ಗುರು ಸಾಗಣೆ ೨೦೨೦

ಗುರು ಸಾಗಣೆ ೨೦೨೦ ವೈದಿಕ ಜ್ಯೋತಿಷ್ಯದ ಪ್ರಕಾರ ಗುರು ಗ್ರಹವು ದೇವರುಗಳ ಅಧಿಪತಿ ಗ್ರಹ. ಗುರು ಗ್ರಹವು ಮೀನಾ ಮತ್ತು ಧನು ರಾಶಿಚಕ್ರದ ಮಾಲೀಕ. ಗುರು ಕರ್ಕದಲ್ಲಿ ಬಲವಾಗಿ ಮತ್ತು ಮಕರ ರಾಶಿಚಕ್ರದಲ್ಲಿ ದುರ್ಬಲವಾಗಿ ಇರುತ್ತಾನೆ. ಇದು ಆಕಾಶ ಅಂಶದ ಗ್ರಹ. ಜ್ಯೋತಿಷ್ಯದ ಪ್ರಕಾರ ಗುರುವು ಶುಭವಾಗಿದ್ದರೆ ಜಾತಕನು ವಕೀಲ, ಹಣ ತಯಾರಕ, ಸಂಪಾದಕ, ಗುರು, ನ್ಯಾಯಾಧೀಶ, ಆಯುರ್ವೇದ ಆಚಾರ್ಯ, ಶಿಕ್ಷಕ ಮತ್ತು ಬ್ಯಾಂಕ್ ವ್ಯವಸ್ಥಾಪಕರನ್ನಾಗಿ ಮಾಡುತ್ತದೆ. ಗುರು ಗ್ರಹವು ವಿವಾಹಿತ ಜೀವನ ಮತ್ತು ಮಕ್ಕಳ ಅಂಶವಾಗಿದೆ. ಗುರುವು ಶುಭವಾಗಿದ್ದರೆ ತುಂಬಾ ಒಳ್ಳೆಯ ಜೀವನ ಸಂಗತಿ ದೊರೆಯುತ್ತಾರೆ ಮತ್ತು ವೈವಾಹಿಕ ಸಂತೋಷವು ಪಡೆಯುತ್ತಾರೆ. ಸಂತಾನದಿಂದ ಅದೃಷ್ಟ ಪಡೆಯುತ್ತಾರೆ. ಗುರು ಉನ್ನತ ಶಿಕ್ಷಣವನ್ನು ನೆಡುತ್ತಾನೆ ಮತ್ತು ಮತ್ತು ಶುಭ ಗುರು ಮಾತ್ರ ಉತ್ತಮ ಜ್ಯೋತಿಷ್ಯವನ್ನು ಮಾಡುತ್ತಾರೆ. ಗುರು ಮೆದುಳಿನ ಮೇಲೆ ಆಳವಾದ ಪ್ರಭಾವ ಬೀರುತ್ತಾನೆ ಅದಕ್ಕಾಗಿಯೇ ಗುರುವನ್ನು ಜ್ಞಾನದ ಅಂಶವೆಂದು ಹೇಳಲಾಗುತ್ತದೆ.

ಗುರು 29 ಮಾರ್ಚ್ 2020 ವರೆಗೂ ತನ್ನ ಸ್ವತಃ ರಾಶಿ ಮಕರ ರಾಶಿಚಕ್ರದಲ್ಲಿ ಸಾಗಾಣಿಸುತ್ತಾನೆ ಮತ್ತು ಅದರ ನಂತರ 30 ಮಾರ್ಚ್ 2020 ರಿಂದ ಶನಿಯ ರಾಶಿ ಮಕಾರದಲ್ಲಿ ಮತ್ತೆ ಸಾಗಾಣಿಸುತ್ತಾನೆ ಮತ್ತು 30 ಜೂನ್ 2020 ಗೆ ಮತ್ತೆ ಧನು ರಾಶಿಚಕ್ರದಲ್ಲಿ ಹಿಂತಿರುಗುತ್ತಾನೆ, ಅಲ್ಲಿ 20 ನವೆಂಬರ್ 2020 ವರೆಗೂ ಸಾಗಣಿಸುತ್ತಾನೆ. 20 ನವೆಂಬರ್ 2020 ಗೆ ಗುರುವು ಪುನಃ ಮಕರ ರಾಶಿಯೊಳಗೆ ಸಾಗಾಣಿಸುತ್ತಾನೆ. 2020 ವರ್ಷದ ಕೊನೆಯ ವರೆಗೂ ಗುರುವಿನ ಗೋಚರ ಮಕರ ರಾಶಿಚಕ್ರದಲ್ಲೇ ಇರುತ್ತದೆ . ಬನ್ನಿ, ನಮ್ಮ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗುರುವಿನ ಬದಲಾಯಿಸುವ ಶುಭಕಾರಿ ಪರಿಣಾಮ ಏನು ಎಂಬುದನ್ನು ತಿಳಿಯೋಣ.

ಮೇಷ ರಾಶಿ / Aries

ಗುರುವು ಮಕರ ರಾಶಿಚಕ್ರದ ಒಂಬತ್ತನೇ ಮತ್ತು ಹನ್ನೆರಡನೇ ಮನೆಗಳ ಮಾಲೀಕನಾಗಿ ವರ್ಷದ ಆರಂಭದಲ್ಲಿ ಒಂಬತ್ತನೇ ಮನೆಗೆ ಸಾಗಾಣಿಸುತ್ತಾನೆ. ಈ ಸಾಗಣೆಯ ಪರಿಣಾಮದಿಂದಾಗಿ ನಿಮಗೆ ಗುರುವಿನ ಸಂಪೂರ್ಣ ಆಶೀರ್ವಾದ ಸಿಗುತ್ತಿದೆ. ಇದರಿಂದ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಾನಸಿಕವಾಗಿ ವಿಶ್ರಾಂತಿಯನ್ನು ಅನುಭವಿಸುವಿರಿ. ಮಾರ್ಚ್ ತಿಂಗಳ ಕೊನೆಯಲ್ಲಿ ಗುರುವಿನ ಸಾಗಣೆ ವ್ಯವಹಾರದ ಮನೆಯಲ್ಲಿ ಇರುವುದರಿಂದ ಹೊಸ ವ್ಯವಹಾರದ ಅವಕಾಶಗಳು ದೊರೆಯುತ್ತವೆ ಮತ್ತು ಮೊದಲಿನಿಂದಲೇ ನಡೆಯುತ್ತಿರುವ ವ್ಯವಹಾರದಲ್ಲಿ ಪ್ರಗತಿ ಪಡೆಯಲಿದೆ. ವರ್ಷದ ಮಧ್ಯದಲ್ಲಿ ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಯೋಜನವಾಗಲಿದೆ ಮತ್ತು ಹೂಡಿಕೆ ಮಾಡಿದರು ಪ್ರಯೋಜನವಾಗಲಿದೆ. ಹೊಸ ಮನೆಯ ಕನಸು ಸಹ ನಿಜವಾಗಲಿದೆ. ಯಾರೋ ಪಾಲುದಾರನ ನಿಮ್ಮ ಜೀವನದಲ್ಲಿ ಬರುವುದರಿಂದ ನಿಮ್ಮ ಒಂಟಿತನ ದೂರವಾಗುತ್ತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷದ ಹೆಚ್ಚಳವಾಗುತ್ತದೆ. ಗುರುವಿನ ಈ ಸಾಗಣೆಯಲ್ಲಿ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಧಾರ್ಮಿಕ ಪ್ರವಾಸಗಳ ಯೋಗದ ಸಾಧ್ಯತೆ ಇದೆ. ಶಿಕ್ಷಣದ ಕ್ಷೇತ್ರದಲ್ಲಿ ಈ ಗುರು ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ.ನಿಮ್ಮ ಪರಿಶ್ರಮ ಯಶಸ್ಸಾಗುತ್ತದೆ. ವರ್ಷದ ಕೊನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದರಿಂದ ಹಣವೂ ಉಳಿತಾಯವಾಗುತ್ತದೆ.

ಗುರು ಸಂಚಾರದ ಪರಿಹಾರ: ನೀವು ಪ್ರತಿದಿನ ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಸಿ ಮತ್ತು ಬಾಳೆ ಗಿಡವನ್ನು ಪೂಜಿಸಿ.

ವೃಷಭ ರಾಶಿ / Taurus

ವೃಷಭ ರಾಶಿಚಕ್ರದಲ್ಲಿ ಗುರುವು ಎಂಟನೇ ಮತ್ತು ಹನ್ನೊಂದನೇ ಮನೆಗಳ ಮಾಲೀಕ ಮತ್ತು ವರ್ಷದ ಪ್ರಾರಂಭದಲ್ಲಿ ನಿಮ್ಮ ರಾಶಿಚಕ್ರದಿಂದ ಗುರುವಿನ ಸಾಗಣೆ ಎಂಟನೇ ಮನೆಯಲ್ಲಿರುತ್ತದೆ. ಕಳೆದ ವರ್ಷದಲ್ಲಿ, ನೀವು ಕೆಲವು ಆಳವಾದ ಸಂಶೋಧನೆಗಳನ್ನು ಹುಡುಕುತ್ತಿದ್ದೀರಿ. ಈ ವರ್ಷ 2020 ರಲ್ಲಿ ನೀವು ಯಶಸ್ಸಿನ ಪರಿಣಾಮಗಳನ್ನು ಪಡೆಯುತ್ತೀರಿ. ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸತ್ತಿದ್ದರೆ , ಹಠಾತ್ ನಿಮ್ಮ ಎಲ್ಲಾ ಅಡಚಣೆಗಳು ಕೊನೆಗೊಂಡು ಈ ವರ್ಷ ನಿಮ್ಮ ಕನಸು ಪೂರ್ಣಗೊಳ್ಳುತ್ತದೆ.ತಂದೆಗೆ ಪೂರ್ವಜರ ಆಸ್ತಿಯ ಲಾಭ ಸಿಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಯೋಗವಿದೆ. ನಿಮ್ಮ ಹೊಟ್ಟೆ ಮತ್ತು ಯಕೃತ್ತನ್ನು ನೋಡಿಕೊಳ್ಳಿ..ಆಹಾರ ಮತ್ತು ಕುಡಿಯುವುದರ ನಿರ್ಲಕ್ಷ್ಯವು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ವರ್ಷದ ಮಧ್ಯದಲ್ಲಿ ಧಾರ್ಮಿಕ ಪ್ರವಾಸಗಳ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ವ್ಯವಹಾರಕ್ಕೆ ಸಮಯ ಉತ್ತಮವಾಗಿದೆ. ಹೊಸ ಯೋಜನೆಯನ್ನು ಸಮಯಕ್ಕೆ ಪೂರ್ಣಗೊಳಿಸಿ ಇದರಿಂದ ನೀವು ಲಾಭದೊಂದಿಗೆ ಕೆಲಸದಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ. ವರ್ಷದ ಕೊನೆಯ ತಿಂಗಳಲ್ಲಿ ಹಣದ ಬಗ್ಗೆ ಜಾಗರೂಕರಾಗಿರಿ. ಹಣಕ್ಕೆ ಸಂಬಂಧಿಸಿದ ಯಾವುದೇ ಹಠಾತ್ ಹೂಡಿಕೆಯನ್ನುಮಾಡಬೇಡಿ. ಇಲ್ಲದಿದ್ದರೆನಿಮಗೆ ಹಾನಿಯಾಗಬಹುದು. ಕುಟುಂಬದ ಸದಸ್ಯರೊಂದಿಗೆ ಬಿರುಕು ಉಂಟಾಗಬಹುದು. ಈ ವಿವಾದದಿಂದ ಮಾನಸಿಕ ಒತ್ತಡವು ಉಳಿದಿರುತ್ತದೆ.

ಗುರು ಸಂಚಾರದ ಪರಿಹಾರ: ಈ ವರ್ಷ ಗುರುವಾರದಂದು ನೀವು ವಿದ್ಯಾರ್ಥಿಗಳಿಗೆ ಸ್ಟೇಷನರಿಯನ್ನು ವಿತರಿಸಬೇಕು ಮತ್ತು ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು.

ಮಿಥುನ ರಾಶಿ / Gemini

ಮಿಥುನ ರಾಶಿಚಕ್ರದಲ್ಲಿ ಗುರುವು ಏಳನೇ ಮತ್ತು ಹತ್ತನೇ ಮನೆಗಳ ಮಾಲೀಕ ಮತ್ತು ಏಳನೇ ಮನೆಯಲ್ಲಿ ಸಾಗಾಣಿಸುವುದರಿಂದ ನಿಮ್ಮ ರಾಶಿಚಕ್ರದ ಮೇಲೆ ಸಂಪೂರ್ಣವಾಗಿ ಶುಭ ಪರಿಣಾಮ ಇರುತ್ತದೆ. ನಿಮ್ಮ ಆರೋಗ್ಯ ಉತ್ತಮ ಮತ್ತು ಆರೋಗ್ಯಕರವಾಗಿರುತ್ತದೆ. ಯಾವುದೇ ಹಳೆಯ ಕೆಲಸವನ್ನು ನಿಲ್ಲಿಸಿದ್ದರೆ ಅದು ಈ ವರ್ಷ ಪೂರ್ಣಗೊಳ್ಳುತ್ತದೆ. ವ್ಯವವಹಾರಗಳಿಗೆ ಈ ಸಾಗಣೆ ಉತ್ತಮ ಫಲಿತಾಂಶಗಳನ್ನು ತರುತ್ತದೆ ಮತ್ತು ಲಾಭದೊಂದಿಗೆ ಆರ್ಥಿಕ ಪರಿಸ್ಥಿತಿಯಲ್ಲೂ ಸಹ ಹೆಚ್ಚಳವಾಗುತ್ತದೆ. ಹೊಸ ಉದ್ಯೋಗ ಮತ್ತು ಪದೋನ್ನತಿಗಾಗಿ ಈ ವರ್ಷ ಉತ್ತಮವಾಗಿರುತ್ತದೆ.ಇದ್ದಕ್ಕಿದ್ದಂತೆ ಮಹಿಳಾ ಸ್ನೇಹಿತಳ ಸಹಾಯದಿಂದ, ಹಣದ ಜೊತೆಗೆ ಹೊಸ ಕೆಲಸದ ಬಗ್ಗೆ ಆಸಕ್ತಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಆದರೆ 14 ಮೇ 2020 ರಿಂದ ಗುರುವಿನ ವಕ್ರತೆಯಿಂದಾಗಿ ವೈವಾಹಿಕ ಜೀವನದಲ್ಲಿ ಹಳೆಯ ಹುಳಿ ಮತ್ತೆ ವಿಷವನ್ನು ಕಲಿಸುತ್ತದೆ. ಸೆಪ್ಟೆಂಬರ್ ರಿಂದ ಪರಿಸ್ಥಿತಿಗಳು ಸುಧಾರಿಸುತ್ತವೆ. ವರ್ಷದ ಮಧ್ಯದಲ್ಲಿ ಯಾವುದೇ ರಹಸ್ಯ ಸಂಶೋಧನೆಯಲ್ಲಿ ಆಸಕ್ತಿ ವಹಿಸುವಿರಿ ಮತ್ತು ನೀವು ಅದರಲ್ಲಿ ನಿಮ್ಮ ಸಮಯವನ್ನು ಕಳೆಯುವಿರಿ. ಶಿಕ್ಷಣದ ಕ್ಷೇತ್ರದಲ್ಲಿ ತುಂಬಾ ಜಾಗರೂಕತೆಯ ಅಗತ್ಯವಿದೆ. ಇದ್ದಕ್ಕಿದ್ದಂತೆ ನೀವು ವಿಷಯವನ್ನು ಸಹ ಬದಲಾಯಿಸಬಹುದು. ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ, ಆದರೆ ಹಠಾತ್ ಅಪಘಾತದ ಸಂಕೇತಗಳು ಸಹ ಕಾಣುವುದರಿಂದ ಬಹಳ ಜಾಗರೂಕರಾಗಿರಿ.

ಗುರು ಸಂಚಾರದ ಪರಿಹಾರ: ನೀವು ಶಿವ ಸಹಸ್ತ್ರನಾಮ ಸ್ತ್ರೋತವನ್ನು ಪಠಿಸಬೇಕು ಮತ್ತು ಗುರುವಾರದಂದು ಉಪವಾಸವನ್ನು ಅನುಸರಿಸಬೇಕು.

ಕರ್ಕ ರಾಶಿ / Cancer

ಗುರು ಗ್ರಹವು ಕರ್ಕ ರಾಶಿಚಕ್ರದ ಆರನೇ ಮತ್ತು ಒಂಬತ್ತನೇ ಮನೆಗಳ ಸ್ವಾಮಿ ಮತ್ತು ವರ್ಷದ ಆರಂಭದಲ್ಲಿ ಕರ್ಕ ರಾಶಿಚಕ್ರದಿಂದ ಆರನೇ ಮನೆಗೆ ಸಾಗಾಣಿಸುತ್ತಾನೆ. ಈ ಸಾಗಣೆಯು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ ಆದರೆ ಹೊಟ್ಟೆಯ ಹೊಸ ಸಮಸ್ಯೆಯನ್ನು ರಚಿಸಬಹುದು. ತಿನ್ನುವ ಮತ್ತು ಕುಡಿಯುವಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಯಾವುದಾದರು ಸಾಲದ ಬಗ್ಗೆ ಇದುವರೆಗೂ ಚಿಂತೆ ಮಾಡುತಿದ್ದರೆ, ಅದರಿಂದ ಸಹ ಸಮಾಧಾನಕರವಾಗಿರುತ್ತದೆ. ವ್ಯವಹಾರದಲ್ಲಿ ಹೂಡಿಕೆ ಮಾಡವ ಬಗ್ಗೆ ಯೋಚಿಸುತ್ತಿದ್ದರೆ, ಈ ಗುರುವು ನಿಮಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ. ಕುಟುಂಬದಲ್ಲಿ ಯಾರೊಂದಿಗಾದರೂ ವಿವಾದದ ಕಾರಣದಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇಲ್ಲಿಯವರೆಗೆ, ನೀವು ನ್ಯಾಯಾಲಯದಲ್ಲಿ ಯಾವುದಾದರೂ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಅಲ್ಲಿಂದ ಸ್ವಲ್ಪ ಹಣವನ್ನು ಖರ್ಚು ಮಾಡಲು ಪ್ರಯತ್ನಿಸಿ ಮತ್ತು ಪರಸ್ಪರ ಒಪ್ಪಂದವನ್ನು ಸ್ಥಾಪಿಸಲು ಪ್ರಯತ್ನಿಸಿ.. ವರ್ಷದ ಮಧ್ಯದಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳು ಉಂಟಾಗಬಹುದು. ಜೀವನ ಸಂಗಾತಿಯೊಂದಿಗೆ ನಿಮ್ಮ ಜಗಳವಾಗಬಹುದು. ನೀವು ಅವಿವಾಹಿತರಾಗಿದ್ದರೆ, ವರ್ಷದ ಕೊನೆಯಲ್ಲಿ ಈ ಗುರುವು ನಿಮ್ಮ ಅಪೇಕ್ಷಿತ ಸಂಗಾತಿಯನ್ನು ನಿಮಗೆ ಪರಿಚಯಿಸಿದ ನಂತರ, ನಿಮಗೆ ಮದುವೆಯಾಗುತ್ತದೆ.

ಗುರು ಸಂಚಾರದ ಪರಿಹಾರ: ಪ್ರತಿಯೊಂದು ಗುರುವಾರದಂದು ನಿಯಮಿತವತಿ ಉಪವಾಸವಿಡಿ ಮತ್ತು ಐದು ಮುಖ ರುದ್ರಾಕ್ಷ ವನ್ನು ಹಳದಿ ಬಣದ ದಾರದಲ್ಲಿ ಹಾಕಿ ನಿಮ್ಮ ಕುತ್ತಿಗೆಯಲ್ಲಿ ಧರಿಸಿ.

ಸಿಂಹ ರಾಶಿ / Leo

ಗುರು ಗ್ರಹ ಸಿಂಹ ರಾಶಿಚಕ್ರದ ಐದನೇ ಮತ್ತು ಎಂಟನೇ ಮನೆಗಳ ಮಾಲೀಕ ಮತ್ತು ವರ್ಷದ ಆರಂಭದಲ್ಲಿ ಐದನೇ ಮನೆಯಲ್ಲೇ ಸಾಗಾಣಿಸುತ್ತಾನೆ. ಈ ಸಮಯ ಶಿಕ್ಷಣಕ್ಕಾಗಿ ನೀವು ಕಠಿಣ ಪರಿಶ್ರಮ ಮಾಡಿದರೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮಗೆ ಮೆಚ್ಚಿದ ಫಲಿತಾಂಶಗಳನ್ನು ಪಡೆಯಬಹುದು ಮತ್ತು ವಿಷಯದ ಆಯ್ಕೆಯಲ್ಲಿ ಹಿರಿಯರ ಬೆಂಬಲ ಪಡೆಯುತ್ತೀರಿ. ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಬಯಸುತ್ತಿದ್ದರೆ, ನಿಮ್ಮ ಈ ಕನಸು ಸಹ ನಿಜವಾಗಬಹುದು ಮತ್ತು ಪೋಷಕರಿಂದ ಹಣದ ಸಂಪೂರ್ಣ ಸಹಾಯವನ್ನು ಪಡೆಯುತ್ತೀರಿ. ವರ್ಷದ ಮಧ್ಯದಲ್ಲಿ ಉದ್ಯೋಗದ ಬದಲಾವಣೆ ಮಾಡಬೇಡಿ. ಇಲ್ಲದಿದ್ದರೆ ಈಗ ನೀವು ಮಾಡುತ್ತಿರುವ ಉದ್ಯೋಗದಿಂದಲೂ ಕೈ ತೊಳೆಯಬೇಕಾಗುತ್ತದೆ. ನಿಮಗೆ ಯಾರಾದರೂ ವಿರೋಧಿಗಳಿದ್ದರೆ ಈ ಸಮಯದಲ್ಲಿ ಅವರಿಂದ ಜಾಗರೋಕರಾಗಿರಿ. ಯಾವುದೊ ಹಳೆಯ ಜಗಳದ ಕಾರಣದಿಂದಾಗಿ ಮಾನಸಿಕ ಒತ್ತಡ ಉಂಟಾಗಬಹುದು.ಜೀವನ ಸಂಗಾತಿಯೊಂದಿಗಿನ ವಿವಾದಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಇದರೊಂದಿಗೆ ಜೀವನ ಸಂಗಾತಿಯೊಂದಿಗೆ ಧಾರ್ಮಿಕ ಪ್ರವಾಸಕ್ಕೂ ಹೋಗುವ ಯೋಗವಿದೆ. ಸಾಲದ ವಹಿವಾಟಿನಲ್ಲಿ ಜಾಗರೂಕರಾಗಿರಿ.

ಗುರು ಸಂಚಾರದ ಪರಿಹಾರ: ನೀವು ನಿಯಮಿತವಾಗಿ ಭಗವಂತ ಶಿವನನ್ನು ಆರಾಧಿಸಿ ಮತ್ತು ಅವರಿಗೆ ಗೋಧಿಯನ್ನು ಅರ್ಪಿಸಿ ಮತ್ತು ಗುರುವಾರದಂದು ಬ್ರಾಹ್ಮಣರಿಗೆ ಭೋಜನವನ್ನು ನೀಡಿ.

ಕನ್ಯಾ ರಾಶಿ / Virgo

ಗುರು ಗ್ರಹ ಕನ್ಯಾ ರಾಶಿಚಕ್ರದ ನಾಲ್ಕನೇ ಮತ್ತು ಏಳನೇ ಮನೆಗಳ ಮಾಲೀಕ ಮತ್ತು ವರ್ಷದ ಆರಂಭದಲ್ಲಿ ನಾಲ್ಕನೇ ಮನೆಗೆ ಸಾಗಾಣಿಸುತ್ತದೆ. ವ್ಯವಹಾರಕ್ಕೆ ಸಮಯ ಉತ್ತಮವಾಗಿದೆ. ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿರುತ್ತದೆ ಮತ್ತು ಪಾಲುದಾರರೊಂದಿಗೆ ವೇಗವನ್ನು ಇಟ್ಟುಕೊಳ್ಳುವುದರಿಂದ ಇದು ಪ್ರಯೋಜನ ಪಡೆಯುತ್ತದೆ. ಮನಸ್ಸಿಗೆ ಮೆಚ್ಚಿದ ಸಿಗಬಹುದು ಮತ್ತು ನಿಮ್ಮ ಕಠಿಣ ಪರಿಶ್ರಮದ ಅನುಗುಣವಾಗಿ ನೀವು ಬಡ್ತಿ ಪಡೆಯಬಹುದು. ಭೂಮಿಗೆ ಸಂಬಂಧಿಸಿದ ಹೂಡಿಕೆ ಮಾಡಲು ಬಯಸುತ್ತಿದ್ದರೆ ಪ್ರಯಾಯೋಜನವನ್ನು ಪಡೆಯುವಿರಿ. ನೀವು ನಿಮ್ಮ ಹೊಸ ಮನೆಯನ್ನು ಖರೀದಿಸುವ ನಿಮ್ಮ ಕನಸನ್ನು ಸಹ ಈ ಸಾಗಣೆ ಈಡೇರಿಸುತ್ತದೆ.ವಾಹನದ ಮೇಲು ಸಹ ಖರ್ಚು ಮಾಡಬಹುದು. ಯಾರೊಂದಿಗಾದರೂ ಇವಾದ ನಡಿಯುತ್ತಿದ್ದರೆ, ಅಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರ ಬದಲಾಗಿ, ನೀವು ವೇಗವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ. ಹಳೆಯ ಶೋಚನೀಯ ಸಂಗಾತಿ ನಿಮ್ಮ ಜೀವನದಲ್ಲಿ ಮರಳಿ ಬರಬಹುದು, ಅದು ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಮರಳಿ ತರುತ್ತದೆ. ವರ್ಷದ ಕೊನೆಯಲ್ಲಿ ಇಷ್ಟಪಟ್ಟಿದ ಸಂಗಾತಿಯೊಂದಿಗೆ ಮದುವೆಯಾಗಬಹುದು. ಯಾವುದಾದರು ಕೆಲಸಕ್ಕಾಗಿ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಈ ಸಮಯ ಉತ್ತಮ. ವರ್ಷದ ಕೊನೆಯಲ್ಲಿ ಮಕ್ಕಳ ಸಂತೋಷವನ್ನು ಪಡೆಯಬಹುದು.

ಗುರು ಸಂಚಾರದ ಪರಿಹಾರ: ನೀವು ಗುರುವಾರದಂದು ನಿಮ್ಮ ಕುತ್ತಿಗೆಯಲ್ಲಿ ಚಿನ್ನದ ಚೈನ್ ಹಾಕಿಕೊಳ್ಳಬೇಕು ಮಾತು ಕಡ್ಲೆ ಹಿಟ್ಟನ ಅಲ್ವ ತಯಾರಿಸಿ ಭಗವಂತ ವಿಷ್ಣುವಿಗೆ ಅರ್ಪಿಸಬೇಕು. ಮತ್ತು ಅದರ ನಂತರ ಅದನ್ನು ಪ್ರಸಾದವಾಗಿ ಜನರಲ್ಲಿ ವಿತರಿಸಿ ನೀವು ಸಹ ತಿನ್ನಬೇಕು.

ತುಲಾ ರಾಶಿ / Libra

ಗುರು ರಾಶಿ ನಿಮ್ಮ ರಾಶಿಚಕ್ರದ ಮೂರನೇ ಮತ್ತು ಎಂಟನೇ ಮನೆಗಳ ಸ್ವಾಮಿ ಮತ್ತು ವರ್ಷದ ಆರಂಭದಲ್ಲಿತುಲಾ ರಾಶಿಚಕ್ರದಿಂದ ಮೂರನೇ ಮನೆಗೆ ಸಾಗಾಣಿಸುತ್ತದೆ. ಈ ಗುರು ನಿಮ್ಮ ವೈವಾಹಿಕ ಜೀವನದಲ್ಲಿ ಮಕರಂದವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಪಾಲುದಾರನಿಗೆ ಉತ್ತಮ ಸಾಧನೆಯನ್ನು ಸಹ ನೀಡುತ್ತದೆ. ನಿಮ್ಮ ಕೌಟುಂಬಿಕ ಸಂತೋಷ ಹೆಚ್ಚಾಗುತ್ತದೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೆ, ಈ ಸಾಗಣೆ ಹೆಚ್ಚಿನ ಪ್ರಯತ್ನಗಳನ್ನು ಮಾಡಿದಾಗ ಉನ್ನತ ಮಟ್ಟದಲ್ಲಿ ಆಡಲು ಸಹ ಕಳುಹಿಸಬಹುದು. ವ್ಯವಹಾರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿಧೈರ್ಯದಿಂದ ಕಾರ್ಯ ನಿರ್ವಹಿಸಿದರೆ ಉತ್ತಮ. ನಿಧಾನವಾಗಿ ತಾಳ್ಮೆಯಿಂದ ನಡೆಯಿರಿ, ಆಗ ಮಾತ್ರ ಪ್ರಗತಿಯ ದಾರಿ ತೆರೆಯುತ್ತದೆ. ವರ್ಷದ ಮಧ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದರಿಂದ, ಯಾವುದಾದರು ಭೌತಿಕ ವಸ್ತುಗಳನ್ನು ಖರೀದಿಸಬಹುದು. ಮಕ್ಕಳ ಬದಿಯಿಂದ ಯಾವುದೊ ವಿಷಯದಿಂದ ಕಷ್ಟವಾದ ಸಮಯವಾಗಿರುತ್ತದೆ.ಯಾವುದೇ ರೀತಿಯ ನಿರ್ಲಕ್ಷ್ಯವು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಸೆಪ್ಟೆಂಬರ್ ನಂತರ ಆಧ್ಯಾತ್ಮಿಕ ಕೆಲಸಗಳಲ್ಲಿ ಆಸಕ್ತಿ ಹೊಂದಿರುವಿರಿ ಮತ್ತು ಧಾರ್ಮಿಕ ಪವಾಸಗಳಲ್ಲೂ ಪ್ರವೃತ್ತಿ ಇರುತ್ತದೆ. ಕೆಲಸದ ಪ್ರದೇಶದಲ್ಲಿ ಪದೋನ್ನತಿಯ ಅವಕಾಶಗಳು ದೊರೆಯುತ್ತದೆ ಮತ್ತು ಪರಿಶ್ರಮದ ಅನುಗುಣವಾಗಿ ಪದೋನ್ನತಿ ದೊರೆಯುತ್ತದೆ. ಹಿರಿಯರೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳನ್ನು ತಪ್ಪಿಸುವುದು ಉತ್ತಮ.

ಗುರು ಸಂಚಾರದ ಪರಿಹಾರ: ಪ್ರತಿ ಗುರುವಾರದಂದು ನೀವು ನಿಯಮಿತವಾಗಿ ಯಾವುದೇ ದೇವಸ್ಥಾನದಲ್ಲಿ ಕಡ್ಲೆಯ ದಾನ ಮಾಡಬೇಕು ಮತ್ತು ಓದುತ್ತಿರುವ ಮಕ್ಕಳಿಗೆ ಅಧ್ಯಯನದ ವಸ್ತುಗಳ ದಾನ ಮಾಡಬೇಕು.

ವೃಶ್ಚಿಕ ರಾಶಿ / Scorpio

ಗುರುಗ್ರಹ ನಿಮ್ಮ ರಾಶಿಚಕ್ರದಿಂದ ಎರಡನೇ ಮತ್ತು ಐದನೇ ಮನೆಗಳ ಸ್ವಾಮಿ ಮತ್ತು ವರ್ಷದ ಆರಂಭದಲ್ಲಿ ರಾಶಿಚಕ್ರದಿಂದ ಎರಡನೇ ಮನೆಗೆ ಸಾಗಾಣಿಸುತ್ತದೆ. ಈ ಸಾಗಣೆ ಆರ್ಥಿಕ ಪರಿಸ್ಥಿತಿಗಳಿಗೆ ಉತ್ತಮವಾಗಲಿದೆ ಮತ್ತು ಹಣಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳು ನಡಯುತ್ತವೆ. ನಿಮ್ಮ ಧ್ವನಿ ಜ್ಞಾನದಿಂದ ತುಂಬಿರುತ್ತದೆ ಮತ್ತು ನಿಮ್ಮ ಸಲಹೆ ಜನರಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಆದರೆ ನೀವು ಸಮಯದಲ್ಲಿ ಪೂರ್ಣಗೊಳಿಸಲಾಗದ ಯಾವುದೇ ರೀತಿಯ ಭರವಸೆಯನ್ನು ನಿಮ್ಮ ಧ್ವನಿಯಿಂದ ಮಾಡಬೇಡಿ. ವ್ಯವಹಾರಕ್ಕೆ ಸಮಯ ಉತ್ತಮವಾಗಿದೆ. ಹೊಸ ವ್ಯವಹಾರಕ್ಕಾಗಿ ವರ್ಷದ ಮಧ್ಯದಲ್ಲಿ ಯೋಚಿಸಬೇಡಿ ಮತ್ತು ಹೊಸ ವ್ಯವಹಾರದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ. ವರ್ಷದ ಮಧ್ಯದಲ್ಲಿ ಹೊಸ ಯೋಜನೆಗೆ ಅವಕಾಶವೂ ಇರುತ್ತದೆ. ಸಮಯಕ್ಕೆ ಪೂರ್ಣಗೊಳಿಸುವ ಮೂಲಕ ಮೆಚ್ಚುಗೆಯೊಂದಿಗೆ ಮುಂದುವರಿಯಲು ನಿಮಗೆ ಅವಕಾಶ ಸಿಗುತ್ತದೆ. ಕುಟುಂಬದೊಂದಿಗೆ ಯಾವುದೇ ವ್ಯತ್ಯಾಸಗಳಿದ್ದರೆ, ನೀವು ಸ್ವಲ್ಪ ಸಮಯದವರೆಗೆ ದೂರವನ್ನು ಮಾಡಿದರೆ ಉತ್ತಮವಾಗಿರುತ್ತದೆ. ಗುರುವಿನ ನೇರವಾದ ನಂತರ ಎಲ್ಲವೂ ತಾನಾಗಿಯೇ ಸಾಮಾನ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಸಮಯ ಸಂತೋಷವಾಗಿ ಉಳಿಯುತ್ತದೆ ಮತ್ತು ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಮಕ್ಕಳ ಕಡೆಯಿಂದ ಯಾವುದಾದರು ಸಂತೋಷದ ಸುದ್ಧಿ ಬರುತ್ತದೆ, ಇದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣ ಇರುತ್ತದೆ.

ಗುರು ಸಂಚಾರದ ಪರಿಹಾರ: ನೀವು ಕಂದು ಬಣ್ಣದ ಹಸುವಿಗೆ ಹಿಟ್ಟಿನ ಹುಂಡೆಯಲ್ಲಿ ಬೆಲ್ಲವನ್ನು ತುಂಬಿಸಿ ಮತ್ತು ಹಳದಿಯ ತಿಲಕವನ್ನಿಟ್ಟು ತಿನ್ನಿಸಬೇಕು. ಮನೆಯ ಹಿರಿಯರನ್ನು ಗೌರವಿಸಬೇಕು.

ಧನು ರಾಶಿ / Sagittarius

ಗುರು ಗ್ರಹ ನಿಮ್ಮ ರಾಶಿಚಕ್ರ ಧನುವಿನ ಮಾಲೀಕ.ಇದರೊಂದಿಗೆ ನಿಮ್ಮ ರಾಶಿಚಕ್ರದಿಂದ ನಾಲ್ಕನೇ ಮನೆಯ ಕೂಡ ಸ್ವಾಮಿ. ಗುರುವಿನ ಸಾಗಣೆಯು ಸಹ ನಿಮ್ಮ ರಾಶಿಚಕ್ರ ಧನುವಿನಲ್ಲೇ ಆಗಲಿದೆ. ಈ ಸಮಯ ಜ್ಞಾನ, ಶಿಕ್ಷಣ, ಆಧ್ಯಾತ್ಮಿಕ ಮತ್ತು ಧರ್ಮದಲ್ಲಿ ಆಸಕ್ತಿ ಹೊಂದಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಮಯ ಉತ್ತಮವಾಗಿರುತ್ತದೆ ಮತ್ತು ಮಾರ್ಚ್ ತಿಂಗಳ ಕೊನೆಯಲ್ಲಿ ಈ ಗುರು ನಿಮ್ಮ ರಾಶಿಚಕ್ರದಿಂದ ಎರಡನೇ ಮನೆಗೆ ಸಾಗಾಣಿಸುತ್ತಾನೆ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ ಮತ್ತು ಮಾತು ಕೂಡ ಪರಿಣಾಮಕಾರಿಯಾಗಿ ಉಳಿಯುತ್ತದೆ. ಯಾವುದೇ ಸಂಶೋಧನೆ ಅಥವಾ ಶಿಕ್ಷಣವು ಇನ್ನೂ ಸ್ಥಗಿತಗೊಂಡಿದ್ದರೆ, ಈ ಸಾಗಣೆಯ ಸಮಯದಲ್ಲಿ, ಅದು ಸಹ ಸರಾಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ನೀವು ಇಷ್ಟಪಟ್ಟಿದ ಸಂಗಾತಿಯೊಂದಿಗೆ ನಿಮ್ಮ ಮದುವೆಯೂ ಆಗಬಹುದು . ಹೊಸ ಉದ್ಯೋಗಕ್ಕಾಗಿ ಸಮಯವೂ ಹೆಚ್ಚು ಉತ್ತಮವಾಗಿಲ್ಲ. ತುಂಬಾ ತಿಳುವಳಿಕೆಯಿಂದ ಯೋಚಿಸಿ ಹೆಜ್ಜೆಯನ್ನು ಹಾಕಿ. ಯಾರೊಬ್ಬರಿಂದ ಹಣವನ್ನು ತೆಗೆದುಕೊಳ್ಳಲು ಬಯಸಿದರೆ, ಸಮಯ ಉತ್ತಮವಾಗಿದೆ. ನೀವು ತುಂಬಾ ತಾಳ್ಮೆಯಿಂದ ಇರಬೇಕು, ಆಗ ಮಾತ್ರ ಹಣ ಹಿಂತಿರುಗುತ್ತದೆ. ಸಾಲದ ವಹಿವಾಟುಗಳಿಗಾಗಿ ಬಹಳ ಚಿಂತನಶೀಲ ಕ್ರಮಗಳನ್ನು ತೆಗೆದುಕೊಳ್ಳಿ.

ಗುರು ಸಂಚಾರದ ಪರಿಹಾರ: ಅನುಕೂಲಕರ ಫಲಿತಾಂಶವನ್ನು ಪಡೆಯಲು ನೀವು ವಿಶೇಷವಾಗಿ ನೀಲಮಣಿ ರತ್ನ ವನ್ನು ಧರಿಸಬೇಕು. ಈ ರತ್ನವನ್ನು ಚಿನ್ನದ ಉಂಗುರದಲ್ಲಿ ಮಾಡಿಸಿ ಗುರುವಾರದಂದು ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ನಿಮ್ಮ ತೋರು ಬೆರಳಲಿನಲ್ಲಿ ಧರಿಸಬಹುದು.

ಮಕರ ರಾಶಿ / Capricorn

ಗುರು ಗ್ರಹ ನಿಮ್ಮ ರಾಶಿಚಕ್ರದಿಂದ ಹನ್ನೆರಡನೇ ಮತ್ತು ಮೂರನೇ ಮನೆಗಳ ಮಾಲೀಕನಾಗಿ ವರ್ಷದ ಆರಂಭದಲ್ಲಿ ಮಕರ ರಾಶಿಚಕ್ರದಿಂದ ಹನ್ನೆರಡನೇ ಮನೆಗೆ ಸಾಗಣಿಸುತ್ತಾನೆ. ಈ ಸಾಗಣೆ ವಿದೇಶ ಪ್ರವಾಸದಿಂದ ಲಾಭದ ಯೋಗವನ್ನುಂಟು ಮಾಡುತ್ತಿದೆ. ಧಾರ್ಮಿಕ ಪ್ರಯಾಣಗಳ ಮೇಲು ಸಹ ಎಸ್ಕೆಟಿ ಹೆಚ್ಚಾಗುತ್ತದೆ. ಈ ಸಾಗಣೆಯ ಸಮಯದಲ್ಲಿ ನಿಮ್ಮ ಜೀವನದಲ್ಲಿ ಒಬ್ಬ ಹೊಸ ಸಂಗಾತಿ ಬರುತ್ತಾರೆ, ಅವರು ಭಾವನಾತ್ಮಕಾಗಿ ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತರೆ. ಮಾರ್ಚ್ ತಿಂಗಳ ಕೊನೆಯಲ್ಲಿ ಗುರುವಿನ ಸಾಗಣೆ ನಿಮ್ಮ ರಾಶಿಚಕ್ರದಲ್ಲೇ ಇರುವುದರಿಂದನಿಮ್ಮ ಆಸಕ್ತಿ ಜ್ಞಾನ ಮತ್ತು ಶಿಕ್ಷಣಕ್ಕೆ ಸೇರಿದ ಕೆಲಸಗಳಲ್ಲಿ ಇರುತ್ತದೆ. ಇದರಿಂದಾಗಿ ನೀವು ಹೊಸ ಗುರುತನ್ನು ಹೊಂದಿದ್ದೀರಿ, ನಿಮಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಹೊಸ ವ್ಯವಸಾಯಕ್ಕಾಗಿ ವರ್ಷದ ಮಧ್ಯದ ಸಮಯವೂ ಉತ್ತಮವಾಗಿಲ್ಲ. ಯಾವುದೇ ರೀತಿಯ ಹೂಡಿಕೆಯ ಬಗ್ಗೆ ಯೋಚಿಸಬೇಡಿ ಮತ್ತು ಪಾಲುದಾರರೊಂದಿಗೆ ವಿವಾದವಾಗುವುದರಿಂದ ಕೆಲಸದಲ್ಲಿ ಅಡಚಣೆಗಳನ್ನು ಎದುರಿಸಬೇಕಾಗಬಹುದು. ಗುರುವಿನ ವಕ್ರತೆಯಿಂದಾಗಿ ವೈವಾಹಿಕ ಜೀವನದಲ್ಲೂ ಉದ್ವಿಘ್ನತೆ ಉಂಟಾಗಬಹುದು. ನೀವು ತುಂಬಾ ತಾಳ್ಮೆಯಿಂದ ನಿಮ್ಮ ವೈವಾಹಿಕ ಜೀವನದ ಬಗ್ಗೆ ಗಮನ ಹರಿಸಬೇಕು. ವರ್ಷದ ಕೊನೆಯಲ್ಲಿ ಹಳೆಯ ಸ್ನೇಹಿತನ ಬಗ್ಗೆ ಎಚ್ಚರದಿಂದಿರಿ. ಹಣದ ವಹಿವಾಟುಗಳಿಂದ ವಿವಾದಗಳು ಉಂಟಾಗಬಹುದು. ಇದು ಹಳೆಯ ಸ್ನೇಹವನ್ನು ಸಹ ಕೊನೆಗೊಳಿಸಬಹುದು.

ಗುರು ಸಂಚಾರದ ಪರಿಹಾರ: ನೀವು ದೇವ ಗುರುವಿನ ಅನುಗ್ರಹವನ್ನು ಪಡೆಯುವುದಕ್ಕೆ ಅರಳಿ ಮರದ ಮೂಲವನ್ನು ಧರಿಸಬೇಕು. ಈ ಮೂಲವನ್ನು ನೀವು ಹಳದಿ ಬಣ್ಣದ ಬಟ್ಟೆ ಅಥವಾ ದಾರದಲ್ಲಿ ಹೊಲಿದು ತೋಳು ಅಥವಾ ಕುತ್ತಿಗೆಯಲ್ಲಿ ಧರಿಸಬಹುದು.

ಕುಂಭ ರಾಶಿ / Aquarius

ಗುರು ನಿಮ್ಮ ರಾಶಿಚಕ್ರದಿಂದ ಹನ್ನೊಂದನೇ ಮತ್ತು ಎರಡನೇ ಮನೆಯ ಮಾಲೀಕ ಮತ್ತು ವರ್ಷದ ಆರಂಭದಲ್ಲಿ ಆದಾಯದ ಮನೆ ಅಂದರೆಹನ್ನೊಂದನೇ ಮನೆಯಲ್ಲೇ ಸಾಗಾಣಿಸುತ್ತಾನೆ. ಈ ಸಾಗಣೆಯ ಸಮಯದಲ್ಲಿ ಹಣದ ಲಾಭವಾಗುತ್ತದೆ ಮತ್ತು ನಿಮ್ಮ ನಿಲುಗಡೆ ಕೆಲಸ ಮಾಡಲಾಗುತ್ತದೆ. ನಿಮಗೆ ಹೊಸ ಸ್ನೇಹಿತರು ದೊರೆಯುತ್ತಾರೆ, ಅವರೊಂದಿಗೆ ಸಮಯವನ್ನು ಕಳೆಯಲು ನೀವು ಹೊರಗಡೆ ಹೂಗುವಿರಿ. ಮಾರ್ಚ್ ತಿಂಗಳ ಕೊನೆಯಲ್ಲಿ ಈ ಗುರುವು ನಿಮ್ಮ್ ರಾಶಿಚಕ್ರದಿಂದ ಹನ್ನೆರಡನೇ ಮನೆಗೆ ಸಗಣಿಸುತ್ತಾನೆ ಮತ್ತು ಈ ಸಮಯದಲ್ಲಿ ನೀವು ವಿದೇಶ ಪ್ರವಾಸಕ್ಕೂ ಹೋಗುವ ಯೋಗದ ಸಾಧ್ಯತೆಯಿದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿವಾದವು ಇಂದುವರೆಗೂ ನಡೆಯುತ್ತಿದ್ದರೆ, ಅದರಿಂದಲೂ ಈ ಸಮಯದಲ್ಲಿ ನೀವು ತೊಡೆದುಹಾಕುತ್ತೀರಿ. ಭೂಮಿಯ ಮೇಲೆ ಹೂಡಿಕೆ ಮಾಡಲು ಈ ಸಮಯ ಉತ್ತಮವಾಗಿದೆ ಮತ್ತು ಯಾವುದೇ ಹಳೆಯ ಹೂಡಿಕೆಯಿಂದ ಸಹ ಪ್ರಯೋಜನವಾಗುತ್ತದೆ. ವರ್ಷದ ಕೊನೆಯಲ್ಲಿ, ಇದ್ದಕ್ಕಿದ್ದಂತೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ, ಆದ್ದರಿಂದ ವಾಹನವನ್ನು ಬಹಳ ಎಚ್ಚರಿಕೆಯಿಂದ ಚಾಲನೆ ಮಾಡಿ. ಉದ್ಯೋಗಗಳನ್ನು ಬದಲಾಯಿಸಲು ಸಮಯ ಉತ್ತಮವಾಗಿಲ್ಲ. ಎಲ್ಲಿ ಕೆಲಸ ಮಾಡುತ್ತಿದ್ದೀರೋ ಅಲ್ಲೇ ಇರಿ. ಯಾವುದಾದರು ಹೊಸ ಅವಕಾಶ ದೊರೆಯುತ್ತಿದ್ದರು ಸೆಪ್ಟೆಂಬರ್ ನಂತರ ಮಾತ್ರ ಆರಂಭಿಸಿ.

ಗುರು ಸಂಚಾರದ ಪರಿಹಾರ: ನೀವು ಪ್ರತಿಯೊಂದು ಗುರುವಾರದಂದು ಅರಳಿ ಮರವನ್ನು ಮುಟ್ಟದೆ ನೀರನ್ನು ಅರ್ಪಿಸಬೇಕು ಮತ್ತು ಸಾಧ್ಯವಾದರೆ ಹಳದಿ ಅಕ್ಕಿಯನ್ನು ತಯಾರಿಸಿ ತಾಯಿ ಸರಸ್ವತಿಗೆ ಅದನ್ನು ಅರ್ಪಿಸಬೇಕು.

ಮೀನಾ ರಾಶಿ / Pisces

ಗುರು ಗ್ರಹ ನಿಮ್ಮ ರಾಶಿಚಕ್ರ ಮತ್ತು ನಿಮ್ಮ ರಾಶಿಚಕ್ರದಿಂದ ಹತ್ತನೇ ಮನೆಯ ಮಾಲೀಕ ಮತ್ತು ವರ್ಷದ ಆರಂಭದಲ್ಲಿ ನಿಮ್ಮ ರಾಶಿಚಕ್ರದಿಂದ ಹತ್ತನೇ ಮನೆಗೆ ಸಾಗಾಣಿಸುತ್ತಾನೆ. ಈ ಗುರು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ ಮತ್ತು ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಹೊಸ ಗುರುತನ್ನು ರಚಿಸಲು ಸಹಾಯ ಮಾಡುತ್ತದೆ. ಹೊಸ ಕೆಲಸಕ್ಕಾಗಿ ಈ ಸಾಗಣೆ ಉತ್ತಮವಾಗಲಿದೆ. ಮತ್ತು ಯಾವುದೇ ಹೊಸ ಯೋಜನೆಯನ್ನು ಪಡೆಯುವುದರಿಂದ, ನೀವು ಸಹ ಕಾರ್ಯನಿರತರಾಗಿರುತ್ತೀರಿ. ಮಾರ್ಚ್ ತಿಂಗಳ ಕೊನೆಯಲ್ಲಿ ಇದೆ ಗುರುವಿನ ಸಾಗಣೆ ಮಕರ ರಾಶಿಚಕ್ರದಲ್ಲಿ ಅಂದರೆ ನಿಮ್ಮ ರಾಶಿಚಕ್ರದಿಂದ ಹನ್ನೆರಡನೇ ಮನೆಯಲ್ಲಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಮತ್ತು ಹಣದ ಲಾಭಕ್ಕಾಗಿ ಈ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಸ್ನೇಹಿತರು ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ಮಕ್ಕಳ ಒಳ್ಳೆಯ ಸುದ್ಧಿ ದೊರೆಯುತ್ತದೆ. ನೀವು ಉದ್ಯೋಗದಲ್ಲಿ ಬಯಸಿದ ಸ್ಥಳದಲ್ಲಿ ವರ್ಗಾಯಿಸಲು ಬಯಸಿದರೆ, ಅದನ್ನೂ ನಿಮ್ಮ ಹಿರಿಯರ ಸಹಾಯದಿಂದ ಪೂರೈಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ವರ್ಷದ ಮಧ್ಯದಲ್ಲಿ ಯಾರಾದರೂ ಮೂರನೇ ವ್ಯಕ್ತಿ ಬರುವುದರಿಂದ ಅಥವಾ ಹಳೆಯ ವಿವಾದಗಳ ಕಾರಣದಿಂದಾಗಿ ಪರಸ್ಪರ ಉದ್ವೇಗದ ಪರಿಸ್ಥಿತಿ ಉಳಿಯಬಹುದು. ನೀವು ಬಹಳ ಬುದ್ಧಿವಂತಿಕೆಯಿಂದ ನಡೆದರೆ ವಿಷಯವು ಇನ್ನಷ್ಟು ಹದಗೆಡುವುದಿಲ್ಲ.

ಗುರು ಸಂಚಾರದ ಪರಿಹಾರ: ನೀವು ಗುರುವಾರದಂದು ಆರಂಭಿಸಿ ಪ್ರತಿದಿನ ನಿಯಮಿತವಾಗಿ ಗುರು ಬೀಜ ಮಂತ್ರ ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರುವೇ ನಮಃ ವನ್ನು ಜಪಿಸಬೇಕು ಮತ್ತು ನೀವು ಹಳದಿ ಮತ್ತು ಕ್ರೀಮ್ ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಕು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer