ಕುಂಭ ರಾಶಿಯಲ್ಲಿ ಗುರು ಸಂಚಾರ ( 5th April 2021 )

ವೈದಿಕ ಜ್ಯೋತಿಷ್ಯದಲ್ಲಿ, ಗುರು ಗ್ರಹವನ್ನು ಅತ್ಯಂತ ಪ್ರಯೋಜನಕಾರಿ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಇದು ಆಧ್ಯಾತ್ಮಿಕತೆ, ಯಶಸ್ಸು, ಸಾಧನೆ, ಸಮೃದ್ಧಿ , ಸೌಭಾಗ್ಯ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಅದೃಷ್ಟ ಮತ್ತು ವೃತ್ತಿ ಜೀವನದ ಅಂಶವೆಂದು ಸಹ ಪರಿಗಣಿಸಲಾಗಿದೆ. ಮುಂಬರುವ ದಿನಗಳಲ್ಲಿ ಕುಂಭ ರಾಶಿಯಲ್ಲಿ ಗುರುವಿನ ಸಂಹಾರವು ಸಂಭವಿಸಲಿದೆ. ಈ ಸಂಚಾರವು ಏಪ್ರಿಲ್ ತಿಂಗಳ ಮೊದಲ ವಾರದದಿಂದ ಸೆಪ್ಟೆಂಬರ್ 2022 ಮಧ್ಯದ ವರೆಗೆ ಇರಲಿದೆ. ಎಲ್ಲಾ ಗ್ರಹಗಳಲ್ಲಿ ಗುರುವು ದೊಡ್ಡದು. ಇದರ ಸಂಚಾರವು ಸುಮಾರು 13 ತಿಂಗಳ ವರೆಗೆ ಇರುತ್ತದೆ. ಆದ್ದರಿಂದ ಗುರು ಗ್ರಹವು ಸುಮಾರು ಒಂದು ವರ್ಷದವರೆಗೆ ಒಂದು ರಾಶಿಯಲ್ಲಿ ಸಂಚರಿಸಲಿದೆ, ಇದು ಖಂಡಿತವಾಗಿ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹುಡುಗಿಗಾಗಿ, ಗುರು ಗ್ರಹವು ಗಂಡನನ್ನು ಪ್ರತಿನಿಧಿಸುತ್ತದೆ.

ನಿಮ್ಮ ಜಾತಕದಲ್ಲಿ ಗುರು ಗ್ರಹದ ಪರಿಣಾಮ ಏನು ಎಂದು ತಿಳಿಯಲು ನಮ್ಮ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಗುರುವು ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಇದು ರಾಶಿಚಕ್ರದ ಹನ್ನೊಂದನೇ ರಾಶಿ, ಆದ್ದರಿಂದ ಇದನ್ನು ಜಾತಕದಲ್ಲಿ ಹನ್ನೊಂದನೇ ಮನೆಗೆ ಸಂಬಂಧಿಸಿದ ವಿಷಯಗಳಾದ ಲಾಭ, ಆಸೆಗಳು, ಇತ್ಯಾದಿಗಳ ಅಂಶವೆಂದು ಸಹ ಪರಿಗಣಿಸಲಾಗಿದೆ. ಇದಲ್ಲದೆ ಕುಂಭ ರಾಶಿಯು ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನೆ, ಸಮಾಜದ ಉನ್ನತಿ, ಉನ್ನತ ಗುರಿ ಮತ್ತು ಪ್ರಶಸ್ತಿಗಳನ್ನು ಪ್ರತಿನಿಧಿಸುತ್ತದೆ.

ಕುಂಭ ರಾಶಿಯಲ್ಲಿ ಗುರು ಸಂಚಾರವು 5 ಏಪ್ರಿಲ್ 2021 ರಿಂದ 15 ಸೆಪ್ಟೆಂಬರ್ 2021 ವರೆಗೆ ಮತ್ತು ನಂತರ 20 ನವೆಂಬರ್ 2021 ರಿಂದ 13 ಸೆಪ್ಟೆಂಬರ್ 2022 ವರೆಗೆ ಇರುತ್ತದೆ.

ಗುರು ಸಂಚಾರವು ಕುಂಭ ರಾಶಿಯಲ್ಲಿ 5 ಏಪ್ರಿಲ್ 2021 ರಂದು ಸಂಜೆ 06 ಗಂಟೆ, 15 ಸೆಪ್ಟೆಂಬರ್ 2021 ಬೆಳಿಗ್ಗೆ 4 ಗಂಟೆ 22 ನಿಮಿಷ ವರೆಗೆ ಇರುತ್ತದೆ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.

Read in English: Jupiter Transit in Aquarius (5 April 2021)

  1. ಮೇಷ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಗುರು ಸಂಚಾರವು ಹನ್ನೊಂದನೇ ಮನೆಯಲ್ಲಿ ಗೋಚರಿಸುತ್ತದೆ. ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮೇಷ ರಾಶಿಚಕ್ರದ ಸ್ಥಳೀಯರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇರ್ ಮಾರ್ಕೆಟ್ ಮೂಲಕ ಲಾಭ ಗಾಳಿಸುವುದನ್ನು ಕಾಣಲಾಗುತ್ತಿದೆ. ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರದ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಇದಲ್ಲದೆ ಗುರುವಿನ ದುರ್ಬಲ ಸ್ಥಾನವನ್ನು ಹೊಂದಿರುವ ಜನರು ಈ ಸಂಚಾರದ ಸಮಯದಲ್ಲಿ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುತ್ತಾರೆ. ವೃತ್ತಿ ಜೀವನದ ಅಭಿವೃದ್ಧಿಗೆ ಇದು ಉತ್ತಮ ಸಮಯವಾಗಿರುತ್ತದೆ ಆದ್ದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ನಿಮ್ಮ ಪ್ರಗತಿಯಾಗುತ್ತದೆ. ಆದಾಗ್ಯೂ, ಸರ್ಕಾರಿ ವಲಯಕ್ಕೆ ಸಂಬಂಧಿಸಿದ ಜನರು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರ್ಥಿಕವಾಗಿ ನೀವು ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಹಣಕಾಸು ಖರ್ಚು ಮಾಡಬೇಕಾಗಬಹುದು. ವಿಶೇಷವಾಗಿ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಹೂಡಿಕೆ ಮಾಡುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ತಮ್ಮ ಜೀವನೋಪಾಯಕ್ಕಾಗಿ ಇತರರ ಮೇಲೆ ಅವಲಂಬಿಸಿರುವ ಜನರು ಈ ಸಮಯದಲ್ಲಿ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಡಲು ನಿಮಗೆ ಸೂಚಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಅನುಕೂಲಕರವಾಗಿರುತ್ತದೆ. ಈ ರಾಶಿಚಕ್ರದ ವಿವಾಹಿತ ಜನರು ಈ ಸಮಯದಲ್ಲಿ ಉತ್ತಮ ಸಮಯವನ್ನು ಆನಂದಿಸುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ ಇನ್ನೂ ಒಂಟಿಯಾಗಿರುವ ಜನರು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಸಬಹುದು.ಆರೋಗ್ಯದ ಬಗ್ಗೆ ಮಾತನಾಡಿದರೆ, ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ. ಆದಾಗ್ಯೂ ವೃದ್ಧರು ಕಾಲುಗಳಲ್ಲಿ ನೋವು, ಕೀಲುನೋವು ಅಥವಾ ಹೊಟ್ಟೆ ನೋವಿನ ಸಮಸ್ಯೆಯನ್ನು ಹೊಂದಿರಬಹುದು. ಕುಂಭ ರಾಶಿಯಲ್ಲಿ ಗುರುವಿನ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.

ಪರಿಹಾರ - ನಿಮ್ಮ ಹಣೆಯ ಮೇಲೆ ಹಳದಿ ಅಥವಾ ಶ್ರೀಗಂಧದ ತಿಲಕವನ್ನು ಹಚಿಸುವುದರಿಂದ ಗುರುವಿನ ಲಾಭವನ್ನು ನೀವು ಪಡೆಯಬಹುದು.

  1. ವೃಷಭ ರಾಶಿ

ಸಂಚಾರದ ಈ ಸಮಯದಲ್ಲಿ ಗುರು ಗ್ರಹವು ವೃಷಭ ರಾಶಿಚಕ್ರದ ಸ್ಥಳೀಯರ ವೃತ್ತಿಪರ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಯಲ್ಲಿ ಗೋಚರಿಸುತ್ತದೆ. ವೃತ್ತಿ ಜೀವನದ ದೃಷ್ಟಿಕೋನದಿಂದ ಈ ಸಂಹಾರವು ಹೆಚ್ಚು ಉತ್ತಮವಾಗಿರುವುದಿಲ್ಲ. ನಿಮ್ಮ ಪ್ರಸ್ತುತ ಉದ್ಯೋಗವನ್ನು ಮುಂದುವರಿಸಲು ಸೂಚಿಸಲಾಗಿದೆ ಮತ್ತು ನಿಮ್ಮ ಚಿತ್ರವನ್ನು ಹದಗೆಡಿಸುವಂತಹ ಪರಿಸ್ಥಿತಿಗಳಲ್ಲಿ ನೀವು ತಾಳ್ಮೆ ಮತ್ತು ಧೈರ್ಯದಿಂದಿರಬೇಕು. ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ಇದರಿಂದಾಗಿ ಪರಿಸ್ಥಿತಿಗಳು ಇನ್ನಷ್ಟು ನಿಮ್ಮ ವಿರುದ್ಧವಾಗುವ ಸಾಧ್ಯತೆ ಇದೆ. ಆದಾಗ್ಯೂ, ಹಿರಿಯರ ಮಾರ್ಗದರ್ಶನವು ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಹಯ ಮಾಡುತ್ತವೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರವೇಶ ಪರೀಕ್ಷೆ ನೀಡುತ್ತಿರುವ ಜನರು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಸಿಲುಕಿಕೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಪೂರ್ವಜರ ಸಂಪತ್ತಿನ ಮೂಲಕ ಲಾಭವನ್ನು ಪಡೆಯಲು ಈ ಸಮಯವು ಉತ್ತಮವಾಗಿದೆ. ಆದ್ದರಿಂದ ತಜ್ಞರ ಸಲಹೆಯ ನಂತರ ಮಾತ್ರ ಈ ಸಮಯದಲ್ಲಿ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಮ್ಮ ಸಂಬಂಧಗಳ ಮೇಲೆ ದೃಷ್ಟಿ ಹಾಕಿದರೆ, ಈ ಸಂಚಾರದ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿಮ್ಮ ವೈಯಕ್ತಿಕ ಜೀವನವನ್ನು ಹೊರತುಪಡಿಸಿ ನೀವು ನಿಮ್ಮ ಕೆಲಸದತ್ತ ಹೆಚ್ಚು ಗಮನ ಹರಿಸಲು ಪ್ರಯತ್ನಿಸುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡಿದರೆ, ಕಾಲೋಚಿತ ಬದಲಾವಣೆಗಳಿಂದಾಗಿ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಸಮಸ್ಯೆಗಳು ನಿಮಗೆ ಉಂಟಾಗಬಹುದು. ಆದ್ದರಿಂದ ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ನಿಮಗೆ ಹೊಟ್ಟೆ ನೋವಾಗಬಹುದು.

ಪರಿಹಾರ - ವೃದ್ದರು ಮತ್ತು ಗುರುಗಳಿಗೆ ಬಾಳೆಹಣ್ಣು ಮತ್ತು ಸಿಹಿತಿಂಡಿಗಳನ್ನು ನೀಡಿ.

