ವೃಷಭ ರಾಶಿಯಲ್ಲಿ ಶುಕ್ರ ಸಂಚಾರ ( 4th May 2021 )

ಶುಕ್ರ ಗ್ರಹವನ್ನು ಸೌಂದರ್ಯದ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಇದು ಸೂರ್ಯನ ನಿಕಟ ಗ್ರಹ. ವೃಷಭ ರಾಶಿಯಲ್ಲಿ ಶುಕ್ರನ ಸಂಚಾರವು ಈ ಸಮಯದಲ್ಲಿ ಧ್ವನಿಯಲ್ಲಿ ಆಕರ್ಷಣೆ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಒದಗಿಸುತ್ತದೆ. ಜನರು ಹೆಚ್ಚಿನ ವಿಶ್ಲೇಷಣಾತ್ಮಕ ದೃಷ್ಟಿ ಮತ್ತು ತಾರ್ಕಿಕ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ, ಸುಂದರ ಮತ್ತು ಸೃಜನಶೀಲ ವಿಷಯಗಳಲ್ಲೂ ಜನರಲ್ಲಿ ಆಕರ್ಷಣೆಯನ್ನು ಕಾಣಬಹುದು. ಇದಲ್ಲದೆ ಅಧ್ಯಾತ್ಮದ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುತ್ತಿರುವವರು ಮತ್ತು ಜ್ಞಾನವನ್ನು ಗಳಿಸಲು ಬಯಸುತ್ತಿದ್ದರಿಗೆ ಈ ಸಮಯ ಉತ್ತಮವಾಗಿರುತ್ತದೆ .

ಶುಕ್ರ ಸ್ತ್ರೀ ಗುಣಗಳ ಸಂಕೇತವೆಂದು ಪರಿಗಣಿಸಲ್ಪಟ್ಟ ಗ್ರಹ ಮತ್ತು ಇದು ಪ್ರೀತಿ, ಸೌಂದರ್ಯ, ಮದುವೆ, ಸಂತೋಷ ಮತ್ತು ಐಷಾರಾಮಿಯನ್ನು ಸಹ ತೋರಿಸುತ್ತದೆ. ಜ್ಯೋತಿಷ್ಯದಲ್ಲಿ ಇದನ್ನು ಶುಭ ಗ್ರಹ ಎಂದು ಪರಿಗಣಿಸಲಾಗಿದೆ. ಇದರ ಮುಖ್ಯ ಗುಣವೆಂದರೆ ಜೀವನ, ಮನರಂಜನೆ ಮತ್ತು ಸಂತೋಷದಿಂದ ನಿಮ್ಮ ನೆಚ್ಚಿನ ವ್ಯಕ್ತಿಯೊಂದಿಗೆ ಜೀವನವನ್ನು ಕಳೆಯುವುದು.

ಜೀವನದ ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕಾಗಿ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಶುಕ್ರವು ಜೀವನದ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಇತರ ಜನರ ಬಗೆಗಿನ ನಿಮ್ಮ ಭಾವನೆಗಳು ಮತ್ತು ಜನರ ಗ್ರಹಿಕೆಗಾಲ ಮೇಲೂ ಪರಿಣಾಮ ಬೀರುತ್ತದೆ. ಜಾತಕದಲ್ಲಿನ ಬಲವಾದ ಶುಕ್ರವು, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಲ್ಲಾ ಐಷಾರಾಮಿ ಮತ್ತು ಭೌತಿಕ ಸಂತೋಷಗಳನ್ನು ಅನುಭವಿಸುತ್ತಾನೆ ಎಂದು ಖಚಿತಪಡಿಸುತ್ತದೆ. ಆದಾಗ್ಯೂ, ದುರ್ಬಲ ಶುಕ್ರವು ಸಂಬಂಧದಲ್ಲಿ ವೈಫಲ್ಯ, ವೈವಾಹಿಕ ಕ್ಲೇಶ, ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀಡಬಹುದು.

ವೃಷಭ ರಾಶಿಯಲ್ಲಿ ಶುಕ್ರ ಸಂಚಾರವು 4 ಮೇ 2021 ರಂದು ಮಧ್ಯಾಹ್ನ 1:09 ಗಂಟೆಗೆ ಸಂಭವಿಸುತ್ತದೆ ಮತ್ತು ಇದು 28 ಮೇ 2021, 11:44 ಗಂಟೆಯ ವರೆಗೆ ಇದೇ ರಾಶಿಯಲ್ಲಿರುತ್ತದೆ. ಇದರ ನಂತರ ಮಿಥುನ ರಾಶಿಗೆ ಪ್ರವೇಶಿಸುತ್ತದೆ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.

ಮೇಷ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಏಕೆಂದರೆ ಇದು ನಿಮ್ಮ ಜೀವನದಲ್ಲಿ ಹಣ ಮತ್ತು ಆರ್ಥಿಕ ಬಲವನ್ನು ತರುತ್ತದೆ ಮತ್ತು ನಿಮ್ಮ ಸಂಬಂಧಗಳನ್ನು ಸಹ ಬಲಪಡಿಸುತ್ತದೆ. ನೀವು ಬುದ್ಧಿವಂತಿಕೆಯನ್ನು ಹೊಂದಿರುವಿರಿ, ಆದರೆ ನೀವು ತಾಳ್ಮೆಯೊಂದಿಗೆ ಪರಿಸ್ಥಿತಿಯನ್ನು ಕೈಯಲ್ಲಿ ತೆಗೆದುಕೊಂಡು ನಡೆಯಬೇಕಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಖರ್ಚಿನ ಮೇಲೆ ನಿಗಾ ಇಡಬೇಕು ಏಕೆಂದರೆ ಕೆಲವು ಅನಗತ್ಯ ವೆಚ್ಚಗಳಾಗುವ ಸಾಧ್ಯತೆ ಇದೆ. ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಆದ್ದರಿಂದ ಮತ್ತು ಯಾವುದೇ ತಪ್ಪುತಿಳುವಳಿಕೆಯನ್ನು ಹೆಚ್ಚಿಸಬೇಡಿ. ಶಾಂತವಾಗಿರಲು ಮತ್ತು ಸರಿಯಾದ ಕಾಪಾಡಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ.

ನಿಮ್ಮ ಕೆಲಸದಲ್ಲಿ ನಿಮ್ಮ ಆಂತರಿಕ ಸೃಜನಶೀಲತೆಯನ್ನು ಹೊರತರುವಲ್ಲಿ ಈ ಅವಧಿ ಉತ್ತಮವಾಗಿರುತ್ತದೆ. ವಿಶೇಷವಾಗಿ ನಿಮ್ಮ ಸಾಮರ್ಥ್ಯ ಏನೆಂದು ಮೇಲಧಿಕಾರಿಗಳಿಗೆ ನಿರ್ದಿಷ್ಟವಾಗಿ ತೋರಿಸಿ, ಮುಂದಿನ ದಿನಗಳಲ್ಲಿ ಇದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಹಣಕಾಸಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಇದು ತಾತ್ಕಾಲಿಕ ಹಂತವಾಗಿರುವುದರಿಂದ ಇದು ಹೆಚ್ಚಿನ ಕಾಳಜಿಯ ವಿಷಯವಲ್ಲ. ಈ ಸಂಚಾರವು ನಿಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ತಣ್ಣನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಶೀತ ಮತ್ತು ಕೆಮ್ಮು ಅಥವಾ ಕೆಲವು ರೀತಿಯ ವೈರಲ್ ಸೋಂಕಿನಿಂದ ಬಳಲುತ್ತಬಹುದು.

ಪರಿಹಾರ - ಶುಕ್ರವಾರ ಗಣೇಶ ದೇವರಿಗೆ ಅಕ್ಕಿ ಅರ್ಪಿಸಿ.

ವೃಷಭ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಮೊದಲ ಮತ್ತು ಆರನೇ ಮನೆಯ ಅಧಿಪತಿ ಮತ್ತು ಈ ಸಂಚಾರವು ನಿಮ್ಮ ಮೊದಲನೇ ಮನೆಯಲ್ಲಿ ಸಂಭವಿಸುತ್ತದೆ. ಮೊದಲನೇ ಮನೆಯು ಆತ್ಮ, ಮಾನಸಿಕ ಸಾಮರ್ಥ್ಯ ಮತ್ತು ಲೌಕಿಕ ದೃಷ್ಟಿಕೋನವನ್ನು ತೋರಿಸುತ್ತದೆ. ಈ ಸಂಚಾರವು ನಿಮ್ಮ ಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ತರುತ್ತದೆ. ಸಾಮಾಜಿಕ ವಲಯದಲ್ಲಿ ನಿಮ್ಮ ಸ್ವೀಕಾರದ ಮಟ್ಟವು ಹೆಚ್ಚಾಗುತ್ತದೆ. ನೀವು ಕೆಲವು ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಜನರೊಂದಿಗೆ ಸಂಪರ್ಕವನ್ನು ಹೊಂದಬಹುದು. ವೈಯಕ್ತಿಕ ಮತ್ತು ಆರ್ಥಿಕ ದೃಷ್ಟಿಯಿಂದ, ನಿಮ್ಮ ಯೋಜನೆಗಳನ್ನು ಮುನ್ನಡೆಸಲು ಜನರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮಗೆ ಉತ್ತಮವಾದ ಸಮಯ. ಈ ಸಮಯದಲ್ಲಿ ನೀವು ಆತ್ಮಾವಲೋಕನ ಮಾಡಿ ಮತ್ತು ನೀವು ಮುಂದುವರಿಸಿದ ಮೋಜಿನ ಯೋಜನೆಗಳಲ್ಲಿ ಕೆಲಸ ಮಾಡಿ.

