ಅಕ್ಷಯ ತೃತೀಯ - Akshaya tritiya in Kannada
ಅಕ್ಷಯ ತ್ರಿತೀಯದ ದಿನದಂದು ಕೆಲವು ಪರಿಹಾರಗಳನ್ನು ಅನುಸರಿಸಿ ನೀವು ನಿಮ್ಮ ಜೀವನವನ್ನು ಬಹಳ ಸುಲಭಗೊಳಿಸಬಹುದು.
ಭಾರತವು ವೈವಿದ್ಯತೆಯ ದೇಶ. ಇಲ್ಲಿ ಅನೇಕ ರೀತಿಯ ಜನರು, ಸಂಸ್ಕೃತಿ, ಹಬ್ಬಗಳು ಇತ್ಯಾದಿಗಳು ಸೇರಿ ಭಾರತ ದೇಶವನ್ನು ಇನ್ನಷ್ಟು ಸುಂದರಗೊಳಿಸುತ್ತವೆ. ಭಾರತದಲ್ಲಿ ಆಚರಿಸಲಾಗುವ ಈ ಹಬ್ಬಗಳು ವಿವಿಧ ಧರ್ಮಗಳನ್ನು ಬಹಳ ಸುಂದರವಾಗಿ ವ್ಯಾಖ್ಯಾನಿಸುತ್ತವೆ. ಹೋಳಿ, ದೀಪಾವಳಿ, ಈದ್, ಕ್ರಿಸ್ ಮಸ್ ಮುಂತಾದ ಹಬ್ಬಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಆದರೆ ಈ ದೊಡ್ಡ ಹಬ್ಬಗಳ ಹೊರೆತಾಗಿ ಕೆಲವು ವಿಶೇಷ ದಿನಗಳನ್ನು ಆಯಾ ಧಾರ್ಮಿಕ ಸಾಂಸ್ಕೃತಿಕ ನಂಬಿಕೆಗಳಿಂದ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯ ಹಿಂದೂ ಧರ್ಮದ ಅಂತಹ ಒಂದು ಹಬ್ಬ
ಅಕ್ಷಯ ತೃತೀಯ ಯಾವಾಗ?
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಆಚರಿಸಬೇಕಾದ ಅತ್ಯಂತ ಅದೃಷ್ಟವಾದ ದಿನವೆಂದು ಪರಿಗಣಿಸಲಾಗಿದೆ. ಈ ವರ್ಷ ಅಕ್ಷಯ ತೃತೀಯವನ್ನು 26 ಏಪ್ರಿಲ್ 2020 ರಂದು , ಭಾನುವಾರ ಆಚರಿಸಲಾಗುವುದು.
ಅಕ್ಷಯ ತೃತೀಯದ ಶುಭ ಮುಹೂರ್ತವನ್ನು ತಿಳಿಯಿರಿ
ಅಂದಹಾಗೆ, ಪ್ರತಿ ದಿನವೂ ಕೆಲವು ಶುಭ/ಅಸಹ್ಯಕರ ಮುಹೂರ್ತವಿದೆ ಆದರೆ ಅಕ್ಷಯ ತೃತಿಯವನ್ನು ಯಾವುದೇ ಮುಹೂರ್ತ ಅಗತ್ಯವಿಲ್ಲದ ಸರ್ವಾಂಗೀಣ ದಿನವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯವನ್ನು ಅಬೂಜ ಮುಹೂರ್ತಗಳಲ್ಲಿ ಸೇರಿಸಲಾಗಿದೆ.
ಅಕ್ಷಯ ತೃತೀಯ ಪೂಜೆ ಮುಹೂರ್ತ: 05 ಗಂಟೆ 48 ನಿಮಿಷದಿಂದ 12 ಗಂಟೆ 19 ನಿಮಿಷದ ವರೆಗೆ
ಚಿನ್ನಾಭರಣ ಖರೀದಿಸುವ ಶುಭ ಸಮಯ: 05 ಗಂಟೆ 48 ನಿಮಿಷದಿಂದ 13 ಗಂಟೆ 22 ನಿಮಿಷದ ವರೆಗೆ
ತ್ರಿತೀಯ ತಿಥಿ ಪ್ರಾರಂಭ: 11:51 (25 ಏಪ್ರಿಲ್ 2020)
ತೃತೀಯ ತಿಥಿ ಅಂತ್ಯ: 13:22 (26 ಏಪ್ರಿಲ್ 2020)
ಅಕ್ಷಯ ತೃತೀಯ ಪೂಜೆ ವಿಧಾನ
- ಈ ದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಹಳದಿ ಹಳದಿ ಬಟ್ಟೆಗಳನ್ನು ಧರಿಸಬೇಕು.
- ಮನೆಯ ದೇವಾಲಯದಲ್ಲಿ ಭಗವಂತ ವಿಷ್ಣು ದೇವರನ್ನು ಗಂಗಾಜಲದಿಂದ ಶುದ್ಧೀಕರಿಸಿ, ಹಳದಿ ಹೂವು ಅರ್ಪಿಸಿ.
- ಹಳದಿ ಆಸನದ ಮೇಲೆ ಕುಳಿತು ದೀಪವನ್ನು ಬೆಳಗಿಸಿ, ಗಂಧದ ಕಡ್ಡಿ ತೋರಿಸಿದ ನಂತರ, ವಿಷ್ಣುವಿಗೆ ಸಂಬಂಧಿಸಿದ ವಿಷ್ಣು ಸಹಸ್ತ್ರನಾಮ, ವಿಷ್ಣು ಚಾಲೀಸಾವನ್ನು ಓದಿ ಮತ್ತು ನಂತರ ವಿಷ್ಣು ಆರತಿಯನ್ನು ಓದಿ.
- ಸಾಧ್ಯವಾದರೆ ವಿಷ್ಣು ದೇವರ ಹೆಸರಿನಲ್ಲಿ ಬಡವರಿಗೆ ಆಹಾರ ನೀಡಿ ಅಥವಾ ದಾನ ಮಾಡಿ. ಈ ದಿನ ದಾನ - ಪುಣ್ಯಕ್ಕೆ ವಿಶೇಷ ಮಹತ್ವವಿದೆ.
ಅಕ್ಷಯ ತ್ರಿತೀಯಕ್ಕೆ ಸಂಬಂಧಿಸಿದ ನಂಬಿಕೆಗಳು
ಅಕ್ಷಯ ತ್ರಿತೀಯ ದಿನದಂದು ಚಿನ್ನಾಭರಣವನ್ನು ಖರೀದಿಸುವ ಸಂಪ್ರದಾಯವು ವರ್ಷಗಳಿಂದ ನಡೆಯುತ್ತಿದೆ. ಹಾಗೆ ಮಾಡುವುದರಿಂದ ಮನುಷ್ಯನ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಿಕೆ ಇದೆ. ಇದಲ್ಲದೆ, ಈ ದಿನ ನಿಮ್ಮ ಗಳಿಕೆಯ ಒಂದು ಭಾಗವನ್ನು ದಾದಾ ಮಾಡಬೇಕು ಎಂದು ಮಸಹ ಹೇಳಲಾಗುತ್ತದೆ. ಇದಲ್ಲದೆ ಸಾಕಷ್ಟು ನಂಬಿಕೆಗಳು ಮತ್ತು ಸಾಕಷ್ಟು ಕಥೆಗಳು ಸಹ ಅಕ್ಷಯ ತೃತೀಯದೊಂದಿಗೆ ಸಂಬಂಧ ಹೊಂದಿವೆ. ಅಕ್ಷಯ ತೃತೀಯಾವನ್ನು ಭಗವಂತ ಪರುಶುರಾಮ ಜಯಂತಿ ಎಂದು ಸಹ ಆಚರಿಸಲಾಗುತ್ತದೆ. ಇದಲ್ಲದೆ ಭಗವಂತ ವಿಷ್ಣುವಿನ ನರ ಮತ್ತು ನಾರಾಯಣ ಅವತಾರವನ್ನು ಗುರುತಿಸುವುದು ಸಹ ಅಕ್ಷಯ ತೃತೀಯ ದಿನದೊಂದಿಗೆ ಸಂಬಂಧಿಸಿದೆ. ತ್ರೇತಾಯುಗದ ಆರಂಭವು ಈ ದಿನದಿಂದಲೇ ಪ್ರಾರಂಭವಾಗಿದೆ ಎಂದು ನಂಬಲಾಗಿದೆ. ನಂಬಿಕೆಯ ಪ್ರಕಾರ, ಈ ದಿನದಂದು ಉಪವಾಸ, ಸ್ನಾನ ಮತ್ತು ದನದ ಮಹತ್ವವನ್ನು ತಿಳಿಸಲಾಗಿದೆ. ಈ ದಿನದಂದು ಯಾರು ಉಪವಾಸವನ್ನು ಅನುಸರಿಸಿ ನಂತರ ದಾನ ಮಾಡುತ್ತಾರೋ, ಅವರು ಎಂದಿಗೂ ಯಾವುದೇ ಕೊರತೆಯನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುತ್ತದೆ. ಈ ಉಪವಾಸದ ಫಲವು ಎಂದಿಗೂ ಕಡಿಮೆಯಾಗುವುದಿಲ್ಲ, ಎಂದಿಗೂ ನಾಶವಾಗುವುದಿಲ್ಲ ಎಂದು ಹೇಳಲಾಗುತ್ತದೆ ಆದ್ದರಿಂದ ಅಕ್ಷಯ ತೃತೀಯ ಎಂದು ಹೇಳಲಾಗುತ್ತದೆ.
ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಗಳು
ಪ್ರಾಚೀನ ಕಾಲದಲ್ಲಿ ಒಬ್ಬ ಬಹಳ ಬಡ ಮತ್ತು ಸದ್ಗುಣಶೀಲ ವೈಶ್ಯ ವಸೂಸುತ್ತಿದ್ದ. ಅವನಿಗೆ ದೇವರುಗಳ ಮೇಲೆ ಅಪಾರ ನಂಬಿಕೆ ಇತ್ತು. ವೈಶ್ಯನು ಹಗಲು ರಾತ್ರಿ ಚಿಂತೆ ಮಾಡುತ್ತಿದ್ದ. ಒಂದು ದಿನ ವೈಶ್ಯನ ಈ ಸಂದಿಗ್ದತೆಯನ್ನು ನೋಡಿದ ಬ್ರಾಹ್ಮಣನು ಅಕ್ಷಯ ತೃತೀಯ ಉಪವಾಸದ ಬಗ್ಗೆ ಹೇಳಿದನು. ಬ್ರಾಹ್ಮಣನು ಅವನಿಗೆ ಹಬ್ಬದ ದಿನದಂದು ಸ್ನಾನ ಮತ್ತು ದಾನದ ಮಹತ್ವವನ್ನು ತಿಳಿಸಿದನು. ಬ್ರಾಹ್ಮಣನು ಹೇಳಿದಂತೆಯೇ ವೈಶ್ಯನು ಮಾಡಿದನು. ಉಪವಾಸದ ಪರಿಣಾಮದಿಂದಾಗಿ, ಕೆಲವೇ ದಿನಗಳಲ್ಲಿ ಅವನ ವ್ಯವಹಾರವು ಅಭಿವೃದ್ಧಿ ಹೊಂದಲು ಪ್ರಾರಂಭಿಸಿತು ಮತ್ತು ಅವರು ಬಹಳ ಸಂತೋಷದಿಂದ ವಾಸಿಸಲು ಆರಂಭಿಸಿದರು
ಅದರ ನಂತರ ಅವನು ಜೀವನ ಪೂರ್ತಿ ಅಕ್ಷಯ ತೃತೀಯ ಉಪವಾಸ ಮತ್ತು ದಾನ - ಪುಣ್ಯವನ್ನು ಮಾಡಲು ಪ್ರಾರಂಭಿಸಿದನು. ಮುಂದಿನ ಜನ್ಮದಲ್ಲಿ ವೈಶ್ಯನು ಕುಶಾವತಿಯ ರಾಜನಾಗಿ ಜನಿಸಿದನು. ಅವನು ಎಷ್ಟು ಶ್ರೀಮಂತ ಮತ್ತು ಭವ್ಯ ರಾಜನಾಗಿದ್ದನೆಂದರೆ, ಭಗವಂತ ವಿಷ್ಣು, ಬ್ರಹ್ಮ ಮತ್ತು ಮಹೇಶ ಸ್ವತಃ ಅಕ್ಷಯ ತೃತೀಯ ದಿನದಂದು ಅವನ ಆಸ್ಥಾನದಲ್ಲಿ ಭ್ರಾಹ್ಮಣ ವೇಷವನ್ನು ಧರಿಸಿ ಅವನ ಮಹಾ ಯಜ್ಞದಲ್ಲಿ ಸೇರಲು ಹೋಗುತ್ತಿದ್ದರು. ಅಷ್ಟು ಗೌರವ ಮತ್ತು ಸಂಪತ್ತು ಪಡೆದ ನಂತರವೂ ಸಹ ಅವನು ಎಂದಿಗೂ ತನ್ನ ಶ್ರದ್ಧೆ ಮತ್ತು ಭಕ್ತಿಯ ಹಾದಿಯಿಂದ ಇಳಿಯಲಿಲ್ಲ. ಈ ರಾಜನು ನಂತರ ರಾಜ ಚಂದ್ರಗುಪ್ತನಾಗಿ ಜನಿಸಿದನು. .
ಅಕ್ಷಯ ತೃತೀಯ ದಿನದಂದು ಈ ಮಂತ್ರದ ಉಚ್ಚಾರಣೆಯಿಂದ ದೂರವಾಗುತ್ತವೆ ಎಲ್ಲ ಕಷ್ಟಗಳು,“ಓಂ ಭಾಸ್ಕರಾಯ ವಿಗ್ರಹೇ ಮಹಾತೇಜಾಯ ಧೀಮಹಿ, ತನ್ನೋ ಸೂರ್ಯ: ಪ್ರಚೋದಯಾತ್”
ನಿಮ್ಮ ಜಾತಕದಲ್ಲಿನ ಶುಭಕರ ಯೋಗದ ಬಗ್ಗೆ ತಿಳಿಯಲು ಆಸ್ಟ್ರೋಸೇಜ್ ಬೃಹತ್ ಕುಂಡಲಿ ಅನ್ನು ಈಗಲೇ ಖರೀದಿಸಿ
ಅಕ್ಷಯ ತೃತೀಯ ದಿನದಂದು ಖಂಡಿತವಾಗಿಯೂ ಈ ಪರಿಹಾರವನ್ನು ಮಾಡಿ
ನಿಮ್ಮ ಜಾತಕದಲ್ಲಿನ ಯಾವುದೇ ದೋಷದ ಕಾರಣದಿಂದಾಗಿ ನಿಮ್ಮ ವಿವಾಹ ಮುಹೂರ್ತ ಪಡೆಯಲು ಸಾಧ್ಯವಾಗಿಲ್ಲದಿದ್ದರೆ, ಅಕ್ಷಯ ತೃತೀಯ ದಿನದಂದು ಲಗ್ನ ಮತ್ತು ಮುಹೂರ್ತವಿಲ್ಲದೆ ಮದುವೆಯಾಗುವುದರಿಂದಲೂ ನಿಮ್ಮ ದಾಂಪತ್ಯ ಜೀವನವು ಯಶಸ್ವಿಯಾಗುತ್ತದೆ. ಈ ಕಾರಣದಿಂದಾಗಿ ಅಕ್ಷಯ ತೃತೀಯ ದಿನದಂದು ಇಂದಿಗೂ ರಾಜಸ್ಥಾನ್, ಛತ್ತೀಸ್ ಗಡ್, ಉಡಿಸ್ಸಾ , ಬಂಗಾಳ ಮುಂತಾದಿಗಳಲ್ಲಿ ಸಾವಿರಾರು ಮದುವೆಗಳು ಸಂಭವಿಸುತ್ತವೆ.
ಇದಲ್ಲದೆ, ದೀರ್ಘಕಾಲದಿಂದ ನಿಮ್ಮ ಯಾವುದೇ ಕೆಲಸವೂ ಸಿಲುಕಿಕೊಂಡಿದ್ದರೆ ಅಥವಾ ಯಾವುದೇ ಕಾರ್ಯವು ಪೂರ್ಣಗೊಳ್ಳಲು ಸಾಧ್ಯವಾಗದಿರದಿದ್ದರೆ, ಯಾವುದೇ ಉಪವಾಸ ಅಥವಾ ಪೂಜೆ ಮಾಡಿದರ ಹೊರೆತಾಗಿಯೂ ನಿಮ್ಮ ಯಾವುದೇ ಹಾರೈಕೆ ಪೂರ್ಣವಾಗಿಲ್ಲದ್ದರೆ ಅಥವಾ ನಿಮ್ಮ ವ್ಯಾಪಾರದಲ್ಲಿ ನಿರವಾಗಿ ನಷ್ಟವಾಗುತ್ತಿದ್ದರೆ, ನಿಮಗಾಗಿಯೂ ಅಕ್ಷಯ ತೃತೀಯ ದಿನವೂ ತುಂಬಾ ಶುಭವೆಂದು ಸಾಬೀತುಪಡಿಸಬಹುದು.
ಇದಲ್ಲದೆ, ಸಂಪಾದನೆಯ ನಂತರವೂ ನಿಮ್ಮ ಮನೆಯಲ್ಲಿ ಹಣಕಾಸು ಉಳಿಯದಿದ್ದರೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಉಳಿಯದಿದ್ದರೆ, ಮಕ್ಕಳು ಸರಿಯಾಗಿ ನಡೆಯದಿದ್ದರೆ ಅಥವಾ ಅವರ ಜೀವನದಲ್ಲಿ ಯಾವುದೇ ದುಃಖವಿದ್ದರೆ, ನಿಮ್ಮ ಸುತ್ತಲೂ ಶತ್ರುಗಳು ಪ್ರಾಬಲ್ಯ ಸಾಧಿಸಿದರೆ, ಅಂತಹ ಪರಿಸ್ಥಿತಿಯಲ್ಲಿ ಅಕ್ಷಯ ತೃತೀಯ ದಿನದಂದು ಉಪವಾಸವಿಡುವುದು ಮತ್ತು ನಿಮಗೆ ಆಶಯಕ್ಕೆ ಅನುಗುಣವಾಗಿ ದಾನ ಮಾಡುವುದು ನಿಮಗೆ ಫಲಪ್ರದವೆಂದು ಸಾಬೀತುಪಡಿಸಬಹುದು.
ನೀವು ಹೊಸ ಮನೆ, ಆಸ್ತಿ, ಭೂಮಿ, ಬಟ್ಟೆ, ಆಭರಣಗಳು ಇತ್ಯಾದಿಗಳನ್ನು ಖರೀದಿಸಬೇಕಾದರೆ, ಅಕ್ಷಯ ತೃತೀಯ ದಿನವನ್ನು ಅದಕ್ಕಾಗಿ ಬಹಳ ಶುಭಕಾರವೆಂದು ಪರಿಗಣಿಸಲಾಗಿದೆ.
ರತ್ನದ ಕಲ್ಲು, ರುದ್ರಾಕ್ಷದೊಂದಿಗೆ ಎಲ್ಲಾ ಜ್ಯೋತಿಷ್ಯ ಪರಿಹಾರಕ್ಕಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್ ``
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2024
- राशिफल 2024
- Calendar 2024
- Holidays 2024
- Chinese Horoscope 2024
- Shubh Muhurat 2024
- Career Horoscope 2024
- गुरु गोचर 2024
- Career Horoscope 2024
- Good Time To Buy A House In 2024
- Marriage Probabilities 2024
- राशि अनुसार वाहन ख़रीदने के शुभ योग 2024
- राशि अनुसार घर खरीदने के शुभ योग 2024
- वॉलपेपर 2024
- Astrology 2024