  1. ಮಿಥುನ

ಗುರು ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರ ಅಂತರರಾಷ್ಟ್ರೀಯ ಪ್ರವಾಸಗಳು, ಆಧ್ಯಾತ್ಮಿಕತೆ ಮತ್ತು ಅದೃಷ್ಟದ ಒಂಬತ್ತನೇ ಮನೆಯಲ್ಲಿ ಸಂಭವಿಸಲಿದೆ ಮತ್ತು ವೃತ್ತಿಪರ ಮತ್ತು ವ್ಯಾಪಾರಕ್ಕೆ ತುಂಬಾ ಒಳ್ಳೆಯ ಸಮಯವನ್ನು ತರುತ್ತದೆ. ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಉಂಟಾಗುವ ಸಾಧ್ಯತೆಯಿದೆ. ಇದು ನಿಮ್ಮ ಅನುಭವಗಳನ್ನು ಹೆಚ್ಚಿಸುವಲ್ಲಿ ನಿಯಂಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರ ಕೆಲವು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಆಮದು - ರಫ್ತು ವ್ಯಾಪಾರಕ್ಕೆ ಸಂಬಂಧಿಸಿದ ಸ್ಥಳೀಯರು ವಿದೇಶ ಪ್ರಯಾಣ ಮತ್ತು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹ ಅವಕಾಶವನ್ನು ಪಡೆಯಬಹುದು. ಆರ್ಥಿಕವಾಗಿ, ಈ ಸಂಚಾರವು ಶುಭವಾಗಿರುತ್ತದೆ ಏಕೆಂದರೆ ಬ್ಯಾಂಕಿಂಗ್ ಮತ್ತು ಹಣಕಾಸಿನ ಕೆಲಸಗಳನ್ನು ಮಾಡುವ ವೃತ್ತಿಪರ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಗಳಿಸುತ್ತೀರಿ. ಹೊಸ ಸಂಪತ್ತನ್ನು ಖರೀದಿಸಲು ಮತ್ತು ಮಾರಾಟ ಮಾಡಲು ನಿಮಗೆ ಅನುಕೂಲಕರವಾಗಬಹುದು. ವೈವಾಹಿಕ ಜೋಡಿಗಳು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ಇನ್ನೂ ಒಂಟಿಯಾಗಿರುವವರು ಪ್ರೀತಿ ಪಡೆಯುತ್ತಾರೆ ಮತ್ತು ಮೊದಲೇ ಪ್ರೀತಿಯ ಸಂಬಂಧದಲ್ಲಿರುವ ಜನರು ಈ ಸಮಯದಲ್ಲಿ ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತಾರೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಂಚಾರವು ನಿಮಗೆ ಉತ್ತಮ ಆರೋಗ್ಯವನ್ನು ತರುತ್ತದೆ. ಮನೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ಉತ್ತಮ ಆಯ್ಕೆಯಾಗಿದೆ.

ಪರಿಹಾರ - ಚಿನ್ನವನ್ನು ಯಾವುದೇ ರೀತಿಯ ಉಂಗುರ ಅಥವಾ ಚೈನ್ ನಲ್ಲಿ ಧರಿಸುವುದು ಗುರು ಗ್ರಹವನ್ನು ಬಲಪಡಿಸುವ ಕೆಲಸ ಮಾಡುತ್ತದೆ.

  1. ಕರ್ಕ

ಗುರು ಗ್ರಹವು ಕರ್ಕ ರಾಶಿಚಕ್ರದ ಸ್ಥಳೀಯರ ಮನಶ್ಶಾಸ್ತ್ರಜ್ಞ, ಹಠಾತ್ ಲಾಭ/ಹಾನಿ ಮತ್ತು ಉತ್ತರಾಧಿಕಾರದ ಎಂಟನೇ ಮನೆಯಲ್ಲಿ ಗೋಚರಿಸುತ್ತದೆ. ವೃತ್ತಿಪರ, ಹಣಕಾಸು ಮತ್ತು ಸಂಬಂಧಗಳ ವಿಷಯಗಳಲ್ಲಿ ಈ ಸಮಯವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬಲವನ್ನು ನೀಡುತ್ತದೆ. ಆದಾಗ್ಯೂ, ನಿಮಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ವೃತ್ತಿ ಜೀವನದಲ್ಲಿ ನೀವು ಗಮನಾರ್ಹ ಪ್ರಗತಿಯಾಗಲು ನೀವು ಅವಕಾಶವನ್ನು ಪಡೆಯಬಹುದು. ಉದ್ಯೋಗದಲ್ಲಿ ತೊಡಗಿರುವ ಜನರು ಹೊಸ ಅವಕಾಶವನ್ನು ಪಡೆಯಬಹುದು ಮತ್ತು ನಿಮ್ಮ ಹಿಂದಿನ ಹೂಡಿಕೆಯ ಮೂಲಕ ನೀವು ಲಾಭವನ್ನು ಪಡೆಯಲು ಸಹ ಸಾಧ್ಯವಾಗುತ್ತದೆ. ನಿಮ್ಮ ಸಂಬಂಧಗಳ ಮೇಲೆ ದೃಷ್ಟಿ ಹಾಕಿದರೆ, ವಿವಾಹಿತ ಜನರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ.ಇದಲ್ಲದೆ ಕುಂಭ ರಾಶಿಯಲ್ಲಿ ಗುರುವು, ನಿಮ್ಮ ಸಹೋದರ - ಸಹೋದರಿಯರು ಮತ್ತು ಚಿಕ್ಕಪ್ಪನ ಮಕ್ಕಳೊಂದಿಗಿನ ಸಂಬಂಧಕ್ಕೆ ಉತ್ತಮ ಸಮಯವಾಗಿರುತ್ತದೆ. ಆರ್ಥಿಕವಾಗಿ ಸಂಚಾರದ ಈ ಸಮಯವು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು.ಆದ್ದರಿಂದ ಯಾವುದೇ ಪ್ರಮುಖ ಹೂಡಿಕೆ ಮಾಡುವ ಮೊದಲು ಹಿರಿಯರಿಂದ ಉತ್ತಮ ಮಾರ್ಗದಶವನ್ನು ಪಡೆಯಲು ಸೂಚಿಸಲಾಗಿದೆ. ಹಿಂದಿನ ಹೂಡಿಕೆಯ ಮೂಲಕ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಲಾಭವನ್ನು ಪಡೆಯುವಲ್ಲಿ ಸಹಾಯ ಪಡೆಯಬಹುದು. ಸಂಪತ್ತು ಅಥವಾ ಇತರ ಯಾವುದೇ ಅಮೂಲ್ಯವಾದ ವಸ್ತುವನ್ನು ಖರೀದಿಸಲು ಲೋನ್ ಗಾಗಿ ಅರ್ಜಿ ಸಲ್ಲಿಸಲು ಇದು ಅತ್ಯುತ್ತಮ ಸಮಯ. ಏಕೆಂದರೆ ಈ ಸಮಯದಲ್ಲಿ ಲೋನ್ ಅಥವಾ ಸಾಲವನ್ನು ಪಡೆಯುವ ಉತ್ತಮ ಸಾಧ್ಯತೆ ಇದೆ. ಕರ್ಕ ರಾಶಿಚಕ್ರದ ಸ್ಥಳೀಯರ ಆರೋಗ್ಯದ ಬಗ್ಗೆ ಮಾತನಾಡಿದರೆ, ಕೆಲವು ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮನ್ನು ಆರೋಗ್ಯವಾಗಿರಿಸಲು ಉತ್ತಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.

ಪರಿಹಾರ - ಗುರುವು ದುರ್ಬಲ ಮತ್ತು ಪ್ರತಿಕೂಲ ಸ್ಥಿತಿಯಲ್ಲಿದ್ದರೆ, ನೀವು ನಿಮ್ಮ ಸಹೋದರ ಸಹೋದರಿಯನ್ನು ಬೆಂಬಲಿಸಬೇಕು.

  1. ಸಿಂಹ

ಸಿಂಹ ರಾಶಿಚಕ್ರದ ಸ್ಥಳೀಯರ ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಯಲ್ಲಿ ಗುರುವಿನ ಸಂಚಾರವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಕೆಲಸದ ಸ್ಥಳದಲ್ಲಿನ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ನಿಮ್ಮ ಗುರಿಯನ್ನು ಶೀಘ್ರದಲ್ಲೇ ಸಾಧಿಸಲು ನಿಮಗೆ ಸಹಾಯ ಮಾಡುತ್ತವೆ. ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿದೇಶಕ್ಕೆ ಹೋಗಲು ಅವಕಾಶ ಪಡೆಯಬಹುದು. ಆರ್ಥಿಕವಾಗಿ, ಈ ಸಮಯದಲ್ಲಿ ಶೇರ್ ಮಾರ್ಕೆಟ್ ನಲ್ಲಿ ಯಾವುದೇ ಹೂಡಿಕೆ ಮಾಡುವುದು ನಿಮಗೆ ಸರಿಯಲ್ಲ. ನೀವು ಪ್ರಮುಖವಾದ ಹೂದ್ದಿಕೆ ಮಾಡಲು ಬಯಸುತ್ತಿದ್ದರೆ, ನೀವು ಎರಡು ಬಾರಿ ಯೋಚಿಸಬೇಕು. ವೈಯಕ್ತಿಕ ಜೀವನದಲ್ಲಿ, ವೈವಾಹಿಕ ಜೋಡಿಗಳು ತಮ್ಮ ಸಂಬಂಧವನ್ನು ಸುಧಾರಿಸಲು ಯಾವುದೇ ವಿವಾದವನ್ನು ತಪ್ಪಿಸಲು ಸೂಚಿಸಲಾಗಿದೆ. ಪ್ರೀತಿಯ ಸಂಬಂಧದಲ್ಲಿರುವ ಜನರಿಗೆ ಈ ಸಮಯವು ಸಾಕಷ್ಟು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆರೋಗ್ಯದ ದೃಷ್ಟಿಕೋನದಿಂದ ಈ ರಾಶಿಚಕ್ರದ ಸ್ಥಳೀಯರು ಅನುಕೂಲಕರ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ಆದರೂ ಸಿಂಹ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸೂಚಿಸಲಾಗಿದೆ. ಏಕೆಂದರೆ ಧೂಳಿನಿಂದ ನೀವು ಸೋಂಕಿಗೆ ಒಳಗಾಗಬಹುದು ಅಥವಾ ಬೀಳುವಿಕೆಯಿಂದ ಗಾಯಗೊಳ್ಳಬಹುದು.

ಪರಿಹಾರ - ನೀವು ಪ್ರತಿದಿನ ಕೇಸರಿಯನ್ನು ಸೇವಿಸಿ ಅಥವಾ ಇದನ್ನು ಒಕ್ಕುಳ, ಕಂಠ, ಹಣೆ, ಕಿವಿಯ ರಿಂಗ್ ಮತ್ತು ನಾಲಿಗೆಯ ಮೇಲೆ ಹಚ್ಚಿಸಿ.

  1. ಕನ್ಯಾ

ಗುರು ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರ ಸಾಲ, ಸ್ಪರ್ಧೆ ಮತ್ತು ಶತ್ರುಗಳ ಆರನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಉದ್ಯೋಗಪರರು ತುರಾತುರಿಯಲ್ಲಿ ರಾಜೀನಾಮೆ ನೀಡಬಾರದು. ಏಕೆಂದರೆ ಇದರ ನಂತರ ಅವರು ಉತ್ತಮ ಅವಕಾಶವನ್ನು ಪಡೆಯುವ ಸಾಧ್ಯತೆಗಳು ಕಡಿಮೆ ಇದೆ. ದೀರ್ಘಕಾಲದ ಹೂಡಿಕೆಗಳಿಗೆ ಜೂನ್ ಮತ್ತು ಜೂಲೈ ತಿಂಗಳು ನಿಮಗೆ ಅತ್ಯಂತ ಅನುಕೂಲಕರವಾಗಿರುತ್ತವೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಈ ಸಮಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲಾಗುತ್ತದೆ, ಜೀವನ ಸಂಗಾತಿಯೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ಹೊಂದಿದ್ದರೆ, ಈ ಸಮಯದಲ್ಲಿ ಅದು ದೂರವಾಗುತ್ತದೆ. ಈ ಸಂಚಾರದ ಸಮಯದಲ್ಲಿ ವೈವಾಹಿಕ ಜನರು ಜೀವನ ಸಂಗಾತಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಆನಂದಿಸುತ್ತಾರೆ. ಒಂಟಿಯಾಗಿರುವವರು ಶೀಘ್ರದಲ್ಲೇ ಅಪೇಕ್ಷಿತ ಸಂಗಾತಿಯನ್ನು ಭೇಟಿಯಾಗಲು ಅವಕಾಶವನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಕೋನದಿಂದ ಆರನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ, ಶೀತ ಅಥವಾ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಆದ್ದರಿಂದ ವೈದ್ಯರ ಸಲಹೆಯಂತೆ ಕೆಲಸ ಮಾಡುವುದು ಈ ರೀತಿಯ ಕಳವಳಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.

ಪರಿಹಾರ - ನಿರಂತರವಾಗಿ ಎಂಟು ದಿನಗಳ ವರೆಗೆ ಧಾರ್ಮಿಕ ಸ್ಥಳದಲ್ಲಿ ಅರಿಶಿನದ ದಾನ ಮಾಡುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ತುಲಾ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಕುಂಭ ರಾಶಿಯಲ್ಲಿ ಗುರುವಿನ ಸಂಚಾರವು ಶಿಕ್ಷಣ, ಪ್ರೀತಿ ಮತ್ತು ಪ್ರಣಯದ ಐದನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಕ ಮತ್ತು ವೃತ್ತಿಪರ ಜನರಿಗೆ ಕಠಿಣ ಪರಿಶ್ರಮ ಮಾಡಲು ಸೂಚಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ನೀವು ಬಿಟ್ಟುಕೊಡಬೇಡಿ ಏಕೆಂದರೆ ಮೇ ಮತ್ತು ಜೂನ್ ತಿಂಗಳಲ್ಲಿ ನಿಮಗೆ ಅತ್ಯುತ್ತಮ ಅವಕಾಶಗಳು ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು. ಮಾರ್ಕೆಟಿಂಗ್ ಮತ್ತು ಮಾರಾಟದ ಕ್ಷೇತ್ರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ತಮ್ಮ ಗುರಿಗಳನ್ನು ಸಾಧಿಸಲು ಹೆಚ್ಚು ಪ್ರಯಾಣಗಳನ್ನು ಮಾಡಬೇಕಾಗಬಹುದು. ಆರ್ಥಿಕವಾಗಿ ಉತ್ತಮ ನೀತಿಗಳಲ್ಲಿ ಹೂಡಿಕೆ ಮಾಡಲು ತುಲಾ ರಾಶಿಚಕ್ರದ ಸ್ಥಳೀಯರಿಗೆ ಇದು ಅನುಕೂಲಕರ ಸಮಯ. ಶೇರ್ ಮಾರ್ಕೆಟ್ ಹೂಡಿಕೆದಾರರಿಗೆ ಈ ಸಮಯವು ಹಣಕಾಸಿನ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೆ ಈ ಸಮಯದಲ್ಲಿ ನೀವು ನಿಮ್ಮ ಅನಗತ್ಯ ವೆಚ್ಚಗಳನ್ನು ಸಹ ಮಾಡಬಹುದು. ಸಂಬಂಧಗಳ ಬಗ್ಗೆ ಮಾತನಾಡಿದರೆ, ತುಲಾ ರಾಶಿಚಕ್ರದ ಸ್ಥಳೀಯರು ಸ್ವಲ್ಪ ಜಾಗರೂಕರಾಗಿರಬೇಕು, ಏಕೆಂದರೆ ಈ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ಅವುಗಳಿಂದಾಗಿ ನಿಮ್ಮ ಸಂಬಂಧಗಳಲ್ಲಿ ಕೂಡ ನೀವು ಏರಿಳಿತವನ್ನು ಎದುರಿಸಬೇಕಾಗಬಹುದು. ಅವುಗಳನ್ನು ನಿವಾರಿಸುವಲ್ಲಿ ನೀವು ವಿಫಲರಾಗಬಹುದು. ಆದ್ದರಿಂದ ಮಾತನಾಡುವಾಗ ಪದಗಳನ್ನು ಚಿಂತಶೀಲವಾಗಿ ಬಳಸುವುದು ಉತ್ತಮ ಮತ್ತು ಯಾವುದೇ ವಿವಾದವನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಆರೋಗ್ಯವಾಗಿರಲು ಉತ್ತಮ ನಿದ್ರೆ ಪಡೆಯುವುದು ಮತ್ತು ಉತ್ತಮ ಆಹಾರವನ್ನು ಸೇವಿಸುವುದು ಒಳ್ಳೆಯದು ಮತ್ತು ಮನೆಯಿಂದ ಹೊರಗಿನ ಆಹಾರವನ್ನು ತಪ್ಪಿಸಲು ಸೂಚಿಸಲಾಗಿದೆ.

ಪರಿಹಾರ - ನೀವು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು.

  1. ವೃಶ್ಚಿಕ

ಗುರು ಸಂಚಾರವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಐಷಾರಾಮಿ, ವಿಶ್ರಾಂತಿ ಮತ್ತು ಸ್ಥಿರ ಸಂಪತ್ತಿನ ನಾಲ್ಕನೇ ಮನೆಯಲ್ಲಿ ಸಂಭವಿಸುತ್ತದೆ ಮತ್ತು ಈ ಸಂಚಾರವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಪರ ಜೀವನದಲ್ಲಿ, ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಈ ಸಮಯದಲ್ಲಿ ತಮ್ಮ ಕೆಲಸದಲ್ಲಿ ತೊಂದರೆಯಾಗಬಹುದು. ಜೂನ್ ಮತ್ತು ಜೂಲೈ ತಿಂಗಳಲ್ಲಿ ಅವಕಾಶಗಳನ್ನು ಹುಡುಕಲು ತೊಡಗಿರುವ ವೃತ್ತಿಪರ ಜನರು ಯಶಸ್ಸು ಪಡೆಯಬಹುದು. ಸರ್ಕಾರಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಆರ್ಥಿಕವಾಗಿ ಈ ಸಮಯವು ಉತ್ತಮ ಫಲಗಳನ್ನು ನೀಡುತ್ತದೆ ಎಜೆಯೆಂದರೆ ಇದು ನಿಮಗೆ ಉತ್ತಮ ಹೂಡಿಕೆ ಅವಕಾಶಗಳನ್ನು ತೆರೆಯುತ್ತದೆ. ಕೌಟುಂಬಿಕ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಹ ಈ ಸಮಯ ಉತ್ತಮವಾಗಿರುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಶೇರ್ ಮಾರ್ಕೆಟ್ ಹೂಡಿಕೆದಾರರು ಹಣವನ್ನು ಉಳಿಸಬೇಕು. ಜೂನ್ ಮತ್ತು ಜೂಲೈ ತಿಂಗಳಲ್ಲಿ ಸರಿಯಾದ ಹೂಡಿಕೆ ಮಾಡಬೇಕು. ಈ ರಾಶಿಚಕ್ರದ ಸ್ಥಳೀಯರು ಪಾಲುದಾರಿಕೆಯ ವ್ಯಾಪಾರದಲ್ಲಿ ಹೆಚ್ಚು ಲಾಭವನ್ನು ಪಡೆಯಬಹುದು. ಕೆಲವು ಜನರು ಸಂಚಾರದ ಈ ಸಮಯದಲ್ಲಿ ಬಲವಾದ ಪ್ರೀತಿಯ ಸಂಬಂಧವನ್ನು ಹೊಂದಬಹುದು. ವೈವಾಹಿಕ ಜನರು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸಬಹುದು ಮತ್ತು ಪ್ರೀತಿಯ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ಮನೆಯ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ.

ಪರಿಹಾರ - ಯಾವಾಗಲೂ ನಿಮ್ಮೊಂದಿಗೆ ಹಳದಿ ಕರವಸ್ತ್ರವನ್ನು ಇಟ್ಟುಕೊಳ್ಳುವುದು ಗುರುವನ್ನು ಸಮಾಧಾನಗೊಳಿಸುತ್ತದೆ.


ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಯಾವಾಗ ತೆರೆಯುತ್ತದೆ ಮತ್ತು ನಿಮ್ಮ ಜೀವನದಲ್ಲಿ ಯಾವಾಗ ಸಂತೋಷ ಬರುತ್ತದೆ ಎಂದು ತಿಳಿಯಿರಿ.
  1. ಧನು

ಧನು ರಾಶಿಚಕ್ರದ ಸ್ಥಳೀಯರಿಗೆ ಗುರು ಸಂಚಾರವು ಸಣ್ಣ ಪುಟ್ಟ ಪ್ರವಾಸಗಳು, ಸಂವಹನ ಮತ್ತು ಸಹೋದರ ಸಹೋದರಿಯರ ಮೂರನೇ ಮನೆಯಲ್ಲಿ ಸಂಭವಿಸುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಈ ರಾಶಿಚಕ್ರದ ಉಯೋಗಪರರು ಈ ಸಮಯದಲ್ಲಿ ಪ್ರಗತಿಯನ್ನು ಪಡೆಯಬಹುದು ಮತ್ತು ತಮ್ಮ ಸಂಪರ್ಕವನ್ನು ಬಲಪಡಿಸುತ್ತಾರೆ. ಈ ರಾಶಿಚಕ್ರದ ಸ್ಥಳೀಯರು ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳನ್ನು ಮಾಡಬೇಕಾಗಬಹುದು. ಹಣಕಾಸಿನ ಬಗ್ಗೆ ಮಾತನಾಡಿದರೆ, ಯಾವುದೇ ದೊಡ್ಡ ಹೂಡಿಕೆ ಮಾಡುವ ಮೊದಲು ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆದುಕೊಳ್ಳಬೇಕು. ಈ ಸಮಯದಲ್ಲಿ ಸ್ಟಾಕ್ ವಿನಿಮಯದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಲು ಸೂಚಿಸಲಾಗಿದೆ. ವೈವಾಹಿಕ ಜೀವನದಲ್ಲಿ ವಿವಾಹಿತ ದಂಪತಿಗಳು ಈ ಸಮಯದಲ್ಲಿ ಸಣ್ಣ ಪ್ರವಾಸವನ್ನು ಯೋಜಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಇನ್ನೂ ಒಂಟಿಯಾಗಿರುವವರು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು ಮತ್ತು ಈಗಾಗಲೇ ಸಂಬಂಧದಲ್ಲಿರುವ ಜನರು ಉತ್ತಮ ಸಮಯವನ್ನು ಆನಂದಿಸುತ್ತಾರೆ. ಉತ್ತಮ ಸಂವಹನದೊಂದಿಗೆ ತಮ್ಮ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಕುತ್ತಿಗೆಯಲ್ಲಿ ನೋವಿನ ಸಮಸ್ಯೆ ಉಂಟಾಗಬಹುದು ಮತ್ತು ವೃದ್ಧರಿಗೆ ಕಾಲಿನಲ್ಲಿ ನೋವಾಗಬಹುದು.

ಪರಿಹಾರ - ಜಾತಕದಲ್ಲಿನ ದುರ್ಬಲ ಗುರುವನ್ನು ಬಲಪಡಿಸಲು ಭಗವಂತ ಶಿವ, ಗುರು, ಬಾಳೆಮರ, ವಿಷ್ಣು ದೇವರನ್ನು ಪೂಜಿಸಿ.

  1. ಮಕರ

ಮಕರ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಕುಟುಂಬ, ಧ್ವನಿ ಮತ್ತು ಸಂಗ್ರಹಿಸಿರುವ ಹಣಕಾಸಿನ ಎರಡನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ್ಮ ಹಣಕಾಸು ಹೆಚ್ಚಾಗುತ್ತದೆ. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚು ಸಕಾರಾತ್ಮಕ ಮತ್ತು ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ, ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ಸಹ ನೀಡುತ್ತದೆ. ಈ ರಾಶಿಚಕ್ರದ ಉದ್ಯೋಗಪರರಿಗೆ ಇಟ್ಟಾರೆಯಾಗಿ ಸಮಯ ಉತ್ತಮವಾಗಿರುತ್ತದೆ. ನೀವು ಅತ್ಯಂತ ಪ್ರೀತಿಸುತ್ತಿರುವಂತಹ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಪ್ರಶಸ್ತಿಯನ್ನು ನೀವು ಏಪ್ರಿಲ್ ಮತ್ತು ಜೂಲೈ ತಿಂಗಳ ಸಮಯದಲ್ಲಿ ಪಡೆಯಬಹುದು ಮತ್ತು ಇದರಿಂದಾಗಿ ಮುಂಬರುವ ಸಮಯಕ್ಕಾಗಿ ದಾರಿ ತೆರೆಯಬಹುದು. ಆರ್ಥಿಕವಾಗಿ, ಈ ಸಮಯವು ಸವಾಲುಗಳಿಂದ ತುಂಬಿರಬಹುದು, ಆದ್ದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ಸಾಲವನ್ನು ಪಡೆಯದಿರಲು ನಿಮಗೆ ಸೂಚಿಸಲಾಗಿದೆ.ಇದಲ್ಲದೆ ಈ ಸಮಯದಲ್ಲಿ ನೀವು ಯಾವುದೇ ರೀತಿಯ ವಾದಗಳನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಇದು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ಕಳೆದ ಕೆಲವು ಸಮಯದಿಂದ ತಮ್ಮ ಪ್ರೀತಿಪಾತ್ರರೊಂದಿಗೆ ತಪ್ಪು ತಿಳುವಳಿಕೆಯನ್ನು ಎದುರಿಸುತ್ತಿದ್ದ ಪ್ರೇಮಿಗಳು ಈ ಸಮಯದಲ್ಲಿ ಬುದ್ಧಿವಂತಿಕೆಯ ಮೂಲಕ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದರ ಸಹೋದರಿಯರೊಂದಿಗಿನ ಸಂಬಂಧದಲ್ಲಿ ನೀವು ಮಾನಸಿಕ ಒತ್ತಡವನ್ನು ಎದುರಿಸಬಬಹುದು. ಆದ್ದರಿಂದ ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉಳಿಸಲು ಸೂಚಿಸಲಾಗಿದೆ. ಆರೋಗ್ಯದ ಬಗ್ಗೆ, ಈ ರಾಶಿಚಕ್ರದ ಜನರಿಗೆ ಸಾಮಾನ್ಯ ಸಮಸ್ಯೆಗಳಾಗಬಹುದು. ಈ ರಾಶಿಚಕ್ರದ ಜನರು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉತ್ತಮ ಆಹಾರವನ್ನು ಸೇವಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ.

ಪರಿಹಾರ - ಶ್ರೀ ರುದ್ರ, ಗುರು ಸ್ತೋತ್ರವನ್ನು ಪಠಿಸಿ, ಇದು ಗುರುವನ್ನು ಸಂತೋಷಪಡಿಸುತ್ತದೆ


ಬೃಹತ್ ಕುಂಡಲಿ ಗ್ರಹಗಳು ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತವೆ ಮತ್ತು ಪರಿಹಾರ ಕ್ರಮಗಳನ್ನು ತಿಳಿಯಿರಿ
  1. ಕುಂಭ

ಗುರು ಗ್ರಹವು ಕುಂಭ ರಾಶಿಚಕ್ರದ ಸ್ಥಳೀಯರ ಮೊದಲನೇ ಮನೆಯಲ್ಲಿ ಪ್ರವೇಶಿಸುತ್ತದೆ. ಈ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರು ತಮ್ಮ ವ್ಯಕ್ತಿತ್ವ ಅಭಿವೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ನಿಮ್ಮ ಜೀವನದಲ್ಲಿ ಕಠಿಣ ಸವಾಲುಗಳನ್ನು ತಪ್ಪಿಸಲು ಸಹ ನಿಮಗೆ ಅದೃಷ್ಟ ಮತ್ತು ಆತ್ಮವಿಶ್ವಾಸವನ್ನು ಒದಗಿಸುತ್ತದೆ. ವೃತ್ತಿ ಜೀವನದ ದೃಷ್ಟಿಯಿಂದ ನೋಡಿದರೆ, ಈ ಹಂತವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವಲ್ಲಿ ಕೆಲವು ಅಡತಡೆಗಳನ್ನು ಉದ್ಭವಿಸಬಹುದು. ಆದರೆ ಇದು ನಿಮ್ಮ ಗುರಿಗಳನ್ನು ಸಕಾರಾತ್ಮಕವಾಗಿ ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡಬಹುದು. ವೃತುಪರರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ, ವಿಶೇಷವಾಗಿ ಏಪ್ರಿಲ್ ಮತ್ತು ಜೂಲೈ ತಿಂಗಳಲ್ಲಿ ನಿಮಗೆ ಪ್ರಗತಿ ಸಿಗಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಶಸ್ಸು ಪಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಸಮಯದಲ್ಲಿ ಧೈರ್ಯದಿಂದಿರಬೇಕು ಮತ್ತು ಯಾವುದೇ ವಿಶೇಷ ಹೂಡಿಕೆಯನ್ನು ಮಾಡದಿರಲು ಸೂಚಿಸಲಾಗಿದೆ. ಏಕೆಂದರೆ ಭವಿಷ್ಯದಲ್ಲಿ ನಿಮಗೆ ಹಣಕಾಸಿನ ಹಾನಿಯಾಗುವ ಸಾಧ್ಯತೆ ಇದೆ. ಸ್ಟಾಕ್ ಮಾರ್ಕೆಟ್ ಹೂಡಿಕೆದಾರರು ಹೊಸ ಹೂಡಿಕೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ. ಆದರೂ ನಿಧಾನವಾಗಿ ಮತ್ತು ನಿರಂತರವಾಗಿ ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸುವಲ್ಲಿ ಸಾಮರ್ಥ್ಯರಾಗಿರುತ್ತೀರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮ ಸಂಬಂಧದಲ್ಲಿ ಪ್ರೀತಿಯನ್ನು ಮುಂದುವರಿಸಬಹುದು. ಅವಿವಾಹಿತ ಜನರು ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮದುವೆಯ ಉತ್ತಮ ಪ್ರಸ್ತಾಪವನ್ನು ಪಡೆಯಬಹುದು. ಈ ರಾಶಿಚಕ್ರದ ಜನರು ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಏಕೆಂದರೆ ಹೃದಯಕ್ಕೆ ಸಮಬಂಧಿಸಿದ ಅರೋಗ್ಯ ಸಮಸ್ಯೆಯಾಗುವ ಸಾಧ್ಯತೆ ಇದೆ.

ಪರಿಹಾರ - ಗುರುವಿಗೆ ಸಂಬಂಧಿಸಿದ ಅರಿಶಿನ, ಚಿನ್ನ, ಹಳದಿ ಬಟ್ಟೆಯನ್ನು ದೇವಸ್ಥಾನದಲ್ಲಿ ದಾನ ಮಾಡುವುದು ಅಥವಾ ಧರಿಸುವುದು ಉತ್ತಮ.

  1. ಮೀನ

ಮೀನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ವಿದೇಶ, ವೆಚ್ಚ ಮತ್ತು ಮೋಕ್ಷದ ಹನ್ನೆರಡನೇ ಮನೆಯಲ್ಲಿ ಸಂಚರಿಸುತ್ತದೆ. ಆದ್ದರಿಂದ ಹನ್ನೆರಡನೇ ಮನೆಯಲ್ಲಿ ಗುರುವಿನ ಸಂಚಾರದಿಂದಾಗಿ ಮೀನಾ ರಾಶಿಚಕ್ರದ ಜನರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವೃತ್ತಿಪರ ಜೀವನದ ದೃಷ್ಟಿಯಿಂದ ಈ ರಾಶಿಚಕ್ರದ ಸ್ಥಳೀಯರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರುವ ಜನರು ಸಹ ಯಶಸ್ಸು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅವಕಾಶವನ್ನು ಪಡೆಯುತ್ತಾರೆ. ಆರ್ಥಿಕವಾಗಿ ಈ ಅವಧಿಯು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಅನಗತ್ಯ ವೆಚ್ಚಗಳನ್ನು ನಿಯಂತ್ರಣದಲ್ಲಿಡುವುದು ನಿಮಗೆ ಉತ್ತಮ. ನಿಮ್ಮ ಸಿಲುಕಿಕೊಂಡಿರುವ ಹಣಕಾಸು ಅಥವಾ ಸಾಲವಾಗಿ ನೀಡಿರುವ ಹಣವನ್ನು ಪಡೆಯುವಲ್ಲಿ ಈ ಸಮಯವು ನಿಮಗೆ ಸಹಾಯ ಮಾಡುತ್ತದೆ. ಆದರೂ ಜಾಗರೂಕರಾಗಿರಬೇಕು, ಏಕೆಂದರೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಸಮಯದಲ್ಲಿ ನಿಮ್ಮ ವೆಚ್ಚಗಳು ಆಕಾಶಕ್ಕೆ ತಲುಪಬಹುದು. ಈ ರಾಶಿಚಕ್ರದ ಪ್ರೇಮಿಗಳು ಪ್ರೀತಿಯ ಸಂಬಂಧದಲ್ಲಿ ಪ್ರೀತಿಪಾತ್ರರೊಂದಿಗೆ ಕೆಲವು ತಪ್ಪು ಗ್ರಹಿಕೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅವರೊಂದಿಗೆ ಪ್ರಾಮಾಣಿಕರಾಗಿರುವುದು ಮತ್ತು ಹರಿಯರ ಸಹಾಯದಿಂದ ಸಂಬಂಧದ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸುವುದು ನಿಮಗೆ ಉತ್ತಮ. ವಿವಾಹಿತ ಜನರು ತಮ್ಮ ಅತ್ತೆಮನೆಯವರೊದಿಗೆ ಯಾವುದೇ ವಿವಾದವನ್ನು ತಪ್ಪಿಸಲು ಸೂಚಿಸಲಾಗಿದೆ. ಏಕೆಂದರೆ ಇದರಿಂದಾಗಿ ನಿಮ್ಮ ಮಾನಸಿಕ ಶಾಂತಿಯಲ್ಲಿ ಅಡಚಣೆ ಉಂಟಾಗಬಹುದು. ಅನಗತ್ಯ ವೆಚ್ಚಗಳು ನಿಮ್ಮನ್ನು ಕಾಡಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಚಿಂತೆಗೆ ಒಳಗಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ರಾಶಿಚಕ್ರದ ವೃದ್ಧರು ಮತ್ತು ಮಹಿಳೆಯರು ಜಾಗರೂಕರಾಗಿರಬೇಕೆಂದು ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು.

ಪರಿಹಾರ - ಗುರುವಾರ ಉಪವಾಸ ಇಡುವುದು ಉತ್ತಮ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer