ದೇವ ದೀಪಾವಳಿ 2021: ಮಹತ್ವ, ಮುಹೂರ್ತ, ಮಾಡಬೇಕಾದ್ದು ಮತ್ತು ಮಾಡಬಾರದ್ದು - Dev Diwali 2021 in Kannada
ದೇವ ದೀಪಾವಳಿಯು ದೇವರಿಗೆ ಸಂಬಂಧಿಸಿದ ದೀಪಗಳ ಹಬ್ಬವಾಗಿದೆ ಮತ್ತು ಮುಖ್ಯವಾಗಿ ಭಾರತದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾರ್ತಿಕ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು, ಘಾಟ್ಗಳು 1 ಮಿಲಿಯನ್ಗಿಂತಲೂ ಹೆಚ್ಚು ಮಣ್ಣಿನ ದೀಪಗಳಿಂದ ಬೆಳಗುತ್ತವೆ. ಈ ದಿನ ದೇವರು ಭೂಮಿಗೆ ಬಂದು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಹಬ್ಬವನ್ನು ತ್ರಿಪುರ ಪೂರ್ಣಿಮಾ ಸ್ನಾನ ಎಂದೂ ಕರೆಯುತ್ತಾರೆ. ಈ ಮಂಗಳಕರ ಹಬ್ಬದ ಸಮಯದಲ್ಲಿ, ಮನೆಗಳನ್ನು ಎಣ್ಣೆಯ ದೀಪಗಳಿಂದ ಮತ್ತು ಮನೆಯ ಪ್ರವೇಶದ್ವಾರದಲ್ಲಿ ವಿವಿಧ ರೀತಿಯ ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ.
ವಿಶ್ವದ ಅತ್ಯುತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ ಮಾತಾಡಿ ಮತ್ತು ಕಾರ್ತಿಕ ಪೂರ್ಣಿಮೆಯಂದು ದೇವ ದೀಪಾವಳಿಯಿಂದಾಗುವ ಮಂಗಳಕರ ಸುದ್ದಿಗಳನ್ನು ತಿಳಿಯಿರಿ.
ಕಾರ್ತಿಕ ಪೂರ್ಣಿಮೆಯಂದು ದೇವ ದೀಪಾವಳಿ 2021
ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದಲ್ಲಿ ಬರುವ ಪೂರ್ಣಿಮೆಯೇ ಕಾರ್ತಿಕ ಪೂರ್ಣಿಮೆ, ಇದನ್ನು ದೇವ ದೀಪಾವಳಿ ಎಂದೂ ಕರೆಯುತ್ತಾರೆ. ಇದು ಬೆಳಕಿನ ಹಬ್ಬವಾದ ದೀಪಾವಳಿಯ ಹದಿನೈದು ದಿನಗಳ ನಂತರ ಬರುತ್ತದೆ. ಇದನ್ನು ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ವಾರಣಾಸಿಯಲ್ಲಿ ಹಬ್ಬದಂತೆ ಭಾರೀ ಉತ್ಸಾಹದಿಂದ ಆಚರಿಸಲಾಗುತ್ತದೆ.
ದೇವ ದೀಪಾವಳಿ 2021: ದಿನಾಂಕ ಮತ್ತು ಶುಭ ಮುಹೂರ್ತ
ದಿನಾಂಕ: 18ನೇ ನವೆಂಬರ್ 2021
ಭಾರತದ ನವ ದೆಹಲಿಯಲ್ಲಿ, ಕಾರ್ತಿಕ ಪೂರ್ಣಿಮೆ ವ್ರತ, ಮುಹೂರ್ತ
ಪೂರ್ಣಿಮೆ ತಿಥಿಯು ನವೆಂಬರ್ 18, 2021 ರಂದು 12:02:50 ಕ್ಕೆ ಪ್ರಾರಂಭವಾಗುತ್ತದೆ
ಪೂರ್ಣಿಮೆ ತಿಥಿಯು ನವೆಂಬರ್ 19, 2021 ರಂದು 14:29:33 ಕ್ಕೆ ಕೊನೆಗೊಳ್ಳುತ್ತದೆ
ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳ ಪರಿಹಾರಗಳಿಗಾಗಿ 250+ ಪುಟಗಳ ಅಸ್ಟ್ರೊಸೇಜ್ ಬೃಹತ್ ಜಾತಕ !
ಕಾರ್ತಿಕ ಪೂರ್ಣಿಮೆಯಂದು ದೇವ ದೀಪಾವಳಿಯ ಪ್ರಾಮುಖ್ಯತೆ
ಕಾರ್ತಿಕ ಪೂರ್ಣಿಮೆಯು ಸನಾತನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಕಾರ್ತಿಕ ಪೂರ್ಣಿಮೆಯು ಎಲ್ಲಾ ಮೂರು ಅಧಿಪತಿಗಳಾದ ಬ್ರಹ್ಮ, ವಿಷ್ಣು, ಶಿವನೊಂದಿಗೆ ಸಂಬಂಧ ಹೊಂದಿದೆ.
ನಂಬಿಕೆಗಳ ಪ್ರಕಾರ, ಇದು ಶಿವನು ತ್ರಿಪುರಾಸುರನೆಂಬ ರಾಕ್ಷಸನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ ಮತ್ತು ಈ ಕಾರಣದಿಂದಾಗಿ ದೇವತೆಗಳು ಸ್ವರ್ಗದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಿದ್ದರು ಎನ್ನಲಾಗುತ್ತದೆ. ಅಂದಿನಿಂದ, ವಾರಣಾಸಿಯಲ್ಲಿ ದೇವ ದೀಪಾವಳಿಯನ್ನು ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಲಾಗಿದೆ ಮತ್ತು ಘಟ್ಟಗಳು ಸಾವಿರಾರು ದೀಪಗಳೊಂದಿಗೆ ಜೀವ ಪಡೆಯುತ್ತವೆ. ಭಗವಂತ ಶಿವನನ್ನು ಸ್ವಾಗತಿಸಲು ಎಲ್ಲಾ ದೇವತೆಗಳು ಭೂಮಿಗೆ ಇಳಿಯುತ್ತಾರೆ ಎಂದು ನಂಬಲಾಗಿದೆ.
ವೈಷ್ಣವರು, ಕಾರ್ತಿಕ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಮತ್ತು ಕಾರ್ತಿಕ ಪೂರ್ಣಿಮೆಯಂದು ದಾನ - ಧರ್ಮ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸುತ್ತಾರೆ. ದೇವ ಉತ್ಥನಿ ಏಕಾದಶಿಯ ದಿನದಂದು ಪ್ರಾರಂಭವಾಗುವ ತುಳಸಿ ವಿವಾಹದ ಹಬ್ಬವು ಕಾರ್ತಿಕ ಪೂರ್ಣಿಮೆಯ ದಿನಕ್ಕಿಂತ ಮುಂಚಿತವಾಗಿ ಬರುತ್ತದೆ. ಪುರಾಣಗಳ ಪ್ರಕಾರ, ದೇವ ಉತ್ಥಾನಿ ಏಕಾದಶಿಯಿಂದ ಕಾರ್ತಿಕ ಪೂರ್ಣಿಮೆಯ ನಡುವೆ ಯಾವುದೇ ದಿನದಂದು ತುಳಸಿ ವಿವಾಹವನ್ನು ನಡೆಸಬಹುದು ಮತ್ತು ಅನೇಕ ಜನರು ಕಾರ್ತಿಕ ಪೂರ್ಣಿಮೆಯ ದಿನವನ್ನು ತುಳಸಿ ದೇವಿ ಮತ್ತು ಭಗವಂತ ವಿಷ್ಣುವಿನ ಪ್ರತಿರೂಪವಾದ ಶಾಲಿಗ್ರಾಮದ ವಿವಾಹವನ್ನು ಮಾಡಲು ಆಯ್ಕೆ ಮಾಡುತ್ತಾರೆ. ಈ ದಿನ ಬ್ರಹ್ಮಾಜಿಯವರ ಪುಷ್ಕರ ಸರೋವರವು ರಾಜಸ್ಥಾನದ ಪುಷ್ಕರ್ನಲ್ಲಿ ಭೂಮಿಗೆ ಬಂದಿತು ಎಂದು ಹೇಳಲಾಗುತ್ತದೆ. ಪುಷ್ಕರ ಮೇಳವು ದೇವ ಉತ್ಥಾನಿ ಏಕಾದಶಿಯಂದು ಪ್ರಾರಂಭವಾಗುತ್ತದೆ ಮತ್ತು ಕಾರ್ತಿಕ ಪೂರ್ಣಿಮೆಯವರೆಗೆ ಮುಂದುವರಿಯುತ್ತದೆ. ಪುಷ್ಕರದಲ್ಲಿರುವ ಬ್ರಹ್ಮದೇವನ ಗೌರವಾರ್ಥವಾಗಿ ಈ ಜಾತ್ರೆ ನಡೆಯುತ್ತದೆ. ಕಾರ್ತಿಕ ಪೂರ್ಣಿಮೆಯಂದು ಪುಷ್ಕರ ಸರೋವರದಲ್ಲಿ ಆಧ್ಯಾತ್ಮಿಕ ಸ್ನಾನವನ್ನು ಮಾಡುವುದು ಫಲಪ್ರದವೆಂದು ಪರಿಗಣಿಸಲಾಗಿದೆ.
ಅದೃಷ್ಟ ನಿಮಗೆ ಅನುಕೂಲಕರವಾಗಿದೆಯೇ ಅಥವಾ ಪ್ರತಿಕೂಲವಾಗಿದೆಯೇ? ರಾಜಯೋಗ ವರದಿ ಎಲ್ಲವನ್ನೂ ಬಹಿರಂಗಪಡಿಸುತ್ತದೆ!
ಧಾರ್ಮಿಕ ಪ್ರಾಮುಖ್ಯತೆ
ಈ ದಿನದಂದು ನಾವು ದೀಪಗಳನ್ನು ಬೆಳಗಿಸಿದರೆ, ನಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ, ಈ ಕಾರಣಕ್ಕಾಗಿಯೇ ಪೂರ್ವಜರಿಗೆ ನೈವೇದ್ಯವನ್ನು ಶಿಫಾರಸು ಮಾಡಲಾಗಿದೆ. ಗಂಗಾ ಅಥವಾ ಇನ್ನಾವುದೇ ಪವಿತ್ರ ನದಿಯಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸ್ನಾನವನ್ನು ಮಾಡುವುದರಿಂದ, ನಮ್ಮ ಧರ್ಮಗ್ರಂಥಗಳ ಪ್ರಕಾರ ಭಗವಂತ ವಿಷ್ಣುವಿನ ಆಶೀರ್ವಾದದೊಂದಿಗೆ ಒಬ್ಬರು ಮೋಕ್ಷವನ್ನು ಪಡೆಯುತ್ತಾರೆ.
ತುಪ್ಪ ಅಥವಾ ಎಳ್ಳಿನ ಎಣ್ಣೆಯ ದೀಪಸ್ತಂಭವನ್ನು ಸಂಜೆಯ ಸಮಯದಲ್ಲಿ ಬೆಳಗಬೇಕೆಂದು ಸಲಹೆ ನೀಡಲಾಗುತ್ತದೆ ಏಕೆಂದರೆ ಅದು ಅತ್ಯಂತ ಅನುಕೂಲಕರವಾಗಿದೆ. ಜೀವನದ ಎಲ್ಲಾ ದುಃಖಗಳನ್ನು ದೂರ ಮಾಡಲು ಶಿವನ ಮುಂದೆ ದೀಪವನ್ನು ಬೆಳಗಿಸಬೇಕು. ದುಷ್ಟ ದೃಷ್ಠಿಗಳ ಸಮಸ್ಯೆಯಿಂದ ಬಳಲುತ್ತಿರುವವರು, ಅದರಿಂದ ಉಂಟಾಗುವ ದುಷ್ಪರಿಣಾಮಗಳಿಂದ ಪರಿಹಾರ ಪಡೆಯಲು 3 ಮುಖಿ ದೀಪವನ್ನು ಬೆಳಗಿಸಬಹುದು ಮತ್ತು ಮಕ್ಕಳ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಸ್ಥಳೀಯರು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಲು 6 ಮುಖಿ ದೀಪಗಳನ್ನು ಬೆಳಗಿಸಬಹುದು.
ಕಾರ್ತಿಕ ಪೂರ್ಣಿಮೆಯ ದೇವ ದೀಪಾವಳಿ 2021ರಂದು ಮಾಡಬೇಕಾದ್ದು ಮತ್ತು ಮಾಡಬಾರದ್ದು
ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಅದು ಸಾಧ್ಯವಾಗದಿದ್ದರೆ, ನೀವು ಸ್ನಾನ ಮಾಡುವ ನೀರಿಗೆ ಕೆಲವು ಹನಿ ಗಂಗಾಜಲವನ್ನು ಸೇರಿಸಬಹುದು. ಹೀಗೆ ಮಾಡುವುದರಿಂದ ಜೀವನದ ಹಿಂದಿನ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂದು ನಂಬಲಾಗಿದೆ.
ಸತ್ಯನಾರಾಯಣ ಪೂಜೆ ಮತ್ತು ಕಥೆಯನ್ನು ನಡೆಸುವುದು ಪ್ರಯೋಜನಕಾರಿ ಎಂದು ಸಾಬೀತಾಗಿದೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ.
ತುಳಸಿ ಗಿಡದ ಮುಂದೆ ದೀಪಗಳನ್ನು ಬೆಳಗಿಸುವುದು ಫಲಪ್ರದವಾಗಿದೆ.
ಪೂರ್ವಜರ ಆತ್ಮಗಳ ಶಾಂತಿಗಾಗಿ ದೀಪಗಳನ್ನು ಬೆಳಗಿಸಿ.
ಪೂರ್ವ ದಿಕ್ಕಿಗೆ ಎದುರಾಗಿ ದೀಪಗಳನ್ನು ಬೆಳಗಿಸುವುದರಿಂದ ದೇವರ ಆಶೀರ್ವಾದವನ್ನು ಪಡೆಯಲು ಸಹಾಯವಾಗುತ್ತದೆ, ಸ್ಥಳೀಯರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಪಡೆಯುತ್ತಾರೆ. ಅಲ್ಲದೆ, ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ.
ರಾತ್ರಿಯ ಸಮಯದಲ್ಲಿ ಚಂದ್ರನಿಗೆ ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ಅರ್ಪಿಸುವುದು ನಿಮ್ಮ ಜೀವನದಲ್ಲಿ ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ.
ವಸ್ತ್ರ, ಆಹಾರ, ಪೂಜಾ ಸಾಮಗ್ರಿ, ದೀಪಗಳಂತಹ ವಸ್ತುಗಳನ್ನು ದಾನ ಮಾಡುವುದು ಅದೃಷ್ಟವನ್ನು ತರುತ್ತದೆ ಏಕೆಂದರೆ ಯಾವ ದೇವತೆಯ ಅವತಾರವು ಯಾವ ಸಮಯದಲ್ಲಿ ನಿಮ್ಮ ಮೇಲೆ ಆಶೀರ್ವಾದ ತೋರುತ್ತದೆ ಎಂದು ನಿಮಗೆ ತಿಳಿದಿಲ್ಲ.
ನಿಮ್ಮ ಮನೆಯ ಮುಖ್ಯ ಬಾಗಿಲಿನ ಮೇಲೆ ಮಾವಿನ ಎಲೆ ತೋರಣ ಕಟ್ಟಿ.
ಈ ದಿನ ಕೋಪ ಮತ್ತು ಕ್ರೌರ್ಯದಿಂದ ದೂರವಿರಲು ಸಲಹೆ ನೀಡಲಾಗುತ್ತದೆ.
ಆಲ್ಕೋಹಾಲ್ ಅಥವಾ ಯಾವುದೇ ತಾಮಸಿಕ ಆಹಾರವನ್ನು ಸೇವಿಸಬೇಡಿ (ನಾನ್-ವೆಜ್ ಆಹಾರ).
ದಯವಿಟ್ಟು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಿ.
ಕಾರ್ತಿಕ ಪೂರ್ಣಿಮೆಯಂದು ತುಳಸಿ ಎಲೆಗಳನ್ನು ಮುಟ್ಟಬೇಡಿ ಅಥವಾ ಕೀಳಬೇಡಿ.
ಈ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುವುದು ಸೂಕ್ತ.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಆಸ್ಟ್ರೋಸೇಜ್ ಆನ್ಲೈನ್ ಅಂಗಡಿ ಗೆ ಭೇಟಿ ನೀಡಿ.
ಆಸ್ಟ್ರೋಸೇಜ್ ಜೊತೆಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2026
- राशिफल 2026
- Calendar 2026
- Holidays 2026
- Shubh Muhurat 2026
- Saturn Transit 2026
- Ketu Transit 2026
- Jupiter Transit In Cancer
- Education Horoscope 2026
- Rahu Transit 2026
- ராசி பலன் 2026
- राशि भविष्य 2026
- રાશિફળ 2026
- রাশিফল 2026 (Rashifol 2026)
- ರಾಶಿಭವಿಷ್ಯ 2026
- రాశిఫలాలు 2026
- രാശിഫലം 2026
- Astrology 2026