ಏನಾದರೂ ಹೊಸದನ್ನು ಕಲಿಯಿರಿ ಮತ್ತು ನಿಮ್ಮನ್ನು ಅಭಿವೃದ್ಧಿಪಡಿಸಿ. ಮನರಂಜನೆ, ಶಾಪಿಂಗ್ ಇತ್ಯಾದಿಗಳಿಗೇ ಹಣವನ್ನು ಚಿಂತನಶೀಲವಾಗಿ ಖರ್ಚು ಮಾಡಲು ಸಲಹೆ ನೀಡಲಾಗಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಂಚಾರವು ನಿಮಗೆ ಅನುಕೂಲಕವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಅರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಸಣ್ಣ ಪುಟ್ಟ ರೋಗಗಳು ನಿಮ್ಮನ್ನು ಕಾಡಬಹುದು.

ಪರಿಹಾರ - ಓಪಲ್ ರತ್ನವನ್ನು ಧರಿಸಿ.

ಮಿಥುನ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಹನ್ನೆರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ವಿದೇಶ ಪ್ರಯಾಣ, ವೆಚ್ಚ, ನಷ್ಟ ಮತ್ತು ಮಾನಸಿಕ ಆರೋಗ್ಯದ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ಮಾನಸಿಕವಾಗಿ ನಿಮ್ಮನ್ನು ಸ್ವಲ್ಪ ತೊಂದರೆಗೊಳಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಈ ಸಂಚಾರದ ಸಮಯದಲ್ಲಿ ಸಾಧನೆ, ಧ್ಯಾನ ಮತ್ತು ಅವಶ್ಯಕ ಕೆಲಸಗಳನ್ನು ಸಮಯಕ್ಕೆ ವಿಲೇವಾರಿ ಮಾಡುವುದು ನಿಮಗೆ ಅವಶ್ಯಕ. ಶುಕ್ರನ ಈ ಸಂಚಾರದ ಸಮಯದ್ಲಲಿ ನೀವು ಸೋಮಾರಿಯಾಗಬಹುದು. ಏಕೆಂದರೆ ನೀವು ಮನೆಯಲ್ಲಿ ತಿನ್ನುವುದು ಮತ್ತು ಮಲಗುವುದರಲ್ಲಿ ನಿಮ್ಮ ದಿನವನ್ನು ಕಳೆಯಬಹುದು.

ಈ ಸಂಚಾರದ ಸಮಯದಲ್ಲಿ ವಿದೇಶದ ಮೂಲಕ ಉತ್ತಮ ವಿತ್ತೀಯ ಲಾಭಗಳನ್ನು ಪಡೆಯಬಹುದು. ಮುಂದಿನ ಶಿಕ್ಷಣಕ್ಕಾಗಿ ಯೋಜಿಸುತ್ತಿದ್ದರೆ, ನೀವು ವಿದೇಶದಲ್ಲಿ ಶಿಕ್ಷಣವನ್ನು ಪಡೆಯಬಹುದು. ನಿಮ್ಮ ಸಂಗಾತಿಯ ಅರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ನೀವು ಕೆಲವು ಆರ್ಥಿಕ ಅಸ್ಥಿರತೆಯನ್ನು ಹೊಂದಿರಬಹುದು. ಐಷಾರಾಮಿ ಮತ್ತು ಸೌಕರ್ಯಗಳ ಖರೀದಿಸಲು ನೀವು ಮನಸ್ಸು ಹೊಂದಬಹುದು. ಆದಾಗ್ಯೂ, ಹೆಚ್ಚು ಹಣವನ್ನು ಖರ್ಚು ಮಾಡಬೇಡಿ ಮತ್ತು ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಬಗ್ಗೆ ಯೋಚಿಸಿ. ನಿಮ್ಮ ಹಣಕಾಸಿನ ಭಾಗವನ್ನು ಸುಧಾರಿಸಲು ಯಾವುದೇ ಅಪಾಯವನ್ನು ತೆಗೆದುಕೊಳ್ಳಬೇಡಿ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಹಸುವಿಗೆ ಹಸಿರು ಮೇವು ತಿನ್ನಿಸಿ.

ಕರ್ಕ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಹನ್ನೊಂದನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಈ ಸಂಚಾರದ ಸಮಯದ್ಲಲಿ ನಿಮ್ಮ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಈ ಮನೆ ಸ್ನೇಹಿತರು, ಲಾಭ, ಆದಾಯ ಮತ್ತು ಆಸೆಗಳನ್ನು ಪ್ರತಿನಿಧಿಸುತ್ತದೆ. ಈ ಸಂಚಾರವು ನಿಮ್ಮನ್ನು ರೊಮ್ಯಾಂಟಿಕ್ ಮಾಡುತ್ತದೆ ಮತ್ತು ನೀವು ಜನರೊಂದಿಗೆ ಸೇರಲು ಬಯಸುವಿರಿ. ನೀವು ರಾಜಕೀಯ ಸಂಬಂಧಗಳನ್ನೂ ಬೆಳೆಸುವಿರಿ ಮತ್ತು ಲೌಕಿಕ ವಿಷಯಗಳಲ್ಲಿ ಆಸಕ್ತಿ ಹೊಂದುವಿರಿ. ಈ ಸಮಯದಲ್ಲಿ ನಿಮ್ಮ ಸ್ನೇಹಿತರ ವಲಯವೂ ವಿಸ್ತರಿಸಬಹುದು. ಈ ಅವಧಿಯಲ್ಲಿ ನೀವು ಗುಣಮಟ್ಟದ ಜನರನ್ನು ಭೇಟಿಯಾಗುತ್ತೀರಿ. ಈ ಸಂಚಾರದ ಸಮಯದಲ್ಲಿ ನೀವು ಭೌತಿಕ ವಿಷಯಗಳತ್ತ ಹೆಚ್ಚು ಒಲವು ಹೊಂದಿರುತ್ತೀರಿ. ಈ ಸಂಚಾರವು ನಿಮ್ಮ ಪ್ರೀತಿಯ ಜೀವನಕ್ಕೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು ಮತ್ತು ನಿಮ್ಮ ನಡುವೆ ಪರಸ್ಪರ ತಿಳುವಳಿಕೆಗೆ ಉತ್ತಮಗೊಳ್ಳುತ್ತದೆ. ಸಂಪತ್ತಿನ ಮೂಲಕ ಸಹ ನೀವು ಲಾಭವನ್ನು ಪಡೆಯುವ ಸಾಧ್ಯತೆ ಇದೆ.ಇದಲ್ಲದೆ ನೀವು ನಿಮ್ಮ ಹಿರಿಯ ಸಹೋದರ ಸಹೋದರಿಯರ ಉತ್ತಮ ಬೆಂಬಲವನ್ನು ಪಡೆಯುತ್ತೀರಿ.

ಪರಿಹಾರ - ಶುಕ್ರವಾರ ಶ್ರೀ ಸೂಕ್ತವನ್ನು ಪಠಿಸಿ.


ವೃತ್ತಿ ಜೀವನದ ಸರಿಯಾದ ಆಯ್ಕೆಗಾಗಿ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ಸಿಂಹ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ವೃತ್ತಿ, ಖ್ಯಾತಿ ಮತ್ತು ಸಾಮಾಜಿಕ ಸ್ಥಾನದ ಹತ್ತನೇ ಮನೆಗೆ ಗೋಚರಿಸುತ್ತದೆ. ಹತ್ತನೇ ಮನೆಯಲ್ಲಿ ಶುಕ್ರ ಸಂಚಾರವು ವೃತ್ತಿ ಜೀವನದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಬಹುದು ಮತ್ತು ನಿಮಗೆ ಹೊಸ ಗುರುತನ್ನು ನೀಡಬಹುದು. ಈ ಸಂಚಾರದ ಸಮಯದಲ್ಲಿ ನೀವು ಉನ್ನತ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸುತ್ತೀರಿ. ವೃತ್ತಿ ಜೀವನದಲ್ಲಿ ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನಿಮ್ಮ ತಂದೆಯಿಂದ ಸಲಹೆ ಪಡೆದುಕೊಳ್ಳುವುದು ಆರ್ಥಿಕವಾಗಿ ಮುಂದುವರಿಯಲು ನಿಮಗೆ ಸಹಾಯ ಮಾಡಬಹುದು.ಈ ಸಂಚಾರವು ಮನೆಯ ವಿಷಯಗಳಿಗೂ ಉತ್ತಮವಾಗಿರುತ್ತದೆ. ಹೊಸ ಸಂಪತ್ತು ಅಥವಾ ವಾಹನವನ್ನು ಖರೀದಿಸಬಹುದು. ನಿಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮ ಅಥವಾ ಸಮಾರಂಭವನ್ನು ಸಹ ಆಯೋಜಿಸಬಹುದು. ಇದು ವಾತಾವರಣವನ್ನು ಆಹ್ಲಾದಕಾರಗೊಳಿಸುತ್ತದೆ.

ಪರಿಹಾರ - ಶುಕ್ರ ದೇವರ ಅನುಗ್ರಹವನ್ನು ಪಡೆಯಲು ಪ್ರತಿ ಶುಕ್ರವಾರ ತಾಯಿ ಲಕ್ಷ್ಮಿಯನ್ನು ಪೂಜಿಸಿ.

ಕನ್ಯಾ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಒಂಬತ್ತನೇ ಮತ್ತು ಎರಡನೇ ಮನೆಯ ಅಧಿಪತಿ ಮತ್ತು ವೃಷಭ ಸಂಚಾರದ ಈ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರನ ಸಂಚಾರವು ನಿಮ್ಮನ್ನು ಅದೃಷ್ಟವಂತರನ್ನಾಗಿಸುತ್ತದೆ. ಈ ಸಂಚಾರದ ಸಮಯದಲ್ಲಿ ದೂರಸ್ಥ ಪ್ರಯಾಣಗಳಲ್ಲಿ ನೀವು ಹಣಕಾಸು ಖರ್ಚು ಮಾಡಬೇಕಾಗಬಹುದು. ಉನ್ನತ ಶಿಕ್ಷಣವನ್ನು ಮುಂದುವರಿಸಲು ಇದು ಉತ್ತಮ ಸಮಯ. ಏಕೆಂದರೆ ಈ ಸಮಯವೂ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಮುಂದುವರಿಯಲು ನೀವು ಅನೇಕ ಅವಕಾಶಗಳನ್ನು ಪಡೆಯಬಹುದು ಮತ್ತು ಅವುಗಳ ಲಾಭವನ್ನು ಪಡೆದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ.ನಿಮ್ಮ ಕಿರಿಯ ಸಹೋದರ ಸಹೋದರಿಯರು ಸಹ ಉತ್ತಮ ಅಲಭವನ್ನು ಪಡೆಯುತ್ತಾರೆ ಮತ್ತು ವೃತ್ತಿಪರ ಜೀವನದಲ್ಲೂ ಯಾವುದೇ ದೊಡ್ಡ ಸಾಧನೆಯನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಯಾವುದೇ ಶುಭ ಮಂಗಲಿಕ ಕಾರ್ಯವನ್ನು ಆಯೋಜಿಸಬಹುದು.

ಪರಿಹಾರ - ಆರು ಮುಖ ರುದ್ರಾಕ್ಷವನ್ನು ಧರಿಸುವುದು ನಿಮಗೆ ಪ್ರಯೋಜನಕಾರಿ.

ತುಲಾ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಎಂಟನೇ ಮತ್ತು ಮೊದಲನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಗೋಚರಿಸುತ್ತದೆ. ಇದು ಪರಂಪರೆ, ಅತಿಂದ್ರೀಯ ವಿಜ್ಞಾನ, ಜಗಳಗಳು ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತದೆ. ಎಂಟನೇ ಮನೆಯಲ್ಲಿ ಸಂಚಾರದ ಪರಿಣಾಮದಿಂದಾಗಿ ಸ್ಥಳೀಯರು ರಹಸ್ಯ ವಿಜ್ಞಾನದತ್ತ ಹೆಚ್ಚು ಆಸಕ್ತಿ ಹೊಂದುತ್ತಾರೆ ಮತ್ತು ನೀವು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳೊಂದಿಗೆ ರಹಸ್ಯ ಸಂಬಂಧವನ್ನು ಹೊಂದಲು ಬಯಸಬಹುದು. ನೀವು ರಹಸ್ಯವಾಗಿ ಶಕ್ತಿಶಾಲಿ ವ್ಯಕ್ತಿಯಾಗಲು ಬಯಸುತ್ತೀರಿ. ನೀವು ಇನ್ನೂ ನಿರ್ಧರಿಸದ ಪೂರ್ವಜರ ಆಸ್ತಿಯ ಈ ಸಂಚಾರದ ಸಮಯದಲ್ಲಿ ನೀವು ಲಾಭವನ್ನು ಪಡೆಯಬಹುದು.

ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ. ನೀವು ಸಂಪತ್ತನ್ನು ಖರೀದಿಸಲು ಬಯಸಬಹುದು. ಆದರೆ ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ನೀವು ತಪ್ಪಿಸಬೇಕು. ಇದಲ್ಲದೆ ನಿಮ್ಮ ಅರೋಗ್ಯ ಮತ್ತು ಅನಗತ್ಯ ವೆಚ್ಚಗಳ ಬಗ್ಗೆ ಗಮನ ಹರಿಸಿ . ನೀವು ವಿವಾಹಿತರಾಗಿದ್ದರೆ, ಅತ್ತೆಮನೆ ಸದಸ್ಯರೊಂದಿಗೆ ಯಾವುದೇ ರೀತಿಯ ಸಮಾರಂಭದಲ್ಲಿ ಭಾಗವಹಿಸಲು ನೀವು ಅವಕಾಶವನ್ನು ಪಡೆಯಬಹುದು. ಅತ್ತೆಮನೆಯವರೊಂದಿಗಿನ ನಿಮ್ಮ ಸಂಬಂಧವು ಮತ್ತು ಮನೆಯ ವಿಷಯದಲ್ಲಿ ಶಾಂತಿ ಮತ್ತು ಸದ್ಭಾವನೆ ಉಳಿದಿರುತ್ತದೆ. ಈ ಸಮಯದಲ್ಲಿ ನೀವು ಅನಗತ್ಯ ಪ್ರವಾಸಗಳನ್ನು ಮಾಡಬೇಕಾಗಬಹುದು. ಆದರೆ ಚಿಂತಿಸಬೇಕಾಗಿಲ್ಲ ಏಕೆಂದರೆ ಅದು ಕೊನೆಯಲ್ಲಿ ಸಾಕಷ್ಟು ಲಾಭದಾಯಕವೆಂದು ಸಾಬೀತುಪಡಿಸುತ್ತದೆ.

ಪರಿಹಾರ - ಶುಕ್ರ ಬೀಜ ಮಂತ್ರ “ಓಂ ಶುಂ ಶುಕ್ರಾಯ ನಮಃ” ವನ್ನು ಪ್ರತಿದಿನ ಜಪಿಸಿ.

ವೃಶ್ಚಿಕ

ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಗೋಚರಿಸುತ್ತದೆ. ಇದು ಮದುವೆ, ಪಾಲುದಾರಿಕೆ ಮತ್ತು ದೀರ್ಘಾವಧಿಯ ಒಪ್ಪಂದಗಳನ್ನು ಪ್ರತಿನಿಧಿಸುತ್ತದೆ. ಏಳನೇ ಮನೆಯಲ್ಲಿ ಶುಕ್ರನ ಸಾಚಾರವು ಪ್ರೀತಿಯ ಮದುವೆಯಲ್ಲಿ ಸ್ವಲ್ಪ ಅಡಚಣೆಯನ್ನುಂಟು ಮಾಡುತ್ತದೆ. ಈ ಸಂಚಾರದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಸಂವಹನ ಶಕ್ತಿಯ ಹೆಚ್ಚಳವನ್ನು ಕಾಣಲಾಗುತ್ತದೆ.ಯಾವುದೇ ಸಂಬಂಧದಲ್ಲಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಸ್ವಲ್ಪ ಒತ್ತಡಕ್ಕೆ ಒಳಗಾಗಬಹುದು. ಏಕೆಂದರೆ ನಿಮ್ಮ ಪ್ರೀತಿಪಾತ್ರರು ಸಂಬಂಧದ ಬಗ್ಗೆ ನೀವು ಈ ಸಂಬಂಧವನ್ನು ಮದುವೆಯಲ್ಲಿ ಬದಲಲು ಬಯಸುವಿರಾ ಇಲ್ಲವೋ ಎಂದು ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಕೆಲವು ಜನರು ಪ್ರಭಾವಶಾಲಿ ವ್ಯಕ್ತಿಗಳೊಂದಿಗೆ ಪಾಲುದಾರಿಕೆ ಮಾಡಬಹುದು.

ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನಿಮ್ಮ ಪಾಳುದ್ರಿಕೆಯನ್ನು ಬಲಪಡಿಸಲು ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ವಿದೇಶ ಪ್ರವಾಸಕ್ಕೆ ಅವಕಾಶಗಳನ್ನು ಪಡೆಯಬಹುದು. ನಿಮ್ಮ ವ್ಯಾಪಾರ ಪಾಲುದಾರರೊಂದಿಗಿನ ಸಂವಹನದ ಸಮಯದಲ್ಲಿ ಯಾವುದೇ ರೀತಿಯ ತಪ್ಪುತಿಳುವಳಿಕೆಯನನ್ನು ಸೃಷ್ಟಿಸುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಆಮದು ಮತ್ತು ರಫ್ತುಗಳಲ್ಲಿ ತೊಡಗಿರುವ ಉದ್ಯಮಿಗಳು ಈ ಸಾಗಣೆಯಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯ ಸ್ಥಿರವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರ ಸಾಮಾಜಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಕೆಲವರು ತಮ್ಮ ಜೀವನ ಸಂಗಾತಿಯನ್ನು ಸಂತೋಷಪಡಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.

ಪರಿಹಾರ - ಕುಬೇರ ಮಂತ್ರವನ್ನು ಜಪಿಸಿ.

ಧನು

ಧನು ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಗೋಚರಿಸುತ್ತದೆ. ಇದು ಅರೋಗ್ಯ, ಕೆಲಸ ಮತ್ತು ದಿನಚರಿಯನ್ನು ಪ್ರತಿನಿಧಿಸುತ್ತದೆ. ಈ ಸಂಚಾರವು ಸಂಬಂಧಗಳಲ್ಲಿ ಜಗಳ ಮತ್ತು ವಾದವನ್ನು ಉದ್ಭವಿಸಬಹುದು. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಕಾಡಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಜನರು ಉತ್ತಮ ಸಾಧ್ಯತೆಗಳನ್ನು ಕಂಡುಕೊಳ್ಳಲು ಉದ್ಯೋಗದಲ್ಲಿ ಬದಲಾವಣೆಗಳನ್ನು ಮಾಡುವ ಬಗ್ಗೆ ಪರಿಗಣಿಸಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ, ಆದಾಗ್ಯೂ ನಿಮ್ಮ ವೈಯಕ್ತಿಕ ವೆಚ್ಚಗಳು ಹೆಚ್ಚಾಗಬಹುದು. ಸ್ಪರ್ಧೆಗಳಲ್ಲಿ ಭಾಗವಹಿಸುವ ಜನರಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ ಮತ್ತು ನೀವು ಯಶಸ್ಸು ಪಡೆಯುತ್ತೀರಿ.

ನಿಮ್ಮ ಜೀವನ ಸಂಗಾತಿ ಅಥವಾ ಹಿರಿಯ ಸಹೋದರ ಸಹೋದರಿಯರಲ್ಲಿ ಯಾರಾದರೂ ಅರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಅದು ಆತಂಕಕ್ಕೆ ಕಾರಣವಾಗಬಹುದು. ನೀವು ಕೆಲವು ಪ್ರತಿಸ್ಪರ್ಧಿಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅನವಶ್ಯಕ ವಾದ ಮತ್ತು ಜಗಳದಲ್ಲಿ ತೊಡಗುವ ಮೂಳಕ ಸಮಯ ವ್ಯರ್ಥ ಮಾಡದಂತೆ ಸೂಚಿಸಲಾಗಿದೆ. ಏಕೆಂದರೆ ವಿವಾದದಿಂದ ನಿಮಗೆ ಲಾಭವಾಗುವುದಿಲ್ಲ. ನಿಮ್ಮ ಮಹಿಳಾ ಸಂಬಂಧಿಕರವನ್ನು ಗೌರವಿಸಿ. ನೀರಿನಿಂದ ಹರಡುವ ರೋಗಗಳಿಂದ ಜಾಗರೂಕರಾಗಿರಿ. ಏಕೆಂದರೆ ನೀವು ಅಂತಹ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ.

ಪರಿಹಾರ - ಶುಕ್ರವಾರ ಅಕ್ಕಿ ಮತ್ತು ಸಕ್ಕರೆಯ ದಾನ ಮಾಡಿ.

ಮಕರ

ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಕ್ರವು ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಐದನೇ ಮನೆಗೆ ಸಾಗುತ್ತದೆ. ಇದು ಪ್ರೀತಿಯ ಸಂಬಂಧ, ಅವಕಾಶ, ಆನಂದ, ಮಕ್ಕಳು, ಶಿಕ್ಷಣವನ್ನು ಪ್ರತಿನಿಧಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಪ್ರೀತಿಯ ಜೀವನದ ಬಗ್ಗೆ ಕಾಳಜಿ ವಹಿಸಿ. ಐದನೇ ಮನೆಯಲ್ಲಿ ಶುಕ್ರ ಸಂಚಾರವು ಆರೋಗ್ಯಕರ ಶಿಶುವನ್ನು ಗರ್ಭಧರಿಸುವ ಮತ್ತು ಜನಿಸುವ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಶೈಕ್ಷಣಿಕ ಪ್ರಯತ್ನವನ್ನು ಪ್ರಾರಂಭಿಸಬಹುದು. ಸರಿಯಾದ ಶಿಕ್ಷಣವನ್ನು ಗಳಿಸಲು ಇದು ಉತ್ತಮ ಸಮಯ.

ಶುಕ್ರ ಸಂಚಾರದ ಸಮಯದಲ್ಲಿ ನೀವು ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ಆರ್ಥಿಕ ವಿಷಯದಲ್ಲಿ ನೀವು ಆರಾಮದಾಯಕ ಸ್ಥಾನದಲ್ಲಿರುತ್ತೀರಿ. ಇನ್ನೂ ಒಂಟಿಯಾಗಿರುವ ಈ ರಾಶಿಚಕ್ರದ ಜನರು ಸಂಪೂರ್ಣ ಜೀವನ ಅವರನ್ನು ಬೆಂಬಲಿಸುವ ವ್ಯಕ್ತಿಯನ್ನು ಪ್ರಸ್ತಾಪಿಸಬಹುದು. ಇದಲ್ಲದೆ ಮೊದಲಿನಿಂದಲೇ ಪ್ರೀತಿಯ ಸಂಬಂಧದಲ್ಲಿರುವ ಜನರು ಅಹಂ ಅನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅನುಮತಿಸಬೇಡಿ. ವೃತ್ತಿ ಜೀವನದಲ್ಲಿ ಅಭುವೃದ್ಧಿ ಪಡೆಯಲು ಇದು ಅನುಕೂಲಕರ ಸಮಯ. ಏಕೆಂದರೆ ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಬಡ್ತಿ ಪಡೆಯುವ ಅಥವಾ ಒಂದು ಹೆಜ್ಜೆ ಮುಂದೆ ಸಾಗಲು ಅವಕಾಶ ಪಡೆಯಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರಿಗೂ ಶುಕ್ರ ಸಂಚಾರವು ಬಹಳ ಶುಭವೆಂದು ಸಾಬೀತಾಗಬಹುದು.

ಪರಿಹಾರ - ಉತ್ತಮ ಗುಣಮಟ್ಟದ ಓಪಲ್ ರತ್ನವನ್ನು ಧರಿಸಿ.

ಕುಂಭ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರವು ಒಂಬತ್ತನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಗೋಚರಿಸುತ್ತದೆ. ನಾಲ್ಕನೇ ಮನೆಯ ಮೂಲಕ ನಿಮ್ಮ ಕುಟುಂಬ ಮತ್ತು ಸಂಬಂಧಗಳು, ಸಂಪತ್ತಿ ಮತ್ತು ಗೃಹ ಜೀವನ ಮತ್ತು ತಾಯಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರ ಪ್ರಭಾವದ ಕ್ಷೇತ್ರವನ್ನು ಹೆಚ್ಚಿಸುತ್ತದೆ. ಈ ರಾಶಿಚಕ್ರದ ಜನರು ಮನೆಯನ್ನು ಸುಂದರಗೊಳಿಸಲು ಅಥವಾ ನವೀಕರಿಸಲು ಬಹಳ ಉತ್ಸುಕರಾಗಿರಬಹುದು. ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ಮನೆಯಲ್ಲಿ ಸಮಯ ಕಳೆಯಬೇಕು ಮತ್ತು ಮನೆಯ ಅಲಂಕಾರದೊಂದಿಗೆ ಸಂಬಂಧಗಳನ್ನು ಸಹ ಬಲಪಡಿಸಬೇಕು. ಇದರಿಂದಾಗಿ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯ ಮೇಲುಗೈ ಸಾಧಿಸುತ್ತದೆ.

ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ವೃತ್ತಿಪರ ವಿಷಯದಲ್ಲಿ ನಿಮ್ಮ ಸೃಜನಶೀಲ ಸಾಮರ್ಥ್ಯದಲ್ಲಿ ಹೆಚ್ಚಳವಾಗುತ್ತದೆ. ಇದರಿಂದಾಗಿ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಈ ಹಿಂದೆ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸಮಯದಲ್ಲಿ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ವಿದೇಶದಲ್ಲಿ ನೆಲೆಸಿರುವ ಈ ರಾಶಿಚಕ್ರದ ಜನರು ತಮ್ಮ ತಾಯ್ನಾಡಿಗೆ ಮರಳಲು ಅವಕಾಶವನ್ನು ಪಡೆಯಬಹುದು. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆದ ನಂತರ ಸಂತೋಷವಾಗಿರುತ್ತೀರಿ. ನಿಮ್ಮ ಮಾನಸಿಕ ಒತ್ತಡವೂ ಕಣ್ಮರೆಯಾಗುತ್ತದೆ ಮತ್ತು ಈ ಸಮಯದಲ್ಲಿ ನೀವು ಶಕ್ತಿಯುತವಾಗಿರುತ್ತೀರಿ. .

ಪರಿಹಾರ - ಶುಕ್ರ ದೇವರ ಅನುಗ್ರಹವನ್ನು ಪಡೆಯಲು ನೀವು ಆರು ಮುಖ ರುದ್ರಾಕ್ಷವನ್ನು ಧರಿಸಬೇಕು.


ಶನಿ ರಿಪೋರ್ಟ್ ಮೂಲಕ ನಿಮ್ಮ ಜೀವನದ ಮೇಲೆ ಶನಿ ದೇವರ ಪರಿಣಾಮ ಏನು ಎಂದು ತಿಳಿದುಕೊಳ್ಳಿ

ಮೀನಾ

ಮೀನಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರವು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಗೋಚರಿಸುತ್ತದೆ. ಇದು ಸಂವಹನ ಮತ್ತು ಕಿರಿಯ ಸಹೋದರ ಸಹೋದರಿಯರನ್ನು ಪ್ರತಿನಿಧಿಸುತ್ತದೆ. ಈ ಸಂಚಾರವು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಈ ಸಮಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರಾಗುವಿರಿ. ನೀವು ಸಂಗೀತ ಕಲೆ ಮತ್ತು ನಾಟಕದ ಕ್ಷೇತ್ರಕ್ಕೆ ಸಂಬಂಧಿಸಿದ್ದರೆ, ನೀವು ಲಾಭವನ್ನು ಪಡೆಯುತ್ತೀರಿ. ನಿಮ್ಮ ಸ್ನೇಹಿತರಿಗಾಗಿ ದುಬಾರಿ ವಸ್ತುಗಳನ್ನು ಖರೀದಿಸಲು ನಿಮ್ಮ ಹಣವನ್ನು ಸಹ ನೀವು ಖರ್ಚು ಮಾಡಬಹುದು.

ಯಾರೊಂದಿಗಾದರೂ ಮಾತನಾಡುವಾಗ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ತಪ್ಪು ಪದಗಳ ಬಳಕೆಯನ್ನು ತಪ್ಪಿಸಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ವೃತ್ತಿ/ವ್ಯಾಪಾರಕ್ಕೆ ಸಂಬಂಧಿಸಿದ ಪ್ರವಾಸಗಳು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅಲ್ಪಾವಧಿಯ ಪ್ರವಾಸಗಳು ಸಹ ಸಂತೋಷಕರವಾಗಿರುತ್ತವೆ. ಕೆಲವು ಜನರು ಮಾನಸಿಕ ಒತ್ತಡ ಮತ್ತು ಆತಂಕದಿಂದ ಬಳಲುತ್ತಬಹುದು. ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಲು ನೀವು ನಿಮ್ಮ ಸಹೋದ್ಯೋಗಿಗಳ ಮೇಲೆ ಅವಲಂಬಿಸಬೇಕಾಗಬಹುದು. ಆದರೆ ಚಿಂತಿಸಬೇಕಾಗಿಲ್ಲ ಏಕೆಂದರೆ ಕೆಲಸದ ಸ್ಥಳದ ವಾತಾವರಣವು ತುಂಬಾ ಬೆಂಬಲ ನೀಡುತ್ತದೆ.

ಪರಿಹಾರ - ಶುಕ್ರವಾರ ಯಾವುದೇ ದೇವಾಲಯಕ್ಕೆ ಹೋಗಿ ಬಿಳಿ ಸಿಹಿತಿಂಡಿಯನ್ನು ಅರ್ಪಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer