15 ಆಗಸ್ಟ್ 2020 ರ 74ನೇ ಸ್ವಾತಂತ್ರ್ಯ ದಿನಾಚರಣೆ - 15th August 2020 Independence day in Kannada
15 ಆಗಸ್ಟ್ 2020 ರಂದು ಭಾರತದ 74ನೇ ಸ್ವಾತಂತ್ರ್ಯ ದಿನವನ್ನು ಇಡೀ ದೇಶವು ಸಂಪೂರ್ಣ ವೈಭವ ಮತ್ತು ಹೆಮ್ಮೆಯಿಂದ ಆಚರಿಸಲಿದೆ. ಈ ಸ್ವಂತಂತ್ರ್ಯದ 74ನೇ ವಾರ್ಷಿಕೋತ್ಸವದಂದು ಜಾತಕದ ಮೂಲಕ ಭಾರತದ ಭವಿಷ್ಯವನ್ನು ತಿಳಿದುಕೊಳ್ಳಿ. ಈ ಶುಭ ಸಂದರ್ಭದಲ್ಲಿ ನಮ್ಮ ಈ ಲೇಖನವನ್ನು ಓದಿ ಮತ್ತು ಮುಂಬರುವ ವರ್ಷದಲ್ಲಿ ಭಾರತದ ಚಿತ್ರ ಹೇಗಿರುತ್ತದೆ ಎಂದು ತಿಳಿಯಿರಿ. ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತಿರುವ ಯಾವುದೇ ಪ್ರಶ್ನೆಗೆ ಉತ್ತರವನ್ನು ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ ಮತ್ತು ನಮ್ಮ ಪರಿಣಿತ ಜ್ಯೋತಿಷಿಗಳಿಂದ ಸಲಹೆ ಪಡೆಯಿರಿ.
ಒಂದು ಕಾಲದಲ್ಲಿ ಚಿನ್ನದ ಪಕ್ಷಿ ಮತ್ತು ಜಗತ್ ಗುರು ಎಂದು ಕರೆಯಲ್ಪಟ್ಟ ನಮ್ಮ ದೇಶ ಭಾರತ ತನ್ನ 74ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. 15 ಆಗಸ್ಟ್ 1947 ರಿಂದ 15 ಆಗಸ್ಟ್ 2020 ವರೆಗಿನ ಪ್ರಯಾಣವು ತುಂಬಾ ದೊಡ್ಡದು. ಅಂತಹ ಪರಿಸ್ಥಿತಿಯಲ್ಲಿ ನಾವು ಬಹಳಷ್ಟು ಕಳೆದುಕೊಂಡಿದ್ದೇವೆ ಮತ್ತು ಬಹಳಷ್ಟು ಕಂಡಿಕೊಂಡಿದ್ದೇವೆ. ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಈಗ ಸಂಪೂರ್ಣವಾಗಿ ಡಿಜಿಟಲ್ ಭಾರತವಾಗಿ ರೂಪಾಂತರವಾಗಿದೆ. ಒಂದು ಕಡೆ ಸ್ವಚ್ಛ ಭಾರತದ ಅಭಿಯಾನ ನಡೆಯುತ್ತಿದ್ದರೆ, ಮತ್ತೊಂದೆಡೆ ಮೇಕ್ ಇನ್ ಇಂಡಿಯಾ ಮತ್ತು ಸ್ವಾವಲಂಬಿ ಭಾರತ ಅಭಿಯಾನಗಳಿಗೆ ದೇಶಾಡ ಪ್ರಧಾನಮಂತ್ರಿ ಮತ್ತು ದೇಶದ ಜನರು ಸಂಪೂರ್ಣ ಒತ್ತು ನೀಡುತ್ತಿದ್ದಾರೆ.
ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ಪರಿಣಿತ ಜ್ಯೋತಿಷಿಗಳೊಂದಿಗೆ ಫೋನ್ ಮೂಲಕ ಮಾತನಾಡಿ.
ಕೊರೋನಾವೈರಸ್ ಕಾಲದಲ್ಲಿ ಭಾರತದ ಜನರು ಒಗ್ಗಟ್ಟನ್ನು ಪರಿಚಯಿಸಿದ ರೀತಿ ಮತ್ತು ಈ ದೊಡ್ಡ ರೋಗದ ಮೇಲೆ ಪ್ರಾಬಲ್ಯ ಸಾಧಿಸಲು ಕ್ರಮ ಕೈಗೊಂಡ ರೀತಿ ನಿಜಕ್ಕೂ ಶ್ಲಾಘನೀಯ. ನಮ್ಮ ದೇಶದಲ್ಲಿ ಹೊಸ ಶಿಕ್ಷಣದ ನೀತಿಯನ್ನು ಮಾಡಲಾಗಿದೆ, ವೈದ್ಯಕೀಯ ವಿಜ್ಞಾನ, ತಾಂತ್ರಿಕ ಕೌಶಲ್ಯಗಳು, ದೇಶದ ಆರ್ಥಿಕತೆ, ರಕ್ಷಣಾ, ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳನ್ನು ನೋಡಿದರೆ, ಅನೇಕ ಸ್ಥಳದಳಗಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ.
ಈ ಎಲ್ಲದರ ಹೊರೆತಾಗಿಯೂ, ಅನೇಕ ಸವಾಲುಗಳು ನಮ್ಮ ಮುಂದೆ ಉಳಿದಿವೆ. ದೇಶದಲ್ಲಿ ಇನ್ನೂ ಬಡತನ, ಅನರಕ್ಷತೆ, ನಿರುದ್ಯೋಗ, ಆರ್ಥಿಕ ಅಸಮಾನತೆ ಮತ್ತು ಜನಸಂಖ್ಯಾ ಬೆಳವಣಿಗೆಯ ಸಮಸ್ಯೆಗಳಿವೆ ಮತ್ತು ಇದಕ್ಕೆ ಸಂಬಂಚಿಸಿದ ಇನ್ನೂ ಅನೇಕ ಸಮಸ್ಯೆಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ನಾವು ಇವುಗಳ ಮೇಲೆ ಪ್ರಾಬಲ್ಯ ಸಾಧಿಸ್ಬೇಕು ಮತ್ತು ಸ್ವಾತಂತ್ರ್ಯದ ಈ 74ನೇ ವಾರ್ಷಿಕೋತ್ಸವದಂದು ಇದು ನಮ್ಮ ಗುರಿಯಾಗಬೇಕು. ನಡೆಯಿರಿ ಆಸ್ಟ್ರೋಗುರು ಮೃಗಾಂಕ್ ದ್ವಾರ ಸ್ವತಂತ್ರ ಭಾರತದ ಜಾತಕದ ಪ್ರಕಾರ ಮುಂಬರುವ ವರ್ಷವೂ ದೇಶಕ್ಕೆ ಹೇಗಿರುತ್ತದೆ ಎಂದು ತಿಳಿಯೋಣ.
ಸ್ವತಂತ್ರ ಭಾರತದ ಜಾತಕ ಮತ್ತು ಭವಿಷ್ಯದ ಚಿತ್ರ
ಹಂದಹಾಗೆ ಭರತವರ್ಷದ ವೈಭವ ಹಾಕೆಯದು ಮತ್ತು ಭಾರತದ ಪ್ರಭಾವಿ ರಾಶಿ ಮಕರ ಆದರೆ ಇಂಗ್ಲಿಷ್ ಗುಲಾಮಗಿರಿಯಿಂದ ವಿಮೋಚನೆ ಭಾರತವು ಆಗಸ್ಟ್ 15, 1947 ರ ಮಧ್ಯರಾತ್ರಿಯಲ್ಲಿ ಸಾಧಿಸಿತು. ಆದ್ದರಿಂದ ಸ್ವತಂತ್ರ ಭಾರತದ ರೂಪದಲ್ಲಿ ಭಾರತದ ಜಾತಕ 15 ಆಗಸ್ಟ್ 1947 ರ ಮಧ್ಯ ರಾತ್ರಿ ಪ್ರಕಾರ ರಚಿಸಲಾಗಿದೆ ಮತ್ತು ಅದರ ಆಧಾರದ ಮೇಲೆ ದೇಶದಲ್ಲಿ ಸಂಭವಿಸಲಾಗುವ ಘಟನೆಗಳ ಬಗ್ಗೆ ಗಮನ ಹರಿಸಲಾಗುತ್ತದೆ.

-
ಸ್ವತಂತ್ರ ಭಾರತದ ಈ ಜಾತಕವನ್ನು ಗಮನಿಸಿದರೆ ರಾಹುವು ಸ್ಥಿರ ಲಗ್ನ ವೃಷಭ ರಾಶಿಯಲ್ಲಿ ನೆಲೆಗೊಂಡಿದೆ ಎಂದು ತಿಳಿಯುತ್ತದೆ.
-
ಮಿಥುನ ರಾಶಿಯಲ್ಲಿ ಎರಡನೇ ಮನೆಯಲ್ಲಿ ಮಂಗಳ ಕರ್ಕ ರಾಶಿಯಲ್ಲಿದ್ದಾರೆ.
-
ಮೂರನೇ ಮನೆಯಲ್ಲಿ ಕರ್ಕ ರಾಶಿಯಲ್ಲಿ ಶುಕ್ರ (ಅಸ್ತ), ಬುಧ, ಸೂರ್ಯ, ಚಂದ್ರ ಮತ್ತು ಶನಿ (ಅಸ್ತ) ಕುಳಿತಿದ್ದಾರೆ.
-
ತುಲಾ ರಾಶಿಯ ಆರನೇ ಮನೆಯಲ್ಲಿ ಗುರು ಮತ್ತು ವೃಶ್ಚಿಕ ರಾಶಿಯ ಏಳನೇ ಮನೆಯಲ್ಲಿ ಕೇತು ಇದೆ.
-
ನವಮಾಂಶ ಜಾತಕವನ್ನು ಅಧ್ಯಯನ ಮಾಡಿದರೆ ಇದು ಮೀನಾ ಲಗ್ನದಾಗಿದೆ ಮತ್ತು ಲಗ್ನದಲ್ಲಿ ಸೂರ್ಯ ದೇವಾ ಕುಳಿತಿದ್ದಾರೆ.
-
ಮೀನಾ ರಾಶಿ ಜನ್ಮ ಜಾತಕದ ಹನ್ನೊಂದನೇ ಮನೆಯ ರಾಶಿಯಾಗಿದೆ, ಭಾರತವು ಖಂಡಿತವಾಗಿಯೂ ಏರಿಕೆಯಾಗುತ್ತದೆ ಮತ್ತು ಅದು ಎಲ್ಲ ರೀತಿಯಲ್ಲೂ ಸಂತೋಷ, ವೈಭವ, ಸಮೃದ್ಧಿ ,ಮತ್ತು ಪ್ರಗತಿಯನ್ನು ತೋರಿಸುತ್ತದೆ.
-
ಸ್ವಾತಂತ್ರ್ಯದ ನಂತರದಿಂದ ಶನಿ, ಬುಧ, ಕೇತು, ಶುಕ್ರ ಮತ್ತು ಸೂರ್ಯನ ಮಹದಾಶೆಗಳು ಕಳೆದಿವೆ ಮತ್ತು ಈಗ ಚಂದ್ರನ ಮಹದಾಶೆ ನಡೆಯುತ್ತಿದೆ.
-
ಈ ಚಂದ್ರನ ಮಹದಾಶೆಯಲ್ಲಿ ಶನಿಯ ಅಂತರ್ದಶಾ ಜೂಲೈ 2021 ವರೆಗೆ ಪ್ರಭಾವಿಯಾಗಿರುತ್ತದೆ.
-
ಚಂದ್ರ ಸ್ವತಂತ್ರ ಭಾರತದ ಜಾತಕದ ಮೂರನೇ ಮನೆಯ ಅಧಿಪತಿ ಮತ್ತು ಪುಷ್ಯ ನಕ್ಷತ್ರದಲ್ಲಿದೆ.
-
ಈ ಪುಷ್ಯ ನಕ್ಷತ್ರದ ಮಲ್ಲೇಕ ಶನಿ ಈ ಜಾತಕದಲ್ಲಿ , ಒಂಬತ್ತನೇ ಮತ್ತು ಹತ್ತನೇ ಮನೆಯ ಮಾಲೀಕನಾಗಿ ಸಂಯೋಜಕ ಗ್ರಹವಾಗಿದೆ ಮತ್ತು ಜಾತಕದಲ್ಲಿ ಮೂರನೇ ಮನೆಯಲ್ಲಿ ಕುಳಿತಿದೆ.
-
ಶನಿ ಆಶ್ಲೇಷ ನಕ್ಷತ್ರದು ಇದರ ಮಾಲೀಕ ಬುಧ ಜಾತಕದ ಮೂರನೇ ಮತ್ತು ಐದನೇ ಮನೆಯ ಮಾಲೀಕ ಮತ್ತು ಅದು ಕೂಡ ಶನಿ, ಚಂದ್ರ, ಸೂರ್ಯ ಮತ್ತು ಶುಕ್ರನೊಂದಿಗೆ ಮೂರನೇ ಮನೆಯಲ್ಲಿ ಕುಳಿತಿದೆ.
-
ಪ್ರಸ್ತುತ ಸಂಚಾರದ ಮೇಲೆ ದೃಷ್ಟಿ ಹಾಕಿದರೆ, ಗುರುವಿನ ಸಂಹಾರವು ವಕ್ರ ಸ್ಥಿತಿಯಲ್ಲಿ ಜಾತಕದ ಎಂಟನೇ ಮನೆಯಲ್ಲಿ, ಶನಿ ಸಂಚಾರವು ವಕ್ರ ಸ್ಥಿತಿಯಲ್ಲಿ ಜಾತಕದ ಒಂಬತ್ತನೇ ಮನೆಯಲ್ಲಿ ಮತ್ತು ರಾಹುವಿನ ಸಂಚಾರವು ಜಾತಕದ ಎರಡನೇ ಮನೆಯಲ್ಲಿ ಮಂಗಳನ ಮೇಲಿದೆ.
-
ಜಾತಕದ ಮೂರನೇ ಮನೆ ಸಂವಹನ,ಸಂಚಾರ, ಶೇರ್ ಮಾರ್ಕೆಟ್, ದೇಶದ ನೆರೆಯ ರಾಷ್ಟ್ರಗಳು ಅವುಗಳೊಂದಿಗಿನ ಸಂಬಂಧ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
-
ಜಾತಕದ ಒಂಬತ್ತನೇ ಮನೆ ದೇಶದ ಆರ್ಥಿಕ ಪ್ರಗತಿ, ಬೌದ್ಧಿಕತೆ ಮತ್ತು ವ್ಯಾಪಾರದ ಪ್ರಗತಿಯ ಬಗೆ ಹೇಳುವುದರೊಂದಿಗೆ ಧಾರ್ಮಿಕ ಚಟುವಟಿಕೆಗಳು ಮತ್ತು ದೇಶದ ನ್ಯಾಯಾಲಯದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
-
ಜಾತಕದ ಹತ್ತನೇ ಮನೆಯ ಬಗ್ಗೆ ಮಾತನಾಡಿದರೆ, ಅದು ಪ್ರಸ್ತುತ ಆಡಳಿತ ಪಕ್ಷ, ದೇಶದ ಅತ್ಯುನ್ನತ ಸಂಸ್ಥೆಗಳು, ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

(ತಜಿಕ ವಾರ್ಷಿಕ ಜಾತಕ )
ವರ್ಷದ ಪ್ರವೇಶ ದಿನಾಂಕ 14 ಆಗಸ್ಟ್ 2020 ಮತ್ತು ವರ್ಷದ ಪ್ರವೇಶ ಸಮಯ ಸಾಯಂಕಾಲ 17:09:11 ಗಂಟೆ.
-
ಮುಂಥಾ ಮಿಥುನ ರಾಶಿಯಲ್ಲಿ ವಾರ್ಷಿಕ ಜಾತಕದ ಏಳನೇ ಮನೆ ಮತ್ತು ಜಾತಕದ ಎರಡನೇ ಮನೆಯಲ್ಲಿದೆ.
-
ಮುಂಥಾ ಮಾಲೀಕ ಬುಧ, ಜನ್ಮ ಲಗ್ನದ ಮಾಲೀಕ ಶುಕ್ರ ಮತ್ತು ವರ್ಷ ಲಗ್ನದ ಮಾಲೀಕ ಗುರು.
-
ಈಗ ಮೇಲಿನ ಸ್ಥಿತಿಗಳ ಮೇಲೆ ದೃಷ್ಟಿ ಹಾಕಿದರೆ, ಈ ವರ್ಷ ಭಾರತಕ್ಕೆ ವಿದೇಶಿ ವ್ಯಾಪಾರದಿಂದ ಲಾಭವಾಗುವ ಪ್ರಬಲ ಸಾಧ್ಯತೆ ಇದೆ ಮತ್ತು ಕೆಲವು ನೆರೆಯ ದೇಶಗಳೊಂದಿಗೆ ಭಾರತದ ಕಹಿ ಹೆಚ್ಚಾಗಬಹುದು ಎಂದು ತಿಳಿಯುತ್ತದೆ.
-
ಶನಿಯು ಪ್ರಯೋಜನಕಾರಿ ಗ್ರಹವಾಗಿದೆ ಆದ್ದರಿಂದ ಶನಿಯ ಅಂತರ್ದಶೆಯಲ್ಲಿ ಚಂದ್ರನ ಮಹದಾಶೆಯು ನೆರೆಹೊರೆಯವರೊಂದಿಗೆ ಸಂಬಂಧವು ಹದಗೆಡುವುದನ್ನು ತೋರಿಸುತ್ತಿದೆ ಆದರೆ ಕಳಪೆ ಸಂಬಂಧದ ನಡುವೆ ಕೂಡ ಭಾರತವು ಬಲವಾಗಿ ನಿಂತಿರುತ್ತದೆ ಮತ್ತು ಯಾರ ಮುಂದೆಯೂ ಬಗ್ಗುವುದಿಲ್ಲ.
-
ಏಳನೇ ಮನೆಯಲ್ಲಿ ಮುಂಥಾ ಇರುವುದರಿಂದಾಗಿ ದೇಶದಲ್ಲಿ ಆಂತರಿಕವಾಗಿ ವಿರೋಧ ಮತ್ತು ದ್ವೇಷದ ಭಾವನೆಯನ್ನು ಹೆಚ್ಚಿಸಬಹುದು ಮತ್ತು ಅಧರ್ಮದ ಕಡೆಗೆ ಜನರ ಆಸಕ್ತಿಯನ್ನು ಹೆಚ್ಚಿಸುತ್ತದೆ.
-
ಸರ್ಕಾರದ ಘಟಕಗಳಲ್ಲಿ ವಿರೋಧ ಮತ್ತು ದ್ವೇಷಾದ ಭಾವನೆ ಹೆಚ್ಚಾಗಬಹುದು ಮತ್ತು ದೇಶಾಹದ ಕೆಲವು ಮಹತ್ವಾಕಾಂಕ್ಷೆ ಯೋಜನೆಗಳು ವಿಳಂಬಕ್ಕೆ ಒಳಗಾಗಬಹುದು.
-
ವಕ್ರ ಗುರುವಿನ ಸಂಚಾರವು ಜಾತಕದ ಎಂಟನೇ ಮನೆಯಲ್ಲಿ ಉತ್ತಮವೆಂದು ಹೇಳಲಾಗುವುದಿಲ್ಲ. ಈ ಕಾರಣದಿಂದಾಗಿ ದೇಶದಲ್ಲಿ ಪ್ರಸ್ತುತ ಸಾಂಕ್ರಾಮಿಕ ರೋಗವು ಕಡಿಮೆಯಾಗುವ ಲಕ್ಷಣಗಳು ತಡವಾಗಿ ಕಂಡುಬರುತ್ತವೆ. ಸೆಪ್ಟೆಂಬರ್ ಮಧ್ಯೆ ಗುರುವು ಮಾರ್ಗಿಯಾದಾಗ ಅದು ಕ್ರಮೇಣ ಕಡಿಮೆಯಾಗುತ್ತದೆ. ನವೆಂಬರ್ ತಿಂಗಳಲ್ಲಿ ಗುರುವು ಮಕರ ರಾಶಿಗೆ ಸಾಗುತ್ತದೆ, ಅಲ್ಲಿಯವರೆಗೆ ಈ ರೋಗವು ಬಹುತೇಕ ಕೊನೆಗೊಳ್ಳುವ ಸ್ಥಿತಿ ಉಂಟಾಗುತ್ತದೆ.
ನಿಮ್ಮ ಜಾತಕದ ಶುಭ ಯೋಗವನ್ನು ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
ಒತ್ತಡದ ಮಧ್ಯೆ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ
ಈ ಸಂದರ್ಭದಲ್ಲಿ ಭಾರತವು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸೆಳೆಯುವುದನ್ನು ಮುಂದುವರಿಸುತ್ತದೆ. ಒಂದೆಡೆ ಚೀನ್ ತನ್ನ ವತರಣೆಗಳನ್ನು ತಡೆಯುವುದಿಲ್ಲ, ಪಾಕಿಸ್ತಾನ ಮತ್ತು ಇತರ ಸಣ್ಣ ದೇಶಗಳ ಮೇಲೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಮತ್ತು ಭಾರತದ ವಿರುದ್ಧ ನಿಲ್ಲುವಂತೆ ಮಾಡಲು ಪ್ರಯತ್ನಿಸುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಭಾರತವು ಅಕ್ಟೋಬರ್ ವರೆಗೆ ಪ್ರಮಾಣದಲ್ಲಿ ಉಳಿಯುತ್ತದೆ. ಮತ್ತು ಅಕ್ಟೋಬರ್ ಮಧ್ಯದ ವರೆಗೆ ಉತ್ತರ ನೀಡುತ್ತದೆ. ಅದರ ನಂತರ ಅಕ್ಟೋಬರ್ ರಿಂದ ನವೆಂಬರ್ ಮಧ್ಯೆ ಭಾರತದ ಚಿತ್ರ ಇನ್ನಷ್ಟು ಬಲವಾಗುತ್ತದೆ ಮತ್ತು ಕೆಲವು ದೊಡ್ಡ ರಾಷ್ಟ್ರಗಳ ಬೆಂಬಲವನ್ನು ಪಡೆಯುತ್ತದೆ. ಇದು ಭಾರತದ ಸಾರಭೌಮತ್ವ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಭಾರತದ ಮೇಲೆ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಗೆ ದೇಶವು ಸಂಪೂರ್ಣ ಉತ್ತರ ನೀಡುತ್ತದೆ ಮತ್ತು ಶನಿಯ ಈ ಅಂತರ್ದಶೆಯು ವಿಶ್ವದ ರಾಷ್ಟ್ರಗಳಲ್ಲಿ ಭಾರತಕ್ಕೆ ಉನ್ನತ ಸ್ಥಾನವನ್ನು ಒದಗಿಸುತ್ತದೆ.
ಭಾರತದ ರಾಜಕೀಯದಲ್ಲಿ ಮೈತ್ರಿಗಳು ಮತ್ತು ಸಂಘರ್ಷಗಳು
ಈ ಒಂದು ವರ್ಷದ ಅವಧಿಯಲ್ಲಿ ಯಾರೂ ಯೋಚಿಸದ ಕೆಲವು ಕೃತಿಗಳು ಇರುತ್ತವೆ ಮತ್ತು ಅವು ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತವೆ. ವಿಶೇಷವಾಗಿ ದೇಶದ ಸಂಚಾರ ವ್ಯವಸ್ಥೆ, ದೇಶದ ಸಾರಿಗೆ, ಸಾರ್ವಜನಿಕ ಸಾರಿಗೆ ಮತ್ತು ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳು ಸಿಗಲಿವೆ. ಆದರೆ ದೇಶದ ಕೊಳಕು ರಾಜನೀತಿ ಇನ್ನೂ ಇರುತ್ತದೆ ಮತ್ತು ಪರಸ್ಪರರ ವಿರುದ್ಧ ನಿಂದನೆಗಳ ದುರುಪಯೋಗ ಹೆಚ್ಚಾಗುತ್ತದೆ. ಅಕ್ಟೋಬರ್ ರಿಂದ ಸೆಪ್ಟೆಂಬರ್ ಮಧ್ಯೆ ದೇಶದ ಅನೇಕ ದೊಡ್ಡ ನಾಯಕರು ಯಾವುದೇ ದೊಡ್ಡ ರೋಗಗಗಿಗೆ ಬಲಿಯಾಗಬಹುದು. ಆಡಳಿತ ಪಕ್ಷದ ಕೆಲವು ಘಟಕಗಳ ನಡುವೆ ಸಂಘರ್ಷ ಉಂಟಾಗುತ್ತದೆ. ವಿರೋಧಿ ಪಕ್ಷಗಳ ಕೆಲವು ಪಕ್ಶಗಳು ಈ ಸಮಯದಲ್ಲಿ ಕಿತ್ತಾಡಬಹುದು. ಮುಂದಿನ ವರ್ಷ 2021 ಕೆಲವು ಹೊಸ ಸಮೀಕರಗಳೊಂದಿಗೆ ಕಾಣುತ್ತದೆ.
ಭಾರತೀಯ ಸಾರ್ವಜನಿಕ ಮತ್ತು ಸಮಸ್ಯೆಗಳು
ದೇಶದ ಹೊಸ ಶಿಕ್ಷಣ ನೀತಿ ಬಂದಿದೆ. ಅದನ್ನು ಕಾರ್ಯಗತಗೊಳಿಸಲು ಇನ್ನೂ ಕೆಲವು ಹೊಸ ಕಾನೂನುಗಳನ್ನು ತಯಾರಿಸಬಹುದು ಮತ್ತು ಮುಂಬರುವ ಸಮಯದಲ್ಲಿ ಸಾರ್ವಜನಿಕರನ್ನು ಮೆಚ್ಚಿಸಲು ಕೆಲವು ಹೊಸ ಯೋಜನೆಗಳನ್ನು ಘೋಷಿಸಬಹುದು. ಕೆಲವು ಪ್ರಮುಖ ಯೋಜನೆಗಳಲ್ಲಿ ಶಿಕ್ಷಣ ಮತ್ತು ಚಿಕಿತ್ಸೆಯ ಕ್ಷೇತ್ರವನ್ನು ಹೊರೆತುಪಡಿಸಿ ರಕ್ಷಣಾ ಮತ್ತು ಕೃಷಿಯ ಕ್ಷೇತ್ರದಲ್ಲಿ ಹೆಚ್ಚುವರಿ ಕೆಲಸ ಮಾಡಲಾಗುತ್ತದೆ. ಜನಸಂಖ್ಯೆ ಮತ್ತು ಪೌರತ್ವ ಸಮಸ್ಯೆಗಳು ಮತ್ತೆ ವೇಗವನ್ನು ಹಿಡಿಯಬಹುದು. ದೇಶದಲ್ಲಿ ಧಾರ್ಮಿಕವಾಗಿ ಸಂಪ್ರದಾಯಿಕತೆಯನ್ನು ಹರಡಿಸುವ ಜನರು ಹೆಚಾಗುತ್ತಾರೆ ಮತ್ತು ಕೆಲವು ಹೊಸ ಕಾನೂನುಗಳನ್ನು ರಚಿಸಲಾಗುತ್ತದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳ ಅನಿಯಂತ್ರಿತ ಮನೋಭಾವವನ್ನು ತಡೆಯುವ ಪ್ರಯತ್ನ ಮಾಡಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ದೊಡ್ಡದನ್ನು ಮಾಡಲು ಸಾಧ್ಯವಾಗುತ್ತದೆ. ಇದರಿಂದ ಇಡೀ ಜಗತ್ತಿನಲ್ಲಿ ಭಾರತದ ಸ್ಥಾನವು ಎಲ್ಲರಿಗಿಂತ ಮೇಲಿರುತ್ತದೆ. ದೇಶದ ಆರ್ಥಿಕತೆಯು ವೇಗವನ್ನು ಪಡೆಯಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಮತ್ತು 2020 ಅದರೊಂದಿಗೆ ಹಾದುಹೋಗುತ್ತದೆ. 2021 ರ ಬೆಳಿಗ್ಗೆ ಹೊಸ ಭರವಸೆಗಳೊಂದಿಗೆ ಭಾರತವು ಪ್ರಗತಿಯ ಹೊಸ ಕಥೆಯನ್ನು ಬರೆಯಲು ಪ್ರಾರಂಭಿಸುತ್ತದೆ ಮತ್ತು ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿಯ ಸೂಚಕವಾಗಲಿದೆ.
ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಕೋಗ್ನಿ ಆಸ್ಟ್ರೋ ರಿಪೋರ್ಟ್ ಅನ್ನು ಸುಲಭವಾಗಿ ಪಡೆಯಿರಿ.
ಹೀಗಾಗಿ, ನಮ್ಮ ದೇಶ ನಿಧಾನವಾಗಿ ಆದರೂ ಪ್ರಗತಿಯ ಹಾದಿಯನ್ನು ಹೊಂದುತ್ತದೆ ಎಂದು ಹೇಳಬಹುದು. ನಾವೆಲ್ಲರೂ ಭಾರತೀಯರು ದೇಶದ 74ನೇ ವಾರ್ಷಿಕೋತ್ಸವದಂದು, ನಾವು ನಮ್ಮ ದೇಶವನ್ನು ಒಂದು ಉತ್ತಮ ರಾಷ್ಟ್ರವನ್ನಾಗಿ ಮಾಡುತ್ತೇವೆ, ಉತ್ತಮ ಪ್ರಜೆಯಾಗುತ್ತೇವೆ, ದೇಶದಲ್ಲಿ ಸ್ವಚ್ಛತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ನೈಸರ್ಕಿಕ ಆಸ್ತಿಗಳಿಗೆ ಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡುತ್ತೇವೆ. ನಮ್ಮ ಭವಿಷ್ಯದ ಪೀಳಿಗೆಯ ಸುಧಾರಣೆಗಾಗಿ ದೇಶದಲ್ಲಿ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಲು ನಾವು ಸಹಕರಿಸುತ್ತೇವೆ ಮತ್ತು ದೇಶದಲ್ಲಿ ಮರ ನೆಡುವ ಕಾರ್ಯಕ್ರಮಗಳಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ. ಇದು ನಮ್ಮ ದೇಶದ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತದೆ.
ಜೈ ಹಿಂದ್ ! ಜೈ ಭಾರತ !!
ಆಸ್ಟ್ರೋಸೇಜ್ ಕಡೆಯಿಂದ ಎಲ್ಲಾ ಓದುಗರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು !
ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Horoscope 2023
- राशिफल 2023
- Calendar 2023
- Holidays 2023
- Chinese Horoscope 2023
- Education Horoscope 2023
- Purnima 2023
- Amavasya 2023
- Shubh Muhurat 2023
- Marriage Muhurat 2023
- Chinese Calendar 2023
- Bank Holidays 2023
- राशि भविष्य 2023 - Rashi Bhavishya 2023 Marathi
- ராசி பலன் 2023 - Rasi Palan 2023 Tamil
- వార్షిక రాశి ఫలాలు 2023 - Rasi Phalalu 2023 Telugu
- રાશિફળ 2023 - Rashifad 2023
- ജാതകം 2023 - Jathakam 2023 Malayalam
- ৰাশিফল 2023 - Rashifal 2023 Assamese
- ରାଶିଫଳ 2023 - Rashiphala 2023 Odia
- রাশিফল 2023 - Rashifol 2023 Bengali
- ವಾರ್ಷಿಕ ರಾಶಿ ಭವಿಷ್ಯ 2023 - Rashi Bhavishya 2023 Kannada