ಮಿಥುನ ರಾಶಿಯಲ್ಲಿ ಮಂಗಳ ಸಂಚಾರ ( 14th April 2021 )

ಶಕ್ತಿ, ಸಹೋದರ, ಭೂಮಿ, ಧೈರ್ಯ, ಪರಾಕ್ರಮ, ಶೌರ್ಯದ ಅಂಶವೆಂದು ಪರಿಗಣಿಸಲಾಗುವ ಮಂಗಳ ಗ್ರಹವು 14 ಏಪ್ರಿಲ್, 2021 ರಂದು, ಬುಧವಾರ ಬೆಳಿಗ್ಗೆ 01ಗಂಟೆ 16 ನಿಮಿಷಕ್ಕೆ ಮಿಥುನ ರಾಶಿಯಲ್ಲಿ ಗೋಚರಿಸುತ್ತದೆ, ಅಲ್ಲಿ ಅದೇ ಸ್ಥಿತಿಯಲ್ಲಿ 02 ಜೂನ್ 2021, ಬುಧವಾರ ಬೆಳಿಗ್ಗೆ 06 ಗಂಟೆ 39 ನಿಮಿಷದ ವರೆಗೆ ಇದೆ ರಾಶಿಯಲ್ಲಿ ನೆಲೆಗೊಂಡಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಂಗಳನ ಈ ಸಂಹಾರವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಯಾವುದಾದರೂ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಡೆಯಿರಿ ಈಗ, ಮಂಗಳನ ಈ ಸಂಚಾರವು ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಆಸ್ಟ್ರೋಸೇಜ್ ವಾರ್ತಾ ಮೂಲಕ ನಮ್ಮ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ.

Click here to read in English: Mars Transit in Gemini (Link)

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.

ಮೇಷ ರಾಶಿ ಭವಿಷ್ಯ

ಮಂಗಳ ಗ್ರಹವು ನಿಮ್ಮ ಲಗ್ನ ಮತ್ತು ಆರನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಮೂರನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಈ ಸನ್ನಿವೇಶದಲ್ಲಿ ನಿಮ್ಮ ಜೀವನದಲ್ಲಿ ನೀವು ಅನೇಕ ಶುಭ ಬದಲಾವಣೆಗಳು ಮತ್ತು ಫಲತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನಿಮ್ಮಲ್ಲಿ ಶಕ್ತಿ, ಧೈರ್ಯ ಮತ್ತು ಸಾಹಸ ತುಂಬಿರುತ್ತದೆ.ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಹಿಂದೆ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸುತ್ತೀರಿ. ಹೊಸ ವ್ಯಾಪಾರವನ್ನು ಆರಂಭಿಸಲು ಸಹ ಈ ಸಮಯವು ಉತ್ತಮವಾಗಿರಲಿದೆ.

ಈ ಸಂಚಾರದ ಸಮಯದಲ್ಲಿ, ನಿಮ್ಮ ಹತ್ತನೇ ಮನೆಯ ಮೇಲೆ ಮಂಗಳನ ದೃಷ್ಟಿಯಿರುತ್ತದೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಮೊದಲಿಗಿಂತ ಹೆಚ್ಚು ಸಂಘಟಿತ ಮತ್ತು ಪ್ರಾಯೋಗಿಕವಾಗಿ ಕಂಡುಬರುವಿರಿ. ಇದರಿಂದಾಗಿ ನೀವು ಉನ್ನತ ಸ್ಥಾನ ಮತ್ತು ಪ್ರೋತ್ಸಾಹವನ್ನು ಸಹ ಪಡೆಯುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಮತ್ತು ವ್ಯಾಪಾರಸ್ಥರು ತಮ್ಮ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ಹೊಸ ಉದ್ಯೋಗವನ್ನು ಆರಂಭಿಸಲು ಯೋಚಿಸುತ್ತಿದ್ದವರಿಗೆ ಸಮಯ ಶುಭವಾಗಿರುತ್ತದೆ. ಆದಾಗ್ಯೂ, ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ವಿವಾದ ಅಥವಾ ಭಿನ್ನಾಭಿಪ್ರಾಯದಿಂದ ದೂರವಿರಿ. ಇಲ್ಲದಿದ್ದರೆ ನಿಮ್ಮನ್ನು ನೀವು ಯಾವುದೇ ಸಮಸ್ಯೆಯಲ್ಲಿ ಸಿಲುಕಿಸಿಕೊಂಡು ಅನೇಕ ಶುಭ ಅವಕಾಶಗಳಿಂದ ವಂಚಿತರಾಗಬಹುವುದು.

ಕೌಟುಂಬಿಕ ಜೀವನಕ್ಕೆ ಸಮಯವು ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರೊಂದಿಗೆ ನಡೆಯುತ್ತಿರುವ ನಿಮ್ಮ ಎಲ್ಲಾ ವಿವಾದಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಶುಭ ಸ್ಥಿತಿಯು, ತಮ್ಮ ಪ್ರೀತಿಪಾತ್ರರ ಮುಂದೆ ತನ್ನ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇಮಿಗಳಿಗೆ ಸಹಾಯ ಮಾಡುತದೆ. ಇದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ.

ಅರೋಗ್ಯ ಜೀವನದ ದೃಷ್ಟಿಯಿಂದ, ಈ ಸಂಚಾರವು ನಿಮ್ಮ ಯಾವುದೇ ಹಳೆಯ ರೋಗವನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ ವಾಹನ ಚಲಾಯಿಸುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಕೆಲವು ಸ್ಥಳೀಯರೊಂದಿಗೆ ಯಾವುದೇ ರೀತಿಯ ಅಪಘಾತ ಸಂಭವಿಸುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ಮಂಗಳ ಸಂಚಾರವು ನಿಮಗೆ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ಪರಿಹಾರ - ಮಂಗಳ ಹೋರಾ ಸಮಯದಲ್ಲಿ, ಪ್ರತಿದಿನ ನಿಯಮಿತವಾಗಿ ಮಂಗಳ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.

ವೃಷಭ ರಾಶಿ ಭವಿಷ್ಯ

ಪರಾಕ್ರಮದ ಅಂಶ ಗ್ರಹ ಮಂಗಳ , ನಿಮ್ಮ ರಾಶಿಯಿಂದ ಎರಡನೇ ಮನೆಗೆ ಗೋಚರಿಸುತ್ತದೆ. ಇದನ್ನು ಉಳಿತಾಯ, ಧ್ವನಿ, ಭಾಷೆ ಮತ್ತು ಕುಟುಂಬದ ಮನೆಯೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದಿಂದಾಗಿ ವೃಷಭ ರಾಶಿಚಕ್ರದ ಸ್ಥಳೀಯರು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಹಿಂದಿನ ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಗಳಿಸುವಲ್ಲಿ ಸಹ ನೀವು ಯಶಸ್ವಿಯಾಗುತ್ತೀರಿ.

ದೀರ್ಘಕಾಲದಿಂದ ಬಡ್ತಿ ಮತ್ತು ಸಂಬಳದ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದ ವೃತ್ತಿಪರ ಸ್ಥಳೀಯರು ಈ ಸಮಯದಲ್ಲಿ ಅಪೇಕ್ಷಿತ ಲಾಭವನ್ನು ಪಡೆಯುತ್ತಾರೆ. ಇದಲ್ಲದೆ ಆಮದು - ರಫ್ತು ಅಥವಾ ಯಾವುದೇ ವಿದೇಶ ಸಂಬಂಧಿತ ವ್ಯಾಪಾರಕ್ಕೆ ಸಂಬಂಧಿಸಿದ ವ್ಯಾಪಾರಸ್ಥರು ಸಹ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಆದಾಗ್ಯೂ, ನಿಮ್ಮ ಆದಾಯದ ಅಭಿವೃದ್ಧಿಯೊಂದಿಗೆ, ನಿಮ್ಮ ವೆಚ್ಚಗಳು ಸಹ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ಕಾಣಲಾಗುತ್ತದೆ. ಆದ್ದರಿಂದ ನಿಮ್ಮ ಆದಾಯ ಮತ್ತು ವೆಚ್ಚದ ನಡುವೆ ಸರಿಯಾದ ಸಾಮರಸ್ಯವನ್ನು ಕಾಪಾಡಿಕೊಂಡು, ಯೋಜನೆಗಳ ಪ್ರಕಾರ ನಿಮ್ಮ ಹಣವನ್ನು ಖರ್ಚು ಮಾಡಿ.

ಮಂಗಳ ಗ್ರಹವು ಐದನೇ ಮನೆಗೆ ದೃಷ್ಟಿ ಹಾಕುತ್ತದೆ, ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಬರುತ್ತಿರುವ ಬದಲಾವಣೆಗಳು ನಿಮ್ಮ ಸ್ವಭಾವದಲ್ಲಿ ಕಠೋರತೆ ಮತ್ತು ಕೋಪವನ್ನು ಹೆಚ್ಚಿಸುತ್ತವೆ. ಪರಿಣಾಮವಾಗಿ, ನೀವು ನಿಮ್ಮ ಪ್ರಗತಿಯಲ್ಲಿ ಅಡಚಣೆಯನ್ನು ಅನುಭವಿಸುತ್ತೀರಿ. ಆದ್ದರಿಂದ ನಿಮ್ಮ ಎಲ್ಲಾ ಬದಲಾವಣೆಗಳ ಬಗ್ಗೆ ಹೆಚ್ಚು ಅನುಕೂಲರಾಗಿ, ಎಲ್ಲಾ ಅವಕಾಶಗಳ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸಿ.

ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ವೈವಾಹಿಕ ಸ್ಥಳೀಯರು ಈ ಸಮಯದಲ್ಲಿ ತಮ್ಮ ಜೇವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆದು, ಅವರನ್ನು ಬೆಂಬಲಿಸಬೇಕು. ಏಕೆಂದರೆ ನಿಮ್ಮ ಜೀವನ ಸಂಗಾತಿಯ ಅರೋಗ್ಯ ಹಾನಿ ಸಾಧ್ಯ, ಮತ್ತೊಂದೆಡೆ, ಕುಟುಂಬದ ಸದಸ್ಯರೊಬ್ಬರೊಂದಿಗೆ ಮಾತನಾಡುವಾಗ, ನಿಮ್ಮ ಪದಗಳನ್ನು ಚಿಂತನಶೀಲವಾಗಿ ಅರೈಸಿ. ಇಲ್ಲದಿದ್ದರೆ ನೀವು ಬಯಸದಿದ್ದರೂ, ಅವರನ್ನು ನೋಯಿಸಬಹುದು.

ಮಂಗಳ ನಿಮ್ಮ ಐದನೇ ಮನೆಯ ಮೇಲೆ ದೃಷ್ಟಿ ಹಾಕುತ್ತಿದ್ದಾರೆ, ಇದು ಮಕ್ಕಳು ಮತ್ತು ದಾಂಪತ್ಯ ಜೇವನವನ್ನು ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಮಕ್ಕಳ ಮೇಲೆ ಯಾವುದೇ ಕಾರ್ಯವನ್ನು ಒತ್ತಾಯಿಸುವ ಬದಲು, ಅವರಿಗೆ ಪ್ರಯೋನಕಾರಿಯಾಗುವಂತಹ ಉದಾಹರಣೆಯನ್ನು ನೀಡುವ ಅಗತ್ಯವಿದೆ. ಅವರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಇದು ನಿಮಗೆ ಸಾಹಯ ಮಾಡುತ್ತದೆ.

ಪರಿಹಾರ - ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಕಾರ್ತಿಕೇಯ ದೇವರನ್ನು ಆರಾಧಿಸಿ.

ಮಿಥುನ ರಾಶಿ ಭವಿಷ್ಯ

ಮಂಗಳ ದೇವ ನಿಮ್ಮ ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯಲ್ಲಿ ನಿಮ್ಮ ರಾಶಿ ಅಂದರೆ ನಿಮ್ಮ ಲಗ್ನದ ಮನೆಗೆ ಗೋಚರಿಸುತ್ತಾರೆ. ಆದ್ದರಿಂದ ಈ ಸಂಚಾರದ ಪರಿಣಾಮವು ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಏಕೆಂದರೆ ಇದರಿಂದಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಈ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರು, ತಮ್ಮ ನಿರೀಕ್ಷೆಗಳನ್ನು ಹೆಚ್ಚು ನಿಯಂತ್ರಿಸುವ ಮೂಲಕ ತಮ್ಮ ಸ್ವಭಾವದಲ್ಲಿ ಬದಲಾವಣೆ ತರಬೇಕು. ಇಲ್ಲದಿದ್ದರೆ ಇದರಿಂದಾಗಿ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರ ಎರಡರಲ್ಲೂ ನಿಮ್ಮ ಹತಾಶೆ ಮತ್ತು ಆಕ್ರಮಣಶೀಲತೆ ಹೆಚ್ಚಾಗಬಹುದು. ಏಕೆಂದರೆ ಇದರಿಂದಾಗಿ ನೀವು ಬಹಳ ಮತ್ತು ಭಾವನಾತ್ಮಕರಾಗಬಹುದು. ಪರಿಣಾಮವಾಗಿ ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗೆಗಿನ ನಿಮ್ಮ ನಡವಳಿಕೆಯು, ಅವರ ಬೆಂಬಲವನ್ನು ಪಡೆಯಲು ನಿಮ್ಮನ್ನು ವಂಚಿತರಾಗಿಸಬಹುದು. ಇದಲ್ಲದೆ ಮಂಗಳ ದೇವ ನಿಮ್ಮ ಏಳನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ.ಇದರಿಂದಾಗಿ ವೈವಾಹಿಕ ಸ್ಥಳೀಯರು ತಮ್ಮ ಜೀವನದಲ್ಲಿ ಅನೇಕ ರೀತಿಯ ಏರಿಳಿತಗಳನ್ನು ಎದುರಿಸಬೇಕಾಗಬಹುದು. ನೀವು ಅನಗತ್ಯವಾಗಿ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ನಿಮ್ಮ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಅಥವಾ ವಿವಾದ ಮಾಡುವುದನ್ನು ಕಾಣಲಾಗುತ್ತದೆ.

ಈ ಸಂಚಾರದ ಸಮಯವು ನಿಮ್ಮ ಸ್ವಭಾವದಲ್ಲಿ ಕೋಪವನ್ನು ಸಹ ಹೆಚ್ಚಿಸುತ್ತದೆ, ಈ ಕಾರಣದಿಂದಾಗಿ ಅರೋಗ್ಯ ಜೀವನದಲ್ಲಿ ಊತ, ತಲೆನೋವು, ರಕ್ತದೊತ್ತಡ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ಕ್ರೀಡೆ, ಯೋಗ, ಇತ್ಯಾದಿಗಳಂತಹ ದೈಹಿಕ ಚಟುವಟಿಕೆಗಳನ್ನು ಆಶ್ರಯಿಸಿ, ಮಂಗಳ ದೇವರ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ತರಲು ಪ್ರಯತ್ನಿಸಿ. ಇದರಿಂದಾಗಿ ನಿಮ್ಮ ಅರೋಗ್ಯ ಜೀವನವನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ - ಮಂಗಳವಾರ ತಾಮ್ರದ ದಾನ ಮಾಡುವುದು ನಿಮಗೆ ಉತ್ತಮ.

ಕರ್ಕ ರಾಶಿಭ ವಿಷ್ಯ

ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಮಂಗಳನ ಈ ಸಂಚಾರದ ಸಮಯದಲ್ಲಿ ಶುಭ ಸುದ್ಧಿಗಳನ್ನು ಪಡೆಯುವ ಸಾಧ್ಯತೆ ಇದೆ. ಮಂಗಳ ಗ್ರಹವು ಸಂಚಾರದ ಈ ಸಮಯದಲ್ಲಿ ಕರ್ಕ ರಾಶಿಚರ್ಕದ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಆದ್ದರಿಂದ ಮಂಗಳ ದೇವ ನಿಮ್ಮ ಖರ್ಚುಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆದಾಯ ಮತ್ತು ಖರ್ಚುಗಳಲ್ಲಿ ಸರಿಯಾದ ಸಮರಸ್ಯನ್ನು ಕಾಪಾಡಿಕೊಳ್ಳುವುದು ಅವಶ್ಯಕ.

ಬಹುರಾಷ್ಟ್ರೀಯ ಕಂಪನಿ ಅಥವಾ ವೇದೇಶಕ್ಕೆ ಸಂಬಂದಿಸಿದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಜನರು ಸಂಚಾರದ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಆಮದು - ರಫ್ತು ಅಥವಾ ವಿದೇಶ ಸಂಪರ್ಕಗಳ ಮೂಲಕ ವ್ಯಾಪಾರಸ್ಥರು ಸಹ ಉತ್ತಮ ಪ್ರಯೋಜನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಪ್ರತಿಕ್ರಿಯೆಯ ಮೇಲೆ ನಿಗಾ ಇರಿಸಿ, ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಜಗಳವಾಡದಂತೆ ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ಇದು ನಿಮ್ಮ ಶಾಂತಿ ಮತ್ತು ಕಾರ್ಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲಸದ ಸ್ಥಳ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಅನಗತ್ಯ ಪ್ರಯಾಣವನ್ನು ಸಹ ತಪ್ಪಿಸಿ. ಏಕೆಂದರೆ ಈ ಸಮಯದಲ್ಲಿ ಮಾಡಲಾಗುವ ಪ್ರವಾಸಗಳು ನಿಮಗೆ ನಷ್ಟ ಮಾಡುತ್ತವೆ.

ಸಂಚಾರದ ಸಮಯದಲ್ಲಿ, ಮಂಗಳ ದೇವ ನಿಮ್ಮ ಮೂರನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ, ಇದು ಸಹೋದರ - ಸಹೋದರಿಯರ ಮನೆ. ಆದ್ದರಿಂದ ಮಂಗಳ ದೇವ ನಿಮ್ಮ ಸಹೋದರ - ಸಹೋದರಿಯರಿಗೆ ಯಾವುದೇ ರೀತಿಯ ಸಮಸ್ಯೆಯನ್ನು ನೀಡುವ ನಿರೀಕ್ಷೆಯಿದೆ. ಇದಲ್ಲದೆ ಅವರು ತಮ್ಮ ವೃತ್ತಿ ಮತ್ತು ಕೆಲಸದ ಸ್ಥಳದಲ್ಲಿ ಸಹ ಅನೇಕ ವಿರುದ್ಧ ಪರಿಷ್ಟಿತಿಗಳನ್ನು ಎದುರಿಸಬೇಕಾಗಬಹುದು.ಅಂತಹ ಪರಿಸ್ಥಿತಿಯಲ್ಲಿ, ಅವರೊಂದಿಗೆ ಸಮಯ ಕಳೆದು ಅವರನ್ನು ಬೆಂಬಲಿಸುವುದು ಉತ್ತಮ.

ಈ ಸಮಯದಲ್ಲಿ ಮಾನಸಿಕ ಒತ್ತಡ, ಆಯಾಸ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯು ನಿಮ್ಮ ಜೀವನ ಸಂಗಾತಿಯನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ.

ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಅಸಮಾಧಾನ ಮತ್ತು ಮಾನಸಿಕ ಆತಂಕಗಳ ಕಾರಣದಿಂದಾಗಿ, ನಿದ್ರಾಹೀನತೆಯ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಆದ್ದರಿಂದ ಪ್ರತಿಯೊಂದು ರೀತಿಯ ಆಕ್ರಮಣಶೀಲತೆ ಮತ್ತು ಒತ್ತಡದಿಂದ ದೂರವಿದ್ದು, ಯೋಗ, ಧ್ಯಾನ ಮತ್ತು ದೈಹಿಕ ವ್ಯಾಯಾಮವನ್ನು ಆಶ್ರಯಿಸಿ. ಇದರಿಂದಾಗಿ ನಿಮ್ಮ ಆರೋಗ್ಯದಲ್ಲಿ, ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ.ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ಪರಿಹಾರ - ಉತ್ತಮ ಗುಣಮಟ್ಟದ ಕೆಂಪು ಹವಳ ರತ್ನವನ್ನು ತಾಮ್ರ ಅಥವಾ ಚಿನ್ನದಲ್ಲಿ ತಯಾರಿಸಿ ಮಂಗಳವಾರ ಧರಿಸುವುದು ಉತ್ತಮ. ಇದು ನಿಮಗೆ ಲಾಭಕಾರಿ ಫಲಿತಾಂಶಗಳನ್ನು ನೀಡುತ್ತದೆ.

ಹವಳ ರತ್ನವು ದುರ್ಬಲವಾದ ಮಾನಗಳನನ್ನು ಬಲಪಡಿಸುತ್ತದೆ - ಇಲ್ಲಿ ಕ್ಲಿಕ್ ಮಾಡಿ ಓದಿ

ಸಿಂಹ ರಾಶಿ ಭವಿಷ್ಯ

ಮಿಥುನ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ಮಂಗಳ ಗ್ರಹವು ಸಿಂಹ ರಾಶಿಚಕ್ರದ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. ಇದು ಲಾಭದ ಮನೆ. ಅಂತಹ ಪರಿಸ್ಥಿತಿಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಪ್ರತಿಯೊಂದು ಕೆಲಸವನ್ನು ನಿಮ್ಮ ಪರಿಶ್ರಮ ಮತ್ತು ಆಸಕ್ತಿಯೊಂದಿಗೆ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಪರಿಣಾಮವಾಗಿ, ನಿಮ್ಮ ಪ್ರಯತ್ನಗಳಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಮನ್ನಣೆ ಸಿಗುತ್ತದೆ.

ಇದಲ್ಲದೆ ಮಂಗಳ ದೇವರು ನಿಮ್ಮ ಆರನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಕಾರಣದಿಂದಾಗಿ ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಅಡೆತಡೆ ಮತ್ತು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಹ ನೀವು ಸಮರ್ಥರಾಗುವಿರಿ. ಉದ್ಯೋಗಪರರು ತಮ್ಮ ಅಪೇಕ್ಷಿತ ಸ್ಥಾನದಲ್ಲಿ ಬಡ್ತಿ ಅಥವಾ ವರ್ಗಾವಣೆಯನ್ನು ಪಡೆಯಲು ಬಯಸುತ್ತಿದ್ದರೆ, ಈ ಸಮಯಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ತಮ್ಮ ಉದ್ಯೋಗದಲ್ಲಿ ಉತ್ತಮ ಬದಲಾವಣೆಯನ್ನು ಹುಡುಕುತ್ತಿರುವವರು ಸಹ ಯಾವುದೇ ಶುಭ ಸುದ್ಧಿಯನ್ನು ಪಡೆಯಬಹುದು.

ಈ ರಾಶಿಚಕ್ರದ ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಅವರು ತಮ್ಮ ತಂತ್ರವನ್ನು ತಯಾರಿಸಿ, ಅದರಿಂದ ಉತ್ತಮ ಲಾಭ ಮತ್ತು ಪ್ರಯೋಜನವನ್ನು ಪಡೆಯಲು ಸಾಮರ್ಥ್ಯರಾಗುತ್ತಾರೆ. ಇದಲ್ಲದೆ ಪಾಲುದಾರಿಕೆಯ ವ್ಯಾಪಾರ ಅಥವಾ ಕೌಟುಂಬಿಕ ವ್ಯಾಪಾರಕ್ಕೆ ಸಂಬಂಧಿಸುವವರು ಈ ಸಮಯದಲ್ಲಿ ಸಂಪೂರ್ಣ ಯಶಸ್ಸು ಪಡೆಯುವ ಸಾಧ್ಯತೆ ಇದೆ.

ಕುಟುಂಬ ಜೀವನದಲ್ಲಿ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ಮತ್ತು ಪ್ರೀತಿಯನ್ನು ಪಡೆಯುತ್ತೀರಿ. ಇದರೊಂದಿಗೆ ಅವರು ತಮ್ಮ ಕೆಲಸದ ಸ್ಥಳದಲ್ಲಿ ಸಹ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಕಾಣಲಾಗುತ್ತದೆ. ಮನೆ-ಕುಟುಂಬದಲ್ಲಿ ಯಾವುದೇ ಮಂಗಲಿಕ ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ಇದರಿಂದಾಗಿ ನೀವು ರುಚಿಕರ ಭಾಖ್ಯಗಳನ್ನು ತಿನ್ನಲು ಅವಕಾಶವನ್ನು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.ಇದಲ್ಲದೆ ಕೆಲವು ಹಳೆಯ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

ಆರ್ಥಿಕ ಜೀವನದ ದೃಷ್ಟಿಯಿಂದ, ಹಿಂದಿನ ಸಮಯದಲ್ಲಿ ಮಾಡಲಾದ ಪ್ರತಿಯೊಂದು ಹೂಡಿಕೆಯ ಮೂಲಕ ಈ ಸಮಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಅಲ್ಲದೆ, ಆಯೋಗದ ಆಧಾರದ ಮೇಲೆ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆಥಿಕ ಜೀವನದ ಸನ್ನಿವೇಶದಲ್ಲಿ ಯಾವುದೇ ಕಾರ್ಯತಂತ್ರವನ್ನು ರೂಪಿಸಲು ಬಯಸಿದರೆ, ಸಮಯವು ಅದಕ್ಕೆ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನ್ಯಾಯಾಲಯ ಕಚೇರಿಯಲ್ಲಿ ಯಾವುದೇ ಪ್ರಕರಣವನ್ನು ಅಮಾನತುಗೊಳಿಸಿದ್ದರೆ, ಈ ಸಮಯದಲ್ಲಿ ಅದರ ನಿರ್ಧಾರವು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ.

ಅರೋಗ್ಯ ಜೀವನದ ದೃಷಿಯಿಂದ, ನಿಮ್ಮ ಜೀವನ ಶೈಲಿ ಮತ್ತು ಉತ್ಸಾಹವು ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಪ್ರತಿಯೊಂದು ಸೋಂಕನ್ನು ತೊಡೆದುಹಾಕಿ, ನಿಮ್ಮ ಹಿಂದಿನ ರೋಗದಿಂದ ಚೇತರಿಸಿಕೊಳ್ಳಲು ಯಶಸ್ವಿಯಾಗುತ್ತೀರಿ.

ಪರಿಹಾರ - ಸಂಚಾರದ ಶುಭ ಫಲಿತಾಂಶಗಳನ್ನು ಪಡೆಯಲು ಮಂಗಳವಾರ ಮತ್ತು ಶನಿವಾರ ಹನುಮಂತ ದೇವರನ್ನು ಪೂಜಿಸಿ.

ಕನ್ಯಾ ರಾಶಿ ಭವಿಷ್ಯ

ಮಂಗಳ ಸಂಚಾರವು ಕರ್ಮದ ಮನೆ ಅಂದರೆ ನಿಮ್ಮ ಹತ್ತನೇ ಮನೆಯಲ್ಲಿ ಸಂಭಾಯಿಸಲಿದೆ. ಇದನ್ನು ಕೆಲಸದ ಸ್ಥಳ ಮತ್ತು ವೃತ್ತಿ ಜೀವನದ ಮನೆಯೆಂದು ಸಹ ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಂಗಳ ದೇವ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತಾರೆ. ಇದಲ್ಲದೆ ಮಂಗಳ ದೇವ ನಿಮ್ಮ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ. ಉದ್ಯೋಗಪರರಿಗೆ ಈ ಸಂಚಾರವು ತುಂಬಾ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಮಹತ್ವಾಕಾಂಕ್ಷೆಗಳು ಹೆಚ್ಚಾಗುತ್ತವೆ. ಇದರಿಂದಾಗಿ ನಿಮ್ಮ ಪ್ರಗತಿಯಾಗುವ ಸಾಧ್ಯತೆ ಇದೆ.

ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ನೀವು ಅನೇಕ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಸ್ಥರು ಸಹ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹಾಯ ಪಡೆಯುತ್ತಾರೆ. ಸರ್ಕಾರ ಅಥವಾ ಯಾವುದೇ ಸರ್ಕಾರಿ ಅಧಿಕಾರಿ ಸಹ ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನಿಮಗೆ ತುಂಬಾ ಸಹಾಯಕರೆಂದು ಸಾಬೀತಾಗಬಹುದು.

ಆದಾಗ್ಯೂ, ಈ ನಡುವೆ ಮಂಗಳ ದೇವರ ದೃಷ್ಟಿಯಿಂದಾಗಿ ನೀವು ವಿರುದ್ಧ ಪರಿಣಾಮಗಳ ಬಗ್ಗೆ ಯೋಚಿಸಿ ಸ್ವಲ್ಪ ಅಸಮಾಧಾನ ಮತ್ತು ಅಶಾಂತಿಯನ್ನು ಅನುಭವಿಸಬಹುದು. ಇದರಿಂದಾಗಿ ನಿಮ್ಮ ಸ್ವಭಾವದಲ್ಲಿ ಕೋಪ ಹೆಚ್ಚಾಗುತ್ತದೆ. ಪರಿಣಾಮವಾಗಿ ನೀವು ಈಗಾಗಲೇ ಸಾಧಿಸಿರುವ ಸಾಧನೆಗಳು ಮತ್ತು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ ನಿಮ್ಮ ಸ್ವಭಾವವನ್ನು ಬದಲಾಯಿಸಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟು ಯಾವುದೇ ಕೆಲಸವನ್ನು ಮಾಡಲು ಸೂಚಿಸಲಾಗಿದೆ.

ಇದಲ್ಲದೆ ಸಂಚಾರದ ಸಮಯದಲ್ಲಿ ಕೆಲಸದ ಬದ್ಧತೆಯ ಕಾರಣದಿಂದಾಗಿ, ನೀವು ನಿಮ್ಮ ಕುಟುಂಬ ಮತ್ತು ಜೀವನ ಸಂಗಾತಿಗೆ ಉತ್ತಮ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇದು ಕುಟುಂಬದ ವಾತಾವರಣವನ್ನು ಸ್ವಲ್ಪ ಪ್ರಕ್ಷುಬ್ಧವಾಗಿ ಕಾಣುವಂತೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು, ನಿಮ್ಮ ಕೆಲಸ ಮತ್ತು ಕುಟುಂಬದ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ.

ನಿಮ್ಮ ಎಂಟನೇ ಮನೆಯ ಅಧಿಪತಿ ಮಂಗಳ, ಈ ಸಮಯದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ಕುಳಿತಿರುತ್ತಾರೆ, ಇದು ತಂದೆಯನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಅವರಿಗೆ ಆರೋಗ್ಯ ನಷ್ಟವಾಗುವ ನಿರೀಕ್ಷೆಯಿದೆ. ಇದರಿಂದಾಗಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು.

ಅರೋಗ್ಯ ಜೇವನದ ದೃಷ್ಟಿಯಿಂದ, ಸಮಯವು ಉತ್ತಮವಾಗಿರುತ್ತದೆ. ಇದರ ಹೊರತಾಗಿಯೂ, ನಿಮ್ಮ ಪ್ರಕೃತಿಯಲ್ಲಿ ಉದ್ಭವಿಸುತ್ತಿರುವ ಪ್ರತಿಯೊಂದು ಆಕ್ರಮಣಕಾರಿ ಶಕ್ತಿಯನ್ನು ನೀವು ದೈಹಿಕ ವ್ಯಾಯಾಮ ಮತ್ತು ಯೋಗದಲ್ಲಿ ಬಳಸಬೇಕು.. ಇದಕ್ಕಾಗಿ ಪ್ರತಿದಿನ ನಿಯಮಿತವಾಗಿ ಮೂವತ್ತು ನಿಮಿಷ ನಡೆಯಬಹುದು.

ಪರಿಹಾರ - ಮಂಗಳವಾರ, ಮಂಗಳ ಯಂತ್ರದ ಪೂಜೆ ಮತ್ತು ಆರಾಧಿಸಿ.


ನಿಮ್ಮ ಜೀವನದ ವಿಶೇಷ ವಿಷಯಗಳು ಏನು ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ

ತುಲಾ ರಾಶಿ ಭವಿಷ್ಯ

ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಎರಡನೇ ಮತ್ತು ಏಳನೇ ಮನೆಯ ಅಧಿಪತಿ. ಈ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಕುಳಿತಿರುತ್ತಾರೆ.

ಅಲ್ಲದೆ, ನಿಮ್ಮ ಹಣದ ಮನೆಯ ಅಧಿಪತಿ ಮಂಗಳ, ನಿಮ್ಮ ಒಂಬತ್ತನೇ ಮನೆಯಲ್ಲಿ ನೆಲೆಗೊಂಡು ಸ್ವತಃ ಎಂಟನೇ ಮನೆಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಅರೋಗ್ಯ ಮತ್ತು ಕುಟುಂಬದ ಮೇಲೆ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ಪ್ರತಿಯೊಂದು ರೀತಿಯ ಪ್ರಯಾಣವನ್ನು ಸಹ ತಪ್ಪಿಸಬೇಕು. ಇಲ್ಲದಿದ್ದರೆ, ನಿಮ್ಮ ಒತ್ತಡ ಮತ್ತು ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಉದ್ಯೋಗಪರರ ಅಪೇಕ್ಷಕ್ಕೆ ವಿರುದ್ಧವಾಗಿ, ವರ್ಗಾವಣೆಯ ಸಾಧ್ಯತೆಯೂ ಇದೆ.

ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಎಲ್ಲಾ ರೀತಿಯ ಹೊಸ ಹೂಡಿಕೆಗಳನ್ನು ತಪ್ಪಿಸಲು ಸೂಚಿಸಲಾಗಿದೆ. ಆದಾಗ್ಯೂ, ತುಂಬಾ ಅಗತ್ಯವಾದರೆ, ಯಾವುದೇ ತಜ್ಞ ಮತ್ತು ಹಿರಿಯರ ಸಲಹೆಯ ನಂತರ ಮಾತ್ರ ಯಾರನ್ನೂ ನಂಬಿರಿ. ನಿಮ್ಮ ವರಿಷ್ಠ ಮತ್ತು ಹಿರಿಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ಆದ್ದರಿಂದ ಪ್ರತಿಯೊಂದು ಸ್ಥಿತಿಯಲ್ಲಿ ನಿಮ್ಮನ್ನು ಶಾಂತವಾಗಿರಿಸಿ, ಯಾವುದೇ ವಿವಾದದಿಂದ ದೂರವಿರಲು ಸೂಚಿಸಲಾಗಿದೆ.

ತಂದೆಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉದ್ಭವಿಸುತ್ತವೆ, ಇದು ಕುಟುಂಬದ ಪರಿಸರವನ್ನು ಅಶಾಂತಗೊಳಿಸಬಹುದು. ಅಂತಹ ಸಂದರ್ಭದಲ್ಲಿ ಮನೆಯ ಶಾಂತಿಗಾಗಿ, ಅವರೊಂದಿಗೆ ಮಾತನಾಡುವಾಗ ವಿಶೇಷವಾಗಿ ಜಾಗರೂಕರಾಗಿರಿ.

ನೀವು ವಿವಾಹಿತರಾಗಿದ್ದರೆ, ನಿಮ್ಮ ಜೀವನ ಸಂಗಾತಿಯ ಮೂಲಕ ನಿಮಗೆ ಲಾಭ ಮತ್ತು ಪ್ರಯೋಜನವಾಗುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯವು ನಿಮ್ಮ ಸಂಗಾತಿಯ ಉದ್ಯೋಗ ಅಥವಾ ವ್ಯಾಪಾರದಲ್ಲಿ ಬಡ್ತಿ ಅಥವಾ ಸಂಬಳವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ನಿಮ್ಮ ಐಷಾರಾಮಿ ಮತ್ತು ಸೌಕರ್ಯಗಳು ಸಹ ಹೆಚ್ಚಾಗುತ್ತವೆ.

ನೀವು ನಿಮ್ಮ ಧಾರ್ಮಿಕ ನಂಬಿಕೆಗಳು ಮತ್ತು ವಿಚಾರಗಳ ಬಗ್ಗೆ ಸ್ವಲ್ಪ ಮೊಂಡು ಮತ್ತು ಕಠೋರಾಗಬಹುದು. ಇದರಿಂದಾಗಿ ಇತರ ಜನರೊಂದಿಗೆ ನಿಮ್ಮ ವಾದ ಸಾಧ್ಯ. ಆದ್ದರಿಂದ ನಿಮ್ಮ ದೃಷ್ಟಿಕೋನವನ್ನು ಸುಧಾರಿಸಿ, ಯಾರಿಗಾದರೂ ಪ್ರತಿಕ್ರಿಯೆ ನೀಡುವ ಮೊದಲು, ಇತರರ ಸಲಹೆಯನ್ನು ಕೇಳಲು ಪ್ರಯತ್ನಿಸುವ ಅಗತ್ಯವಿದೆ. ಇಲ್ಲದಿದ್ದರೆ ಸಮಾಜದಲ್ಲಿ ನಿಮ್ಮ ಇಮೇಜ್ ಹಾನಿಗೊಳಗಾಗಬಹುದು.

ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ. ವಿಶೇಷವಾಗಿ ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳು, ಈ ಸಂಚಾರದ ಸಮಯದಲ್ಲಿ ಯಾವುದೇ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಹೆಚ್ಚು ತೂಕ ಎತ್ತುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಭುಜ ಮತ್ತು ಬೆನ್ನಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಉದ್ಭವಿಸಬಹುದು.

ಪರಿಹಾರ - ಮಂಗಳ ಹೋರಾ ಸಮಯದಲ್ಲಿ, ಪ್ರತಿದಿನ ನಿಯಮಿತವಾಗಿ ಮಂಗಳ ಗ್ರಹದ ಮಂತ್ರವನ್ನು ಜಪಿಸಿ.

ವೃಶ್ಚಿಕ ರಾಶಿ ಭವಿಷ್ಯ

ವೃಶ್ಚಿಕ ರಾಶಿಚಕ್ರದ ಸ್ಥಳೀಯರು, ಮಂಗಳ ಸಂಚಾರದ ಸಮಯದಲ್ಲಿ ತನ್ನ ದಾರಿಯಲ್ಲಿ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ನಿಮ್ಮ ಲಗ್ನದ ಮನೆಯ ಅಧಿಪತಿ ಮಂಗಳ, ಈ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಗೋಚರಿಸುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ನೀವು ಮುಂಚಿತವಾಗಿ ಸಿದ್ಧರಾಗಿಲ್ಲದಿರುವಂತಹ ಕೆಲವು ಬದಲಾವಣೆಗಳು ಮತ್ತು ಪರಿವರ್ತನೆಗಳನ್ನು ನೀವು ಎದುರಿಸಬೇಕಾಗಬಹುದು. ಪರಿಣಾಮವಾಗಿ, ನಿಮಗೆ ಅನೇಕ ರೀತಿಯ ದೈಹಿಕ ಸಮಸ್ಯೆಗಳಿಗೆ ಒಳಗಾಗಬಹುದು. ನಿಮ್ಮ ಹೊಟ್ಟೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸರಿಯಾಗಿ ವಿಶ್ರಾಂತಿ ಪಡೆಯಿರಿ ಮತ್ತು ಪ್ರತಿಯೊಂದು ರೀತಿಯ ಒತ್ತಡದಿಂದ ದೂರವಿರಿ. ಆದಾಗ್ಯೂ, ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಹಳೆಯ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಲು ಮತ್ತು ತ್ಯಜಿಸಲು ಈ ಸಮಯ ಉತ್ತಮವಾಗಿರುತ್ತದೆ.

ಕೆಲಸದ ಸ್ಥಳದಲ್ಲಿ ಪದೇ ಪದೇ ಬರಲಾಗುವ ಅಡೆತಡೆಗಳು ನಿಮ್ಮ ಮನಸ್ಸಿನಲ್ಲಿ ನಿಮ್ಮ ಕೆಲಸ ಕೌಶಲ್ಯದ ಬಗ್ಗೆ ಕೆಲವು ಅಪನಂಬಿಕೆಯ ಸ್ಥಿತಿಯನ್ನು ಉದ್ಭವಿಸುತ್ತವೆ. ಇದರಿಂದಾಗಿ ನೀವು ಸಾಕಷ್ಟು ಮಟ್ಟಿಗೆ, ನಕಾರಾತ್ಮಕ ಆಲೋಚನೆಗಳಿಗೆ ಬಲಿಯಾಗಬಹುದು ಮತ್ತು ಇದು ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ತೊಂದರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಸಮಯವು ಕೆಲಸದ ಸ್ಥಳದಲ್ಲಿ ನಿಮ್ಮ ಉತ್ಪಾದಕತೆ ಮತ್ತು ಕಾರ್ಯ ಕೌಶಲ್ಯವನ್ನು ಸಹ ಕಡಿಮೆ ಮಾಡುತ್ತದೆ. ಇದರಿಂದಾಗಿ ನೀವು ಅನೇಕ ಕಾರ್ಯಗಳನ್ನು ಮಧ್ಯದಲ್ಲೇ ಅಪೂರ್ಣವಾಗಿ ಬಿಡುತ್ತೀರಿ. ಆದ್ದರಿಂದ ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ ಮತ್ತು ತಾಳ್ಮೆಯಿಂದಿರಿ ಎಂದು ಸೂಚಿಸಲಾಗಿದೆ. ಏಕೆಂದರೆ ಈ ಎಲ್ಲಾ ಸನ್ನಿವೇಶಗಳು ಹಾಗೇ ಇರುವುದಿಲ್ಲ ಮತ್ತು ಸಮದೊಂದಿಗೆ ಅವು ಸುಧಾರಿಸುತ್ತವೆ ಎಂದು ನಿಮಗೆ ತಿಳಿದಿದೆ.

ಈ ಸಂಚಾರದ ಸಮಯದಲ್ಲಿ ಮಂಗಳ ದೇವ ನಿಮ್ಮ ಎರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಸಮಯದಲ್ಲಿ ನಿಮ್ಮ ಮೂಲಕ ಹೇಳಲಾಗುವ ಯಾವುದೇ ಮಾತು, ಬಯಸದಿದ್ದರೂ ಇತರರನ್ನು ನೋಯಿಸಬಹುದು. ಆದ್ದರಿಂದ ವಿಶೇಷವಾಗಿ, ಕುಟುಂಬದ ಸದಸ್ಯರೊಂದಿಗೆ ಮಾತನಾಡುವರ ನಿಮ್ಮ ಭಾಷೆಗೆ ವಿಶೇಷ ಗಮನ ಹರಿಸಿ. ಈ ಸಮಯವು ಪೂರ್ವಜರ ಆಸ್ತಿ ಅಥವಾ ಅತ್ತೆಮನೆ ಕಡೆಯಿಂದ ಉತ್ತಮ ಲಾಭವನ್ನು ಗಳಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ಆಳವಾದ ವಿಷಯಗಳತ್ತ ನೀವು ಹೆಚ್ಚು ಒಲವು ಹೊಂದಿರುತ್ತೀರಿ.

ಸಂಶೋಧನೆಯ ಕೆಲಸಗಳು ಮತ್ತು ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳಿಗೂ, ಮಂಗಳನ ಈ ಸಂಚಾರವು ಅನುಕೂಲಕರವಾಗಿರಲಿದೆ.

ಪರಿಹಾರ - ಉತ್ತಮ ಗುಣಮಟ್ಟದ ಕೆಂಪು ಹವಳ ರತ್ನವನ್ನು ಚಿನ್ನ ಅಥವಾ ತಾಮ್ರದಲ್ಲಿ ತಯಾರಿಸಿ ಮಂಗಳವಾರ ನಿಮ್ಮ ಬಲಗೈಯ ಉಂಗುರದ ಬೆರಳಿನಲ್ಲಿ ಧರಿಸುವುದು ನಿಮಗೆ ಉತ್ತಮ.

ಧನು ರಾಶಿ ಭವಿಷ್ಯ

ಮಂಗಳ ಗ್ರಹವು ಧನು ರಾಶಿಚಕ್ರದ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಸಾಗಲಿದೆ. ಈ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ.

ತಮ್ಮ ಮಕ್ಕಳನ್ನು ವಿದೇಶದಲ್ಲಿ ಅಧ್ಯಯನಕ್ಕಾಗಿ ಕಳುಹಿಸಲು ಬಯಸುತ್ತಿರುವ ದಾಂಪತ್ಯ ಸ್ಥಳೀಯರಿಗೆ ಈ ಸಂಚಾರವು ವಿಶೇಷವಾಗಿ ಅನುಕೂಲಕರ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರ ಈ ಕನಸು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಯಾವುದೇ ವಿದೇಶ ಪಾಲುದಾರರೊಂದಿಗೆ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಸ್ಥರಿಗೂ ಈ ಸಂಚಾರವು ಹೆಚ್ಚು ಪ್ರಯೋಜನವನ್ನು ತರುತ್ತದೆ.

ಈ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಥಳಕ್ಕೆ ಸಂಬಂಧಿಸಿದ, ಉನ್ನತ ಸ್ಥಾನ ಮತ್ತು ಸಂಬಳದಲ್ಲಿ ಹೆಚ್ಚಳದ ಸಾಧ್ಯತೆ ಇದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದರಿಂದಾಗಿ ನಿಮ್ಮ ಉಳಿತಾಯ ಮತ್ತು ಆರ್ಥಿಕ ಜೀವನವು ಸುಧಾರಿಸುತ್ತದೆ.

ಆದಾಗ್ಯೂ, ಪ್ರೀತಿಯ ಸಂಬಂಧದಲ್ಲಿ ಅಸಮಾಧಾನ ಮತ್ತು ಏರಿಳಿತಗಳು ಉಂಟಾಗಬಹುದು.ಆದ್ದರಿಂದ ಸಂಗಾತಿಯೊಂದಿಗೆ ಮಾತನಾಡುವಾಗ, ಅವರ ಹಗೆಯನ್ನು ನಿವಾರಿಸಲು ಪ್ರಯತ್ನಿಸಿ. ಇದರಿಂದಾಗಿ ಪ್ರತಿಯೊಂದು ಭಿನ್ನಾಭಿಪ್ರಾಯವನ್ನು ಪರಿಹರಿಸಿ, ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಪಡೆಯುವಿರಿ. ಸಾಧ್ಯವಾದಷ್ಟು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಯೋಜಿಸಿ. ಏಕೆಂದರೆ ಈ ಸಮಯದಲ್ಲಿ ನೀವು ಪರಸ್ಪರ ನಿಕಟ ಬರುವ ಅವಕಾಶವನ್ನು ಪಡೆಯುತ್ತೀರಿ.

ಪರಿಹಾರ - ಭಗವಂತ ನರಸಿಂಹ ಅವತಾರದ ಕಥೆಗಳನ್ನು ಓದುವುದು ಅಥವಾ ಕೇಳುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಮಕರ ರಾಶಿ ಭವಿಷ್ಯ

ಮಂಗಳ ಸಂಚಾರವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಸಂಭವಿಸಲಿದೆ. ಇದರ ಪರಿಣಾಮವಾಗಿ ನಿಮ್ಮೊಳಗೆ ಉತ್ಸಾಹ ಮತ್ತು ಶಕ್ತಿ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಯಶಸ್ಸಿನೊಂದಿಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಕಾನೂನು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯವು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಕರ ರಾಶಿಚಕ್ರದ ಸ್ಥಳೀಯರು ಯಶಸ್ಸು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿ ನಿಮಗೆ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ನಿಮ್ಮ ಸ್ಪರ್ಧಾತ್ಮಕ ಭಾವನೆಯು ಅವರನ್ನು ಜಯಿಸಲು ನಿಮಗೆ ಸಹಾಯ ಮಾಡುತ್ತದೆ.

ಈ ಸಮಯದಲ್ಲಿ ನಿಮ್ಮ ಕೆಲಸದತ್ತ ನೀವು ಹೆಚ್ಚು ವ್ಯವಸ್ಥಿತರಾಗಿ ಕಾಣುವಿರಿ.ಈ ಕಾರಣದಿಂದಾಗಿ ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳು ಇತರರನ್ನು ನಿಮ್ಮತ್ತ ಆಕರ್ಷಿಸಲು ವಿಶೇಷವಾಗಿ ಸಹಾಯಕರವೆಂದು ಸಾಬೀತಾಗುತ್ತ್ತದೆ. ಸಂಬಳದ ಹೆಚ್ಚಳ ಅಥವಾ ಉತ್ತಮ ಸ್ಥಾನವನ್ನು ಹುಡುಕುತ್ತಿದ್ದ ಜನರು ಈ ಸಂಚಾರದ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಸಹ ಶುಭ ಸುದ್ಧಿಯನ್ನು ಪಡೆಯಬಹುದು.

ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯಾವುದೇ ಸಂಸ್ಥೆ ಅಥವಾ ಬ್ಯಾಂಕ ಮೂಲಕ ಲೋನ್ ಪಡೆಯಲು ಬಯಸುತ್ತಿದ್ದ ವ್ಯಾಪಾರಸ್ಥರು ಈ ಸಮಯದಲ್ಲಿ ಯಾವುದೇ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಯಾವುದೇ ರೀತಿಯ ವಿವಾದ ಅಥವಾ ಜಗಳದಿಂದ ದೂರವಿರುವುದು ನಿಮಗೆ ಉತ್ತಮ.

ಕುಟುಂಬ ಜೀವನದಲ್ಲಿ ನಿಮ್ಮ ತಂದೆ ಯಾವುದೇ ದೊಡ್ಡ ಲಾಭವನ್ನು ಪಡೆಯುತ್ತಾರೆ. ಇದರಿಂದಾಗಿ ಕುಟುಂಬದಲ್ಲಿ ಸಂತೋಷ ಬರುತ್ತದೆ. ನೀವು ಕೂಡ ನಿಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಸಮಯವನ್ನು ಕಳೆಯುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಗಾತಿಗೆ ಅರೋಗ್ಯ ಹಾನಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.ಇದರಿಂದಾಗಿ ಅವರು ತೊಂದರೆಗೀಡಾಗಬಹುದು.

ಆರೋಗ್ಯದ ದೃಷ್ಟಿಯಿಂದ, ಮಂಗಳನ ಈ ಸ್ಥಾನವು ಹೊಸ ಕಾಯಿಲೆಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ ಮತ್ತು ನೀವು ಯಾವುದೇ ಹಳೆಯ ಕಾಯಿಲೆಯಿಂದ ಹೊರಹೊಮ್ಮುವಲ್ಲಿ ಇದು ತುಂಬಾ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ. ಆದರೂ ಈ ಸಮಯದಲ್ಲಿ ಹುರಿದ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಲು ಸೂಚಿಸಲಾಗಿದೆ, ಇಲ್ಲದಿದ್ದರೆ ನೀವು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಬಹುದು. ಅಲ್ಲದೆ, ದೈಹಿಕ ಚಟುವಟಿಕೆ ಅಥವಾ ವ್ಯಾಯಾಮದ ಸಹಾಯವನ್ನು ಪಡೆಯುವುದು ಸಹ ಈ ಸಮಯದಲ್ಲಿ ನಿಮಗೆ ಅವಶ್ಯಕ. ವಾಹನ ಚಲಾಯಿಸುವ ಜನರು ವಿಶೇಷವಾಗಿ ಜಾಗರೂಕರಾಗಿರಲು ಸೂಚಿಸಲಾಗಿದೆ.

ಪರಿಹಾರ - ಮಂಗಳವಾರ ಬೆಲ್ಲದ ದಾನ ಮಾಡಿ.


ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ , ಪರಿಹಾರ ಪಡೆಯಲು ಪ್ರಶ್ನೆ ಕೇಳಿ

ಕುಂಭ ರಾಶಿ ಭವಿಷ್ಯ

ಮಂಗಳ ಗ್ರಹವು ಕುಂಭ ರಾಶಿಯಿಂದ ಐದನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಕಾರಣದಿಂದಾಗಿ ನೀವು ಅನೇಕ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮಂಗಳ ನಿಮ್ಮ ರಾಶಿಯ ಹತ್ತನೇ ಮನೆಯ ಅಧಿಪತಿ. ಈ ಸಮಯದಲ್ಲಿ ನಿಮ್ಮ ಐದನೇ ಮನೆಯಲ್ಲಿ ಗೋಚರಿಸುವುದು, ನಿಮ್ಮ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಇದರಿಂದಾಗಿ ನೀವು ಇತರರ ಮುಂದೆ ನಿಮ್ಮ ಪ್ರತಿಯೊಂದು ತಂತ್ರವನ್ನು ಇಟ್ಟು, ಅದನ್ನು ಬಳಸಿಕೊಂಡು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಮೇಲಧಿಕಾರಿಗಳಿಂದ ಉತ್ತಮ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.

ಆದಾಗ್ಯೂ, ಕೆಲವು ವೃತ್ತಿಪರರು ಈ ಸಂಚಾರದ ಸಮಯದಲ್ಲಿ ಅಪ್ರಕಟಿತ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ. ಇದು ನಿಮ್ಮ ಮಾನಸಿಕ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಆದರೆ ಇದರ ಹೊರತಾಗಿಯೂ, ಇದರ ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ತಾಳ್ಮೆಯಿಂದಿರಬೇಕು ಎಂದು ಸೂಚಿಸಲಾಗಿದೆ.

ನಿಮ್ಮ ಹವ್ಯಾಸ ಅಥವಾ ಯಾವುದೇ ಆಸಕ್ತಿಯನ್ನು ವೃತ್ತಿಯಲ್ಲಿ ಬದಲಾಯಿಸಲು ಬಯಸುತ್ತಿರುವ ಜನರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅನೇಕ ಶುಭ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಕ್ರೀಡೆಗಳಿಗೆ ಸಂಬಂಧಿಸಿದ ಜನರು ಸಹ ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿ, ಮಂಗಳ ದೇವರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಆದಾಗ್ಯೂ, ನಿಮ್ಮ ತಪ್ಪುಗಳನ್ನು ಸ್ವೀಕರಿಸುವುದು ಅಥವಾ ಇತರರ ಅನುಮೋದನೆಯ ವಿಷಯ ಬಂದಾಗಲೆಲ್ಲಾ, ನಿಮ್ಮ ಸ್ವಭಾವದಲ್ಲಿ ಕಠೋರತೆ ಮತ್ತು ಮೊಂಡುತನವು ಹೆಚ್ಚಾಗುತ್ತದೆ.ಇದರಿಂದಾಗಿ ಕೆಲಸಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ಉಂಟಾಗುವ ನಿರೀಕ್ಷೆಯಿದೆ. ಆದ್ದರಿಂದ ನಿಮ್ಮ ಆಲೋಚನೆಯ ಬಗ್ಗೆ ಹೆಚ್ಚು ಹೋರಾಡಿ ಮತ್ತು ಇತರರ ಸಲಹೆಯನ್ನು ಗೌರವಿಸಿ. ಏಕೆಂದರೆ ನೀವು ಮೊದಲಿನಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಇದು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಐದನೇ ಮನೆಯಲ್ಲಿ ಮಂಗಳ ದೇವರ ಉಪಸ್ಥಿತಿಯು, ಪ್ರೀತಿಪಾತ್ರರ ಬಗೆಗಿನ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ನೀವಿಬ್ಬರೂ ಸಂಬಂಧವನ್ನು ಮುಂದುವರಿಸುವುದನ್ನು ಕಾಣಲಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ವಿವಾಹಿತರಾಗಿದ್ದರೆ,ಈ ಸಮಯದಲ್ಲಿ ಜೀವನ ಸಂಗಾತಿ ಅಥವಾ ಮಕ್ಕಳೊಂದಿಗೆ ಸಂಭವಿಸುವ ಸಣ್ಣ ಪುಟ್ಟ ವಿಷಯಗಳು ಸಹ ನಿಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಇದು ನಿಮ್ಮ ಕುಟುಂಬದ ವಾತಾವರಣವನ್ನು ಹದಗೆಡಿಸುತ್ತದೆ.

ಆರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಅಜೀರ್ಣ ಮತ್ತು ಎಸಿಡಿಟಿಗೆ ಸಂಬಂಧಿಸಿದ ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಆಹಾರವನ್ನು ಸೇವಿಸುವ ನಿಮ್ಮ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿ, ಹೊರಗಿನ ಹುರಿದ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವದನ್ನು ತಪ್ಪಿಸಿ.

ಪರಿಹಾರ - ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯಲು, ಈ ಸಂಚಾರದ ಸಮಯದಲ್ಲಿ ಕಾಲಭೈರವ ದೇವರನ್ನು ಪೂಜಿಸಿ.

ಮೀನಾ ರಾಶಿ ಭವಿಷ್ಯ

ಮಂಗಳ ಸಂಚಾರವು ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಸಂತೋಷದ ಮೆನೆಯೆಂದು ಸಹ ಕರೆಯಲಾಗುತ್ತದೆ. ಇದಲ್ಲದೆ ಮಂಗಳ ನಿಮ್ಮ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ನಾಲ್ಕನೇ ಮನೆಯು ನಿಮ್ಮ ಜಮೀನು ಮತ್ತು ರಿಯಲ್ ಎಸ್ಟೇಟ್ ಅನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಈ ಸಂಬಂಧಿತ ಚಟುವಟಿಕೆಗಳಾದ ಮನೆ ನವೀಕರಣ ಅಥವಾ ದುರಸ್ತಿ, ದೀರ್ಘಕಾಲದಿಂದ ಬಾಕಿ ಇರುವ ಭೂಮಿ ಖರೀದಿ ಅಥವಾ ಮಾರಾಟವನ್ನು ಮುಂದುವರಿಸಲು ಸಹಾಯ ಸಿಗುತ್ತದೆ. ಈ ಸಮಯದಲ್ಲಿ ಎಲ್ಲಾ ರೀತಿಯ ಕಾಗದಪತ್ರಗಳು ಮತ್ತು ದಾಖಲೆಗಳ ಬಗ್ಗೆ ಸಂಪೂರ್ಣವಾಗಿ ಕಾಳಜಿ ವಹಿಸಿ.

ಈ ರಾಶಿಚಕ್ರದ ಜನರು ಕೆಲಸದ ಸ್ಥಳದಲ್ಲಿ ತಮ್ಮ ಕಾರ್ಯ ಸಾಮರ್ಥ್ಯ ಮತ್ತು ಪ್ರಯತ್ನಗಳನ್ನು ಹೆಚ್ಚಿಸಬೇಕು. ಕೆಲವು ಉದ್ಯೋಗಪರರು ತಮ್ಮ ಅಪೇಕ್ಷಕ್ಕೆ ವಿರುದ್ಧವಾಗಿ ವರ್ಗಾವಣೆ ಅಥವಾ ಯಾವುದೇ ಪ್ರಯಾಣಕ್ಕೆ ಹೋಗಬೇಕಾಗುತ್ತದೆ. ಪರಿಣಾಮವಾಗಿ ನಿಮ್ಮ ಆಯಾಸ ಮತ್ತು ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ಇತರರೊಂದಿಗೆ ನಿಮ್ಮ ಜಗಳ ಅಥವಾ ವಿವಾದವಾಗುತ್ತದೆ. ಆದ್ದರಿಂದ ನಿಮ್ಮನ್ನು ಶಾಂತವಾಗಿರಿಸಿ ತಾಳ್ಮೆಯೊಂದಿಗೆ ಮುಂದುವರಿಯಿರಿ.

ಕೆಂಪು ಗ್ರಹ ಮಂಗಳ ನಿಮ್ಮ ನಾಲ್ಕನೇ ಮನೆಯಲ್ಲಿ ನೆಲೆಗೊಂಡಿರುವುದು ನಿಮ್ಮ ತಾಯಿಗೆ ಅರೋಗ್ಯ ಹಾನಿಯನ್ನು ನೀಡುತ್ತದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಹಿಂದಿನ ಕೆಲವು ಸಮಸ್ಯೆಗಳು ನಿಮ್ಮ ಜೀವನಕ್ಕೆ ಮರಳಬಹುದು. ಇದರಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಹ ನಿಮ್ಮ ಭಿನ್ನಾಭಿಪ್ರಾಯ ಅಥವಾ ವಿವಾದ ಸಾಧ್ಯ. ಆದ್ದರಿಂದ ಜಗಳದಲ್ಲಿ ತೊಡಗಿಸಿಕೊಳ್ಳದೆ, ನಿಮ್ಮನ್ನು ಶಾಂತವಾಗಿರಿಸಿ. ಇಲ್ಲದಿದ್ದರೆ ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಜೀವನದ ಮೇಲೆ ಬೀರುತ್ತದೆ.

ಇದಲ್ಲದೆ ದಾಂಪತ್ಯ ಜೀವನದಲ್ಲಿ ಜೇವನ ಸಂಗಾತಿಯೊಂದಿಗೆ ಅಹಂ ಘರ್ಷಣೆಯ ನಿರೀಕ್ಷೆಯಿದೆ. ಆದ್ದರಿಂದ ಅವರೊಂದಿಗೆ ಸ್ಪಷವಾಗಿ ಮಾತನಾಡಿ, ಪತಿಯೊಂದು ತಪ್ಪು ತಿಳುವಳಿಕೆಯನ್ನು ಪರಿಹರಿಸಲು ಪ್ತಯತ್ನಿಸಿ.

ಅರೋಗ್ಯ ಜೀವನದ ದೃಷ್ಟಿಯಿಂದ, ರಕ್ತದೊತ್ತಡ, ಹೃದಯ ರೋಗ ಅಥವಾ ರಕ್ತಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯಿಂದ ಬಳಲುತ್ತಿರುವ ಜನರು ಈ ಸಮಯದಲ್ಲಿ ಪ್ರತಿಯೊಂದು ರೀತಿಯ ಒತ್ತಡ ಮತ್ತು ಕೋಪವನ್ನು ತಪ್ಪಿಸಬೇಕು. ಇದರೊಂದಿಗೆ ಈ ಸಮಯದಲ್ಲಿ ಸರಿಯಾದ ನಿದ್ರೆ ಪಡೆಯುವುದು ಮತ್ತು ವಿಶ್ರಾಂತಿ ಪಡೆಯುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ ನಂತರ ಯಾವುದೇ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಪರಿಹಾರ - ಮಂಗಳವಾರ ಭಗವಂತ ಹುಂಮಂತರ ಸ್ತುತಿಯಲ್ಲಿ “ ಹನುಮನಾಷ್ಟಕ “ ವನ್ನು ಪಠಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer