ಸೂರ್ಯನನ್ನು ಬಲಪಡಿಸಲು ಭಾನುವಾರ ಗೋಧಿ, ಬೆಲ್ಲವನ್ನು ದಾನ ಮಾಡುವುದು ನಿಮಗೆ ಉತ್ತಮ.

ಕರ್ಕ ರಾಶಿ

ನಿಮ್ಮ ಎರಡನೇ ಮನೆಯ ಅಧಿಪತಿ ಸೂರ್ಯ ದೇವ ನಿಮ್ಮ ಹನ್ನೆರಡನೇ ಮನೆಗೆ ಗೋಚರಿಸುತ್ತಾರೆ. ಹನ್ನೆರಡನೇ ಮನೆಯನ್ನು ನಷ್ಟ, ಮೋಕ್ಷ, ವಿದೇಶ ಸಂಬಂಧ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಾಳೀಯರಿಗೆ ಅರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ತಲೆ ನೋವು, ಜ್ವರ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ವಿದೇಶಕ್ಕೆ ಸಂಬಂಧಿಸಿದ ಲಾಭವನ್ನು ಪಡೆಯುವ ಸಾಧ್ಯತೆ ಇದೆ . ಆದರೂ ಈ ಅತಿಯಾದ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಏನಾದರೂ ಹೂಡಿಕೆ ಮಾಡಬೇಕೆಂದು ಬಯಸಿದರೆ ಬಹಳ ಚಿಂತಶೀಲವಾಗಿ ಮಾಡಿ. ಈ ಸಂಚಾರದ ಸಮಯದಲ್ಲಿ ಯಾರನ್ನೂ ಅತಿಯಾಗಿ ನಂಬುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಹತಾಶರಾಗಬಹುದು. ನಿಮ್ಮ ಜೀವನ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತನಾಡುವ ಅಗತ್ಯವಿದೆ. ಇದರಿಂದಾಗಿ ನಿಮ್ಮ ನಡುವೆ ಯಾವುದೇ ರೀತಿಯ ತಪ್ಪು ತಿಳುವಳಿಕೆ ಬರುವುದಿಲ್ಲ. ನಿಮ್ಮ ಆಹಾರ ಪದ್ದತಿಯತ್ತ ಗಮನ ಹರಿಸಿ ಮತ್ತು ನಿಮ್ಮ ಅರೋಗ್ಯವನ್ನು ಹಾಳುಮಾಡುವ ಯಾವುದನ್ನೂ ಸೇವಿಸಬೇಡಿ. 40 ವರ್ಷ ದಾಟಿದ ಈ ರಾಶಿಚಕ್ರದ ಸ್ಥಳೀಯರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ಯಾವುದೇ ಹಳೆಯ ರೋಗವು ಮತ್ತೆ ನಿಮ್ಮನ್ನು ಕಾಡಬಹುದು. ಆದ್ದರಿಂದ ಈ ರಾಶಿಚಕ್ರದ ಜನರು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆಯನ್ನು ಪಡೆಯಲು ಸೂಚಿಸಲಾಗಿದೆ.

ಪರಿಹಾರ:

  1. ದೇವಿ ದುರ್ಗೆಯ ತಾಯಿ ಗೌರಿ ರೂಪವನ್ನು ಪೂಜಿಸುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುವಿರಿ.

  2. ಸೂರ್ಯನ "ಓಂ ಹ್ರೀಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ" ಬೀಜ ಮಂತ್ರವನ್ನು ಜಪಿಸಿ.

ಸಿಂಹ ರಾಶಿ

ಸೂರ್ಯ ನಿಮ್ಮ ಲಗ್ನದ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಸಾಗುತ್ತದೆ. ಹನ್ನೊಂದನೇ ಮನೆಯನ್ನು ಲಾಭ, ಆಸೆಗಳು ಮತ್ತು ಕಿರಿಯ ಸಹೋದರ ಸಹೋದರಿಯರ ಸಂಬಂಧದ ಅಂಶವೆಂದು ಪತಿಗಣಿಸಲಾಗಿದೆ.ಮಾರ್ಕೆಟಿಂಗ್, ಸೇಲ್ಸ್, ಬರವಣಿಗೆ, ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ. ಈ ಸಮಯದಲ್ಲಿ ದೀರ್ಘಕಾಲದಿಂದ ಬಯಸುತ್ತಿದ್ದ ಯಶಸ್ಸನ್ನು ನೀವು ಪಡೆಯಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಸ್ಥಳೀಯರು ದೊಡ್ಡ ಲಾಭವನ್ನು ಪಡೆಯಬಹುದು. ನೀವು ಜನರನ್ನು ಮೆಚ್ಚಿಸಬಹುದು. ನಿಮ್ಮ ಆಡಳಿತಾತ್ಮಕ ಸಾಮರ್ಥ್ಯಗಳು ಸಹ ಹೆಚ್ಚಾಗುತ್ತವೆ ಮತ್ತು ಈ ಸಮಯದಲ್ಲಿ ನೀವು ಸಹ ಸಂಘಟಿತವಾಗಿರುತ್ತೀರಿ. ಸರ್ಕಾರಿ ವಲಯದಿಂದಲೂ ಈ ಸಮಯದಲ್ಲಿ ನಿಮಗೆ ಲಾಭವಾಗಬಹುದು. ಈ ರಾಶಿಚಕ್ರದ ಕೆಲವು ಜನರು ಈ ಸಮಯದಲ್ಲಿ ಹೊಸ ಸಂಬಂಧವನ್ನು ಹೊಂದಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಉತ್ತಮ ಸಮಯ ಕಳೆಯಲು ಸಾಧ್ಯವಾಗುತ್ತದೆ. ಈ ಸಂಚಾರವು ನಿಮ್ಮ ಆಸೆಗಳನ್ನು ಈಡೇರಿಸುತ್ತದೆ ಆದರೆ ನೀವು ತುಂಬಾ ದುರಾಸೆಯಾಗುವುದನ್ನು ತಪ್ಪಿಸಬೇಕು. ಸ್ವಾರ್ಥ ಮತ್ತು ಹಠಮಾರಿತನವನ್ನು ದೂರವಿಡುವುದು ಉತ್ತಮವಾಗಿರುತ್ತದೆ.

ಪರಿಹಾರ:

  1. ತಾಮ್ರ ಅಥವಾ ಚಿನ್ನದ ಉಂಗುರದಲ್ಲಿ ಮಾಣಿಕ್ಯ ರತ್ನವನ್ನು ತಯಾರಿಸಿ ನಿಮ್ಮ ಉಂಗುರುದ ಬೆರಳಿನಲ್ಲಿ ಧರಿಸಿ.

  2. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ನೀರು ಅರ್ಪಿಸಿ ಮತ್ತು ಹಿತ್ತಾಳೆ ಅಥವಾ ಕಂಚಿನ ಪಾತ್ರೆಯಲ್ಲಿ ಕೆಂಪು ಹೂವುಗಳನ್ನು ಇರಿಸಿ.


ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮಅದೃಷ್ಟ ಯಾವಾಗ ತೆರೆಯುತ್ತದೆ ಮತ್ತುಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂಬುದನ್ನು ತಿಳಿಯಿರಿ.

ಕನ್ಯಾ ರಾಶಿ

ನಿಮ್ಮ ಹನ್ನೆರಡನೇ ಮನೆಯ ಅಧಿಪತಿ ಸೂರ್ಯ ನಿಮ್ಮ ಹತ್ತನೇ ಮನೆಗೆ ಗೋಚರಿಸುತ್ತಾರೆ. ಈ ಮನೆ ನಿಮ್ಮ ಕುಟುಂಬ, ಪ್ರತಿಷ್ಠೆ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ಸೂರ್ಯ ಬಲವಾದ ಸ್ಥಾನದಲ್ಲಿರುತ್ತಾನೆ, ಇದರಿಂದಾಗಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಆದಾಗ್ಯೂ, ಈ ಅವಕಾಶಗಳನ್ನು ನೀವು ಸರಿಯಾಗಿ ನಿರ್ಣಯಿಸಬೇಕಾಗುತ್ತದೆ ಮತ್ತು ನೀವು ಸೂಕ್ತವಾದ ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಈ ವಕಾಶಗಳ ಲಾಭವನ್ನು ನೀವು ಪಡೆಯುತ್ತೀರಿ. ಈ ರಾಶಿಚಕ್ರದ ವ್ಯಾಪಾರಸ್ಥರು ಈ ಸಮಯದಲ್ಲಿ ಅತ್ಯಂತ ಲಾಭವನ್ನು ಗಳಿಸುತ್ತಾರೆ ಮತ್ತು ಇದರೊಂದಿಗೆ ಅವರು ಸಮಾಜದಲ್ಲಿ ಖ್ಯಾತಿಯನ್ನು ಪಡೆಯುತ್ತಾರೆ. ನಿರುದ್ಯೋಗಿಗಳಾಗಿರುವವರು ಈ ಸಂಚಾರದ ಸಮಯದಲ್ಲಿ ಉದ್ಯೋಗವನ್ನು ಪಡೆಯಬಹುದು. ಸೂರ್ಯನನ್ನು ತಂದೆಯ ಅಂಶವೆಂದು ಪರಿಗಣಿಸಲಾಗಿದೆ, ಆದ್ದರಿಂದ ನಿಮ್ಮ ತಂದೆಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ವೈರಲ್ ಸೋಂಕಿನಿಂದ ತಪ್ಪಿಸಲು ಸಲಹೆ ನೀಡಲಾಗಿದೆ. ವೈಯಕ್ತಿಕ ಜೀವನದಲ್ಲಿ ಕೆಲವು ಬಿಕ್ಕಟ್ಟುಗಳು ನಿಮ್ಮನ್ನು ಕಾಡಬಹುದು ಮತ್ತು ನೀವು ಅನಾನುಕೂಲವಾಗಬಹುದು.

ಪರಿಹಾರ:

  1. ಭಾನುವಾರ ದೇವಸ್ಥಾನದಲ್ಲಿ ಬಡವರಿಗೆ ಬೆಲ್ಲ ದಾನ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

  2. ಅತಿಯಾದ ಉಪ್ಪು ಅಥವಾ ಅನ್ನ ಸೇವಿಸುವುದನ್ನು ತಪ್ಪಿಸಿ.

ತುಲಾ ರಾಶಿ

ನಿಮ್ಮ ಹನ್ನೊಂದನೇ ಮನೆಯ ಅಧಿಪತಿ ಸೂರ್ಯ ದೇವ ಧರ್ಮ, ಅಧ್ಯಾತ್ಮ, ಪ್ರಯಾಣಗಳು ಮತ್ತು ಅದೃಷ್ಟದ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ತಂದೆ ಅಥವಾ ತಂದೆಯಂತಹ ಜನರೊಂದಿಗೆ ವಿವಾದದ ಸಾಧ್ಯತೆ ಇದೆ. ಒಂಬತ್ತನೇ ಮನೆಯಲ್ಲಿ ಸೂರ್ಯ ಸಂಚಾರವು ನಿಮ್ಮ ಅದೃಷ್ಟಕ್ಕೆ ಉತ್ತಮವೆಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನಿಮಗೆ ಹೆಚ್ಚಿನ ಅದೃಷ್ಟ ಸಿಗುವುದಿಲ್ಲ ಮತ್ತು ನಿಮ್ಮನ್ನು ಸ್ಥಾಪಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುವುದಿಲ್ಲ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಕಠಿಣ ಪರಿಶ್ರಮ ಮಾಡಲು ಸೂಚಿಸಲಾಗಿದೆ. ಆದಾಯವು ನಿಧಾನವಾಗಿ ಆದರೆ ಸ್ಥಿರವಾಗಿ ಬರುತ್ತದೆ. ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಯಾವುದೇ ದೊಡ್ಡ ಅರೋಗ್ಯ ಸಮಸ್ಯೆಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ನಿಮಗೆ ಉಸಿರಾಡಲು ಯಾವುದೇ ತೊಂದರೆ ಇದ್ದರೆ, ವೈದ್ಯಕೀಯ ಪರೀಕ್ಷೆಯನ್ನು ತಕ್ಷಣವೇ ಮಾಡಿ. ಪ್ರಗತಿ ಮತ್ತು ಸಮೃದ್ಧಿಗಾಗಿ ನಿಮ್ಮ ಸಂವಹನ ಕೌಶಲ್ಯವನ್ನು ಹೆಚ್ಚಿಸಿ.

ಪರಿಹಾರ:

  1. ತುಳಸಿ ಸಸ್ಯಗಳನ್ನು ಪೂಜಿಸಿ ಮತ್ತು ನೀರು ಹಾಕಿ, ಏಕೆಂದರೆ ಇದು ನಿಮಗೆ ಶುಭ ಫಲಿತಾಂಶಗಳನ್ನು ತರುತ್ತದೆ.

  2. ಚಪ್ಪಲಿ ಮತ್ತು ಬೂಟುಗಳನ್ನು ಸ್ಪರ್ಶಿಸಿದ ನಂತರ ಯಾವಾಗಲೂ ಕೈ ತೊಳೆಯಿರಿ, ಇದರಿಂದ ಸೂರ್ಯನ ನಕಾರತ್ಮಕ ಪರಿಣಾಮವು ಕಡಿಮೆಯಾಗುತ್ತದೆ.

ವೃಶ್ಚಿಕ ರಾಶಿ

ನಿಮ್ಮ ಹತ್ತನೇ ಮನೆಯ ಅಧಿಪತಿ ಸೂರ್ಯ ನಿಮ್ಮ ಎಂಟನೇ ಮನೆಗೆ ಗೋಚರಿಸುತ್ತಾರೆ. ಎಂಟನೇ ಮನೆಯನ್ನು ಜೀವನದಲ್ಲಿ ಬರಲಾಗುವ ಮತ್ತು ಇದ್ದಕ್ಕಿದ್ದಂತೆ ಉಂಟಾಗುವ ಲಾಭ ಮತ್ತು ನಷ್ಟದ ಅಂಶವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ವೃಶ್ಚಿಕ ರಾಶಿಚಕ್ರದ ಜನರು ಕೆಲಸದ ಸ್ಥಳದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು ಮತ್ತು ಅನೇಕ ಆತಂಕಗಳಿಂದ ತೊಂದರೆಗೊಳಗಾಗಬಹುದು. ಅತ್ತೆಮನೆ ಜನರೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಬದಲಾವಣೆಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಜನರೊಂದಿಗೆ ಮತ್ತು ಜನರ ನಡುವೆ ಇದ್ದು ಕೆಲಸ ಮಾಡಿ ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ತುರ್ತು ಗಮನ ಸೆಳೆಯಲು ಪ್ರಯತ್ನಿಸಬೇಡಿ. ಈ ಸಮಯದಲ್ಲಿ ಬೇಹುಗಾರಿಕೆ ಅಥವಾ ಯಾವುದೇ ರೀತಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಜನರು ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಾಯ್ದಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೀವು ವಿಶ್ವಾಸವನ್ನು ಗಳಿಸಬೇಕಾಗುತ್ತದೆ ಮತ್ತು ಜನರೊಂದಿಗೆ ಬಲವಾದ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಬೇಕು.

ಪರಿಹಾರ:

  1. ಉಂಗುರದ ಬೆರಳಿನಲ್ಲಿ ಮಾಣಿಕ್ಯ ರತ್ನವನ್ನು ಧರಿಸುವುದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.

  2. ಸಾಧ್ಯವಾದರೆ ಭಾನುವಾರದಂದು ಉಪವಾಸ ಮಾಡಿ ಮತ್ತು ಸೂರ್ಯ ಗ್ರಹವನ್ನು ಬಲಪಡಿಸಲು ಉಪವಾಸದ ಸಮಯದಲ್ಲಿ ಉಪ್ಪು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಧನು ರಾಶಿ

ರಾಶಿಚಕ್ರದ ಜನರ ಏಳನೇ ಮನೆಗೆ ಸೂರ್ಯ ಗ್ರಹವು ಗೋಚರಿಸುತ್ತದೆ. ಇದನ್ನು ಮದುವೇ, ಪಾಲುದಾರಿಕೆ, ಸಂಬಂಧ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಿಮ್ಮ ಉದ್ವೇಗ ಸ್ವಭಾವದ ಕಾರಣದಿಂದಾಗಿ ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಸಮಸ್ಯೆಯಾಗಬಹುದು. ಮದೆವೆಯಾಗಲು ಬಯಸುತ್ತಿರುವ ಜನರಿಗೆ ಕೆಲವು ಕಾರಣಗಳಿಂದ ವಿಳಂಬವನ್ನು ಎದುರಿಸಬೇಕಾಗಬಹುದು. ವಿವಾಹಿತ ದಂಪತಿಗಳು ಅಹಂನ ಮುಖಾಮುಖಿಯಿಂದ ದೂರವಿರಲು ಸೂಚಿಸಲಾಗಿದೆ. ವ್ಯಾಪಾರಸ್ಥರು ಯಾವುದೇ ಕಾರಣದಿಂದಾಗಿ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಜನರಿಗೆ ನಿಮ್ಮ ಕೆಲಸವನ್ನು ತೋರಿಸಬಹುದಾದ ಅಥವಾ ನಿಮಗೆ ಹೊಸ ವ್ಯವಹಾರವನ್ನು ನೀಡುವಂತಹ ವ್ಯಕ್ತಿಯನ್ನು ನೀವು ಹುಡುಕಬೇಕು.ಈ ಸಮಯದಲ್ಲಿ ನಿಮ್ಮ ಸಂಪರ್ಕವನ್ನು ಹೆಚ್ಚಿಸಲು ಪ್ರಯತ್ನಿಸಿ. ಏಕೆಂದರೆ ಇದು ನಿಮಗೆ ಅನೇಕ ಶಕ್ತಿ ಮತ್ತು ಬಲವನ್ನು ನೀಡುತ್ತದೆ.

ಪರಿಹಾರ:

  1. ತಾಮ್ರದ ಪಾತ್ರದಲ್ಲಿ ನೀರು ತುಂಬಿ ಅದರಲ್ಲಿ ಸ್ವಲ್ಪ ಕುಂಕುಮವನ್ನು ಸೇರಿಸಿ, ಅದನ್ನು ಸೂರ್ಯ ದೇವರಿಗೆ ಅರ್ಪಿಸಿ.

  2. ಮನೆಯಲ್ಲಿ ರುದ್ರಾಭಿಷೇಕ ಪೂಜೆಯನ್ನು ಮಾಡಿ.


ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ತೆಗೆದುಹಾಕಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

ಮಕರ

ರಾಶಿ ನಿಮ್ಮ ಎಂಟನೇ ಮನೆಯ ಅಧಿಪತಿ ಸೂರ್ಯ ದೇವ ಸಂಚಾರದ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಗೋಚರಿಸುತ್ತದೆ. ಆರನೇ ಮನೆಯನ್ನು ಸಾಲ, ಶತ್ರುಗಳು ಮತ್ತು ರೋಗಗಳ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರವು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಪ್ರತಿಯೊಂದು ಸನ್ನಿವೇಶದ ವಿರುದ್ಧ ಹೊರಡುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ನೀವು ಅದರಿಂದ ಬೇಗನೆ ಚೇತರಿಸಿಗೊಳ್ಳಬಹುದು. ನೀವು ನ್ಯಾಯಾಲಯ ಪ್ರಕರಣದ ಯಾವುದೇ ವಿಷಯದಲ್ಲಿ ಸಿಲುಕಿಕೊಂಡಿದ್ದರೆ, ಈ ಸಮಯದಲ್ಲಿ ನಿರ್ಧಾರವು ನಿಮ್ಮ ಪರವಾಗಬಹುದು. ಲೋನ್ ಅಥವಾ ಸಾಲ ತೆಗೆದುಕೊಂಡಿದ್ದ ಈ ರಾಶಿಚಕ್ರದ ಜನರು ಅದನ್ನು ಮರುಪಾವತಿಸಬಹುದು. ದೈಹಿಕವಾಗಿ ನೀವು ಸ್ವಲ್ಪ ತೊಂದರೆಗೆ ಒಳಗಾಗಬಹುದು. ವೃತ್ತಿಪರ ಜೀವನದಲ್ಲಿ ನಿಮ್ಮನ್ನು ಸಾಬೀತುಪಡಿಸಲು ನೀವು ಸಾಕಷ್ಟು ಪ್ರಯತ್ನಿಸಬೇಕಾಗುತ್ತದೆ. ಸಹಾಯಕನನ್ನು ಹೊಂದಲು ಇದು ಉತ್ತಮ ಸಮಯ. ಇದರಿಂದಾಗಿ ನೀವು ನಿಮ್ಮ ಕೆಲಸವನ್ನು ವ್ಯವಸ್ಥಿತವಾಗಿರಿಸಿಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ನಮ್ಯತೆಯನ್ನು ತರಲು ಇದನ್ನು ಮಾಡುವುದು ಸಹ ಒಳ್ಳೆಯದು. ಇದು ನಿಮ್ಮ ಕೆಲಸವನ್ನು ಮುಂದುವರಿಸಲು ಸಹ ನಿಮಗೆ ಸಹಾಯ ಮಾಡುತ್ತದೆ.

ಪರಿಹಾರ:

  1. ಸೂರ್ಯನ ನಕಾರಾತ್ಮಕ ಪರಿಣಾಮಗಳನ್ನು ಪರಿಹರಿಸಲು ಭಾನುವಾರದಂದು ಗೂಳಿಗೆ ಗೋಧಿ ಮತ್ತು ಬೆಲ್ಲವನ್ನು ತಿನ್ನಿಸಿ.

  2. ನಿಮ್ಮ ತಂದೆಯೊಂದಿಗೆ ಗೌರಾನ್ವಿತ ಸಂಬಂಧವನ್ನು ಕಾಪಾಡಿಕೊಳ್ಳಲು ಅವರ ಸೇವೆ ಮಾಡುತ್ತೀರಿ, ಅವರನ್ನು ಬೆಂಬಲಿಸ, ಕಾಲಕಾಲಕ್ಕೆ ಅವರೊಂದಿಗೆ ಸಂವಹನ ನಡೆಸಿ ಮತ್ತು ನೀವು ಏನಾದರೂ ಕೆಲಸಕ್ಕೆ ಹೋದಾಗಲೆಲ್ಲಾ ಅವರ ಆಶೀರ್ವಾದವನ್ನು ಪಡೆದುಕೊಳ್ಳಿ.

ಕುಂಭ ರಾಶಿ

ನಿಮ್ಮ ಏಳನೇ ಮನೆಯ ಅಧಿಪತಿ ಸೂರ್ಯ ದೇವ ನಿಮ್ಮ ಪ್ರಣಯ, ಶಿಕ್ಷಣ, ಮಕ್ಕಳು ಇತ್ಯಾದಿಯ ಐದನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ನಿಮ್ಮ ಮಕ್ಕಳಿಗೆ ಬಹಳ ಒಳ್ಳೆಯದೆಂದು ಹೇಳಲಾಗುವುದಿಲ್ಲ. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಪ್ರಗತಿ ಹೊಂದುತ್ತಾರೆ ಮತ್ತು ತಮ್ಮ ಪ್ರತಿಸ್ಪರ್ಧಿಗಳು ಉತ್ತಮವಾಗಲು ಹೊಸ ಸಲಹೆಗಳನ್ನು ಅನ್ವಹಿಸುತ್ತಾರೆ. ಈ ಸಮಯದಲ್ಲಿ ಕುಂಭ ರಾಶಿಚಕ್ರದ ಸ್ಥಳೀಯರು ಬೆಟ್ಟಿಂಗ್ ಮಾಡುವುದನ್ನು ತಪ್ಪಿಸಬೇಕು. ದೀರ್ಘಕಾಲದ ವರೆಗೆ ಲಾಭ ನೀಡುವ ಹೂಡಿಕೆಗಳನ್ನು ಮಾಡಬಹುದು. ಈ ಸಮಯದಲ್ಲಿ ನೀವು ಸಕಾರಾತ್ಮಕ ಮತ್ತು ಸಂತೋಷವಾಗಿ ನೀವು ಕಾಣುವಿರಿ. ಈ ಸಮಯದಲ್ಲಿ ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಸಂತೋಷವನ್ನು ಪಡೆಯಬಹುದು. ನಿಮ್ಮ ಸೃಜನಶೀಲತೆಯನ್ನು ಜಾಗೃತಗೊಳಿಸಲು ಇದು ಉತ್ತಮ ಸಮಯ ಮತ್ತು ಸೃಜನಶೀಲ ಚಟುವಟಿಕೆಗಳಲ್ಲೂ ನೀವು ಭಾಗವಹಿಸಬಹುದು.ಅದೇ ಸಮಯದಲ್ಲಿ ಮತ್ತೊಂದೆಡೆ, ಯಾವುದೇ ಹಳೆಯ ಆಸಕ್ತಿಗಳನ್ನು ನೀವು ಪುನರಾರಂಭಿಸಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಅಧ್ಯಯನದ ಕ್ಷೇತ್ರದಲ್ಲಿ ಅವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ನೀವು ಹೆಚ್ಚು ಸಕ್ರಿಯರಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಏಕೆಂದರೆ ನೀವು ಆಮ್ಲೀಯತೆ ಮತ್ತು ಹೊಟ್ಟೆನೋವಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಪರಿಹಾರ:

  1. ಭಾನುವಾರ ತಾಮ್ರದ ದಾನ ಮಾಡುವುದು ನಿಮಗೆ ನಿಮಗೆ ಬಹಳ ಪ್ರಯೋಜನಕಾರಿಯಾಗಿದೆ.

  2. ಯಾವುದೇ ವ್ಯಕ್ತಿ, ಸರ್ಕಾರಿ ಅಧಿಕಾರಿ ಅಥವಾ ಮೋಸಗಾರನಿಗೆ ಲಂಚ ನೀಡುವುದನ್ನು ತಪ್ಪಿಸಿ. ತೆರಿಗೆ ಪಾವತಿಸಿ ಇಲ್ಲದಿದ್ದರೆ, ಅದು ಜಾತಕದಲ್ಲಿನ ಸೂರ್ಯನನ್ನು ದುರ್ಬಲಗೊಳಿಸಬಹುದು.

ಮೀನಾ ರಾಶಿ

ನಿಮ್ಮ ಆರನೇ ಮನೆಯ ಅಧಿಪತಿ ಸೂರ್ಯ ದೇವ ನಿಮ್ಮ ನಾಲ್ಕನೇ ಮನೆಗೆ ಗೋಚರಿಸುತ್ತದೆ. ನಾಲ್ಕನೇ ಮನೆಯನ್ನು ನಿಮ್ಮ ಸಂತೋಷ, ತಾಯಿ, ಭೂಮಿ - ಭವನ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನೀವು ಯಾವುದಾದರೂ ವಿಷಯದ ಬಗ್ಗೆ ಚಿಂತೆಗೆಗೊಳಗಾಗಬಹುದು. ಈ ಸಮಯದಲ್ಲಿ ನಿಮ್ಮ ಭಾವನೆಗಳು ಹೆಚ್ಚಾಗುತ್ತವೆ ಮತ್ತು ಈ ಸಮಯದಲ್ಲಿ ನಿಮ್ಮ ಸೌಕರ್ಯಗಳಿಂದ ನೀವು ದೂರವಿರಬಹುದು. ಆದಾಗ್ಯೂ ನೀವು ಇದನ್ನು ಸ್ವೀಕರಿಸುತ್ತೀರಿ ಮತ್ತು ಇನ್ನಷ್ಟು ಹೆಚ್ಚು ಸಕ್ರಿಯರಾಗಲು ಪ್ರಯತ್ನಿಸುತ್ತೀರಿ. ನೀವು ಎಲ್ಲವನ್ನೂ ಮಹತ್ವಾಕಾಂಕ್ಷಿಯಾಗಿ ಮಾಡುತ್ತೀರಿ. ಆದರೆ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಸ್ವಲ್ಪ ಸಮಯವಾಗಬಹುದು. ಈ ಸಮಯದಲ್ಲಿ ತಾಳ್ಮೆಯಿಂದಿರಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಏಕೆಂದರೆ ಆಕೆಗೆ ಕೆಲವು ಅರೋಗ್ಯ ಸಮಸ್ಯೆಗಳಿಂದ ತೊಂದರೆಯಾಗಬಹುದು. ಈ ಸಮಯದಲ್ಲಿ ಮನೆಯಲ್ಲಿ ಕುಟುಂಬ ಹಬ್ಬದ ಸಾಧ್ಯತೆಯೂ ಇದೆ. ಈ ಸಂಚಾರದ ಸಮಯದಲ್ಲಿ ಹೆಚ್ಚಿನ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಸಾರಾಯಿ, ಸಿಗರೇಟ್ ಮುಂತಾದವುಗಳಿಂದ ದೂರವಿರಿ. ಇಲ್ಲದಿದ್ದರೆ ನೀವು ಸಮಸ್ಯೆಗಳಿಂದ ಸುತ್ತುವರಿಯಬಹುದು.

ಪರಿಹಾರ:

  1. ನಿಮ್ಮ ತೋರುಬೆರಳಿಗೆ ಪಚ್ಚೆ ರತ್ನವನ್ನು ಧರಿಸಿ ಮತ್ತು ಗುರು ಮಂತ್ರವನ್ನು ಜಪಿಸುವುದರಿಂದ ನಿಮಗೆ ಶುಭ ಫಲಿತಾಂಶ ಸಿಗುತ್ತದೆ.

  2. ಭಾನುವಾರ ಉಪವಾಸ ಮಾಡಿ ಮತ್ತು ಯಾವುದೇ ಮಾಂಸಹಾರಿ ಆಹಾರವನ್ನು ಮತ್ತು ಸಾರಾಯಿಯನ್ನು ತಪ್ಪಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer